Yogi Adityanath Education: ಗಣಿತದಲ್ಲಿ ಆಸಕ್ತಿ ಹೊಂದಿದ್ದ ಯೋಗಿ ಆದಿತ್ಯನಾಥ್; ಹಲವು ಕುತೂಹಲಕಾರಿ ಮಾಹಿತಿಗಳು ಇಲ್ಲಿದೆ

UP Election Results 2022: ಯೋಗಿ ಆದಿತ್ಯನಾಥ್ ಅವರು ಉತ್ತಮ ವಾಗ್ಮಿ ಮತ್ತು ತಮ್ಮ ಭಾಷಣದಿಂದ ಯಾರನ್ನಾದರೂ ಆಕರ್ಷಿಸುವ ಸಾಮರ್ಥ್ಯ ಹೊಂದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿದ ಅವರು ಅಧ್ಯಯನದಲ್ಲಿ ಹೇಗಿದ್ದರು ಮತ್ತು ಅವರ ವಿದ್ಯಾರ್ಥಿ ಜೀವನ ಹೇಗಿತ್ತು ಎಂಬುದನ್ನು ನೋಡೋಣ.

| Updated By: ganapathi bhat

Updated on: Mar 10, 2022 | 11:02 AM

ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯೋಗಿ ಆದಿತ್ಯನಾಥ್​ಗೆ ರಾಜಕೀಯಕ್ಕೂ ಮೊದಲು ಗಣಿತದ ಬಗ್ಗೆ ಆಸಕ್ತಿ ಹೊಂದಿದ್ದರು. ಯುಪಿ ವಿಧಾನಸಭಾ ಚುನಾವಣೆ 2022 (Uttar Pradesh Assembly Election Results 2022) ಫಲಿತಾಂಶಕ್ಕಾಗಿ ದೇಶಾದ್ಯಂತ ಜನರು ಕಾಯುತ್ತಿದ್ದಾರೆ. ಗೋರಖ್‌ಪುರದ ಪ್ರಸಿದ್ಧ ಗೋರಖನಾಥ ದೇವಾಲಯದ ಮುಖ್ಯಸ್ಥ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದು, ಈ ಬಾರಿಯೂ ಯೋಗಿ ಅಧಿಕಾರ ವಹಿಸುವ ಸೂಚನೆಗಳಿವೆ ಎಂದು ಹೇಳಲಾಗಿದೆ. ಯೋಗಿ ಆದಿತ್ಯನಾಥ್ ಅವರು ಉತ್ತಮ ವಾಗ್ಮಿ ಮತ್ತು ತಮ್ಮ ಭಾಷಣದಿಂದ ಯಾರನ್ನಾದರೂ ಆಕರ್ಷಿಸುವ ಸಾಮರ್ಥ್ಯ ಹೊಂದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿದ ಅವರು ಅಧ್ಯಯನದಲ್ಲಿ ಹೇಗಿದ್ದರು ಮತ್ತು ಅವರ ವಿದ್ಯಾರ್ಥಿ ಜೀವನ ಹೇಗಿತ್ತು ಎಂಬುದನ್ನು ನೋಡೋಣ. (ಫೋಟೋ ಕೃಪೆ: Instagram)

ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯೋಗಿ ಆದಿತ್ಯನಾಥ್​ಗೆ ರಾಜಕೀಯಕ್ಕೂ ಮೊದಲು ಗಣಿತದ ಬಗ್ಗೆ ಆಸಕ್ತಿ ಹೊಂದಿದ್ದರು. ಯುಪಿ ವಿಧಾನಸಭಾ ಚುನಾವಣೆ 2022 (Uttar Pradesh Assembly Election Results 2022) ಫಲಿತಾಂಶಕ್ಕಾಗಿ ದೇಶಾದ್ಯಂತ ಜನರು ಕಾಯುತ್ತಿದ್ದಾರೆ. ಗೋರಖ್‌ಪುರದ ಪ್ರಸಿದ್ಧ ಗೋರಖನಾಥ ದೇವಾಲಯದ ಮುಖ್ಯಸ್ಥ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದು, ಈ ಬಾರಿಯೂ ಯೋಗಿ ಅಧಿಕಾರ ವಹಿಸುವ ಸೂಚನೆಗಳಿವೆ ಎಂದು ಹೇಳಲಾಗಿದೆ. ಯೋಗಿ ಆದಿತ್ಯನಾಥ್ ಅವರು ಉತ್ತಮ ವಾಗ್ಮಿ ಮತ್ತು ತಮ್ಮ ಭಾಷಣದಿಂದ ಯಾರನ್ನಾದರೂ ಆಕರ್ಷಿಸುವ ಸಾಮರ್ಥ್ಯ ಹೊಂದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿದ ಅವರು ಅಧ್ಯಯನದಲ್ಲಿ ಹೇಗಿದ್ದರು ಮತ್ತು ಅವರ ವಿದ್ಯಾರ್ಥಿ ಜೀವನ ಹೇಗಿತ್ತು ಎಂಬುದನ್ನು ನೋಡೋಣ. (ಫೋಟೋ ಕೃಪೆ: Instagram)

1 / 6
ಯೋಗಿ ಆದಿತ್ಯನಾಥ್ 5 ಜೂನ್ 1972 ರಂದು ಉತ್ತರಾಖಂಡ್‌ನ ಪೌರಿ ಗರ್ವಾಲ್ ಜಿಲ್ಲೆಯ ಯಮಕೇಶ್ವರ ತೆಹಸಿಲ್‌ನ ಪಂಚೂರ್ ಗ್ರಾಮದಲ್ಲಿ ಜನಿಸಿದರು. ಆ ಸಮಯದಲ್ಲಿ ಆ ಭಾಗವು ಉತ್ತರ ಪ್ರದೇಶದ ಅಡಿಯಲ್ಲಿಯೇ ಇತ್ತು. ಯೋಗಿ ಆದಿತ್ಯನಾಥ್ ಗರ್ವಾಲಿ ರಜಪೂತ ಸಮುದಾಯದವರು. ಅವರ ತಂದೆಯ ಹೆಸರು ಆನಂದ್ ಸಿಂಗ್ ಬಿಷ್ತ್ ಮತ್ತು ತಾಯಿಯ ಹೆಸರು ಸಾವಿತ್ರಿ ದೇವಿ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿಜವಾದ ಹೆಸರು ಅಜಯ್ ಸಿಂಗ್ ಬಿಷ್ತ್.

ಯೋಗಿ ಆದಿತ್ಯನಾಥ್ 5 ಜೂನ್ 1972 ರಂದು ಉತ್ತರಾಖಂಡ್‌ನ ಪೌರಿ ಗರ್ವಾಲ್ ಜಿಲ್ಲೆಯ ಯಮಕೇಶ್ವರ ತೆಹಸಿಲ್‌ನ ಪಂಚೂರ್ ಗ್ರಾಮದಲ್ಲಿ ಜನಿಸಿದರು. ಆ ಸಮಯದಲ್ಲಿ ಆ ಭಾಗವು ಉತ್ತರ ಪ್ರದೇಶದ ಅಡಿಯಲ್ಲಿಯೇ ಇತ್ತು. ಯೋಗಿ ಆದಿತ್ಯನಾಥ್ ಗರ್ವಾಲಿ ರಜಪೂತ ಸಮುದಾಯದವರು. ಅವರ ತಂದೆಯ ಹೆಸರು ಆನಂದ್ ಸಿಂಗ್ ಬಿಷ್ತ್ ಮತ್ತು ತಾಯಿಯ ಹೆಸರು ಸಾವಿತ್ರಿ ದೇವಿ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿಜವಾದ ಹೆಸರು ಅಜಯ್ ಸಿಂಗ್ ಬಿಷ್ತ್.

