AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿರು ಬೇಸಿಗೆಗಯಲ್ಲಿ ಕಾಡು ಪ್ರಾಣಿಗಳು ದಣಿಯದಂತೆ ಮಾಸ್ಟರ್ ಪ್ಲ್ಯಾನ್

ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಬೇಸಿಗೆಯಲ್ಲಿ ಪ್ರಾಣಿಗಳಿಗೆ ನೀರಿನ ಸಮಸ್ಯೆ ಪರಿಹರಿಸಲು 10 ಕೆರೆಗಳನ್ನು ನಿರ್ಮಿಸಲಾಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ನಮ್ಮ ಕಾಡು ನಮ್ಮ ಕೆರೆ' ಯೋಜನೆಯಡಿ 14 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕೆರೆಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಯೋಜನೆಯಿಂದ ಹುಲಿ, ಸಿಂಹ, ಜಿಂಕೆ ಮುಂತಾದ ಪ್ರಾಣಿಗಳಿಗೆ ಸಾಕಷ್ಟು ನೀರು ಲಭ್ಯವಾಗಲಿದೆ. ಏಪ್ರಿಲ್ ಒಳಗೆ ಕೆರೆಗಳ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Basavaraj Yaraganavi
| Updated By: ಗಂಗಾಧರ​ ಬ. ಸಾಬೋಜಿ

Updated on: Mar 12, 2025 | 10:11 PM

ಈ ಬೇಸಿಗೆ ಬಂತೆಂದ್ರೆ ಸಾಕು, ಜನರ ಜೊತೆಗೆ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆಯುಂಟಾಗುವುದು ಸಹಜ. ಮನುಷ್ಯ ಜೀವಿ ಹೇಗಾದರೂ ಮಾಡಿ ಕುಡಿಯಲು ನೀರು ಹೊಂದಿಸಿಕೊಳ್ಳಬಹುದು. ಆದರೆ ಜಾನುವಾರುಗಳು ಏನು ಮಾಡ್ಬೇಕು ಎನ್ನುವುದಕ್ಕೆ ಇವರು ಉತ್ತರ ನೀಡುತ್ತಿದ್ದಾರೆ. ಶಿವಮೊಗ್ಗದ ಪ್ರಸಿದ್ಧ ಪ್ರವಾಸಿ ತಾಣ ಲಯನ್ ಸಫಾರಿಯಲ್ಲಿರುವ ಹುಲಿ, ಸಿಂಹ, ಜಿಂಕೆ, ಕಡವೆ, ಸಾರಂಗ ಸೇರಿದಂತೆ ಇತರೆ ಪ್ರಾಣಿಗಳಿಗೆ ಈ ಬಿರು ಬೇಸಿಗೆಯಲ್ಲೂ ನೀರುಣಿಸುವ ಯೋಜನೆ ರೂಪಿಸಲಾಗಿದೆ. 

ಈ ಬೇಸಿಗೆ ಬಂತೆಂದ್ರೆ ಸಾಕು, ಜನರ ಜೊತೆಗೆ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆಯುಂಟಾಗುವುದು ಸಹಜ. ಮನುಷ್ಯ ಜೀವಿ ಹೇಗಾದರೂ ಮಾಡಿ ಕುಡಿಯಲು ನೀರು ಹೊಂದಿಸಿಕೊಳ್ಳಬಹುದು. ಆದರೆ ಜಾನುವಾರುಗಳು ಏನು ಮಾಡ್ಬೇಕು ಎನ್ನುವುದಕ್ಕೆ ಇವರು ಉತ್ತರ ನೀಡುತ್ತಿದ್ದಾರೆ. ಶಿವಮೊಗ್ಗದ ಪ್ರಸಿದ್ಧ ಪ್ರವಾಸಿ ತಾಣ ಲಯನ್ ಸಫಾರಿಯಲ್ಲಿರುವ ಹುಲಿ, ಸಿಂಹ, ಜಿಂಕೆ, ಕಡವೆ, ಸಾರಂಗ ಸೇರಿದಂತೆ ಇತರೆ ಪ್ರಾಣಿಗಳಿಗೆ ಈ ಬಿರು ಬೇಸಿಗೆಯಲ್ಲೂ ನೀರುಣಿಸುವ ಯೋಜನೆ ರೂಪಿಸಲಾಗಿದೆ. 

