AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಬಾ ಅಮರನಾಥ ಭಾರತದಲ್ಲಿ ಮಾ ಶಾರದಾ ಎಲ್ಒಸಿಯಿಂದಾಚೆಗೆ ಹೇಗೆ ಸಾಧ್ಯ?; ಪಿಒಕೆ ಭಾರತದ ಭಾಗ: ರಾಜನಾಥ್ ಸಿಂಗ್

ಪಿಒಕೆ ಭಾರತದ ಭಾಗ, ಅದು ಹಾಗೆಯೇ ಇರಲಿದೆ. ಬಾಬಾ ಅಮರನಾಥ ಭಾರತದಲ್ಲಿದ್ದು, ಭಾರತದ ಗಡಿನಿಯಂತ್ರಣ ರೇಖೆಯಿಂದಾಚೆಗೆ ಮಾ ಶಾರಾದಾ ಶಕ್ತಿ ಇರುವುದು ಹೇಗೆ ಸಾಧ್ಯ? ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

ಬಾಬಾ ಅಮರನಾಥ ಭಾರತದಲ್ಲಿ ಮಾ ಶಾರದಾ ಎಲ್ಒಸಿಯಿಂದಾಚೆಗೆ ಹೇಗೆ ಸಾಧ್ಯ?; ಪಿಒಕೆ ಭಾರತದ ಭಾಗ: ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
TV9 Web
| Edited By: |

Updated on:Jul 24, 2022 | 5:18 PM

Share

ದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ (Pakistan-Occupied Kashmir) ಭಾರತದ್ದೇ ಭಾಗ, ಅದು ಹಾಗೆಯೇ ಮುಂದುವರಿಯಲಿದೆ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಸೋಮವಾರ ಹೇಳಿದ್ದಾರೆ. ಪಿಒಕೆ ಬಗ್ಗೆ ಸಂಸತ್​​ನಲ್ಲಿ ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ. ಪಿಒಕೆ ಭಾರತದ ಭಾಗ, ಅದು ಹಾಗೆಯೇ ಇರಲಿದೆ. ಬಾಬಾ ಅಮರನಾಥ ಭಾರತದಲ್ಲಿದ್ದು, ಭಾರತದ ಗಡಿನಿಯಂತ್ರಣ ರೇಖೆಯಿಂದಾಚೆಗೆ ಮಾ ಶಾರಾದಾ ಶಕ್ತಿ ಇರುವುದು ಹೇಗೆ ಸಾಧ್ಯ? ಎಂದು ರಕ್ಷಣಾ ಸಚಿವರು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಶಾರದಾ ಪೀಠವನ್ನು  ಸಿಂಗ್ ಉಲ್ಲೇಖಿಸಿದ್ದು ಇದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮುಜಾಫರ್ ಬಾದ್ ನಿಂದ  150 ಕಿಮಿ ದೂರವಿರುವ ಕಿಶನ್ ಗಾಂಗಾ ನದಿಯ ಬಳಿಯಲ್ಲಿದೆ.  ಇದು ಕಾಶ್ಮೀರಿ ಪಂಡಿತರ ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು ಕರ್ತಾರ್​​ಪುರ್​​ನಂತೆ ಕಾರಿಡಾರ್ ಮಾಡಿ ಇಲ್ಲಿ ಪೂಜೆಗೆ ಅನುಮತಿಸಬೇಕು ಎಂದು ಅವರು ಬೇಡಿಕೆಯೊಡ್ಡುತ್ತಿದ್ದಾರೆ.