2 / 6
ಯೋಗಿ ಆದಿತ್ಯನಾಥ್ 1977 ರಲ್ಲಿ ತೆಹ್ರಿ ಗದ್ವಾಲ್‌ನ ಗಾಜಾ ಶಾಲೆಯಿಂದ ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದರು. 1989 ರಲ್ಲಿ, ಅವರು ಋಷಿಕೇಶದ ಭಾರತ್ ಮಂದಿರ ಇಂಟರ್ ಕಾಲೇಜ್‌ನಿಂದ 12 ನೇ ತರಗತಿಯಲ್ಲಿ ಉತ್ತೀರ್ಣರಾದರು. 1992 ರಲ್ಲಿ ಹೇಮಾವತಿ ನಂದನ್ ಬಹುಗುಣ ಗದ್ವಾಲ್ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಮಾಡಿದರು. ಕಾಲೇಜಿನ ಕಾಲದಿಂದಲೂ ಅವರು ತಮ್ಮ ಮಾತಿನ ಗುಣದಿಂದ ಬಹಳ ಪ್ರಸಿದ್ಧರಾಗಿದ್ದರು. (ಫೋಟೋ ಕೃಪೆ: Instagram)

ಯೋಗಿ ಆದಿತ್ಯನಾಥ್ 1977 ರಲ್ಲಿ ತೆಹ್ರಿ ಗದ್ವಾಲ್‌ನ ಗಾಜಾ ಶಾಲೆಯಿಂದ ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದರು. 1989 ರಲ್ಲಿ, ಅವರು ಋಷಿಕೇಶದ ಭಾರತ್ ಮಂದಿರ ಇಂಟರ್ ಕಾಲೇಜ್‌ನಿಂದ 12 ನೇ ತರಗತಿಯಲ್ಲಿ ಉತ್ತೀರ್ಣರಾದರು. 1992 ರಲ್ಲಿ ಹೇಮಾವತಿ ನಂದನ್ ಬಹುಗುಣ ಗದ್ವಾಲ್ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಮಾಡಿದರು. ಕಾಲೇಜಿನ ಕಾಲದಿಂದಲೂ ಅವರು ತಮ್ಮ ಮಾತಿನ ಗುಣದಿಂದ ಬಹಳ ಪ್ರಸಿದ್ಧರಾಗಿದ್ದರು. (ಫೋಟೋ ಕೃಪೆ: Instagram)

3 / 6
1993 ರಲ್ಲಿ, ಯೋಗಿ ಗೋರಖ್‌ಪುರಕ್ಕೆ ಬಂದರು ಮತ್ತು ಇಲ್ಲಿ ಅವರು ಗೋರಖ್‌ನಾಥ್ ದೇವಸ್ಥಾನದ ಮಹಂತ್ ಇಲ್ಲೀಲನಾಥ್ ಜಿ ಅವರನ್ನು ಭೇಟಿಯಾದರು. ಆದಿತ್ಯನಾಥ್ಅ ಕ್ರಮನಾಥ್ ಎಂಬವರಿಂದ ಸನ್ಯಾಸ ದೀಕ್ಷೆಯನ್ನು ಪಡೆದರು. 1994 ರಲ್ಲಿ ಸನ್ಯಾಸಿಯಾದರು. ಇದರಿಂದಾಗಿ ಅವರ ಹೆಸರನ್ನು ಅಜಯ್ ಸಿಂಗ್ ಬಿಷ್ತ್ ನಿಂದ ಯೋಗಿ ಆದಿತ್ಯನಾಥ್ ಎಂದು ಬದಲಾಯಿಸಲಾಯಿತು.

1993 ರಲ್ಲಿ, ಯೋಗಿ ಗೋರಖ್‌ಪುರಕ್ಕೆ ಬಂದರು ಮತ್ತು ಇಲ್ಲಿ ಅವರು ಗೋರಖ್‌ನಾಥ್ ದೇವಸ್ಥಾನದ ಮಹಂತ್ ಇಲ್ಲೀಲನಾಥ್ ಜಿ ಅವರನ್ನು ಭೇಟಿಯಾದರು. ಆದಿತ್ಯನಾಥ್ಅ ಕ್ರಮನಾಥ್ ಎಂಬವರಿಂದ ಸನ್ಯಾಸ ದೀಕ್ಷೆಯನ್ನು ಪಡೆದರು. 1994 ರಲ್ಲಿ ಸನ್ಯಾಸಿಯಾದರು. ಇದರಿಂದಾಗಿ ಅವರ ಹೆಸರನ್ನು ಅಜಯ್ ಸಿಂಗ್ ಬಿಷ್ತ್ ನಿಂದ ಯೋಗಿ ಆದಿತ್ಯನಾಥ್ ಎಂದು ಬದಲಾಯಿಸಲಾಯಿತು.