1 / 6
ಆಹಾ! ಸ್ವಚ್ಛಂದ ಕಾಡು ಹೊಂದಿರುವ ಮೃಗಾಲಯ. ಈ ಮೃಗಾಲಯದಲ್ಲಿ ಜಿಂಕೆ, ಸಾರಂಗ, ಕಡವೆ, ಹುಲಿ, ಸಿಂಹ, ಕಾಡುಕೋಣ, ಕಾಡುಕುರಿ ಎಲ್ಲವೂ ಇವೆ. ಆದರೆ ಇಲ್ಲಿ ಬೇಸಿಗೆ ಸಮಯದಲ್ಲಿ, ನೀರಿನ ಕೊರತೆ ಎದ್ದು ಕಾಣುತ್ತಿತ್ತು. ಹೀಗಾಗಿ, ಇದೀಗ ಪ್ರಾಣಿಗಳಿಗಾಗಿ ಸರ್ವ ಕಾಲಕ್ಕೂ ನೀರುಣಿಸುವ ಯೋಜನೆ ಸಿದ್ಧವಾಗುತ್ತಿದೆ. 

ಆಹಾ! ಸ್ವಚ್ಛಂದ ಕಾಡು ಹೊಂದಿರುವ ಮೃಗಾಲಯ. ಈ ಮೃಗಾಲಯದಲ್ಲಿ ಜಿಂಕೆ, ಸಾರಂಗ, ಕಡವೆ, ಹುಲಿ, ಸಿಂಹ, ಕಾಡುಕೋಣ, ಕಾಡುಕುರಿ ಎಲ್ಲವೂ ಇವೆ. ಆದರೆ ಇಲ್ಲಿ ಬೇಸಿಗೆ ಸಮಯದಲ್ಲಿ, ನೀರಿನ ಕೊರತೆ ಎದ್ದು ಕಾಣುತ್ತಿತ್ತು. ಹೀಗಾಗಿ, ಇದೀಗ ಪ್ರಾಣಿಗಳಿಗಾಗಿ ಸರ್ವ ಕಾಲಕ್ಕೂ ನೀರುಣಿಸುವ ಯೋಜನೆ ಸಿದ್ಧವಾಗುತ್ತಿದೆ. 

2 / 6
ಈಗಾಗಲೇ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ, ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು, ಇದೀಗ ಹುಲಿ ಮತ್ತು ಸಿಂಹಧಾಮ ತ್ಯಾವರೆಕೊಪ್ಪ ಮೃಗಾಲಯದಲ್ಲಿ ‘ನಮ್ಮ ಕಾಡು ಮತ್ತು ನಮ್ಮ ಕೆರೆ’ ಎಂಬ ಯೋಜನೆಯಡಿ ಹುಲಿ ಮತ್ತು ಸಿಂಹಧಾಮದಲ್ಲಿ, ಪ್ರಾಣಿಗಳಿಗಾಗಿಯೇ ಕುಡಿಯಲು 14 ಲಕ್ಷ ರೂ. ವೆಚ್ಚದಲ್ಲಿ 10 ಕೆರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ಒಂದೊಂದು ವಲಯದಲ್ಲಿ 2 ರಂತೆ 5 ವಲಯಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಫಾರಿಯಲ್ಲಿರುವ ಮರಗಳನ್ನು ಹಾಗೆಯೇ ಉಳಿಸಿಕೊಂಡು ಕೆರೆಗಳನ್ನು ನಿರ್ಮಿಸಲಾಗುತ್ತಿದೆ.

