AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಡೆರ್​ ಬೇಸ್​ ಪಾರ್ಟಿ ಮಾಡಲು ನಿರ್ಧಾರ, ಇದು ಕಾಂಗ್ರೆಸ್​ ಕುಟುಂಬ: ಡಿಕೆ ಶಿವಕುಮಾರ್​ ಘರ್ಜನೆ

ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ ಜವಾಹರ್​ ಲಾಲ್ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿತು. ಈ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​ ಇದು ನಾಲ್ಕು ವರ್ಷದ ಸರ್ಕಾರ ಅಲ್ಲ, ಹತ್ತು ವರ್ಷದ ಸರ್ಕಾರ. ಕಾಂಗ್ರೆಸ್ ಕುಟುಂಬ ಅಂತ 50 ಜನ ತಂಡ ರಚನೆ ಮಾಡಬೇಕು ಎಂದರು.

ಕೆಡೆರ್​ ಬೇಸ್​ ಪಾರ್ಟಿ ಮಾಡಲು ನಿರ್ಧಾರ, ಇದು ಕಾಂಗ್ರೆಸ್​ ಕುಟುಂಬ: ಡಿಕೆ ಶಿವಕುಮಾರ್​ ಘರ್ಜನೆ
ಡಿಕೆ ಶಿವಕುಮಾರ್​
ಪ್ರಸನ್ನ ಗಾಂವ್ಕರ್​
| Edited By: |

Updated on: May 27, 2024 | 2:50 PM

Share

ಬೆಂಗಳೂರು, ಮೇ 27: ಪಕ್ಷ ಸಂಘಟನೆಗೆ ಬದಲಾವಣೆ ತರಲು ಕಾಂಗ್ರೆಸ್ (Congress)​ ನಿರ್ಧರಿಸಿದೆ. ಇಷ್ಟು ದಿನ ಮಾಸ್​ ಪಾರ್ಟಿಯಾಗಿದ್ದ ಕಾಂಗ್ರೆಸ್​ ಇದೀಗ ಕೆಡರ್​ ಬೇಸ್​ ಪಾರ್ಟಿಯಾಗಲು ಹೊರಟಿದೆ. ಕಾಂಗ್ರೆಸ್ ಪಕ್ಷವನ್ನು ಕೇಡರ್ ಬೇಸ್ ಪಾರ್ಟಿ (Cadre base Party) ಮಾಡಲೇಬೇಕು. ಕೇಡರ್ ಬೇಸ್ ಪಾರ್ಟಿ ಮಾಡದೆ ಇದ್ದರೆ ಮುಂದೆ ಕಷ್ಟವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಅವರು ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಇಂದು (ಮೇ 27) ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಜವಾಹರ್​ ಲಾಲ್ ನೆಹರು ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಷ್ಟೇ ದೊಡ್ಡವರಾದರೂ ಪಕ್ಷಕ್ಕೆ ಕೊಡುಗೆ ನೀಡಲೇಬೇಕು.

