29 ವರ್ಷಗಳ ಬಳಿಕ ಯಾಣಗೆ ಭೇಟಿ ನೀಡಿದ ಶಿವರಾಜ್​ಕುಮಾರ್​; ಇಲ್ಲಿವೆ ಫೋಟೋಸ್

Updated on: Feb 02, 2025 | 5:56 PM

ಬರೋಬ್ಬರಿ 29 ವರ್ಷಗಳ ನಂತರ ‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್​ ಅವರು ಯಾಣಗೆ ಭೇಟಿ ನೀಡಿ ಖುಷಿಪಟ್ಟಿದ್ದಾರೆ. ಅಲ್ಲಿಂದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವರ ಜೊತೆ ಪತ್ನಿ ಗೀತಾ ಕೂಡ ಯಾಣಗೆ ತೆರಳಿದ್ದಾರೆ. ಕ್ಯಾನ್ಸರ್​ಗೆ ಅಮೆರಿಕದಲ್ಲಿ ಟ್ರೀಟ್​ಮೆಂಟ್ ಪಡೆದು ಬಂದ ಅವರು ಸಿನಿಮಾ ಕೆಲಸಗಳಿಂದ ಬಿಡುವು ಪಡೆದಿದ್ದಾರೆ.

1 / 5
ನಟ ಶಿವರಾಜ್​ಕುಮಾರ್​ ಅವರು ಕ್ಯಾನ್ಸರ್​ನಿಂದ ಗುಣಮುಖರಾಗಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ವಾಪಸ್ ಬಂದಿರುವ ಅವರು ತಮ್ಮ ಇಷ್ಟದ ಕೆಲವು ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈಗ ಅವರು ಯಾಣಗೆ ತೆರಳಿದ್ದಾರೆ.

ನಟ ಶಿವರಾಜ್​ಕುಮಾರ್​ ಅವರು ಕ್ಯಾನ್ಸರ್​ನಿಂದ ಗುಣಮುಖರಾಗಿದ್ದಾರೆ. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ವಾಪಸ್ ಬಂದಿರುವ ಅವರು ತಮ್ಮ ಇಷ್ಟದ ಕೆಲವು ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಈಗ ಅವರು ಯಾಣಗೆ ತೆರಳಿದ್ದಾರೆ.

2 / 5
ಶಿವಣ್ಣ, ರಮೇಶ್ ಅರವಿಂದ್, ಪ್ರೇಮಾ ನಟಿಸಿದ್ದ ‘ನಮ್ಮೂರ ಮಂದಾರ ಹೂವೇ’ ಸಿನಿಮಾದ ಚಿತ್ರೀಕರಣವನ್ನು ಯಾಣದಲ್ಲಿ ಮಾಡಲಾಗಿತ್ತು. ಈಗ ಅವರು ಮತ್ತೆ ಅದೇ ಜಾಗಕ್ಕೆ ಭೇಟಿ ನೀಡಿ ಶಿವಣ್ಣ ಖುಷಿಪಟ್ಟಿದ್ದಾರೆ.

ಶಿವಣ್ಣ, ರಮೇಶ್ ಅರವಿಂದ್, ಪ್ರೇಮಾ ನಟಿಸಿದ್ದ ‘ನಮ್ಮೂರ ಮಂದಾರ ಹೂವೇ’ ಸಿನಿಮಾದ ಚಿತ್ರೀಕರಣವನ್ನು ಯಾಣದಲ್ಲಿ ಮಾಡಲಾಗಿತ್ತು. ಈಗ ಅವರು ಮತ್ತೆ ಅದೇ ಜಾಗಕ್ಕೆ ಭೇಟಿ ನೀಡಿ ಶಿವಣ್ಣ ಖುಷಿಪಟ್ಟಿದ್ದಾರೆ.

3 / 5
ಆ ದಿನಗಳನ್ನು ಶಿವರಾಜ್​ಕುಮಾರ್​ ಅವರು ನೆನಪು ಮಾಡಿಕೊಂಡಿದ್ದಾರೆ. ‘ನಮ್ಮೂರ ಮಂದಾರ ಹೂವೆ ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ’ ಎಂದು ಶಿವಣ್ಣ ಈ ಫೋಟೋ ಹಂಚಿಕೊಂಡಿದ್ದಾರೆ.

ಆ ದಿನಗಳನ್ನು ಶಿವರಾಜ್​ಕುಮಾರ್​ ಅವರು ನೆನಪು ಮಾಡಿಕೊಂಡಿದ್ದಾರೆ. ‘ನಮ್ಮೂರ ಮಂದಾರ ಹೂವೆ ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ’ ಎಂದು ಶಿವಣ್ಣ ಈ ಫೋಟೋ ಹಂಚಿಕೊಂಡಿದ್ದಾರೆ.

4 / 5
ಪತ್ನಿ ಗೀತಾ ಶಿವರಾಜ್​ಕುಮಾರ್​ ಅವರು ಕೂಡ ಸಾಥ್ ನೀಡಿದ್ದಾರೆ. ಜನರು ಈ ಫೋಟೋ ನೋಡಿ ಕಮೆಂಟ್ ಮಾಡಿದ್ದಾರೆ. ‘ನೀವು ಕೂಡ ಈ ಬಂಡೆಯಂತೆ ಗಟ್ಟಿ’ ಎಂದು ಶಿವಣ್ಣನಿಗೆ ಅಭಿಮಾನಿಗಳು ಹೇಳಿದ್ದಾರೆ.

ಪತ್ನಿ ಗೀತಾ ಶಿವರಾಜ್​ಕುಮಾರ್​ ಅವರು ಕೂಡ ಸಾಥ್ ನೀಡಿದ್ದಾರೆ. ಜನರು ಈ ಫೋಟೋ ನೋಡಿ ಕಮೆಂಟ್ ಮಾಡಿದ್ದಾರೆ. ‘ನೀವು ಕೂಡ ಈ ಬಂಡೆಯಂತೆ ಗಟ್ಟಿ’ ಎಂದು ಶಿವಣ್ಣನಿಗೆ ಅಭಿಮಾನಿಗಳು ಹೇಳಿದ್ದಾರೆ.

5 / 5
‘ಬಾಳಿನ ಬೆನ್ನು ಹತ್ತಿ, ನೂರಾರು ಊರು ಸುತ್ತಿ, ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು’ ಎಂದು ಹಾಡಿನ ಸಾಲುಗಳ ಮೂಲಕ ಕರುನಾಡಿನ ಸೌಂದರ್ಯವನ್ನು ಶಿವರಾಜ್​ಕುಮಾರ್​ ಅವರು ಬಣ್ಣಿಸಿದ್ದಾರೆ.

‘ಬಾಳಿನ ಬೆನ್ನು ಹತ್ತಿ, ನೂರಾರು ಊರು ಸುತ್ತಿ, ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲು’ ಎಂದು ಹಾಡಿನ ಸಾಲುಗಳ ಮೂಲಕ ಕರುನಾಡಿನ ಸೌಂದರ್ಯವನ್ನು ಶಿವರಾಜ್​ಕುಮಾರ್​ ಅವರು ಬಣ್ಣಿಸಿದ್ದಾರೆ.