4 / 6
1998 ರಲ್ಲಿ, ಯೋಗಿ ಭಾರತೀಯ ಜನತಾ ಪಕ್ಷದ ಟಿಕೆಟ್‌ ಪಡೆದು ಮೊದಲ ಬಾರಿಗೆ ಗೋರಖ್‌ಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಅವರು ಆ ಚುನಾವಣೆಯಲ್ಲಿ ಗೆದ್ದರು ಕೂಡ. ಲೋಕಸಭೆ ಚುನಾವಣೆಯಲ್ಲಿ ಅವರು ಅತ್ಯಂತ ಕಿರಿಯ ಸಂಸದರಾಗಿದ್ದರು. ಆಗ ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು. 1999ರ ಲೋಕಸಭೆ ಚುನಾವಣೆಯಲ್ಲಿ ಅವರು ಮತ್ತೆ ಸಂಸದರಾಗಿ ಆಯ್ಕೆಯಾದರು. ಅವರ ಹೆಸರು ಅತ್ಯಂತ ಕಿರಿಯ ಸಂಸದ ಎಂಬ ದಾಖಲೆಯನ್ನು ಹೊಂದಿದೆ. (ಫೋಟೋ ಕೃಪೆ: Instagram)

1998 ರಲ್ಲಿ, ಯೋಗಿ ಭಾರತೀಯ ಜನತಾ ಪಕ್ಷದ ಟಿಕೆಟ್‌ ಪಡೆದು ಮೊದಲ ಬಾರಿಗೆ ಗೋರಖ್‌ಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಅವರು ಆ ಚುನಾವಣೆಯಲ್ಲಿ ಗೆದ್ದರು ಕೂಡ. ಲೋಕಸಭೆ ಚುನಾವಣೆಯಲ್ಲಿ ಅವರು ಅತ್ಯಂತ ಕಿರಿಯ ಸಂಸದರಾಗಿದ್ದರು. ಆಗ ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು. 1999ರ ಲೋಕಸಭೆ ಚುನಾವಣೆಯಲ್ಲಿ ಅವರು ಮತ್ತೆ ಸಂಸದರಾಗಿ ಆಯ್ಕೆಯಾದರು. ಅವರ ಹೆಸರು ಅತ್ಯಂತ ಕಿರಿಯ ಸಂಸದ ಎಂಬ ದಾಖಲೆಯನ್ನು ಹೊಂದಿದೆ. (ಫೋಟೋ ಕೃಪೆ: Instagram)

5 / 6
ಯೋಗಿ ಆದಿತ್ಯನಾಥ್ ಹಿಂದೂ ಯುವ ವಾಹಿನಿಯ ಸಂಸ್ಥಾಪಕರೂ ಹೌದು. ಹಿಂದೂ ಯುವ ವಾಹಿನಿ ಸಂಘಟನೆಯು ಹಿಂದೂ ಯುವಕರ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯತಾವಾದಿ ಗುಂಪು. 19 ಮಾರ್ಚ್ 2017 ರಂದು ಅವರು ಉತ್ತರ ಪ್ರದೇಶದ 21 ನೇ ಮುಖ್ಯಮಂತ್ರಿಯಾದರು.

ಯೋಗಿ ಆದಿತ್ಯನಾಥ್ ಹಿಂದೂ ಯುವ ವಾಹಿನಿಯ ಸಂಸ್ಥಾಪಕರೂ ಹೌದು. ಹಿಂದೂ ಯುವ ವಾಹಿನಿ ಸಂಘಟನೆಯು ಹಿಂದೂ ಯುವಕರ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯತಾವಾದಿ ಗುಂಪು. 19 ಮಾರ್ಚ್ 2017 ರಂದು ಅವರು ಉತ್ತರ ಪ್ರದೇಶದ 21 ನೇ ಮುಖ್ಯಮಂತ್ರಿಯಾದರು.

6 / 6
Follow us