AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharashtra crisis ವಿಶ್ವಾಸಮತ ಯಾಚನೆ ಬಗ್ಗೆ ರಾತ್ರಿ 9 ಗಂಟೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ಈ ಸಮಸ್ಯೆಗಳನ್ನು ಬಗೆಹರಿಸಲು ಬಹುಮತ ಸಾಬೀತೊಂದೇ ದಾರಿ ಎಂದು ಸುಪ್ರೀಂಕೋರ್ಟ್ ಹೇಳಿದ್ದು,ನಾಳೆ ಬಹುಮತ ಸಾಬೀತು ನಡೆಯದಿದ್ದರೆ ಸ್ವರ್ಗವೇನೂ ಕುಸಿದು ಬೀಳುವುದಿಲ್ಲ ಎಂದು ಸಿಂಘ್ವಿ ಹೇಳಿದ್ದಾರೆ.

Maharashtra crisis ವಿಶ್ವಾಸಮತ ಯಾಚನೆ ಬಗ್ಗೆ ರಾತ್ರಿ 9 ಗಂಟೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jun 29, 2022 | 9:03 PM

Share

ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (MVA) ಒಕ್ಕೂಟಕ್ಕೆ ಭಾರಿ ಹಿನ್ನಡೆಯಾಗಿದ್ದು, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಬುಧವಾರ ಬೆಳಿಗ್ಗೆ ಶಿವಸೇನಾ ಮುಖ್ಯಸ್ಥ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ( Uddhav Thackeray) ಅವರಿಗೆ ಜೂನ್ 30 ರಂದು ಬೆಳಿಗ್ಗೆ 11 ಗಂಟೆಗೆ ಬಹುಮತ ಸಾಬೀತು(floor test) ಪಡಿಸುವಂತೆ ಸೂಚಿಸಿದ್ದಾರೆ. ರಾಜ್ಯಪಾಲರ ಈ ಆದೇಶವನ್ನು ಪ್ರಶ್ನಿಸಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಕಾಂಗ್ರೆಸ್ ಒಳಗೊಂಡಿರುವ ಎಂವಿಎ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದು ಇಂದು (ಬುಧವಾರ) ಸಂಜೆ 5 ಗಂಟೆಗೆ ವಿಚಾರಣೆ ನಡೆದಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಳೆ ನಡೆಯಲಿರುವ ವಿಶ್ವಾಸಮತ ಪರೀಕ್ಷೆಗೆ ತಡೆಯಾಜ್ಞೆ ನೀಡುವಂತೆ ಶಿವಸೇನೆಯ ಮುಖ್ಯ ಸಚೇತಕ ಮಾಡಿದ ಮನವಿಯ ಕುರಿತು ಸುಪ್ರೀಂಕೋರ್ಟ್ ಇಂದು ರಾತ್ರಿ 9 ಗಂಟೆಗೆ ಆದೇಶ ಪ್ರಕಟಿಸಲಿದೆ.