ಈಗಾಗಲೇ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ, ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು, ಇದೀಗ ಹುಲಿ ಮತ್ತು ಸಿಂಹಧಾಮ ತ್ಯಾವರೆಕೊಪ್ಪ ಮೃಗಾಲಯದಲ್ಲಿ ‘ನಮ್ಮ ಕಾಡು ಮತ್ತು ನಮ್ಮ ಕೆರೆ’ ಎಂಬ ಯೋಜನೆಯಡಿ ಹುಲಿ ಮತ್ತು ಸಿಂಹಧಾಮದಲ್ಲಿ, ಪ್ರಾಣಿಗಳಿಗಾಗಿಯೇ ಕುಡಿಯಲು 14 ಲಕ್ಷ ರೂ. ವೆಚ್ಚದಲ್ಲಿ 10 ಕೆರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ಒಂದೊಂದು ವಲಯದಲ್ಲಿ 2 ರಂತೆ 5 ವಲಯಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸಫಾರಿಯಲ್ಲಿರುವ ಮರಗಳನ್ನು ಹಾಗೆಯೇ ಉಳಿಸಿಕೊಂಡು ಕೆರೆಗಳನ್ನು ನಿರ್ಮಿಸಲಾಗುತ್ತಿದೆ.

3 / 6
ಇನ್ನು ಈ ಸಫಾರಿಯಲ್ಲಿ 10 ಕೆರೆಗಳನ್ನು ಅಭಿವೃದ್ಧಿ ಪಡಿಸುವುದರಿಂದ ಹುಲಿ, ಸಿಂಹ, ಜಿಂಕೆ, ಕಾಡುಕೋಣ ಇನ್ನಿತರೆ ಮೃಗಾಲಯದಲ್ಲಿರುವ ಎಲ್ಲಾ ಪ್ರಾಣಿಗಳಿಗೆ ಬೇಸಿಗೆ ಸಂದರ್ಭದಲ್ಲಿ ಹೇರಳವಾಗಿ ಕುಡಿಯುವ ನೀರು, ದಣಿವಾರಿಸಿಕೊಳ್ಳಲು ಹಸಿ ಮಣ್ಣು ಮಿಶ್ರಿತ ನೀರು ಲಭ್ಯವಾಗಲಿದೆ. ನಮ್ಮ ಕಾಡು - ನಮ್ಮ ಕೆರೆ ಯೋಜನೆಯಡಿಯಲ್ಲಿ 10 ಕೆರೆಗಳ ಅಭಿವೃದ್ಧಿಪಡಿಸಲು ಯೋಜನೆ ಮೂಲಕ ಈಗಾಗಲೇ, ಹಿಟಾಚಿಯಿಂದ ಹೂಳು ತೆಗೆಯಲಾಗುತ್ತಿದ್ದು, ಏಪ್ರಿಲ್ ಒಳಗಾಗಿ, 10 ಕೆರೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಯೋಜನೆ ಹೊಂದಲಾಗಿದೆ.

ಇನ್ನು ಈ ಸಫಾರಿಯಲ್ಲಿ 10 ಕೆರೆಗಳನ್ನು ಅಭಿವೃದ್ಧಿ ಪಡಿಸುವುದರಿಂದ ಹುಲಿ, ಸಿಂಹ, ಜಿಂಕೆ, ಕಾಡುಕೋಣ ಇನ್ನಿತರೆ ಮೃಗಾಲಯದಲ್ಲಿರುವ ಎಲ್ಲಾ ಪ್ರಾಣಿಗಳಿಗೆ ಬೇಸಿಗೆ ಸಂದರ್ಭದಲ್ಲಿ ಹೇರಳವಾಗಿ ಕುಡಿಯುವ ನೀರು, ದಣಿವಾರಿಸಿಕೊಳ್ಳಲು ಹಸಿ ಮಣ್ಣು ಮಿಶ್ರಿತ ನೀರು ಲಭ್ಯವಾಗಲಿದೆ. ನಮ್ಮ ಕಾಡು - ನಮ್ಮ ಕೆರೆ ಯೋಜನೆಯಡಿಯಲ್ಲಿ 10 ಕೆರೆಗಳ ಅಭಿವೃದ್ಧಿಪಡಿಸಲು ಯೋಜನೆ ಮೂಲಕ ಈಗಾಗಲೇ, ಹಿಟಾಚಿಯಿಂದ ಹೂಳು ತೆಗೆಯಲಾಗುತ್ತಿದ್ದು, ಏಪ್ರಿಲ್ ಒಳಗಾಗಿ, 10 ಕೆರೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಯೋಜನೆ ಹೊಂದಲಾಗಿದೆ.

