ನೀವು ಏನು ಬೇಕಾದರೂ ಮಾಡಿಕೊಳ್ಳಿ ಆದರೆ ಬಾಳಾಸಾಹೇಬ್ ಹೆಸರು ಬಳಸಬೇಡಿ: ಉದ್ಧವ್ ಠಾಕ್ರೆ

| Updated By: ರಶ್ಮಿ ಕಲ್ಲಕಟ್ಟ

Updated on: Jun 25, 2022 | 5:11 PM

ಈ ಮೊದಲೇ ನಾನು ಹೇಳಿದ್ದೆ ಅವರು (ಬಂಡಾಯ ಶಾಸಕರು) ಅವರು ಏನು ಬೇಕಾದರೂ ಮಾಡಿಕೊಳ್ಳಲಿ , ಅವರ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಅವರು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಬಹುದು

ನೀವು ಏನು ಬೇಕಾದರೂ ಮಾಡಿಕೊಳ್ಳಿ ಆದರೆ ಬಾಳಾಸಾಹೇಬ್ ಹೆಸರು ಬಳಸಬೇಡಿ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Follow us on

ಮುಂಬೈ: ಏಕನಾಥ್ ಶಿಂಧೆ (Eknath Shinde) ನೇತೃತ್ವದ ಬಂಡಾಯ ಗುಂಪು ತಮ್ಮ ಗುಂಪಿಗೆ ‘ಶಿವಸೇನಾ ಬಾಳಾಸಾಹೇಬ್’ (Shiv Sena Balasaheb)ಎಂದು ಹೆಸರಿಡುವುದಾಗಿ ಘೋಷಿಸಿದ ನಂತರ ಯಾರೂ ಬಾಳಾಸಾಹೇಬ್ ಠಾಕ್ರೆ ಹೆಸರನ್ನು ಬಳಸಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray)ಶನಿವಾರ ಹೇಳಿದ್ದಾರೆ. “ಕೆಲವರು ಏನಾದರೂ ಹೇಳಿ ಎಂದು ನನ್ನಲ್ಲಿ ಕೇಳುತ್ತಿದ್ದಾರೆ. ಈ ಮೊದಲೇ ನಾನು ಹೇಳಿದ್ದೆ ಅವರು (ಬಂಡಾಯ ಶಾಸಕರು) ಅವರು ಏನು ಬೇಕಾದರೂ ಮಾಡಿಕೊಳ್ಳಲಿ , ಅವರ ವಿಷಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಅವರು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಬಹುದು, ಆದರೆ ಯಾರೂ ಬಾಳಾಸಾಹೇಬ್ ಠಾಕ್ರೆ ಹೆಸರು ಬಳಸಬಾರದು ಎಂದು ಉದ್ಧವ್ ಹೇಳಿದ್ದಾರೆ. ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ನಡುವೆ ಶನಿವಾರ ಸಭೆ ಸೇರಿದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯು ಯಾವುದೇ ಗುಂಪು ‘ಶಿವಸೇನಾ’ ಮತ್ತು ‘ಬಾಳಾಸಾಹೇಬ್ ಠಾಕ್ರೆ’ ಹೆಸರನ್ನು ಬಳಸಲು ಅವಕಾಶ ನೀಡದಂತೆ ನಿರ್ಣಯವನ್ನು ಅಂಗೀಕರಿಸಿತು. ಈ ವಿಷಯದಲ್ಲಿಪಕ್ಷವು ಚುನಾವಣಾ ಆಯೋಗವನ್ನು ಸಂಪರ್ಕಿಸಲಿದೆ.

ಬಾಳಾಸಾಹೇಬ್ ಅವರ ನಿಜವಾದ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಿರುವ ಏಕನಾಥ್ ಶಿಂಧೆ ಬಣ ಶಿವಸೇನೆ ಬಾಳಾಸಾಹೇಬ್ ಎಂದು ಹೆಸರಿಸುವ ನಿರ್ಧಾರವನ್ನು ಬಂಡಾಯ ಶಶಾಸಕ ದೀಪಕ್ ಕೇಸರ್ಕರ್ ಘೋಷಿಸಿದರು. ಒಡೆದ ಗುಂಪು ಯಾವುದೇ ಪಕ್ಷದೊಂದಿಗೆ ವಿಲೀನವಾಗುವುದಿಲ್ಲ ಎಂದು ಹೇಳಿರುವ ಅವರು, ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹವನ್ನು ತಳ್ಳಿಹಾಕಿದ್ದಾರೆ.

