AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mimi Chakraborty: ಸಂಸತ್ ಸ್ಥಾನಕ್ಕೆ ಟಿಎಂಸಿಯ ಮಿಮಿ ಚಕ್ರವರ್ತಿ ರಾಜೀನಾಮೆ

ಸ್ಥಳೀಯ ತೃಣಮೂಲ ನಾಯಕತ್ವಕ್ಕೂ ಭಿನ್ನಾಭಿಪ್ರಾಯಗಳಿವೆ ಎಂದು ಜಾದವ್‌ಪುರದ ಸಂಸದೆ ಮಿಮಿ ಚಕ್ರವರ್ತಿ ಗುರುವಾರ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದಾಗ್ಯೂ, ಈ ರಾಜೀನಾಮೆಯನ್ನು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ವೀಕರಿಸಿಲ್ಲ. ನಟಿ, ರಾಜಕಾರಣಿ ಆಗಿರುವ ಮಿಮಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅನುಪಮ್ ಹಜ್ರಾ ಮತ್ತು ಸಿಪಿಎಂನ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರನ್ನು ಸೋಲಿಸಿದ್ದರು.

Mimi Chakraborty: ಸಂಸತ್ ಸ್ಥಾನಕ್ಕೆ ಟಿಎಂಸಿಯ ಮಿಮಿ ಚಕ್ರವರ್ತಿ ರಾಜೀನಾಮೆ
ಮಿಮಿ ಚಕ್ರವರ್ತಿ
Follow us
ರಶ್ಮಿ ಕಲ್ಲಕಟ್ಟ
|

Updated on:Feb 15, 2024 | 5:28 PM

ಕೊಲ್ಕತ್ತಾ ಫೆಬ್ರುವರಿ 15: ನಟಿ, ಸಂಸದೆ ಮಿಮಿ ಚಕ್ರವರ್ತಿ (Mimi Chakraborty) ಅವರು ಸಂಸತ್  ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುರುವಾರ ಮಿಮಿ ಅವರು ಪಶ್ಚಿಮ ಬಂಗಾಳ (West Bengal) ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ(Mamata Banerjee) ಅವರಿಗೆ ರಾಜೀನಾಮೆ ಸಲ್ಲಿಸಿದ್ದು ಈವರೆಗೆ ಅದನ್ನು ಅಂಗೀಕರಿಸಿಲ್ಲ ಎಂದು ಬಲ್ಲ ಮೂಲಗಳು ಹೇಳಿವೆ. ಸ್ಥಳೀಯ ತೃಣಮೂಲ ನಾಯಕತ್ವಕ್ಕೂ ಭಿನ್ನಾಭಿಪ್ರಾಯಗಳಿವೆ ಎಂದು ಜಾದವ್‌ಪುರದ ಸಂಸದೆ ಹೇಳಿದ್ದು, ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದಿದ್ದಾರೆ. “ನಾನು ಜಾದವ್‌ಪುರಕ್ಕಾಗಿ ಕನಸು ಕಂಡೆ, ಆದರೆ ನಾನು ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದೇನೆ. ಒಬ್ಬ ವ್ಯಕ್ತಿ ಅಥವಾ ಅವಳು ಚಲನಚಿತ್ರದ ಹಿನ್ನೆಲೆಯಿಂದ ಬಂದಾಗ ಅವನು ಅಥವಾ ಅವಳು ಕೆಲಸ ಮಾಡುವುದಿಲ್ಲ ಎಂದು ಹೇಳುವುದು ತುಂಬಾ ಸುಲಭ” ಎಂದು ಮಿಮಿ ಹೇಳಿದ್ದಾರೆ.

“ನನಗೆ ರಾಜಕೀಯದ ಈ ಆಟಗಳು ಅರ್ಥವಾಗುತ್ತಿಲ್ಲ. ನಾನು ಜನರನ್ನು ತಲುಪಿದಾಗ, ಅದು ಬಹಳಷ್ಟು ಜನರಿಗೆ ಹಿಡಿಸಿಲ್ಲ ಅಥವಾ ಅವರಲ್ಲಿ ಕೆಲವರಿಗೆ ಆ ರೀತಿ ಅನಿಸಿರಬಹುದು ಎಂದು ಸಂಸದೆ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಿಮಿ ಚಕ್ರವರ್ತಿ, “ಇಂದು, ನಾನು ನಮ್ಮ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದೇನೆ. ನಾನು ಫೆಬ್ರವರಿ 13 ರಂದು ನಾನು ಅವರಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ. ನಾನು ಈ ಎಲ್ಲಾ ವರ್ಷಗಳಲ್ಲಿ ರಾಜಕೀಯ ನನಗೆ ಹೇಳಿದ್ದಲ್ಲ ಎಂದು ಅರ್ಥ ಮಾಡಿಕೊಂಡಿದ್ದೇನೆ” ಎಂದು ಹೇಳಿದರು.