ಜಮ್ಮುನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್, ಆಗಿನ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅಧಿಕಾರದಲ್ಲಿದ್ದಾಗ 1962ರಲ್ಲಿ ಚೀನಾ ಲಡಾಖ್ ನ್ನು ವಶಪಡಿಸಿತ್ತು. ಆಗಿನ ಕಾಲಕ್ಕೆ ಹೋಲಿಸಿದರೆ ಭಾರತ ಇಂದು ಜಗತ್ತಿನಲ್ಲಿ ಹೆಚ್ಚು ಬಲಿಷ್ಠ ಶಾಲಿ ದೇಶಗಳಲ್ಲೊಂದಾಗಿದೆ.1 962ರಲ್ಲಿ ನಮ್ಮ ಲಡಾಖ್ ಪ್ರದೇಶವನ್ನು ಚೀನಾ ವಶಪಡಿಸಿತ್ತು. ಆಗ ಪ್ರಧಾನಿಯಾಗಿದ್ದವರು ನೆಹರು, ನಾನು ಅವರ ಉದ್ದೇಶವನ್ನು ಪ್ರಶ್ನಿಸುವುದಿಲ್ಲ. ಉದ್ದೇಶಗಳು ಒಳ್ಳೆಯದಾಗಿರಬಹುದು. ಆದರೆ ಅವೆಲ್ಲವೂ ರಾಜಕೀಯಕ್ಕೆ ಅನ್ವಯವಾಗಲ್ಲ ಎಂದು ಸಿಂಗ್ ಹೇಳಿದ್ದಾರೆ. ಜಮ್ಮುನಲ್ಲಿ ಕರ್ತವ್ಯದ ವೇಳೆ ಮಡಿದ ಯೋಧರ ಕುಟುಂಬದವರನ್ನು ಸಿಂಗ್ ಮಾತನಾಡಿಸಿದ್ದಾರೆ.

ದೇಶದ ಸೇವೆಗಾಗಿ ತಮ್ಮ ಪ್ರಾಣ ಒತ್ತೆಯಿಟ್ಟ ಯೋಧರನ್ನು ನಾವು ಸ್ಮರಿಸುತ್ತೇವೆ. ನಮ್ಮ ದೇಶಕ್ಕಾಗಿ ಸೇನೆ ಅತ್ಯುನ್ನತ ತ್ಯಾಗವನ್ನು ಮಾಡಿದೆ.1999ರ ಯುದ್ಧದಲ್ಲಿ ಹಲವಾರು ವೀರಯೋಧರು ಮಡಿದಿದ್ದಾರೆ.ಅವರಿಗೆ ಶಿರಬಾಗುತ್ತೇವೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

2018ರಲ್ಲಿ  ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ  ಮುಖ್ಯಸ್ಥೆ ಮೆಹಬೂಬಾ ಮುಫ್ತಿ  ಅವರು ಶಾರದಾ ಪೀಠಕ್ಕೆ ಯಾತ್ರಾರ್ಥಿಗಳನ್ನು ಅನುಮತಿಸಬೇಕು ಎಂದು ಭಾರತ ಮತ್ತು ಪಾಕಿಸ್ತಾನಕ್ಕೆ  ಮನವಿ ಮಾಡಿದ್ದರು. ಎರಡು ಧರ್ಮಗಳ ಜನರನ್ನು ದೂರ ಮಾಡುವ ಬದಲು ಒಟ್ಟಿಗೆ ಹೇಗೆ ತರಬಹುದು ಎಂಬುದಕ್ಕೆ  ಕತಾರ್ ಪುರ್ ದೊಡ್ಡ ಉದಾಹರಣೆ. ಕಾಶ್ಮೀರದಲ್ಲಿ ಪ್ರಕ್ಷುಬ್ದತೆ ನಿಯಂತ್ರಿಸಲು ಮುಫ್ತಿ ಕಂಡು ಕೊಂಡ ಮಾರ್ಗವಾಗಿದೆ ಇದು. ಕತಾರ್ ಪುರ್ ನಂತರ ಭಾರತ ಮತ್ತು ಪಾಕಿಸ್ತಾನ ಶಾರದಾ ಪೀಠಕ್ಕೆ  ಯಾತ್ರಾರ್ಥಿಗಳನ್ನು ಅನುಮತಿಸಬೇಕು ಎಂದು  ಜಮ್ಮು ಕಾಶ್ಮೀರದ ಮಾಜಿ ಸಿಎಂ  ಟ್ವೀಟಿಸಿದ್ದರು.

Published On - 4:32 pm, Sun, 24 July 22

Follow Us
Web contact
Web contact

TV9 Kannada

Read More
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