“ಅವರು ಮತ ಕೇಳಲು ಬಯಸಿದರೆ, ಅವರು ಅದನ್ನು ತಮ್ಮ ತಂದೆಯ ಹೆಸರಿನಲ್ಲಿ ಭಿಕ್ಷೆ ಬೇಡಬೇಕು ಎಂದು ಉದ್ಧವ್ ಜಿ ಹೇಳಿದ್ದಾರೆ” ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

ಇದನ್ನೂ ಓದಿ
Breaking: 16 ಬಂಡಾಯ ಶಿವಸೇನೆ ಶಾಸಕರಿಗೆ ನೋಟಿಸ್ ಜಾರಿ ಮಾಡಿದ ಉಪ ಸ್ಪೀಕರ್
1978ರಲ್ಲಿ ಶರದ್ ಪವಾರ್​​ ಬಂಡಾಯ ಗುಂಪಿನ ನೇತೃತ್ವ ವಹಿಸಿ ಮಹಾರಾಷ್ಟ್ರ ಸರ್ಕಾರ ಉರುಳಿಸಿದ್ದರು: ಹಳೇ ಘಟನೆ ನೆನಪಿಸಿದ ಮಾಜಿ ಶಾಸಕ
Maharashtra Crisis: ಮಹಾರಾಷ್ಟ್ರ ಬಿಕ್ಕಟ್ಟು; ಅತೃಪ್ತ ಶಾಸಕರ ಬಣಕ್ಕೆ ಶಿವಸೇನಾ- ಬಾಳಾಸಾಹೇಬ್ ಎಂದು ಹೆಸರಿಟ್ಟ ಏಕನಾಥ್ ಶಿಂಧೆ
ಶಿವ ಸೇನೆಯ ಕೆಲ ಭಿಕ್ಷುಕರ ಕೈ ಹಿಡಿದು ಬಿಜೆಪಿ ತಾನೊಂದು ಮಹಾಶಕ್ತಿಯೆಂದು ಬಿಂಬಿಸಿಕೊಳ್ಳುತ್ತಿದೆ: ಸಾಮ್ನಾದಲ್ಲಿ ಸಂಪಾದಕೀಯ!

ಮಾತೋಶ್ರೀಯಿಂದ ಉದ್ಧವ್ ಸಭೆಯ ಅಧ್ಯಕ್ಷತೆ ವಹಿಸಬೇಕಾಗಿತ್ತು. ಆದರೆ ಅವರು ಸಭೆಗಾಗಿ ಶನಿವಾರ ದಾದರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಗೆ ಬಂದಿದ್ದರು. ಕಳೆದ ಎರಡು ದಿನಗಳಲ್ಲಿ ಠಾಕ್ರೆ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಹಲವಾರು ಬಾರಿ ಸಂವಾದ ನಡೆಸಿದ್ದು ತಮ್ಮ ಮತ್ತು ಅವರ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ನಾವು ಶಿವಸೇನಾ ತೊರೆಯುತ್ತಿಲ್ಲ, ಶಿಂಧೆ ಶಾಸಕಾಂಗ ಪಕ್ಷದ ನಾಯಕರಾಗಿಯೇ  ಉಳಿಯಲಿದ್ದಾರೆ

ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಾಸಕರು ಈಗಲೂ ಶಿವಸೇನಾ ಸದಸ್ಯರಾಗಿದ್ದು, ವಿಧಾನಸಭೆಯಲ್ಲಿ ಪಕ್ಷಕ್ಕೆ ಮೂರನೇ ಎರಡರಷ್ಟು ಬಹುಮತವಿದೆ ಎಂದು ಶಿವಸೇನಾ ಬಂಡಾಯ ಪಾಳಯದ ವಕ್ತಾರ ದೀಪಕ್ ಕೇಸರ್ಕರ್ ಹೇಳಿದ್ದಾರೆ. ಏಕನಾಥ್ ಶಿಂಧೆ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಉಳಿದಿದ್ದಾರೆ ಎಂದು ಕೇಸರ್ಕರ್  ಹೇಳಿದ್ದಾರೆ.

Published On - 5:07 pm, Sat, 25 June 22