Maharashtra Political Crisis ಬಂಡಾಯ ಶಾಸಕರು ಮುಂಬೈಗೆ ಹಿಂತಿರುಗಿದ ನಂತರ ಪರಿಸ್ಥಿತಿ ಬದಲಾಗುತ್ತದೆ: ಶರದ್ ಪವಾರ್

| Updated By: ರಶ್ಮಿ ಕಲ್ಲಕಟ್ಟ

Updated on: Jun 23, 2022 | 11:04 PM

ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರವು ಬಂಡಾಯ ಶಾಸಕರಿಗೆ ಸಹಾಯ ಮಾಡುತ್ತಿದೆ ಎಂದು ಪವಾರ್ ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದ್ದಾರೆ. ಶಿವಸೇನಾದ ಬಂಡಾಯ ಶಾಸಕರನ್ನು ಗುಜರಾತ್ ನಂತರ ಅಸ್ಸಾಂಗೆ ಹೇಗೆ ಕರೆದೊಯ್ಯಲಾಯಿತು ಎಂಬುದು ಎಲ್ಲರಿಗೂ ತಿಳಿದಿದೆ

Maharashtra Political Crisis ಬಂಡಾಯ ಶಾಸಕರು ಮುಂಬೈಗೆ ಹಿಂತಿರುಗಿದ ನಂತರ ಪರಿಸ್ಥಿತಿ ಬದಲಾಗುತ್ತದೆ: ಶರದ್ ಪವಾರ್
ಶರದ್ ಪವಾರ್
Follow us on

ಮುಂಬೈ: ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಸರ್ಕಾರ ಬಹುಮತದಲ್ಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಾಬೀತುಪಡಿಸುವ ಏಕೈಕ ಸ್ಥಳವೆಂದರೆ ವಿಶ್ವಾಸ ಮತ ಯಾಚನೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಗುರುವಾರ ಹೇಳಿದ್ದಾರೆ. ಮುಂಬೈನಲ್ಲಿ ಪಕ್ಷದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪವಾರ್, ಬಂಡಾಯ ಶಾಸಕರು ಮುಂಬೈಗೆ ಹಿಂತಿರುಗಿದ ನಂತರ ಪರಿಸ್ಥಿತಿ ಬದಲಾಗುತ್ತದೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಸರ್ಕಾರ ಬಹುಮತ ಕಳೆದುಕೊಂಡಿದೆಯೇ ಇಲ್ಲವೇ ಎಂಬುದನ್ನು ವಿಧಾನಸಭೆಯಲ್ಲಿ ಸಾಬೀತುಪಡಿಸಬೇಕಿದೆ. ಕಾರ್ಯವಿಧಾನಗಳನ್ನು ಅನುಸರಿಸಿದಾಗ, ಈ ಸರ್ಕಾರವು ಬಹುಮತದಲ್ಲಿದೆ ಎಂದು ಸಾಬೀತುಪಡಿಸುತ್ತದೆ. ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಮುಂಬೈನ ವಿಧಾನ ಭವನ ಆವರಣದಲ್ಲಿ ಖುದ್ದಾಗಿ ಹಾಜರಾಗಬೇಕಾಗುತ್ತದೆ ಎಂದು ಪವಾರ್ ಹೇಳಿದ್ದಾರೆ. ಕನಿಷ್ಠ 38 ಸೇನಾ ಶಾಸಕರು ಶಿಂಧೆ ಪಾಳಯದಲ್ಲಿದ್ದು, ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಬೆದರಿಕೆ ಒಡ್ಡುತ್ತಿರುವ ಮಧ್ಯೆ ಪವಾರ್ ಅವರ ಈ ಹೇಳಿಕೆಗಳು ಬಂದಿವೆ.

