AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಎರಡನೇ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್ ಶಾಸಕರಿಗೆ ಡಿಕೆ ಶಿವಕುಮಾರ್ ಮನವಿ

2ನೇ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್​ಗೆ ಮನವಿ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜಾತ್ಯತೀತ ಶಕ್ತಿಗಳು ಒಂದಾಗಬೇಕೆಂದರೆ ಕಾಂಗ್ರೆಸ್​ಗೆ ಮತಹಾಕಲಿ.

ಕಾಂಗ್ರೆಸ್ ಎರಡನೇ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್ ಶಾಸಕರಿಗೆ ಡಿಕೆ ಶಿವಕುಮಾರ್ ಮನವಿ
ಡಿಕೆ ಶಿವಕುಮಾರ್
TV9 Web
| Updated By: sandhya thejappa|

Updated on:Jun 10, 2022 | 9:11 AM

Share

ಬೆಂಗಳೂರು: ಇಂದು (ಜೂನ್ 10) ಕರ್ನಾಟಕದಲ್ಲಿ ರಾಜ್ಯಸಭಾ (Rajya Sabha Polls) ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 4 ಸ್ಥಾನಗಳಿಗೆ ಮೂರು ಪಕ್ಷದಿಂದ ಒಟ್ಟು 6 ಸ್ಪರ್ಧಿಗಳು ಕಣಕ್ಕೆ ಇಳಿದಿದ್ದಾರೆ. ಜೆಡಿಎಸ್ (JDS) ಅಭ್ಯರ್ಥಿ ಗೆಲ್ಲಲು ಬೇರೆ ಪಕ್ಷದ ಶಾಸಕರ ಮತಗಳು ಬೇಕು. ಹಾಗೇ, ಕಾಂಗ್ರೆಸ್​ನ ಎರಡನೇ ಅಭ್ಯರ್ಥಿ ಜಯ ಸಾಧಿಸಲು ಬೇರೆ ಪಕ್ಷದ ಶಾಸಕರ ಮತಗಳು ಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ತಮಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿವೆ. ಸಿದ್ದರಾಮಯ್ಯ ತಮಗೆ ಬೆಂಬಲ ನೀಡುವಂತೆ ಬೆಂಬಲ ನೀಡುವಂತೆ ಜೆಡಿಎಸ್​ಗೆ ಮನವಿ ಮಾಡುತ್ತಿದ್ದರೆ, ಹಲವು ಬಾರಿ ಕಾಂಗ್ರೆಸ್​ಗೆ ಬೆಂಬಲ ನೀಡಿದ್ದೇವೆ ಈ ಬಾರಿ ನಮಗೆ ಬೆಂಬಲ ನೀಡಲಿ ಅಂತ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ ಯಾರು ಯಾರಿಗೆ ಬೆಂಬಲ ನೀಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಜೆಡಿಎಸ್ ಶಿವಕುಮಾರ್ ಮನವಿ: 2ನೇ ಅಭ್ಯರ್ಥಿಗೆ ಮತ ನೀಡುವಂತೆ ಜೆಡಿಎಸ್​ಗೆ ಮನವಿ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜಾತ್ಯತೀತ ಶಕ್ತಿಗಳು ಒಂದಾಗಬೇಕೆಂದರೆ ಕಾಂಗ್ರೆಸ್​ಗೆ ಮತಹಾಕಲಿ. ಹಿಂದೆ ನಾವು ಜೆಡಿಎಸ್​ಗೆ ಸಹಾಯ ಮಾಡಿದ್ದೇವೆ. ಮುಂದಿನ ನಿರ್ಧಾರ ಜೆಡಿಎಸ್​ಗೆ ಬಿಟ್ಟಿದ್ದು. ಆತ್ಮಸಾಕ್ಷಿ ಮತಗಳು ಎಷ್ಟು ಬೀಳುತ್ತೋ ನೋಡೋಣ ಎಂದರು.

ಇದನ್ನೂ ಓದಿ: 777 Charlie: ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ರಿಲೀಸ್​; ಪೈರಸಿ ತಡೆಯಲು ಚಿತ್ರತಂಡ ಮಾಡಿರುವ ತಯಾರಿ ಏನು?

ಇದನ್ನೂ ಓದಿ
Image
Dowry Case: ವರದಕ್ಷಿಣೆಗಾಗಿ ಹೆಂಡತಿಯ ಬೆರಳು ಕತ್ತರಿಸಿದ ಸೇನಾಧಿಕಾರಿ
Image
777 Charlie: ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ರಿಲೀಸ್​; ಪೈರಸಿ ತಡೆಯಲು ಚಿತ್ರತಂಡ ಮಾಡಿರುವ ತಯಾರಿ ಏನು?
Image
ಇಂದು 15 ರಾಜ್ಯಗಳ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 41 ಸ್ಥಾನಗಳು ಅವಿರೋಧ ಆಯ್ಕೆ, ಕರ್ನಾಟಕದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ
Image
ಕಣ್ಣಿನ ಕೆಳಗೆ ಇರುವ ಡಾರ್ಕ್ ಸರ್ಕಲ್​ಗೆ ಪರಿಹಾರ ಇಲ್ಲಿದೆ

ನಿನ್ನೆ ಯಾರ ಮನೆಗೆ ಯಾರು ಹೋಗಿದ್ರು ಎಲ್ಲಾ ಗೊತ್ತಿದೆ. ಅವರ ಶಾಸಕರ ಬಗ್ಗೆ ಅನುಮಾನ ಇರಬೇಕು ಹಾಗಾಗಿಹೀಗೆ ಮಾಡಿದ್ದಾರೆ. ಅಡ್ಡ ಮತದಾನ ಆಗತ್ತಾ ಅನ್ನೋದು ಆಮೇಲೆ ಗೊತ್ತಿದೆ. ಚುನಾವಣೆಯಲ್ಲಿ ಎಲ್ಲರೂ ಗೆಲ್ಲಲು ಆಗಲ್ಲ ಎಂದು ತಮ್ಮ ನಿವಾಸದಿಂದ ಡಿಕೆಶಿ ತೆರಳಿದರು.

ಕುಪೇಂದ್ರ ರೆಡ್ಡಿ ಸಾಲ ಪ್ರಸ್ತಾಪ: ರಾಜಕಾರಣಿಗಳಿಗೆ ಕುಪೇಂದ್ರ ರೆಡ್ಡಿ ಸಾಲ ನೀಡಿರುವ ವಿಚಾರವನ್ನು ವಿಧಾನಸೌಧದ ಸಿದ್ದರಾಮಯ್ಯ ಕೊಠಡಿಯಲ್ಲಿ ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿದರು. ಕುಪೇಂದ್ರ ರೆಡ್ಡಿ ನೀಡಿರುವ ಸಾಲದ ಬಗ್ಗೆ ಡಿಕೆಶಿ ಮಾತನಾಡುತ್ತಿದ್ದಾಗ ಕಾಂಗ್ರೆಸ್​​ ಅಭ್ಯರ್ಥಿ ಜೈರಾಮ್ ರಮೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:07 am, Fri, 10 June 22