ಸಿದ್ದರಾಮಯ್ಯ ಸಮಬಲದಲ್ಲಿ ಕುಸ್ತಿ ಆಡಲು ದೈಹಿಕ, ಮಾನಸಿಕ ಸಾಮರ್ಥ್ಯ ಅಶೋಕ್​ಗೆ ಇದೆ- ಸದಾನಂದ ಗೌಡ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 02, 2024 | 8:27 PM

ಸಿದ್ದರಾಮಯ್ಯ ಎದುರು ಸಮಬಲದಲ್ಲಿ ಕುಸ್ತಿ ಆಡುವ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಅಶೋಕ್​ಗೆ(Ashoka) ಇದೆ ಎಂದು ಸಂಸದ ಡಿ.ವಿ ಸದಾನಂದ ಗೌಡ(DV Sadananda Gowda)  ಹೇಳಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿ ‘ಬೆಂಗಳೂರಿನ ಹುಲಿ ಅಶೋಕ್​ ಎಂದು ಹೊಗಳಿದ್ದಾರೆ.

ಸಿದ್ದರಾಮಯ್ಯ ಸಮಬಲದಲ್ಲಿ ಕುಸ್ತಿ ಆಡಲು ದೈಹಿಕ, ಮಾನಸಿಕ ಸಾಮರ್ಥ್ಯ ಅಶೋಕ್​ಗೆ ಇದೆ- ಸದಾನಂದ ಗೌಡ
ಡಿವಿ ಸದಾನಂದ ಗೌಡ
Follow us on

ಬೆಂಗಳೂರು, ಜ.02: ‘ಸಿದ್ದರಾಮಯ್ಯ ಎದುರು ಸಮಬಲದಲ್ಲಿ ಕುಸ್ತಿ ಆಡುವ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಅಶೋಕ್​ಗೆ(Ashoka) ಇದೆ ಎಂದು ಸಂಸದ ಡಿ.ವಿ ಸದಾನಂದ ಗೌಡ(DV Sadananda Gowda)  ಹೇಳಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿ ‘ಬೆಂಗಳೂರಿನ ಹುಲಿ ಅಶೋಕ್​ ಎಂದು ಹೊಗಳಿದ್ದು, ಆತ ಆರ್ಥಿಕವಾಗಿ ನಮ್ಮನ್ನೆಲ್ಲಾ‌ ನೋಡಿಕೊಳ್ಳಬೇಕು ಎಂದು  ಹಾಸ್ಯ ಮಾಡಿದರು. ಇನ್ನು ವಿಧಾನಸಭೆ ಸೋಲು ನಮಗೆಲ್ಲಾ‌ ಅಚ್ಚರಿ ಹುಟ್ಟಿಸಿದೆ. ನಮ್ಮ ಕಾರ್ಯಕರ್ತರಿಗೆ ಈ ಸೋಲು ಯಾಕಾಯ್ತು ಎಂದು ಇನ್ನೂ ಅರ್ಥ ಆಗಿಲ್ಲ ಎಂದರು.

ಇನ್ನು ಇದೇ ವೇಳೆ ‘ವಿಜಯೇಂದ್ರ ಇವತ್ತು ಹೊಸ ವರ್ಷದ ಶುಭಾಶಯ ಕೋರಲು ನಮ್ಮ‌‌ ಮನೆಗೆ ಬಂದಿದ್ದರು, ಬಳಿಕ ಒಂದು ಮಾತು ಹೇಳಿದ ಅವರು ‘
ಈ ಮಧ್ಯೆ ಸ್ವಲ್ಪ ವ್ಯತ್ಯಾಸಗಳಾಗಿ ಸಂಬಂಧಗಳ‌ ಮೇಲೆ ಪರಿಣಾಮ ಆದವು, ಇನ್ನು ಮುಂದೆ ಹೀಗಾಗದಂತೆ‌ ನೋಡಿ ಕೊಳ್ಳುತ್ತೇನೆ ಎಂದು ವಿಜಯೇಂದ್ರ ಹೇಳಿದರು. ಇದು ಒಬ್ಬ ಯಶಸ್ವಿ ನಾಯಕನಿಗೆ ಇರಬೇಕಾದ ಲಕ್ಷಣ.

ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರ ಕನ್ನಡಿಗರ ತಲೆಮೇಲೆ ಕಲ್ಲು ಹಾಕ್ತಿದೆ ಎಂದ ಅಶೋಕ್‌, ಅಂಕಿ-ಅಂಶ ಮೂಲಕ ಸಿದ್ದು ಗುದ್ದು

ವಿಜಯೇಂದ್ರ ಅವರೇ ನಮ್ಮ ಬೆಂಗಳೂರು ಉತ್ತರ ಜಿಲ್ಲೆಯತ್ತ ಸ್ವಲ್ಪ ನೋಡಿಕೊಳ್ಳಿ, ಪಕ್ಷ‌ ಸಂಘಟನೆಗೆ ಸಮರ್ಥ ತಂಡ ನಮ್ಮ ಬೆಂಗಳೂರು ಉತ್ತರ ಜಿಲ್ಲೆಯಲ್ಲಿದೆ. ವಿಜಯೇಂದ್ರ‌ ಮತ್ತು ಅಶೋಕ್​ಗೆ ನಾನು ಜೋಡೆತ್ತು ಎಂದು ಕರೆಯಲ್ಲ, ಯಾಕೆಂದರೆ ಆ ಪದ ಈಗಾಗಲೇ ಬಳಸಿ ಬಳಸಿ ಸವಕಲಾಗಿದೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Tue, 2 January 24