2019ರ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಮಹಾರಾಷ್ಟ್ರವು 36 ದಿನಗಳ ಹೈ-ವೋಲ್ಟೇಜ್ ನಾಟಕಕ್ಕೆ ಸಾಕ್ಷಿಯಾಗಿದೆ, ಈ ಸಮಯದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ರಹಸ್ಯವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಪ್ರತಿಪಕ್ಷಗಳನ್ನು ಬೆರಗುಗೊಳಿಸಿದರು. ಆದರೆ ಪವಾರ್, ಶಿವಸೇನೆ ಮತ್ತು ಕಾಂಗ್ರೆಸ್‌ನ ತ್ವರಿತ ಪ್ರತಿಕ್ರಿಯೆಯು ಫಡ್ನವಿಸ್ ಅವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿತು, ಮೂರು ಪಕ್ಷಗಳ ಸಮ್ಮಿಶ್ರ ಸರ್ಕಾರದ ಅಡಿಯಲ್ಲಿ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂತಹ ಸನ್ನಿವೇಶಗಳನ್ನು ನಾವು ಮಹಾರಾಷ್ಟ್ರದಲ್ಲಿ ಹಲವಾರು ಬಾರಿ ನೋಡಿದ್ದೇವೆ. ನನ್ನ ಅನುಭವದೊಂದಿಗೆ, ನಾವು ಈ ಬಿಕ್ಕಟ್ಟನ್ನು ಸೋಲಿಸುತ್ತೇವೆ. ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ಸುಗಮವಾಗಿ ನಡೆಯುತ್ತದೆ ಎಂದು ನಾನು ಹೇಳಬಲ್ಲೆ ಎಂದು ಪವಾರ್ ಹೇಳಿದರು.

ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರವು ಬಂಡಾಯ ಶಾಸಕರಿಗೆ ಸಹಾಯ ಮಾಡುತ್ತಿದೆ ಎಂದು ಪವಾರ್ ಯಾರ ಹೆಸರನ್ನೂ ಉಲ್ಲೇಖಿಸದೆ ಹೇಳಿದ್ದಾರೆ. ಶಿವಸೇನಾದ ಬಂಡಾಯ ಶಾಸಕರನ್ನು ಗುಜರಾತ್ ನಂತರ ಅಸ್ಸಾಂಗೆ ಹೇಗೆ ಕರೆದೊಯ್ಯಲಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಅವರಿಗೆ ಸಹಾಯ ಮಾಡುವ ಎಲ್ಲರ ಹೆಸರನ್ನು ನಾವು ಹೇಳಬೇಕಿಲ್ಲ.ಅಸ್ಸಾಂ ಸರ್ಕಾರ ಅವರಿಗೆ ಸಹಾಯ ಮಾಡುತ್ತಿದೆ. ನಾನು ಯಾವುದೇ ಹೆಸರನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ
ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಶಾಸಕರ ದೂರುಗಳ ಬಗ್ಗೆ ಪತ್ರವೊಂದನ್ನು ಟ್ವೀಟ್ ಮಾಡಿದ ಶಿಂಧೆ; ಅದರಲ್ಲೇನಿದೆ?
‘ಮಹಾ’ ಸರಕಾರ ಪತನದಂಚಿಗೆ? ಮುಂದಿನ ರಾಜಕೀಯ ಚದುರಂಗದಾಟ ಏನು? ಎತ್ತ ಸಾಗಲಿದೆ – ಟಿವಿ9 ಡಿಜಿಟಲ್ ನಲ್ಲಿ ಚರ್ಚೆ
MVA Crisis: ಮಹಾರಾಷ್ಟ್ರ ಸರ್ಕಾರ ಪತನ ಸನ್ನಿಹಿತ, ಏಕನಾಥ ಶಿಂಧೆ ಬಣಕ್ಕೆ ಶಿವಸೇನೆಯ 42 ಶಾಸಕರ ಬೆಂಬಲ

ಸದ್ಯಕ್ಕೆ ಬಹುಮತ ಸಾಬೀತುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಎನ್‌ಸಿಪಿ ನಾಯಕ ಜಯಂತ್ ಪಾಟೀಲ್ ಹೇಳಿದ್ದಾರೆ. ಎಂವಿಎ ಬಹುಮತವನ್ನು ಹೊಂದಿದೆ ಮತ್ತು ಇನ್ನೂ ಅಧಿಕಾರದಲ್ಲಿದೆ. ಕೆಲವು ಶಿವಸೇನಾ ಶಾಸಕರು ಅಸಮಾಧಾನದಿಂದ ಬೇರೆ ರಾಜ್ಯಕ್ಕೆ ಹೋಗಿದ್ದಾರೆ. ಆದರೆ ಅವರನ್ನು ಮರಳಿ ಕರೆತರುವಲ್ಲಿ ಶಿವಸೇನಾ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ನಾಳೆ ಮಧ್ಯಾಹ್ನ 1 ಗಂಟೆಗೆ ಶಿವಸೇನಾ ಸಭೆ

ಮುಂಬೈನ ಸೇನಾ ಭವನದಲ್ಲಿ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಶಿವಸೇನಾದ ಪ್ರಮುಖ ಸಭೆ ನಡೆಯಲಿದೆ. ಪಕ್ಷದ ಜಿಲ್ಲಾ ಪ್ರಮುಖರನ್ನು ಸಭೆಗೆ ಕರೆಯಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮುಂಬೈ ಸಂಪರ್ಕ ಪ್ರಮುಖರ ಸಭೆ ನಡೆಸಿದ ಒಂದು ದಿನದ ನಂತರ ಈ ಸಭೆ ನಡೆಯಲಿದೆ.

 ಶಿಂಧೆ ಬಣಕ್ಕೆ  ಸೇರಲು ಗುವಾಹಟಿಗೆ ಆಗಮಿಸಿದ 2 ಶಾಸಕರು, 1 ಎಂಎಲ್‌ಸಿ

ಸಂಜಯ್ ರಾಥೋಡ್ ಮತ್ತು ದಾದಾಜಿ ಭೂಸೆ ಎಂಬ ಇಬ್ಬರು ಶಾಸಕರು  ಮತ್ತು ಒಬ್ಬ ಎಂಎಲ್‌ಸಿ ರವೀಂದ್ರ ಫಟಕ್ ಅವರು ಶಿವಸೇನಾದ ಬಂಡಾಯ ನಾಯಕ ಏಕನಾಥ್ ಶಿಂಧೆ ಬಣ ಸೇರಲು ಅಸ್ಸಾಂನ ರಾಜಧಾನಿ ಗುವಾಹಟಿಗೆ ಆಗಮಿಸಿದ್ದಾರೆ. ನಗರದಲ್ಲಿ ಶಿವಸೇನೆಯ 37ಕ್ಕೂ ಹೆಚ್ಚು ಶಾಸಕರು ಶಿಂಧೆ ಅವರೊಂದಿಗೆ ಇದ್ದಾರೆ ಎಂದು ವರದಿಯಾಗಿದೆ.

12 ಶಾಸಕರ ಸದಸ್ಯತ್ವ ರದ್ದುಪಡಿಸುವಂತೆ ಶಿವಸೇನೆ ಒತ್ತಾಯ

ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ ಎಂದು ಶಿವಸೇನೆಾನಾಯಕ ಅರವಿಂದ್ ಸಾವಂತ್ ಹೇಳಿದ್ದಾರೆ. “ಅವರು ನಿಯಮ ಪಾಲಿಸದ ಕಾರಣ ನಾವು  ಪೂರ್ವ ಸೂಚನೆ ನೀಡಿದರು. ನಾವು ಉತ್ತರಗಳನ್ನು ಸ್ವೀಕರಿಸಿದ್ದೇವೆ. ಹಾಗಾಗಿ ಆ ಉತ್ತರಗಳನ್ನು ವಿಧಾನ ಭವನದ ಗಮನಕ್ಕೆ ತಂದಿದ್ದೇವೆ. ಮಹಾರಾಷ್ಟ್ರ ವಿಧಾನಸಭೆ ಉಪಸಭಾಪತಿಗೆ ಸಲ್ಲಿಸಿರುವ ಮನವಿಯಲ್ಲಿ 12 ಹೆಸರುಗಳಿವೆ. ಏಕನಾಥ್ ಶಿಂಧೆ, ಬಾಲಾಜಿ ಕಿಣಿಕರ್, ಲತಾ ಸೋನಾವಾನೆ ಮತ್ತು ಭರತ್ ಗೊಗವ್ಲೆ ಸೇರಿದಂತೆ 12 ಮಂದಿಯ ಸದಸ್ಯತ್ವ ರದ್ದುಗೊಳಿಸಬೇಕು. ಈ 12 ಮಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಉಪಸಭಾಪತಿಯನ್ನು ಕೋರಿದ್ದೇವೆ ಎಂದು ಸಾವಂತ್ ಹೇಳಿದ್ದಾರೆ.

Published On - 11:02 pm, Thu, 23 June 22