AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನಿಯಾ ಗಾಂಧಿ ಆಸ್ತಿ ಒಟ್ಟು ₹12 ಕೋಟಿ, ಇಟಲಿ ಮನೆ ಪಾಲು ₹27 ಲಕ್ಷ; ಸ್ವಂತ ಕಾರು ಇಲ್ಲ

ರಾಜ್ಯಸಭಾ ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವಂತೆ ಸೋನಿಯಾ ಗಾಂಧಿ ಅವರ ಒಟ್ಟು ಆಸ್ತಿ ₹ 12.53 ಕೋಟಿ.ಇಟಲಿಯಲ್ಲಿರುವ ತಂದೆಯ ಆಸ್ತಿಯಲ್ಲಿ₹27 ಲಕ್ಷ ಮೌಲ್ಯದ ಷೇರುಗಳಿವೆ.ಇದಲ್ಲದೆ 88 ಕೆಜಿ ಬೆಳ್ಳಿ, 1,267 ಗ್ರಾಂ ಚಿನ್ನಾಭರಣಗಳನ್ನು ಹೊಂದಿದ್ದಾರೆ.ಅವರಿಗೆ ಸ್ವಂತ ಕಾರು ಇಲ್ಲ, ಸಾಮಾಜಿಕ ಜಾಲತಾಣ ಖಾತೆಯೂ ಇಲ್ಲ.₹ 90,000 ನಗದು ಹೊಂದಿರುವುದಾಗಿ ಕಾಂಗ್ರೆಸ್ ನಾಯಕಿ ಅಫಿಡವಿಟ್‌ನಲ್ಲಿ ಹೇಳಿದ್ದಾರೆ.

ಸೋನಿಯಾ ಗಾಂಧಿ ಆಸ್ತಿ ಒಟ್ಟು ₹12 ಕೋಟಿ, ಇಟಲಿ ಮನೆ ಪಾಲು ₹27 ಲಕ್ಷ; ಸ್ವಂತ ಕಾರು ಇಲ್ಲ
ಸೋನಿಯಾ ಗಾಂಧಿ
ರಶ್ಮಿ ಕಲ್ಲಕಟ್ಟ
|

Updated on: Feb 16, 2024 | 6:50 PM

Share

ದೆಹಲಿ ಫೆಬ್ರುವರಿ 16: ಕಾಂಗ್ರೆಸ್‌ನ (Congress) ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ರಾಜ್ಯಸಭಾ ಚುನಾವಣೆಗೆ (Rajya Sabha) ಅಫಿಡವಿಟ್‌ನಲ್ಲಿ ₹ 12.53 ಕೋಟಿ ಆಸ್ತಿಯನ್ನು ಘೋಷಿಸಿದ್ದಾರೆ. ಇಟಲಿಯಲ್ಲಿರುವ ತಂದೆಯ ಆಸ್ತಿಯಲ್ಲಿ ಸೋನಿಯಾ ಗಾಂಧಿ ಅವರಿಗೂ ₹27 ಲಕ್ಷ ಮೌಲ್ಯದ ಷೇರುಗಳಿವೆ. ಇದಲ್ಲದೆ 88 ಕೆಜಿ ಬೆಳ್ಳಿ, 1,267 ಗ್ರಾಂ ಚಿನ್ನಾಭರಣಗಳನ್ನು ಹೊಂದಿದ್ದಾರೆ. ನವದೆಹಲಿಯ ಡೇರಾ ಮಂಡಿ ಗ್ರಾಮದಲ್ಲಿ ಕಾಂಗ್ರೆಸ್ ನಾಯಕಿಗೆ ಮೂರು ಬಿಘಾ(1.20 ಎಕರೆ) ಕೃಷಿ ಭೂಮಿ ಹೊಂದಿದ್ದಾರೆ. ಅವರ ಆದಾಯವನ್ನು ಅವರ ಸಂಸದರ ವೇತನ, ರಾಯಧನ ಆದಾಯ, ಬಂಡವಾಳ ಲಾಭ ಇತ್ಯಾದಿ ಎಂದು ನಮೂದಿಸಲಾಗಿದೆ. ಸೋನಿಯಾ ಗಾಂಧಿ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ₹ 90,000 ನಗದು ಹೊಂದಿರುವುದಾಗಿ ಉಲ್ಲೇಖಿಸಿದ್ದಾರೆ. 2019 ರಲ್ಲಿ, ಆಕೆಯ ಒಟ್ಟು ಸಂಪತ್ತು, ಆಗಿನ ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿದಂತೆ, 11.82 ಕೋಟಿ ಆಗಿತ್ತು.

ಸೋನಿಯಾ ಗಾಂಧಿಯವರ ಶೈಕ್ಷಣಿಕ ಅರ್ಹತೆ

ರಾಜ್ಯಸಭಾ ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವಂತೆ, ಸೋನಿಯಾ ಗಾಂಧಿ ಅವರು 1964 ರಲ್ಲಿ ಸಿಯೆನಾದಲ್ಲಿ ಇಸ್ಟಿಟುಟೊ ಸಾಂಟಾ ತೆರೇಸಾದಿಂದ ಇಂಗ್ಲಿಷ್ ಮತ್ತು ಫ್ರೆಂಚ್‌ನಲ್ಲಿ ಮೂರು ವರ್ಷಗಳ ವಿದೇಶಿ ಭಾಷಾ ಕೋರ್ಸ್ ಅನ್ನು ಪೂರ್ಣಗೊಳಿಸಿದರು. 1965 ರಲ್ಲಿ, ಅವರು ಕೇಂಬ್ರಿಡ್ಜ್‌ನ ಲೆನಾಕ್ಸ್ ಕುಕ್ ಸ್ಕೂಲ್‌ನಿಂದ ಇಂಗ್ಲಿಷ್‌ನಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡಿದರು. ಸೋನಿಯಾ ಗಾಂಧಿಗೆ ಸ್ವಂತ ಕಾರು ಇಲ್ಲ, ಸಾಮಾಜಿಕ ಜಾಲತಾಣ ಖಾತೆಯೂ ಇಲ್ಲ.

