ಎಂಸಿಡಿ ಚುನಾವಣೆಗೆ ಕೇಂದ್ರ ಅಡ್ಡಿ, ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ ಕೇಜ್ರಿವಾಲ್

ಕೇಂದ್ರ ಸರ್ಕಾರ ಎಂಸಿಡಿ ಚುನಾವಣೆಗಳನ್ನು ಅನುಮತಿಸದೆ ಬಲ, ಗೂಂಡಾಗಿರಿಯನ್ನು ಬಳಸುತ್ತಿದೆ. ಎಂಸಿಡಿ ಚುನಾವಣೆಗಳನ್ನು ಸಮಯಕ್ಕೆ ನಡೆಸಲು ನಾವು ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ.

ಎಂಸಿಡಿ ಚುನಾವಣೆಗೆ ಕೇಂದ್ರ ಅಡ್ಡಿ, ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Edited By: ರಶ್ಮಿ ಕಲ್ಲಕಟ್ಟ

Updated on: Jul 05, 2022 | 7:13 PM

ದೆಹಲಿ: ಬಿಜೆಪಿ (BJP) ನೇತೃತ್ವದಕೇಂದ್ರ ಸರ್ಕಾರ ಬಲ ಮತ್ತು ಗೂಂಡಾಗಿರಿ ಮಾಡಿ ದೆಹಲಿಯಲ್ಲಿ ಎಂಸಿಡಿ ಚುನಾವಣೆ (MCD elections) ನಡೆಯದಂತೆ ಅಡ್ಡಿಡಿಸುತ್ತಿದೆ. ಹಾಗಾಗಿ ನಾವು ನ್ಯಾಯಾಲಯದ ಮೊರೆ ಹೋಗಿ ತಕ್ಕ ಸಮಯಕ್ಕೆ ಚುನಾವಣೆ ನಡೆಸುವಂತೆ ಕೇಳಿಕೊಳ್ಳುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ. ದೆಹಲಿ ವಿಧಾನಸಭೆಯಲ್ಲಿ ಮುಂಗಾರು ಅಧಿವೇಶನದ ಎರಡನೇ ದಿನ ಮಾತನಾಡಿದ ಕೇಜ್ರಿವಾಲ್, ಈ ದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಮೊಹಲ್ಲಾ ಕ್ಲಿನಿಕ್ ಪರಿಕಲ್ಪನೆಯನ್ನು ನೀಡಿದ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಿದಾಗ ಅದು ದೇಶಕ್ಕೆ ಕರಾಳ ದಿನ ಎಂದು ನಾನು ಭಾವಿಸುತ್ತೇನೆ. ಅವರನ್ನು ಜೈಲಿಗೆ ಹಾಕಿದರೂ ಜನರು  ಅವರು ಪ್ರಾಮಾಣಿಕ ಎಂದು ಹೇಳುತ್ತಾರೆ ಎಂದಿದ್ದಾರೆ. ಎಂಸಿಡಿ ಚುನಾವಣೆ ಬಗ್ಗೆ ಮಾತನಾಡಿದ ಅವರು  ದೆಹಲಿಯನ್ನು ಸಂಪೂರ್ಣವಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಹೀಗಾದರೆ ಯಾವುದೇ ಚುನಾವಣೆ ಇರಲ್ಲ.  ಕೇಂದ್ರ ಸರ್ಕಾರ ಎಂಸಿಡಿ ಚುನಾವಣೆಗಳನ್ನು ಅನುಮತಿಸದೆ ಬಲ, ಗೂಂಡಾಗಿರಿಯನ್ನು ಬಳಸುತ್ತಿದೆ. ಎಂಸಿಡಿ ಚುನಾವಣೆಗಳನ್ನು ಸಮಯಕ್ಕೆ ನಡೆಸಲು ನಾವು ನ್ಯಾಯಾಲಯವನ್ನು ಸಂಪರ್ಕಿಸಬೇಕಾಗುತ್ತದೆ. ನಾವು ಅದನ್ನು ಮಾಡುತ್ತೇವೆ ಕೇಜ್ರಿವಾಲ್ ಚರ್ಚೆಯ ಸಂದರ್ಭದಲ್ಲಿ ಹೇಳಿದರು.


ತಮ್ಮ ಭಾಷಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್ ಮೂರು ಎಂಸಿಡಿಗಳ ಏಕೀಕರಣದ ಪ್ರಕ್ರಿಯೆ ಸಮಯದಲ್ಲಿ ಕೇಂದ್ರವು ಡಿಲಿಮಿಟೇಶನ್ ಆಯೋಗವನ್ನು ರಚಿಸಲಾಗುವುದು ಎಂದು ಭರವಸೆ ನೀಡಿದೆ, ಅದರ ನಂತರ ಚುನಾವಣೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಎಂಸಿಡಿ ಏಕೀಕರಣವಾಗಿ ಒಂದೂವರೆ ತಿಂಗಳಾಯಿತು. ಆವರು ಡಿಲಿಮಿಟೇಶನ್ ಆಯೋಗವನ್ನು ರಚಿಸಿಲ್ಲ. ಅವರಿಗೆ ಚುನಾವಣೆ ನಡೆಯುವುದು ಬೇಕಾಗಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು. ಅಗತ್ಯವಿದ್ದರೆ ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದು ಅವರು ಹೇಳಿದ್ದಾರೆ.

Published On - 7:12 pm, Tue, 5 July 22

Web contact

TV9 Kannada

Read More
Follow Us