AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರ ಬದಲಾವಣೆ ಬೆಂಕಿಗೆ ತುಪ್ಪ ಸುರಿದ ಸಚಿವ, ಅಧಿಕಾರ ಬಿಟ್ಟುಕೊಡುವ ಮನವಿ ಮುಖ್ಯಮಂತ್ರಿ ಸ್ಥಾನದ್ದೋ? ಸಚಿವರದ್ದೋ?

ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮುುನಿಯಪ್ಪ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಅಧಿಕಾರ ಹಂಚಿಕೆ ಚರ್ಚೆ ಮುನ್ನೆಲೆಗೆ ಬಂದಿದ್ದು, ಅಧಿಕಾರ ಬದಲಾವಣೆ ಬೆಂಕಿಗೆ ಮುನಿಯಪ್ಪ ತುಪ್ಪ ಸುರಿದಿದ್ದಾರೆ. ಆದ್ರೆ, ಅಧಿಕಾರ ಬಿಟ್ಟುಕೊಡುವ ಮನವಿ ಮುಖ್ಯಮಂತ್ರಿ ಸ್ಥಾನದ್ದೋ? ಸಚಿವರದ್ದೋ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಅಧಿಕಾರ ಬದಲಾವಣೆ ಬೆಂಕಿಗೆ ತುಪ್ಪ ಸುರಿದ ಸಚಿವ, ಅಧಿಕಾರ ಬಿಟ್ಟುಕೊಡುವ ಮನವಿ ಮುಖ್ಯಮಂತ್ರಿ ಸ್ಥಾನದ್ದೋ? ಸಚಿವರದ್ದೋ?
ಸಿದ್ದರಾಂಯ್ಯ, ಡಿಕೆ ಶಿವಕುಮಾರ್
ಪ್ರಸನ್ನ ಗಾಂವ್ಕರ್​
| Edited By: |

Updated on: Aug 16, 2023 | 8:59 AM

Share

ಬೆಂಗಳೂರು, (ಆಗಸ್ಟ್ 16): ಕೆಸರಿನಲ್ಲಿ ಹೂತಿರುವ ಕಂಬ ಆಗಾಗ ಅಲುಗಾಡುತ್ತಲೇ ಇರುತ್ತದೆ ಎನ್ನುವಂತೆ ತಳಪಾಯ ಗಟ್ಟಿ ಆಗುವ ಮೊದಲೇ ಕಾಂಗ್ರೆಸ್ (Congress) ಪಾಳಯದಲ್ಲಿ ಖುರ್ಚಿ ಅಲುಗಾಡುತ್ತಿರುವ ಮಾತುಗಳು ಪದೇ ಪದೇ ಪ್ರಸ್ತಾಪ ಆಗುತ್ತಿದೆ. ಈ ಬಾರಿ ಕಂಪಿಸುವ ಧ್ವನಿ ಹೊರ ಬಂದಿದ್ದು ಹಿರಿಯ ಸಚಿವ ಕೆ ಎಚ್ ಮುನಿಯಪ್ಪರಿಂದ. ಎರಡೂವರೆ ವರ್ಷದ ಬಳಿಕ ಬೇರೆಯವರಿಗೆ ಅವಕಾಶ. ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ (KH Muniyappa) ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮುುನಿಯಪ್ಪ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಅಧಿಕಾರ ಹಂಚಿಕೆ ಚರ್ಚೆ ಮುನ್ನೆಲೆಗೆ ಬಂದಿದೆ.

ಅಧಿಕಾರ ಬಿಟ್ಟುಕೊಡುವ ಮನವಿ ಮುಖ್ಯಮಂತ್ರಿ ಸ್ಥಾನದ್ದೋ? ಸಚಿವರದ್ದೋ?

