AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳ ವಿರುದ್ದ ಗಂಭೀರ ಆರೋಪ; ಕಾಂಗ್ರೆಸ್​​ ನಾಯಕರಿಗೆ ಕಾನೂನು ನೋಟಿಸ್​​ ಕಳುಹಿಸಿದ ಸ್ಮೃತಿ ಇರಾನಿ

18 ವರ್ಷದ ಮಗು, ಕಾಲೇಜು ವಿದ್ಯಾರ್ಥಿನಿ, ಇಂದು ಆಕೆಯ ಚಾರಿತ್ರ್ಯವನ್ನು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ಸಿಗರು ಹತ್ಯೆ ಮಾಡಿದ್ದಾರೆ. ಆಕೆಯ ತಪ್ಪು ಎಂದರೆ 2014 ರಲ್ಲಿ, 2019 ರಲ್ಲಿ ಅಮೇಥಿಯಿಂದ ರಾಹುಲ್ ಗಾಂಧಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು...

ಮಗಳ ವಿರುದ್ದ ಗಂಭೀರ ಆರೋಪ; ಕಾಂಗ್ರೆಸ್​​ ನಾಯಕರಿಗೆ ಕಾನೂನು ನೋಟಿಸ್​​ ಕಳುಹಿಸಿದ ಸ್ಮೃತಿ ಇರಾನಿ
ಸ್ಮೃತಿ ಇರಾನಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 24, 2022 | 6:53 PM

Share

ದೆಹಲಿ: ಗೋವಾದಲ್ಲಿ 18ರ ಹರೆಯದ ಪುತ್ರಿ ಬಾರ್ ನಡೆಸುತ್ತಿದ್ದಾಳೆ ಎಂಬ ಆರೋಪವನ್ನು ತಳ್ಳಿ ಹಾಕಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani), ಕಾಂಗ್ರೆಸ್ (Congress) ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್, ನೆಟ್ಟಾ ಡಿ ಸೋಜಾ ಅವರಿಗೆ ಭಾನುವಾರ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಮಗಳ ಮೇಲಿನ ಆರೋಪನ್ನು ತಕ್ಷಣ ಹಿಂತೆಗೆದುಕೊಳ್ಳಿ, ಈ ಆರೋಪಕ್ಕೆ ಲಿಖಿತರೂಪದಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ಗೋವಾದಲ್ಲಿ (Goa) ಅಕ್ರಮವಾಗಿ ಅಬಕಾರಿ ಪರವಾನಗಿ ಪಡೆದು ಬಾರ್ ನಡೆಸುವುದರಲ್ಲಿ ಬಿಜೆಪಿ ನಾಯಕಿಯ ಮಗಳು ಭಾಗಿಯಾಗಿದ್ದಾಳೆ ಎಂದು ಕಾಂಗ್ರೆಸ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದೆ. ನಿಯಮಾವಳಿಗಳು ಒಂದನ್ನು ಮಾತ್ರ ಅನುಮತಿಸಿದರೆ ಸ್ಮೃತಿ ಅವರ ಮಗಳ ಬಾರ್‌ಗೆ ಎರಡು ಬಾರಿ ಪರವಾನಗಿಗಳು ದೊರೆತಿವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. 18 ವರ್ಷದ ಮಗು, ಕಾಲೇಜು ವಿದ್ಯಾರ್ಥಿನಿ, ಇಂದು ಆಕೆಯ ಚಾರಿತ್ರ್ಯವನ್ನು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ಸಿಗರು ಹತ್ಯೆ ಮಾಡಿದ್ದಾರೆ. ಆಕೆಯ ತಪ್ಪು ಎಂದರೆ 2014 ರಲ್ಲಿ, 2019 ರಲ್ಲಿ ಅಮೇಥಿಯಿಂದ ರಾಹುಲ್ ಗಾಂಧಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಆಕೆಯ ತಾಯಿ. ಕಾಂಗ್ರೆಸ್ ವಕ್ತಾರರು ಹೇಳಿದಂತೆ ಅವರ ತಾಯಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ಧ ಪತ್ರಿಕಾಗೋಷ್ಠಿ ನಡೆಸುವುದು ಅವರ ತಪ್ಪು,” ಎಂದು ಇರಾನಿ ಶನಿವಾರ ತಿರುಗೇಟು ನೀಡಿದ್ದು, ಆರೋಪಗಳನ್ನು ದುರುದ್ದೇಶಪೂರಿತ ಎಂದು ಕರೆದಿದ್ದಾರೆ.

ಕಾಂಗ್ರೆಸ್ ತನ್ನ ಮಗಳ ಚಾರಿತ್ರ್ಯವನ್ನು ಹತ್ಯೆ ಮಾಡಿದೆ ಎಂದು ಆರೋಪಿಸಿದ ಕೇಂದ್ರ ಸಚಿವರು, ‘ನ್ಯಾಯಾಲಯದ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. “ನನ್ನ ಮಗಳ ಚಾರಿತ್ರ್ಯವನ್ನು ಹತ್ಯೆ ಮಾಡಿದವರು, ನಾನು ನಿಮ್ಮನ್ನು ನ್ಯಾಯಾಲಯ ಮತ್ತು ಜನರ ನ್ಯಾಯಾಲಯದಲ್ಲಿ ನೋಡುತ್ತೇನೆ” ಎಂದು ಅವರು ಗುಡುಗಿದ್ದಾರೆ.

ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರು ಇರಾನಿ ಕುಟುಂಬದ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಈ ಪ್ರತಿಕ್ರಿಯೆ ಬಂದಿದೆ.

ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಶನಿವಾರ ಸ್ಮತಿ ಇರಾನಿ ಅವರನ್ನು ಬೆಂಬಲಿಸಿದ್ದಾರೆ. “18 ವರ್ಷ ವಯಸ್ಸಿನವರಿಗೆ ಭಾರತದಲ್ಲಿ ರೆಸ್ಟೋರೆಂಟ್ ನಡೆಸಲು ಪರವಾನಗಿ ಪಡೆಯುವಲ್ಲಿನ ಶಿಕ್ಷೆಯ ಪ್ರಕ್ರಿಯೆಯು ತಿಳಿದಿಲ್ಲದಿರಬಹುದು, ಯುವತಿಯೊಬ್ಬಳು ತನ್ನ ಕನಸುಗಳನ್ನು ಬೆನ್ನಟ್ಟಿ ಧೈರ್ಯದಿಂದ ಏನಾದರೂ ಪ್ರಯತ್ನಿಸಿರಬಹುದು. ಬಹುಶಃ ತಪ್ಪಾಗಿರಬಹುದು, ಪಿಶಾಚಿಯಂತಾಗಬೇಡಿ. PS: ನಾನು 19 ವರ್ಷದ ತಾಯಿಯಾಗಿ ಮಾತನಾಡುತ್ತೇನೆ ಮತ್ತು ನನ್ನ ರಾಜಕೀಯವನ್ನು ಬದಿಗಿಟ್ಟು ಮಾತನಾಡುತ್ತೇನೆ. ಎಂದು ಕೇಂದ್ರ ಸಚಿವರನ್ನು ಹೆಸರಿಸದೆ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