- Kannada News Photo gallery World Tourism Day: Kite Festival in Uttar Kannada Karwar sea bank, Kannada News
ಕಾರವಾರ ಕಡಲ ತೀರದಲ್ಲಿ ಹಾರಾಡುವ ಗಾಳಿಪಟಗಳ ಫೋಟೋ ನೋಡಿ
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾರವಾರ ಕಡಲ ತೀರದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಸೂರ್ಯಸ್ತ ಸಮಯದಲ್ಲಿ ಕಡಲ ತೀರದಲ್ಲಿನ ಗಾಳಿ ಪಟ ಉತ್ಸವ ನೋಡುಗರ ಕಣ್ಮನ ಸೆಳೆಯಿತು.
Updated on:Sep 30, 2024 | 9:07 AM

ಮಳೆಗಾಲದಲ್ಲಿ ಹತ್ತು ಹಲವು ದುರಂತ ಸಂಭವಿಸಿದ ಉತ್ತರ ಕನ್ನಡ ಜಿಲ್ಲೆ ಮತ್ತೆ ಪ್ರವಾಸಿಗರಿಗೆ ಕೈ ಬಿಸಿ ಕರೆಯುತ್ತಿದೆ. ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾರವಾರ ಕಡಲ ತೀರದಲ್ಲಿ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಸೂರ್ಯಸ್ತ ಸಮಯದಲ್ಲಿ ಕಡಲ ತೀರದಲ್ಲಿನ ಗಾಳಿ ಪಟ ಉತ್ಸವ ನೋಡುಗರ ಕಣ್ಮನ ಸೆಳೆಯಿತು.

ಒಂದೆಡೆ ಎಂತವರನ್ನು ಸಹ ಆಕರ್ಷಿಸುವಂತಹ ಕಡಲ ತೀರದಲ್ಲಿನ ಸೂರ್ಯಾಸ್ತದ ದೃಶ್ಯ. ಇನ್ನೊಂದೆಡೆ ಇಂತಹ ಸುಂದರ ಪರಿಸರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಡಲ ತೀರದಲ್ಲಿ ಸೇರಿ ಗಾಳಿ ಪಟವನ್ನ ಕೈನಲ್ಲಿ ಹಿಡಿದು ಹಾರಿಸುತ್ತಾ ಎಂಜಾಯ್ ಮಾಡುತ್ತಿರುವ ಪ್ರವಾಸಿಗರು, ಸಾಯಂಕಾಲದ ಸಮಯದಲ್ಲಿ ಕಣ್ಮನ ಸೆಳೆಯುವ ಅಲೆಗಳ ಅಬ್ಬರ. ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ.

ವಿಶ್ವ ಪ್ರವಾಸೋದ್ಯಮ ದಿನದ ಹಿನ್ನಲೆಯಲ್ಲಿ ಉತ್ತರ ಕನ್ನಡ ಪ್ರವಾಸೋದ್ಯಮ ಇಲಾಖೆ ಇಂದು ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಕಾರವಾರ ನಗರದ ಪ್ರಸಿದ್ಧ ಠಾಗೋರ್ ಕಡಲ ತೀರದಲ್ಲಿ ಈ ಸ್ಪರ್ಧೆ ಆಯೋಜಿಸಿದ್ದು ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

ಕೆಲವರು ವಿಭಿನ್ನ ಗಾಳಿಪಟವನ್ನು ಹಿಡಿದು ಕಡಲ ತೀರಕ್ಕೆ ಬಂದರೆ, ಗಾಳಿಪಟ ಇಲ್ಲದೇ ಇರುವವರಿಗೆ ಪ್ರವಾಸೋದ್ಯಮ ಇಲಾಖೆಯಿಂದಲೇ ಗಾಳಿಪಟವನ್ನು ವಿತರಿಸಲಾಯಿತು. ಸುಮಾರು 200ಕ್ಕೂ ಅಧಿಕ ಜನರು ಕಡಲ ತೀರದಲ್ಲಿ ಗಾಳಿಪಟವನ್ನ ಹಾರಿಸಿ ಎಂಜಾಯ್ ಮಾಡಿದರು. ಇನ್ನೊಂದೆಡೆ ಈ ದೃಶ್ಯವನ್ನ ಸಹ ನೋಡುವುದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕಡಲ ತೀರದಲ್ಲಿ ಜನರು ಜಮಾವಣೆ ಆಗಿದ್ದರು.

ಪ್ರವಾಸೋದ್ಯಮ ದಿನಾಚರಣೆ ಹಿನ್ನಲೆಯಲ್ಲಿ ಕಳೆದ ಮೂರು ದಿನಗಳಿಂದ ಪ್ರವಾಸೋದ್ಯಮ ಇಲಾಖೆ ವಿಭಿನ್ನ ಕಾರ್ಯಕ್ರಮವನ್ನು ಕಡಲ ತೀರದಲ್ಲಿ ಆಯೋಜಿಸುತ್ತಾ ಬಂದಿದೆ. ಇವತ್ತು ಗಾಳಿಪಟ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದು ಅದರಲ್ಲೂ ಭಾನುವಾರ ಆಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿಯೇ ಪ್ರವಾಸಿಗರು ಆಗಮಿಸಿದ್ದರು.

ಇನ್ನು ಪ್ರತಿಯೊಬ್ಬರು ಬಗೆ ಬಗೆಯ ಗಾಳಿಪಟ ಹಾರಿಸುತ್ತಾ ಎಂಜಾಯ್ ಮಾಡಿದರು. ಇದರೊಟ್ಟಿಗೆ ಸಂಜೆ ಆಗಿದ್ದರಿಂದ ಸೂರ್ಯಾಸ್ತದ ದೃಶ್ಯ ಸಹ ಎಂತವರನ್ನ ಆಕರ್ಷಿಸುವಂತಿತ್ತು. ಕಡಲ ತೀರದಲ್ಲಿ ಇಂತಹ ಸ್ಪರ್ಧೆಗಳು ಆಯೋಜನೆ ಮಾಡುವುದರಿಂದ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿಯಾಗಲಿದೆ ಎಂದು ಸ್ಪರ್ಧೆಗೆ ಆಗಮಿಸಿದ್ದ ಸಾರ್ವಜನಿಕರು ಅಭಿಪ್ರಾಯಪಟ್ಟರು.

ಗಾಳಿಪಟ ಸ್ಪರ್ಧೆಗೆ ಶಾಸಕ ಸತೀಶ್ ಸೈಲ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಸೇರಿದಂತೆ ಹಲವರು ಆಗಮಿಸಿ ತಾವು ಗಾಳಿಪಟವನ್ನ ಹಾರಿಸಿ ಪ್ರವಾಸಿಗರಿಗೆ ಹುರಿದುಂಬಿಸಿದರು. ಅಲ್ಲದೇ ಕಾರವಾರ ಪ್ರವಾಸೋದ್ಯಮವನ್ನ ಗೋವಾ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದರು.
Published On - 9:06 am, Mon, 30 September 24



