ವಿಚಾರಣೆಯ ಅಪ್ಡೇಟ್ಸ್

  1. ಠಾಕ್ರೆ ಸರ್ಕಾರದ ಪರ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ರಾಜ್ಯಪಾಲರ ಬಹುಮತ ಸಾಬೀತು ಆದೇಶದ ‘ಸೂಪರ್ ಸಾನಿಕ್’ ವೇಗದ ವಿರುದ್ಧ ದೂರು ನೀಡಿದ್ದಾರೆ.
  2. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ ಬಹುಮತ ಸಾಬೀತು ಪಡಿಸಲು ಯಾವುದೇ ಕನಿಷ್ಠ ಸಮಯದ ವೇಳಾಪಟ್ಟಿ ಇದೆಯೇ? ಅಥವಾ ಯಾವುದೇ ಸಾಂವಿಧಾನಿಕ ತಡೆ ಇದೆಯೇ? ಎಂದು ಕೇಳಿದೆ. ಇದಕ್ಕೆ ಉತ್ತರಿಸಿದ ಸಿಂಘ್ವಿ 6 ತಿಂಗಳೊಳಗೆ ಎರಡನೇ ಬಹುಮತ ಸಾಬೀತು ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
  3. ಅನರ್ಹತೆಯ ಅರ್ಜಿಯನ್ನು ನಾವು ಪ್ರತ್ಯೇಕವಾಗಿ ಪರಿಗಣಿಸುತ್ತೇವೆ. ವಿಶ್ವಾಸ ಮತವು  ಅನರ್ಹತೆಯ ಪ್ರಕ್ರಿಯೆಗಳಿಗೆ ಹೇಗೆ ಸಂಬಂಧಿಸಿದೆ ಅಥವಾ ಹೇಗೆ ಪರಿಣಾಮ ಬೀರುತ್ತದೆ ಅಥವಾ ಅನರ್ಹತೆಯ ಪ್ರಕ್ರಿಯೆಗಳನ್ನು ನಡೆಸಲು ಸ್ಪೀಕರ್‌ನ ಅಧಿಕಾರದಲ್ಲಿ ಹೇಗೆ ಹಸ್ತಕ್ಷೇಪ ಮಾಡುತ್ತದೆ ಎಂದು ನೀವು ನಮಗೆ ಹೇಳಿ ಎಂದು ಸುಪ್ರೀಂಕೋರ್ಟ್ ಹೇಳಿದೆ .
  4. ಜೂನ್ 21 ರಂದು ಈಗಾಗಲೇ ಅನರ್ಹರಾಗಿರುವ ಯಾರಿಗಾದರೂ ನಾಳೆ ಮತದಾನ ಮಾಡಲು ಅವಕಾಶ ನೀಡಲಾಗುವುದಿಲ್ಲ. ಈ ನ್ಯಾಯಾಲಯವು ಅಂತಹ ಪರಿಸ್ಥಿತಿಯನ್ನು ತಪ್ಪಿಸಬೇಕು. ಪ್ರಜಾಪ್ರಭುತ್ವದ ಮೂಲವನ್ನು ಕತ್ತರಿಸುವ ಯಾವುದನ್ನಾದರೂ ಅನುಮತಿಸಬಾರದು-  ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ
  5. 34 ಬಂಡಾಯ ಶಾಸಕರು ರಾಜ್ಯಪಾಲರಿಗೆ ನೀಡಿದ ಪತ್ರವನ್ನು ಉಲ್ಲೇಖಿಸಿದ ಸಿಂಘ್ವಿ “ಇದು ಸುಪ್ರೀಂ ನಿರ್ಧಾರಗಳ ಪ್ರಕಾರ ಸದಸ್ಯತ್ವವನ್ನು ಬಿಟ್ಟುಕೊಡುತ್ತದೆ ಎಂದಿದ್ದಾರೆ.
  6. 34 ಶಾಸಕರು ಬೇರ್ಪಟ್ಟಿಲ್ಲ ಎಂಬುದರ ಬಗ್ಗೆ ವಾದಿಸುತ್ತೀರಾ? ಈ 34 ಶಾಸಕರು ಆ ಪತ್ರಕ್ಕೆ ಸಹಿ ಮಾಡಿಲ್ಲ ಎಂದು ನಿಮ್ಮ ರಿಟ್ ಅರ್ಜಿ ಹೇಳುತ್ತದೆಯೇ?-ಸುಪ್ರೀಂಕೋರ್ಟ್
