AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಂಕಾಕ್‌ನಲ್ಲಿ ವಿಶ್ವ ಮಲಯಾಳಿ ಮಂಡಳಿಯ ಜಾಗತಿಕ ಸಮ್ಮೇಳನ 2025 ಆರಂಭ

ಬ್ಯಾಂಕಾಕ್‌ನಲ್ಲಿ ಜು. 25 ರಂದು ವಿಶ್ವ ಮಲಯಾಳಿ ಮಂಡಳಿಯ (World Malayalee Council) 14ನೇ ದ್ವೈವಾರ್ಷಿಕ ಸಮ್ಮೇಳನ ಶೆರಾಟನ್ ಹೋಟೆಲ್‌ನಲ್ಲಿ ಆರಂಭವಾಗಿದ್ದು, ಈ ಸಮ್ಮೇಳನವು ಮಂಡಳಿಯ ಪ್ರಮುಖ ಸಭೆಗಳು ಹಾಗೂ ಹೊಸ ಜಾಗತಿಕ ಪದಾಧಿಕಾರಿಗಳ ಚುನಾವಣೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಒಳಗೊಂಡಿದೆ. ಮಾತ್ರವಲ್ಲ ಈ ಸಮ್ಮೇಳನವು ಡಬ್ಲ್ಯೂಎಂಸಿ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಲಿದ್ದು, ಇದು ಬಹುತೇಕ ಎಲ್ಲಾ ದೇಶಗಳ ಉಪಸ್ಥಿತಿಯನ್ನು ಹೊಂದಿರುವ ಮಲಯಾಳಿಗಳ ಅತಿದೊಡ್ಡ ಜಾಗತಿಕ ಸಮಾರಂಭವಾಗಲಿದೆ.

ಪ್ರೀತಿ ಭಟ್​, ಗುಣವಂತೆ
|

Updated on: Jul 26, 2025 | 2:20 PM

Share
ವಿಶ್ವ ಮಲಯಾಳಿ ಮಂಡಳಿಯ (World Malayalee Council) 14ನೇ ದ್ವೈವಾರ್ಷಿಕ ಸಮ್ಮೇಳನವು ಜುಲೈ 25 ರಂದು ರಾಯಲ್ ಆರ್ಕಿಡ್ ಶೆರಾಟನ್ ಹೋಟೆಲ್‌ನಲ್ಲಿ ಆರಂಭವಾಗಿದೆ. ಈ ಸಮ್ಮೇಳನದಲ್ಲಿ ಪ್ರಪಂಚದಾದ್ಯಂತ ಆರು ಪ್ರದೇಶಗಳ 70 ಪ್ರಾಂತ್ಯಗಳಿಂದ ದಾಖಲೆಯ 565 ಪ್ರತಿನಿಧಿಗಳು ಭಾಗವಹಿಸುತ್ತಿದ್ದು ಮಲಯಾಳಿ ಸಂಸ್ಕೃತಿ ಮತ್ತು ಜಾಗತಿಕ ಮನೋಭಾವದ ಆಚರಣೆಯಾಗಲಿದೆ.

ವಿಶ್ವ ಮಲಯಾಳಿ ಮಂಡಳಿಯ (World Malayalee Council) 14ನೇ ದ್ವೈವಾರ್ಷಿಕ ಸಮ್ಮೇಳನವು ಜುಲೈ 25 ರಂದು ರಾಯಲ್ ಆರ್ಕಿಡ್ ಶೆರಾಟನ್ ಹೋಟೆಲ್‌ನಲ್ಲಿ ಆರಂಭವಾಗಿದೆ. ಈ ಸಮ್ಮೇಳನದಲ್ಲಿ ಪ್ರಪಂಚದಾದ್ಯಂತ ಆರು ಪ್ರದೇಶಗಳ 70 ಪ್ರಾಂತ್ಯಗಳಿಂದ ದಾಖಲೆಯ 565 ಪ್ರತಿನಿಧಿಗಳು ಭಾಗವಹಿಸುತ್ತಿದ್ದು ಮಲಯಾಳಿ ಸಂಸ್ಕೃತಿ ಮತ್ತು ಜಾಗತಿಕ ಮನೋಭಾವದ ಆಚರಣೆಯಾಗಲಿದೆ.

1 / 4
ಈ ಸಮ್ಮೇಳನವು, ಜಾಗತಿಕ ಕಾರ್ಯಕಾರಿ ಮಂಡಳಿ ಮತ್ತು ಜಾಗತಿಕ ಸಾಮಾನ್ಯ ಮಂಡಳಿಯ ಪ್ರಮುಖ ಸಭೆಗಳು ಹಾಗೂ ಹೊಸ ಜಾಗತಿಕ ಪದಾಧಿಕಾರಿಗಳ ಚುನಾವಣೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಒಳಗೊಂಡಿದೆ. ಈ ಸಮ್ಮೇಳನದ ಕುರಿತು ಜಾಗತಿಕ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯರ್ ಮಾತನಾಡಿದ್ದು, ಅವರು ಹೇಳಿರುವ ಪ್ರಕಾರ, ಈ ಸಮ್ಮೇಳನವು ಡಬ್ಲ್ಯೂಎಂಸಿ (WMC) ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಲಿದ್ದು, ಇದು ಬಹುತೇಕ ಎಲ್ಲಾ ದೇಶಗಳ ಉಪಸ್ಥಿತಿಯನ್ನು ಹೊಂದಿರುವ ಮಲಯಾಳಿಗಳ ಅತಿದೊಡ್ಡ ಜಾಗತಿಕ ಜಾಲವಾಗಿದೆ.