ಇದು ನಾಲ್ಕು ವರ್ಷದ ಸರ್ಕಾರ ಅಲ್ಲ, ಹತ್ತು ವರ್ಷದ ಸರ್ಕಾರ. ಕಾಂಗ್ರೆಸ್ ಕುಟುಂಬ ಅಂತ 50 ಜನ ತಂಡ ರಚನೆ ಮಾಡಬೇಕು. ಸಚಿವರ ಜತೆಗೂ ಮಾತನಾಡಿದ್ದೇನೆ. ಬೆಂಗಳೂರು ನಗರದಲ್ಲೂ ಸಹ ಹೊಸ ಕಚೇರಿ ಸ್ಥಾಪಿಸುತ್ತೇವೆ. ಒಂದು ವರ್ಷದಲ್ಲಿ ಪಕ್ಷದ ಕಚೇರಿಗೆ ಅಡಿಪಾಯ ಹಾಕಬೇಕು. ಎಲ್ಲ ಸಚಿವರು ಇದಕ್ಕೆ ಸಜ್ಜಾಗಬೇಕು. ಪಕ್ಷದ ಕಚೇರಿಯೇ ಮೊದಲ ದೇವಸ್ಥಾನ. ಸಚಿವ ಹೆಚ್​ಸಿ ಮಹದೇವಪ್ಪ ಅವರಿಗೂ ಕೂಡ ಎಚ್ಚರಿಕೆ ನೀಡಿದ್ದೇವೆ. ಪಕ್ಷದ ಜಿಲ್ಲಾ ಕಚೇರಿ ಒಂದು ವರ್ಷದಲ್ಲಿ ಕಟ್ಟದೇ ಹೋದರೆ ಬೇರೆ ಕಡೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನನಗೆ ಒಮ್ಮೊಮ್ಮೆ ಮುಜುಗರ ಆಗುತ್ತದೆ. ಕಾರ್ಯಕರ್ತರು ನಮ್ಮನ್ನು ಭೇಟಿ ಮಾಡಲು ಬಂದಿರುತ್ತಾರೆ. ಸೂಟ್ ಬೂಟ್, ದೊಡ್ಡ ಖಾದಿ ಬಟ್ಟೆ ಹಾಕಿದವರನ್ನೇ ನಾವು ಕರೆದು ಮಾತಾಡುತ್ತೇವೆ. ನಮ್ಮನ್ನು ಎತ್ತಿಕೊಂಡು ಬಂದು ವಿಧಾನಸೌಧದಲ್ಲಿ ಕೂರಿಸಿದ ಒಬ್ಬರನ್ನು ನಾವು ಮಾತನಾಡಿಸುವುದಿಲ್ಲ. ನಮ್ಮ ಗನ್ ಮ್ಯಾನ್​ಗಳು, ಪಿಎಗಳು ಹಂಗೆ ಮಾಡುತ್ತಾರೆ. ಯಾರು ಚನ್ನಾಗಿ ಬಟ್ಟೆ ಹಾಕಿರುತ್ತಾರೆ ಅವರನ್ನ ಕರೆದು ಒಳಗಡೆ ಕೂರಿಸುತ್ತಾರೆ. ನನಗೆ ಅನುಭವ ಆಗಿದೆ‌. ಇದನ್ನ ನಾವು ಬಂದ್ ಮಾಡಬೇಕು ಎಂದು ಸೂಚನೆ ನೀಡಿದರು.

ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್​ಗೆ ಜನ್ಮದಿನದ ಶುಭಾಶಯ ಕೋರಿದ ಉಪರಾಷ್ಟ್ರಪತಿ ಜಗದೀಪ್​ ಧನಕರ್​

ಡಿಕೆ ಶಿವಕುಮಾರ್ ತಲೆಹಿಡಿಕರು ಎಂಬ ಹೆಚ್‌ ಡಿ ಕುಮಾರಸ್ವಾಮಿ ಆರೋಪದ ವಿಚಾರವಾಗಿ ಮಾತನಾಡಿದ ಅವರು, ತಲೆ ಹಿಡಿಯುತ್ತಾರೋ, ಏನ್ ಮಾಡ್ತಾರೋ, ಆ ಬಗ್ಗೆ ಮಾತಾಡಲ್ಲ. ಆ ಮಾಹಿತಿ ತಿಳಿದುಕೊಂಡು, ಕಣ್ಣಲ್ಲಿ ನೋಡಬಿಟ್ಟು, ಕಿವಿಯಲ್ಲಿ ಕೇಳಿಬಿಟ್ಟು ನಾನು ಮಾತನಾಡುತ್ತೇನೆ ಎಂದರು.

ಕೆಪಿಸಿಸಿ ಪದಾಧಿಕಾರಿಗಳ ಮೇಲೆ ಗರಂ

ಕೆಪಿಸಿಸಿ ಪದಾಧಿಕಾರಿಗಳಿಗೆ ವೇದಿಕೆ ಮೇಲಿಂದ ಇಳಿಯುವಂತೆ ನಿರೂಪಕರು ಮನವಿ ಮಾಡಿದರು. ಆದರೂ ಕೂಡ ಪದಾಧಿಕಾರಿಗಳು ಮಾತು ಕೇಳಲಿಲ್ಲ. ಈ ವೇಳೆ ಮಧ್ಯಪ್ರವೇಶ ಮಾಡಿದ ಡಿಸಿಎಂ ಡಿ‌.ಕೆ.ಶಿವಕುಮಾರ್, ಪದಾಧಿಕಾರಿಗಳು ಮೊದಲು ಕಾರ್ಯಕರ್ತರು ಅನ್ನೋದು ಗೊತ್ತಿರಲಿ. ಯಾವಾಗ ನೀವು ಶಿಸ್ತು ಕಲಿತುಕೊಳ್ಳುವುದು ಎಂದು ಗರಂ ಆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