  7. ಈ ಸಮಸ್ಯೆಗಳನ್ನು ಬಗೆಹರಿಸಲು ಬಹುಮತ ಸಾಬೀತೊಂದೇ ದಾರಿ-ಸುಪ್ರೀಂಕೋರ್ಟ್
  8. ನಾಳೆ ಬಹುಮತ ಸಾಬೀತು ನಡೆಯದಿದ್ದರೆ ಸ್ವರ್ಗವೇನೂ ಕುಸಿದು ಬೀಳುವುದಿಲ್ಲ-ಸಿಂಘ್ವಿ
  9. ಸಭಾಧ್ಯಕ್ಷರ ಕೈಗಳನ್ನು ಕಟ್ಟಿಹಾಕಿರುವಾಗ ಬಹುಮತ ಸಾಬೀತಿಗೆ ದಾರಿ ಮಾಡಿಕೊಡುವುದು ಸರಿಯಲ್ಲ ಎಂದು ಒತ್ತಿ ಹೇಳುವ ಮೂಲಕ ಶಿವಸೇನೆಯ ವಕೀಲರು ವಾದ ಮಂಡಿಸಿದ್ದಾರೆ . ಒಂದೋ ಸ್ಪೀಕರ್ ಅನರ್ಹತೆಯ ಪ್ರಕ್ರಿಯೆಗಳನ್ನು ನಿರ್ಧರಿಸಲು ಅವಕಾಶ ಮಾಡಿಕೊಡಿ ಅಥವಾ ಬಹುಮತ ಸಾಬೀತು ಮುಂದೂಡಿ ಎಂದು ವಕೀಲರು ಹೇಳಿದ್ದಾರೆ.
  10. ಶಿಂಧೆ ಬಣದ ಪರ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ವಾದ ಮಂಡಿಸಿದ್ದಾರೆ. ಕೌಲ್ ಅವರು ನೆಬಾಮ್ ರೆಬಿಯಾ ತೀರ್ಪನ್ನು (2016) ಉಲ್ಲೇಖಿಸಿ ಸ್ಪೀಕರ್ ಅವರು ತಮ್ಮ ತೆಗೆದುಹಾಕುವಿಕೆಯ ನಿರ್ಣಯವನ್ನು ನಿರ್ಧರಿಸದ ಹೊರತು ಅನರ್ಹತೆಯನ್ನು ಎದುರಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.
  11. “ಸದನ ಬಿಡಿ, ಅವರು ಪಕ್ಷದಲ್ಲಿಯೇ ಅಲ್ಪ ಮತಕ್ಕೆ ಕುಸಿದಿದ್ದಾರೆ. ಅಲ್ಪ ಮತವಿದ್ದರೂ ಹೇಗಾದರೂ ಅಧಿಕಾರದಲ್ಲಿರಲು ಬಯಸುತ್ತಾರೆ. ಸಾಧ್ಯವಾದಷ್ಟು ಬೇಗ ಮತ್ತು ಇಲ್ಲಿ ವಿಶ್ವಾಸಮತ ಪರೀಕ್ಷೆಯನ್ನು ನಡೆಸುವಂತೆ ಪಕ್ಷಗಳು ಈ ನ್ಯಾಯಾಲಯಕ್ಕೆ ಧಾವಿಸುವುದನ್ನು ನಾನು ನೋಡಿದ್ದೇನೆ. ನಾವು ಅದನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿರುವ ಪಕ್ಷವನ್ನು ಹೊಂದಿದ್ದೇವೆ. ಏಕೆ ಎಂದು ಎಲ್ಲರಿಗೂ ತಿಳಿದಿದೆ ಎಂದು ಶಿಂಧೆ ಪರ ವಕೀಲರು ಹೇಳಿದ್ದಾರೆ.
  12. ನೀವು ಬಹುಮತಸಾಬೀತಿಗೆ ಹೆಚ್ಚು ವಿಳಂಬ ಮಾಡಿದರೆ ಪ್ರಜಾಪ್ರಭುತ್ವದ ರಾಜಕೀಯಕ್ಕೆ ಹೆಚ್ಚಿನ ಹಾನಿಯಾಗುತ್ತದೆ”ಎಂದು ಶಿಂಧೆ ಬಣದ ವಕೀಲರು ವಾದಿಸಿದ್ದಾರೆ.

Published On - 5:36 pm, Wed, 29 June 22

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು