AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್ಚೆತ್ತುಕೊಳ್ಳದಿದ್ರೆ ದಿಲ್ಲಿ ದುರ್ಗತಿ ಬೆಂಗಳೂರಿಗೂ ಬರುತ್ತೆ

ಬೆಂಗಳೂರನ್ನ ಸಿಲಿಕಾನ್​ ಸಿಟಿ, ಗಾರ್ಡನ್​ ಸಿಟಿ ಅಂತೆಲ್ಲಾ ಕರೀತಾರೆ. ಈಗೀಗ ಗಾರ್ಬೇಜ್​ ಸಿಟಿ, ಪಲ್ಯೂಶನ್ ಸಿಟಿ ಅಂತಾನೂ ಕರೀತಾರೆ. ಅಷ್ಟರಮಟ್ಟಿಗೆ ರಾಜಧಾನಿಯ ಗಾಳಿ ವಿಷಯುಕ್ತವಾಗ್ತಿದೆ. ಈಗಲೇ ಎಚ್ಚೆತ್ತುಕೊಂಡ್ರೆ ಒಳ್ಳೇದು. ಇಲ್ಲದಿದ್ರೆ ಮುಂದೊಂದು ದಿನ ದಿಲ್ಲಿ ಸ್ಥಿತಿ ಬೆಂಗಳೂರಿಗೂ ಬರೋ ಸಾಧ್ಯತೆ ದಟ್ಟವಾಗಿದೆ. ಮುಂಜಾನೆ ವಾಕ್ ಮಾಡೋರಿಗೂ ಡೇಂಜರ್ ವೆದರ್: ಸಿಲಿಕಾನ್ ಸಿಟಿ ಬೆಂಗಳೂರು ಕಳೆದೊಂದು ದಶಕದಿಂದ ಪಲ್ಯೂಶನ್ ಸಿಟಿ ಅನ್ನೋ ಹಣೆಪಟ್ಟಿ ಕಟ್ಟಿಕೊಳ್ತಿದೆ. ನಗರದಲ್ಲಿ ಹೆಚ್ಚಾಗ್ತಿರೋ ಧೂಳಿನ ಕಣಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಿಎಂ ಮೌಲ್ಯ […]

ಎಚ್ಚೆತ್ತುಕೊಳ್ಳದಿದ್ರೆ ದಿಲ್ಲಿ ದುರ್ಗತಿ ಬೆಂಗಳೂರಿಗೂ ಬರುತ್ತೆ
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​
|

Updated on:Nov 14, 2019 | 3:26 PM

Share

ಬೆಂಗಳೂರನ್ನ ಸಿಲಿಕಾನ್​ ಸಿಟಿ, ಗಾರ್ಡನ್​ ಸಿಟಿ ಅಂತೆಲ್ಲಾ ಕರೀತಾರೆ. ಈಗೀಗ ಗಾರ್ಬೇಜ್​ ಸಿಟಿ, ಪಲ್ಯೂಶನ್ ಸಿಟಿ ಅಂತಾನೂ ಕರೀತಾರೆ. ಅಷ್ಟರಮಟ್ಟಿಗೆ ರಾಜಧಾನಿಯ ಗಾಳಿ ವಿಷಯುಕ್ತವಾಗ್ತಿದೆ. ಈಗಲೇ ಎಚ್ಚೆತ್ತುಕೊಂಡ್ರೆ ಒಳ್ಳೇದು. ಇಲ್ಲದಿದ್ರೆ ಮುಂದೊಂದು ದಿನ ದಿಲ್ಲಿ ಸ್ಥಿತಿ ಬೆಂಗಳೂರಿಗೂ ಬರೋ ಸಾಧ್ಯತೆ ದಟ್ಟವಾಗಿದೆ.

ಮುಂಜಾನೆ ವಾಕ್ ಮಾಡೋರಿಗೂ ಡೇಂಜರ್ ವೆದರ್: ಸಿಲಿಕಾನ್ ಸಿಟಿ ಬೆಂಗಳೂರು ಕಳೆದೊಂದು ದಶಕದಿಂದ ಪಲ್ಯೂಶನ್ ಸಿಟಿ ಅನ್ನೋ ಹಣೆಪಟ್ಟಿ ಕಟ್ಟಿಕೊಳ್ತಿದೆ. ನಗರದಲ್ಲಿ ಹೆಚ್ಚಾಗ್ತಿರೋ ಧೂಳಿನ ಕಣಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಿಎಂ ಮೌಲ್ಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ರೋಗಗಳ ಸಂಖ್ಯೆ ಕೂಡ ಏರುತ್ತಿದೆ. ಅದ್ರಲ್ಲೂ ನವೆಂಬರ್ ಟು ಮಾರ್ಚ್ ಸಿಟಿ ಮಂದಿಗೆ ವೆರಿ ವೆರಿ ಡೇಂಜರಸ್.

ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿದೆ ಮಾಲಿನ್ಯ: ಅಂದ್ಹಾಗೆ ಆರೋಗ್ಯಯುತ ಗಾಳಿಗೆ ಪಿಎಂ10 ಅಂದ್ರೆ ಧೂಳಿನ ಕಣಗಳ ಮೌಲ್ಯ 100ರೊಳಗೆ ಇರಬೇಕು. ಶುದ್ಧ ಗಾಳಿಗೆ ಪಿಎಂ10 ಮೌಲ್ಯ ಝೀರೋ ಟು 50 ವರೆಗೆ ಇರಬೇಕು. ಸದ್ಯ ನಗರದಲ್ಲಿ ಪಿಎಂ10 ಪ್ರಮಾಣ 400ರಿಂದ 500ರವರೆಗೆ ರೀಚ್ ಆಗಿದೆ. ಕಳೆದ ವರ್ಷ ಈ ಪ್ರಮಾಣ 350ರಿಂದ 400 ಇತ್ತು. ಈ ಸಲ 100 ರಷ್ಟು ಧೂಳಿನ ಕಣಗಳ ಪ್ರಮಾಣ ಹೆಚ್ಚಾಗಿದೆ. ವಾಹನ ಹಾಗೂ ಕಾರ್ಖಾನೆಗಳ ಹೊಗೆ, ಕಟ್ಟಡಗಳ ಧೂಳಿನಿಂದಲೇ ವಾಯು ಮಾಲಿನ್ಯ ಹೆಚ್ಚಾಗ್ತಿದೆ. ಇದರಿಂದ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ, ಚರ್ಮ ರೋಗ, ಮೆದುಳಿಗೆ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚಿದೆ.

ಇಷ್ಟೆಲ್ಲಾ ಇದ್ರೂ ಮಾಲಿನ್ಯ ನಿಯಂತ್ರಣ ಮಂಡಳಿ ಸರಿಯಾಗಿ ಮಾಲಿನ್ಯವನ್ನ ನಿಯಂತ್ರಿಸುತ್ತಿಲ್ಲವೆಂಬ ಮಾತುಗಳು ಕೇಳಿ ಬಂದಿದೆ. ಹೀಗಾಗಿ, ದೆಹಲಿ ರೀತಿಯ ಸಿಚುವೇಶನ್ ಮುಂದಿನ ದಿನಗಳಲ್ಲಿ ಇಲ್ಲೂ ಬರಬಹುದು. ಸೋ ಈಗಲೇ ಎಚ್ಚೆತ್ತುಕೊಂಡ್ರೆ ಒಳ್ಳೇದು ಅಂತಾರೆ ಪರಿಸರ ತಜ್ಞರು.

Published On - 3:11 pm, Thu, 14 November 19

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