ಅಗ್ನಿವೀರರಿಗೆ ಪಕ್ಷದ ಕಚೇರಿಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸದ ಆಫರ್ ನೀಡಿದ ಬಿಜೆಪಿ ನಾಯಕ
ಯಾರಾದರೂ 21 ನೇ ವರ್ಷದಲ್ಲಿ ಸೇನೆ ಸೇರಿದರೆ ಕರ್ತವ್ಯ ಮುಗಿಯುವಾಗ ವ್ಯಕ್ತಿಗೆ 25 ವರ್ಷ ಆಗುತ್ತದೆ. ಆಗ ಅವರ ಕೈಯಲ್ಲಿ ₹ 11 ಲಕ್ಷ ಮತ್ತು ಅಗ್ನಿವೀರ್ ಬ್ಯಾಡ್ಜ್ ಇರುತ್ತದೆ. ಬಿಜೆಪಿ ಕಚೇರಿಗೆ ಸೆಕ್ಯೂರಿಟಿ ಗಾರ್ಡ್ ನೇಮಿಸಬೇಕಾದರೆ ನಾನು ಅಗ್ನಿವೀರನನ್ನು ಆಯ್ಕೆ ಮಾಡುತ್ತೇನೆ...
ದೆಹಲಿ: ಹೊಸ ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ್’ (Agnipath) ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಪಕ್ಷದ ಕಚೇರಿಯಲ್ಲಿ ‘ಅಗ್ನಿವೀರ’ರಿಗೆ (Agniveers) ಸೆಕ್ಯುರಿಟಿ ಗಾರ್ಡ್ ಕೆಲಸ ನೀಡುತ್ತೇವೆ ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ (Kailash Vijayvargiya) ಹೇಳಿದ್ದಾರೆ. ವಿಜಯವರ್ಗಿಯ ಹೇಳಿಕೆ ವಿರುದ್ಧ ವಿಪಕ್ಷಗಳು ಕಿಡಿಕಾರಿದ್ದು, ಬಿಜೆಪಿ ಕೂಡಾ ತಮ್ಮ ನಾಯಕನ ಹೇಳಿಕೆಯನ್ನು ಖಂಡಿಸಿದೆ. ಹೊಸ ಯೋಜನೆಯಡಿ ನಾಲ್ಕು ವರ್ಷಗಳ ಕರ್ತವ್ಯದ ಪೂರ್ಣಗೊಳಿಸಿದ ಯುವಕರಿಗೆ ಬಿಜೆಪಿ ಕಚೇರಿಯಲ್ಲಿ ಸೆಕ್ಯುರಿಟಿ ಗಾರ್ಡ್ ಉದ್ಯೋಗಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಸಶಸ್ತ್ರ ಪಡೆಗಳಿಗೆ ಸೇರಲು ತರಬೇತಿ ಪಡೆಯುವ ಯುವಕರು ಭದ್ರತಾ ಸಿಬ್ಬಂದಿಯ ಕೆಲಸವನ್ನು ಬಯಸುತ್ತಾರೆ ಎಂಬ ಬಿಜೆಪಿ ನಾಯಕರ ಊಹೆಯನ್ನು ಟೀಕಿಸಿದ್ದಾರೆ. ದೇಶದ ಯುವಕರು ಮತ್ತು ಸೇನಾ ಸಿಬ್ಬಂದಿಯನ್ನು ತುಂಬಾ ಅಗೌರವಗೊಳಿಸಬೇಡಿ. ನಮ್ಮ ದೇಶದ ಯುವಕರು ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹಗಲಿರುಳು ಶ್ರಮಿಸುತ್ತಾರೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ ಏಕೆಂದರೆ ಅವರು ಸೈನ್ಯಕ್ಕೆ ಸೇರಿ ಜೀವನಪೂರ್ತಿ ದೇಶಕ್ಕಾಗಿ ಸೇವೆ ಸಲ್ಲಿಸಲು ಬಯಸುತ್ತಾರೆಯೇ ಹೊರತು ಬಿಜೆಪಿ ಕಚೇರಿಯ ಹೊರಗೆ ಕಾವಲುಗಾರರಾಗಿರಲು ಬಯಸುವುದಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
देश के युवाओं और सेना के जवानों का इतना अपमान मत करो।
ಇದನ್ನೂ ಓದಿ
Agnipath scheme ಹಳೆಯ ನೇಮಕಾತಿ ನೀತಿ ರದ್ದು; ಅಗ್ನಿಪಥ್ ಯೋಜನೆ ಮೂಲಕ ಮಾತ್ರ ಸೇನೆ, ನೌಕಾಪಡೆ, ವಾಯಪಡೆಗೆ ನೇಮಕಾತಿ
ಪ್ರಧಾನಿ ಮೋದಿ ಹಿಟ್ಲರ್ ತರಹ ವರ್ತಿಸುತ್ತಿದ್ದಾರೆ, ಆರ್ಮಿಯನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ -ವಿ.ಎಸ್.ಉಗ್ರಪ್ಪ
Agnipath scheme ಅಗ್ನಿಪಥ್ ನೇಮಕಾತಿ ಯೋಜನೆಯ ವಿವರ ಬಿಡುಗಡೆ ಮಾಡಿದ ಭಾರತೀಯ ವಾಯುಪಡೆ
Agnipath: ಅಗ್ನಿಪಥ್ ಯೋಜನೆ ಖಂಡಿಸಿ ಬೆಳಗಾವಿ ಬಂದ್ ಕರೆಗೆ ಜನರು ಬೆಂಬಲಿಸಬಾರದು: ಲಕ್ಷ್ಮಣ್ ಸವದಿ ಮನವಿ
हमारे देश के युवा दिन-रात मेहनत करके फ़िज़िकल पास करते हैं, टेस्ट पास करते हैं, क्योंकि वो फ़ौज में जाकर पूरा जीवन देश की सेवा करना चाहते हैं, इसलिए नहीं कि वो BJP के दफ़्तर के बाहर गार्ड लगना चाहते हैं। https://t.co/PQ8B30FYHz
‘ಅಗ್ನಿಪಥ’ ಯೋಜನೆ ವಿರೋಧಿಸಿ ಮಿಲಿಟರಿ ಆಕಾಂಕ್ಷಿಗಳ ಪ್ರತಿಭಟನೆಯ ನಡುವೆಯೇ ವಿಜಯವರ್ಗಿಯ, ಮಿಲಿಟರಿ ತರಬೇತಿಯ ನಂತರ ‘ಅಗ್ನಿವೀರರು’ ದಕ್ಷ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಿದರು.
