- Kannada News Photo gallery Udupi: jyothi raj Team Search continues for youth swept away In Arsinagundi Falls while making Instagram reels
ಅರಿಶಿನಗುಂಡಿ ಜಲಪಾತದಲ್ಲಿ ಯುವಕ ನಾಪತ್ತೆ, ಜ್ಯೋತಿರಾಜ್ ತಂಡದಿಂದಲೂ ಶೋಧ ಕಾರ್ಯ
ಮೊನ್ನೇ ಅಷ್ಟೇ ಅಂದರೆ ಜುಲೈ 24) ಉಡುಪಿಯ (Udupi) ಅರಿಶಿನಗುಂಡಿ ಜಲಪಾತದಲ್ಲಿ (Arsinagundi Falls) ಬಿದ್ದಿದ್ದ ಭದ್ರಾವತಿ ಮೂಲದ ಶರತ್ ಕುಮಾರ್ (Sharath Kumar) ಇದುವರೆಗೂ ಪತ್ತೆಯಾಗಿಲ್ಲ. ಎರಡು ದಿನಗಳಿಂದ ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಕಾರ್ಯಚರಣೆ ನಡೆಸಿದರೂ ಸಹ ಶರತ್ ಪತ್ತೆಯಾಗಿಲ್ಲ. ಇದೀಗ ಅಂತಿಮವಾಗಿ ಶರತ್ ಹುಡುಕಾಟಕ್ಕಾಗಿ ಜ್ಯೋತಿರಾಜ್ ತಂಡ ಸಹ ಶೋಧ ಕಾರ್ಯ ನಡೆಸಿದೆ.
Updated on: Jul 26, 2023 | 3:01 PM

ಶರತ್ ಹುಡುಕಾಟಕ್ಕಾಗಿ ಜ್ಯೋತಿರಾಜ್ ತಂಡ ಸಹ ಶೋಧ ಕಾರ್ಯ ನಡೆಸಿದೆ.

ಮಂಗಳೂರಿನ ಎಸ್ಡಿಆರ್ಎಫ್ ತಂಡದ ಹತ್ತು ಸಿಬ್ಬಂದಿ ಹಾಗೂ ಕುಂದಾಪುರ ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಮತ್ತು ಬೈಂದೂರು ಅಗ್ನಿಶಾಮಕ ತಂಡ ಸಹ ಶೋಧ ಕಾರ್ಯ ಮುಂದುವರಿಸಿದೆ.

ಹಗ್ಗ ಹಾಕಿಕೊಂಡು ಮುಂಜಾನೆಯಿಂದ ಸಂಜೆ ತನಕ ಜಲಪಾತದಲ್ಲಿ ಹುಡುಕಾಡಿದೆ. ಅಲ್ಲದೇ ನಡೆದು ಸಾಗುವುದೇ ಕಷ್ಟವಾಗಿರುವ ಕಾಡಿನ ದಾರಿಯಲ್ಲೂ ಸಹ ಸಂಚರಿಸಿ ಕಾರ್ಯಚರಣೆ ನಡೆಸಿದೆ.

ನಿನ್ನೆ (ಜುಲೈ 25) ಸಂಜೆ ವರೆಗೆ ಸಾಕಷ್ಟು ಹುಡುಕಾಟ ನಡೆಸಿದರೂ ಶರತ್ ಪತ್ತೆಯಾಗದಿದ್ದರಿಂದ ಕಾರ್ಯಚರಣೆ ತಂಡ ರಾತ್ರಿ ಕೊಲ್ಲೂರಿಗೆ ಬರಿಗೈನಲ್ಲಿ ವಾಪಾಸಾಗಿತ್ತು

ಇದೀಗ ಇಂದು (ಜುಲೈ 26) ಸಹ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಮತ್ತೆ ಹುಡುಕಾಟ ನಡೆಸಿದೆ

ಚಿತ್ರದುರ್ಗದಿಂದ ಬಂದಿರುವ ಜ್ಯೋತಿರಾಜ್ ತಂಡದ ಜೊತೆಗೆ ಜಲಪಾತದ ಸುತ್ತಮುತ್ತ ಕಾರ್ಯಚರಣೆ ನಡೆಸಿವೆ.

ಭದ್ರಾವತಿಯ ಯುವಕ ಶರತ್ (23) ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಗೆಳೆಯರ ಜೊತೆಗೆ ಜುಲೈ 24 ರಂದು ಉಡುಪಿಯ ಅರಶಿನಗುಂಡಿ ಜಲಪಾತ ನೋಡಲು ಆಗಮಿಸಿದ್ದ. ಈ ವೇಳೆ ಜಲಪಾತದ ಬಂಡೆ ಮೇಲೆ ನಿಂತ ರೀಲ್ಸ್ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ. ಜಲಪಾತಕ್ಕೆ ಬೀಳುವ ದೃಶ್ಯ ಶರತ್ ಗೆಳೆಯ ಮಾಡುತ್ತಿದ್ದ ವಿಡಿಯೋನಲ್ಲಿ ಸೆರೆಯಾಗಿತ್ತು.