4 / 6
ಈ ಮುಂಚೆ ಈ ಲಯನ್ ಸಫಾರಿಯಲ್ಲಿ ಹೊಂಡ ಮಾದರಿಯಲ್ಲಿ, ಪ್ರಾಣಿಗಳಿಗೆ ನೀರುಣಿಸಲಾಗುತ್ತಿತ್ತು. ಆದರೆ ಈಗ ಯಂತ್ರಗಳನ್ನು ಬಳಸಿ, ಕೆರೆ ನಿರ್ಮಾಣ ಕಾರ್ಯ ಸಾಗಿರುವುದು, ಮೃಗಾಲಯದ ಪ್ರಾಣಿಗಳಿಗೆ ಸಂತೋಷದಾಯಕ ವಾತಾವರಣ ಸೃಷ್ಟಿಯಾದಂತಾಗಿದೆ.

ಈ ಮುಂಚೆ ಈ ಲಯನ್ ಸಫಾರಿಯಲ್ಲಿ ಹೊಂಡ ಮಾದರಿಯಲ್ಲಿ, ಪ್ರಾಣಿಗಳಿಗೆ ನೀರುಣಿಸಲಾಗುತ್ತಿತ್ತು. ಆದರೆ ಈಗ ಯಂತ್ರಗಳನ್ನು ಬಳಸಿ, ಕೆರೆ ನಿರ್ಮಾಣ ಕಾರ್ಯ ಸಾಗಿರುವುದು, ಮೃಗಾಲಯದ ಪ್ರಾಣಿಗಳಿಗೆ ಸಂತೋಷದಾಯಕ ವಾತಾವರಣ ಸೃಷ್ಟಿಯಾದಂತಾಗಿದೆ.

5 / 6
ಒಟ್ಟಾರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಮಹತ್ಕಾರ್ಯವೊಂದಕ್ಕೆ ಕೈ ಹಾಕಿದ್ದು, ಇದೊಂದು ವಿಶಿಷ್ಟ ಕಾರ್ಯಕ್ರಮ ಎಂದರೂ ತಪ್ಪಿಲ್ಲ. ಮನುಷ್ಯರಿಗಾಗಿ ಸಾಲ ನೀಡುವ ಸಂಸ್ಥೆ, ಪ್ರಾಣಿಗಳಿಗೆ ನೀರುಣಿಸುವ ಕೆಲಸ ಮಾಡುತ್ತಿರುವುದು ಮಾತ್ರ ಶ್ಲಾಘನೀಯ ಕಾರ್ಯವಾಗಿದೆ.

ಒಟ್ಟಾರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಮಹತ್ಕಾರ್ಯವೊಂದಕ್ಕೆ ಕೈ ಹಾಕಿದ್ದು, ಇದೊಂದು ವಿಶಿಷ್ಟ ಕಾರ್ಯಕ್ರಮ ಎಂದರೂ ತಪ್ಪಿಲ್ಲ. ಮನುಷ್ಯರಿಗಾಗಿ ಸಾಲ ನೀಡುವ ಸಂಸ್ಥೆ, ಪ್ರಾಣಿಗಳಿಗೆ ನೀರುಣಿಸುವ ಕೆಲಸ ಮಾಡುತ್ತಿರುವುದು ಮಾತ್ರ ಶ್ಲಾಘನೀಯ ಕಾರ್ಯವಾಗಿದೆ.

6 / 6
Follow us
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