ಅಧಿಕಾರ ಹಂಚಿಕೆ ಕಾಂಗ್ರೆಸ್ ಸರ್ಕಾರ ರಚನೆ ವೇಳೆ ದೊಡ್ಡ ಮಟ್ಟದಲ್ಲಿ ಕೇಳಿ ಬಂದ ಮಾತು. ಸಿದ್ದರಾಮಯ್ಯ ಸಿಎಂ ಎಂದು ಘೋಷಣೆಯಾದ ಬಳಿಕವೂ ಇದು ಕೇವಲ ಎರಡೂವರೆ ವರ್ಷ ಮಾತ್ರ. ಅಧಿಕಾರ ಹಂಚಿಕೆ ಸೂತ್ರಕ್ಕೆ ಬದ್ದರಾಗಿಯೇ ಸರ್ಕಾರ ರಚನೆಯಾಗಿದೆ ಎನ್ನುವ ಮಾತು ಜೋರಾಗಿತ್ತು. ಇದೀಗ ಪಕ್ಷದೊಳಗೆ ಅಧಿಕಾರ ಹಂಚಿಕೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮೊನ್ನೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಹಿರಿಯ ನಾಯಕ, ಸಚಿವ ಮುನಿಯಪ್ಪ ಸಿಎಂ, ಡಿಸಿಎಂ ಎದುರೇ ಹಿರಿಯ ಸಚಿವರು ಅಧಿಕಾರ ಬಿಟ್ಟುಕೊಡುವ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.‌

ಇದನ್ನೂ ಓದಿ: ರಾಜ್ಯಪಾಲರ ಅಂಗಳದಲ್ಲಿ MLC ನಾಮ ನಿರ್ದೇಶನದ ಚೆಂಡು, ಬಂಡಾಯಕ್ಕೆ ದಾರಿ ಮಾಡುತ್ತಾ ಸಿಎಂ ನಿರ್ಧಾರ?

ಮುನಿಯಪ್ಪರಿಂದ ಬಂದ ಈ ಪ್ರಸ್ತಾಪ ಕೇವಲ ಸಚಿವರದ್ದಾ ಅಥವಾ ಸಿಎಂ, ಡಿಸಿಎಂ ಸ್ಥಾನದ ಬದಲಾವಣೆಯ ಪ್ರಸ್ತಾಪವೂ ಮುನಿಯಪ್ಪ ಮಾತಿನ ಹಿಂದೆ ಅಡಗಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಯಾಕಂದ್ರೆ ಸಚಿವ ಮುನಿಯಪ್ಪ, ಸಿಎಂ, ಡಿಸಿಎಂ ಮಾಡುವುದು ಹೈಕಮಾಂಡ್ ಎನ್ನುವ ವಿಚಾರವನ್ನೂ ಹೇಳಿದ್ದಾರೆ.

ಸಿಎಂ, ಡಿಸಿಎಂ ಮಾಡುವುದು ಹೈಕಮಾಂಡ್ ‌ಎನ್ನುವ ಮೂಲಕ ಮುನಿಯಪ್ಪ, ಪರೋಕ್ಷವಾಗಿ ಹೈಕಮಾಂಡ್ ಮುಂದೆ ಬೇರೆ ಯಾರ ಸ್ಟ್ರಾಟಜಿ ಕೂಡ ನಡೆಯಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ. ಕೇವಲ ನಾಲ್ಕು ಗೋಡೆಗಳ ನಡುವೆ ಹೈಕಮಾಂಡ್ ಸಮ್ಮುಖದಲ್ಲಿ ಆಗಿದೆ ಎನ್ನಲಾದ ಮಾತುಕತೆಗೆ ಇದೀಗ ಹಿರಿಯ ಸಚಿವರ ಹೇಳಿಕೆಗಳು ಅಧಿಕಾರ ಹಂಚಿಕೆಯಾಗುವುದು ಸತ್ಯ ಎನ್ನುವ ಮಾತಿಗೆ ರೆಕ್ಕೆ ಪುಕ್ಕಗಳು ಬರುವಂತೆ ಮಾಡಿವೆ‌.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Prasanna Gaonkar
Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More