ಈ ಸಮ್ಮೇಳನವು, ಜಾಗತಿಕ ಕಾರ್ಯಕಾರಿ ಮಂಡಳಿ ಮತ್ತು ಜಾಗತಿಕ ಸಾಮಾನ್ಯ ಮಂಡಳಿಯ ಪ್ರಮುಖ ಸಭೆಗಳು ಹಾಗೂ ಹೊಸ ಜಾಗತಿಕ ಪದಾಧಿಕಾರಿಗಳ ಚುನಾವಣೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಒಳಗೊಂಡಿದೆ. ಈ ಸಮ್ಮೇಳನದ ಕುರಿತು ಜಾಗತಿಕ ಪ್ರಧಾನ ಕಾರ್ಯದರ್ಶಿ ದಿನೇಶ್ ನಾಯರ್ ಮಾತನಾಡಿದ್ದು, ಅವರು ಹೇಳಿರುವ ಪ್ರಕಾರ, ಈ ಸಮ್ಮೇಳನವು ಡಬ್ಲ್ಯೂಎಂಸಿ (WMC) ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಲಿದ್ದು, ಇದು ಬಹುತೇಕ ಎಲ್ಲಾ ದೇಶಗಳ ಉಪಸ್ಥಿತಿಯನ್ನು ಹೊಂದಿರುವ ಮಲಯಾಳಿಗಳ ಅತಿದೊಡ್ಡ ಜಾಗತಿಕ ಜಾಲವಾಗಿದೆ.

2 / 4
ಅಧ್ಯಕ್ಷ ಥಾಮಸ್ ಮೊಟ್ಟಕಲ್ ಅವರು ಮಾತನಾಡಿ, ವಿಶ್ವಾದ್ಯಂತ ಮಲಯಾಳಿಗಳ ಏಕತೆ, ಸಂಸ್ಕೃತಿ ಮತ್ತು ಕಲ್ಯಾಣವನ್ನು ಉತ್ತೇಜಿಸುವಲ್ಲಿ ಡಬ್ಲ್ಯೂಎಂಸಿ (WMC) ಜಾಗತಿಕವಾಗಿ ಮಲಯಾಳಿ ಸಮುದಾಯವನ್ನು ಒಟ್ಟುಗೂಡಿಸುವಲ್ಲಿ ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು.

ಅಧ್ಯಕ್ಷ ಥಾಮಸ್ ಮೊಟ್ಟಕಲ್ ಅವರು ಮಾತನಾಡಿ, ವಿಶ್ವಾದ್ಯಂತ ಮಲಯಾಳಿಗಳ ಏಕತೆ, ಸಂಸ್ಕೃತಿ ಮತ್ತು ಕಲ್ಯಾಣವನ್ನು ಉತ್ತೇಜಿಸುವಲ್ಲಿ ಡಬ್ಲ್ಯೂಎಂಸಿ (WMC) ಜಾಗತಿಕವಾಗಿ ಮಲಯಾಳಿ ಸಮುದಾಯವನ್ನು ಒಟ್ಟುಗೂಡಿಸುವಲ್ಲಿ ಪ್ರೇರಕ ಶಕ್ತಿಯಾಗಿದೆ ಎಂದು ಹೇಳಿದರು.

3 / 4
ಖಜಾಂಚಿ ಶಾಜಿ ಮ್ಯಾಥ್ಯೂ ಅವರು ಈ ಸಮ್ಮೇಳನದ ಕುರಿತು ಮಾತನಾಡಿ, ಇದು ಮಲಯಾಳಿ ಸಮುದಾಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವ ನಿರೀಕ್ಷೆಯಿದೆ ಮತ್ತು ಪ್ರತಿನಿಧಿಗಳ ವಿಚಾರಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು, ಬೌದ್ಧಿಕ ಚರ್ಚೆಗಳು ಮತ್ತು ನೆಟ್‌ವರ್ಕಿಂಗ್ ಅವಕಾಶಗಳೊಂದಿಗೆ, ಡಬ್ಲ್ಯೂಎಂಸಿ ಜಾಗತಿಕ ಸಮ್ಮೇಳನ 2025, ಭಾಗವಹಿಸುವವರಿಗೆ ಮರೆಯಲಾಗದ ಅನುಭವವ ನೀಡಲಿದೆ.

ಖಜಾಂಚಿ ಶಾಜಿ ಮ್ಯಾಥ್ಯೂ ಅವರು ಈ ಸಮ್ಮೇಳನದ ಕುರಿತು ಮಾತನಾಡಿ, ಇದು ಮಲಯಾಳಿ ಸಮುದಾಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವ ನಿರೀಕ್ಷೆಯಿದೆ ಮತ್ತು ಪ್ರತಿನಿಧಿಗಳ ವಿಚಾರಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು, ಬೌದ್ಧಿಕ ಚರ್ಚೆಗಳು ಮತ್ತು ನೆಟ್‌ವರ್ಕಿಂಗ್ ಅವಕಾಶಗಳೊಂದಿಗೆ, ಡಬ್ಲ್ಯೂಎಂಸಿ ಜಾಗತಿಕ ಸಮ್ಮೇಳನ 2025, ಭಾಗವಹಿಸುವವರಿಗೆ ಮರೆಯಲಾಗದ ಅನುಭವವ ನೀಡಲಿದೆ.

4 / 4
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