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ ಸೋನಿಯಾ ಗಾಂಧಿ, ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಕಳೆದ ಐದು ಅವಧಿಗಳಲ್ಲಿ ತಾನು ಪ್ರತಿನಿಧಿಸುತ್ತಿದ್ದ ಕ್ಷೇತ್ರವಾದ ರಾಯಬರೇಲಿಯ ಜನರಿಗೆ ಪತ್ರ ಬರೆದಿರುವ ಸೋನಿಯಾ ಗಾಂಧಿ, ರಾಯ್ ಬರೇಲಿಯ ಜನರಿಲ್ಲದೆ ದೆಹಲಿಯಲ್ಲಿರುವ ತಮ್ಮ ಕುಟುಂಬ ಅಪೂರ್ಣವಾಗಿದೆ ಎಂದು ಹೇಳಿದ್ದಾರೆ. “ಸ್ವಾತಂತ್ರ್ಯದ ನಂತರದ ಮೊದಲ ಲೋಕಸಭೆ ಚುನಾವಣೆಯಲ್ಲಿ ನನ್ನ ಮಾವ ಫಿರೋಜ್ ಗಾಂಧಿ ಅವರನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿ ದೆಹಲಿಗೆ ಕಳುಹಿಸಿದ್ದೀರಿ. ನಂತರ ನನ್ನ ಅತ್ತೆ ಇಂದಿರಾ ಗಾಂಧಿ ಅವರನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದೀರಿ. ಹಲವಾರು ಏರಿಳಿತಗಳು, ನಮ್ಮ ಈ ಸಂಬಂಧವು ಪ್ರೀತಿ ಮತ್ತು ಉತ್ಸಾಹದ ಹಾದಿಯಲ್ಲಿ ಮುಂದುವರಿಯಿತು. ಅದರ ಕಡೆಗೆ ನಮ್ಮ ಸಮರ್ಪಣೆ ಕ್ರಮೇಣ ಬಲಗೊಂಡಿತು ಎಂದು ಪತ್ರ ಬರೆದಿದ್ದಾರೆ. ತಮ್ಮ ವಯಸ್ಸು ಮತ್ತು ಅನಾರೋಗ್ಯದ ಕಾರಣ ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದರು.

ಇದನ್ನೂ ಓದಿ25 ವರ್ಷಗಳ ಕಾಲ ಲೋಕಸಭಾ ಸಂಸದೆ ಆಗಿದ್ದ ಸೋನಿಯಾ ಗಾಂಧಿ ಇನ್ನು ರಾಜ್ಯಸಭೆಗೆ, ಕಾಂಗ್ರೆಸ್​​ನಲ್ಲಿ ಮಹತ್ತರ ಬದಲಾವಣೆ

ಸೋನಿಯಾ ಗಾಂಧಿ ಅವರ ನಾಮನಿರ್ದೇಶನ ಪತ್ರದಲ್ಲಿ, ಅವರು ತಮ್ಮ ಸ್ಥಿರ ಆಸ್ತಿಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಿಲ್ಲ ಎಂದು ಬಿಜೆಪಿ ಈಗ ದೂರಿದೆ. ಬಿಜೆಪಿ ನಾಯಕ ಯೋಗೇಂದ್ರ ಸಿಂಗ್ ತನ್ವಾರ್ ಅವರು ಚುನಾವಣಾಧಿಕಾರಿ, ರಾಜ್ಯಗಳ ಪರಿಷತ್ತಿನ (ರಾಜ್ಯಸಭೆ) ಚುನಾವಣಾಧಿಕಾರಿಗೆ ಪತ್ರ ಬರೆದಿದ್ದು, ಸೋನಿಯಾ ಗಾಂಧಿ ಇಟಲಿಯಲ್ಲಿ ತಮ್ಮ ಆಸ್ತಿ ಎಷ್ಟು ಎಂದುನಿರ್ದಿಷ್ಟತೆಯನ್ನು ಉಲ್ಲೇಖಿಸಿಲ್ಲ. ರೋಮ್, ಫ್ಲಾರೆನ್ಸ್, ಮಿಲನ್, ಟ್ರೆಂಟೊ, ಅಥವಾ ಯಾವುದೇ ಇತರ ನಗರದಲ್ಲಿ ನೆಲೆಗೊಂಡಿರುವ ಆಸ್ತಿಯ ನಿರ್ದಿಷ್ಟ ಸ್ಥಳದಂತಹ ನಿರ್ಣಾಯಕ ವಿವರಗಳನ್ನು ಒಂದುಗೂಡಿಸಲಾಗಿದೆ. ಹೆಚ್ಚುವರಿಯಾಗಿ, ಈ ಆಸ್ತಿಯಲ್ಲಿ ಶೇಕಡಾವಾರು ಪಾಲನ್ನು ಕುರಿತು ಸಂಬಂಧಿಸಿದ ಮಾಹಿತಿ ನೋಡಿದರೆ ಇದು 25% ಅಥವಾ ಅದಕ್ಕಿಂತ ಹೆಚ್ಚಿನದಾಗಿದೆ ಎಂಬುದನ್ನು ಬಹಿರಂಗಪಡಿಸಲಾಗಿಲ್ಲ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?