ಮಿಲಿಟರಿ ತರಬೇತಿಯಲ್ಲಿ ಶಿಸ್ತು ಮತ್ತು ಆದೇಶಗಳ ಪಾಲನೆ ಇರುತ್ತದೆ. ಅವರು ಹದಿನೇಳೂವರೆ ಮತ್ತು 23 ವರ್ಷಗಳ ನಡುವಿನ ಯುವಕರು ನಾಲ್ಕು ವರ್ಷಗಳ ತರಬೇತಿಯಿಂದ ಹಿಂತಿರುಗಿದ ನಂತರ ಅಂದರೆ , ಯಾರಾದರೂ 21 ನೇ ವರ್ಷದಲ್ಲಿ ಸೇನೆ ಸೇರಿದರೆ ಕರ್ತವ್ಯ ಮುಗಿಯುವಾಗ ವ್ಯಕ್ತಿಗೆ 25 ವರ್ಷ ಆಗುತ್ತದೆ. ಆಗ ಅವರ ಕೈಯಲ್ಲಿ ₹ 11 ಲಕ್ಷ ಮತ್ತು ಅಗ್ನಿವೀರ್ ಬ್ಯಾಡ್ಜ್ ಇರುತ್ತದೆ. ಬಿಜೆಪಿ ಕಚೇರಿಗೆ ಸೆಕ್ಯೂರಿಟಿ ಗಾರ್ಡ್ ನೇಮಿಸಬೇಕಾದರೆ ನಾನು ಅಗ್ನಿವೀರನನ್ನು ಆಯ್ಕೆ ಮಾಡುತ್ತೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯವರ್ಗಿಯ ಹೇಳಿದ್ದಾರೆ.
ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ “ಸೆಕ್ಯುರಿಟಿ ಗಾರ್ಡ್ ಕಾಮೆಂಟ್” ಕುರಿತು ತಮ್ಮ ಪಕ್ಷದ ಸಹೋದ್ಯೋಗಿಯನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ.
जिस महान सेना की वीर गाथाएँ कह सकने में समूचा शब्दकोश असमर्थ हो, जिनके पराक्रम का डंका समस्त विश्व में गुंजायमान हो, उस भारतीय सैनिक को किसी राजनीतिक दफ़्तर की ‘चौकीदारी’ करने का न्यौता, उसे देने वाले को ही मुबारक।
ಮಹಾನ್ ಸೇನೆ..ಇಡೀ ಪ್ರಪಂಚದಾದ್ಯಂತ ಅವರ ಶೌರ್ಯವನ್ನು ಪ್ರತಿಧ್ವನಿಸುತ್ತದೆ. ಆದರೆ ಅದು ರಾಜಕೀಯ ಕಚೇರಿಯ ಚೌಕೀದಾರರಾಗಲು ಆಹ್ವಾನವನ್ನು ಪಡೆಯುತ್ತದೆ. ಆ ಆಫರ್ ನೀಡಿದವರಿಗೆ ಅಭಿನಂದನೆಗಳು. ಭಾರತೀಯ ಸೇನೆಯು ಭಾರತಮಾತೆಯ ಸೇವೆಯ ಮಾಧ್ಯಮವಾಗಿದೆ. ಇದು ಕೇವಲ ಕೆಲಸವಲ್ಲ ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
Now we know what the BJP really meant when they launched the campaign in 2019, ‘Main Bhi Chowkidaar’… pic.twitter.com/CE8pbcAfNg
ಏತನ್ಮಧ್ಯೆ, ಕೆಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ಮುಂದುವರಿದಿವೆ, ಉತ್ತರ ಪ್ರದೇಶ, ತೆಲಂಗಾಣ ಮತ್ತು ಬಿಹಾರದಲ್ಲಿ ಪ್ರತಿಭಟನೆ ಮತ್ತಷ್ಟು ತೀವ್ರವಾಗಿದೆ. ಪ್ರತಿಭಟನೆಯ ನಡುವೆಯೇ ಕೇಂದ್ರ ಹಲವು ರಿಯಾಯಿತಿಗಳನ್ನು ಘೋಷಿಸಿದೆ.