ಮಮತಾ ಬ್ಯಾನರ್ಜಿ ಅವರಿಗೆ ಏಕೆ ರಾಜೀನಾಮೆ ಸಲ್ಲಿಸಿದ್ದೀರಿ? ನಿಯಮಾನುಸಾರ ಲೋಕಸಭೆಯ ಸ್ಪೀಕರ್‌ಗೆ ಅಲ್ಲವೇ ರಾಜೀನಾಮೆ ಸಲ್ಲಿಸಬೇಕಾಗಿದ್ದು? ಎಂದು ಮಾಧ್ಯಮದವರು ಕೇಳಿದಾಗ “ನಾನು ಟಿಎಂಸಿಯಿಂದ ಒಪ್ಪಿಗೆ ಪಡೆದ ನಂತರ ನಾನು ಅದನ್ನು ಸ್ಪೀಕರ್‌ಗೆ ಸಲ್ಲಿಸುತ್ತೇನೆ” ಎಂದು ಮಿಮಿ ಹೇಳಿದ್ದಾರೆ.

ಸ್ಥಳೀಯ ನಾಯಕತ್ವವು ತನ್ನ ನಿರ್ಧಾರಕ್ಕೆ ಅಡ್ಡಿಯಾಗುತ್ತಿದೆಯೇ ಎಂದು ಕೇಳಿದಾಗ, ಅವರು ಅದನ್ನು ನಿರಾಕರಿಸುವುದಿಲ್ಲ ಎಂದಿದ್ದಾರೆ ಅವರು. ನಾನು ನನ್ನ ಮಾನಸಿಕ ಶಾಂತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ, ನಾನು ಎಲ್ಲಿ ಸಂತೋಷವಾಗಿಲ್ಲವೋ ಅಲ್ಲಿ ನಾನು ಇರುವುದಿಲ್ಲ” ಎಂದು ಸಂಸದೆ ಮಿಮಿ ಹೇಳಿದ್ದಾರೆ.

ಇದನ್ನೂ ಓದಿ: Narayan Goswami: ಸಂದೇಶಖಾಲಿಯ ಮಹಿಳೆಯರ ಮೈಬಣ್ಣದ ಬಗ್ಗೆ ಮಾತಾಡಿದ ಟಿಎಂಸಿ ನಾಯಕನ ವಿರುದ್ಧ ಬಿಜೆಪಿ ಕಿಡಿ

ಬಂಗಾಳದ ಜನಪ್ರಿಯ ಚಲನಚಿತ್ರ ತಾರೆ ಮಿಮಿ 2019 ರಲ್ಲಿ ಜಾದವ್‌ಪುರದಿಂದ ತೃಣಮೂಲ ಕಾಂಗ್ರೆಸ್ ಟಿಕೆಟ್‌ನಲ್ಲಿ ಆಯ್ಕೆಯಾದರು. ಚುನಾವಣೆಯಲ್ಲಿ  ಬಿಜೆಪಿಯ ಅನುಪಮ್ ಹಜ್ರಾ ಮತ್ತು ಸಿಪಿಎಂನ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರನ್ನು ಮಿಮಿ ಪರಾಭವಗೊಳಿಸಿದ್ದರು . ಸಂದೇಶಖಾಲಿಯಲ್ಲಿ ತೃಣಮೂಲ ನಾಯಕರ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ಬಂಗಾಳದ ಮತ್ತೊಬ್ಬ ನಟಿ ಸಂಸದೆ ನುಸ್ರತ್ ಜಹಾನ್ ಮೌನ ವಹಿಸಿರುವ ಬಗ್ಗೆ ಪ್ರಶ್ನೆಗಳೇಳುತ್ತಿರುವ ಹೊತ್ತಲ್ಲೇ ಮಿಮಿ ರಾಜೀನಾಮೆ ವಿಷಯ ಬಂದಿದೆ.

ತನ್ನ ಸಂಗಾತಿ ಮತ್ತು ನಟ ಯಶ್ ದಾಸ್‌ಗುಪ್ತಾ ಅವರೊಂದಿಗೆ ಪ್ರೇಮಿಗಳ ದಿನಾಚರಣೆಯ ಫೋಟೋಗಳ ಹಂಚಿಕೊಂಡಿದ್ದಕ್ಕೆ ಬಿಜೆಪಿ ಬಸಿರ್‌ಹತ್ ಸಂಸದೆ ನುಸ್ರತ್ ಅವರ ಮೇಲೆ ಟೀಕಾಪ್ರಹಾರ ಮಾಡಿದೆ. “ಆದ್ಯತೆಗಳು ಮುಖ್ಯ: ಸಂದೇಶಖಾಲಿಯಲ್ಲಿ, ಮಹಿಳೆಯರು ತಮ್ಮ ಗೌರವಕ್ಕಾಗಿ ಪ್ರತಿಭಟಿಸುತ್ತಿದ್ದಾರೆ. ಏತನ್ಮಧ್ಯೆ, ಬಸಿರ್ಹತ್‌ನ ಟಿಎಂಸಿ ಸಂಸದರು ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದಾರೆ” ಎಂದು ಬಂಗಾಳ ಬಿಜೆಪಿ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಟೀಕಿಸಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Thu, 15 February 24

ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