AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್ಚೆತ್ತುಕೊಳ್ಳದಿದ್ರೆ ದಿಲ್ಲಿ ದುರ್ಗತಿ ಬೆಂಗಳೂರಿಗೂ ಬರುತ್ತೆ

ಬೆಂಗಳೂರನ್ನ ಸಿಲಿಕಾನ್​ ಸಿಟಿ, ಗಾರ್ಡನ್​ ಸಿಟಿ ಅಂತೆಲ್ಲಾ ಕರೀತಾರೆ. ಈಗೀಗ ಗಾರ್ಬೇಜ್​ ಸಿಟಿ, ಪಲ್ಯೂಶನ್ ಸಿಟಿ ಅಂತಾನೂ ಕರೀತಾರೆ. ಅಷ್ಟರಮಟ್ಟಿಗೆ ರಾಜಧಾನಿಯ ಗಾಳಿ ವಿಷಯುಕ್ತವಾಗ್ತಿದೆ. ಈಗಲೇ ಎಚ್ಚೆತ್ತುಕೊಂಡ್ರೆ ಒಳ್ಳೇದು. ಇಲ್ಲದಿದ್ರೆ ಮುಂದೊಂದು ದಿನ ದಿಲ್ಲಿ ಸ್ಥಿತಿ ಬೆಂಗಳೂರಿಗೂ ಬರೋ ಸಾಧ್ಯತೆ ದಟ್ಟವಾಗಿದೆ. ಮುಂಜಾನೆ ವಾಕ್ ಮಾಡೋರಿಗೂ ಡೇಂಜರ್ ವೆದರ್: ಸಿಲಿಕಾನ್ ಸಿಟಿ ಬೆಂಗಳೂರು ಕಳೆದೊಂದು ದಶಕದಿಂದ ಪಲ್ಯೂಶನ್ ಸಿಟಿ ಅನ್ನೋ ಹಣೆಪಟ್ಟಿ ಕಟ್ಟಿಕೊಳ್ತಿದೆ. ನಗರದಲ್ಲಿ ಹೆಚ್ಚಾಗ್ತಿರೋ ಧೂಳಿನ ಕಣಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಿಎಂ ಮೌಲ್ಯ […]

ಎಚ್ಚೆತ್ತುಕೊಳ್ಳದಿದ್ರೆ ದಿಲ್ಲಿ ದುರ್ಗತಿ ಬೆಂಗಳೂರಿಗೂ ಬರುತ್ತೆ
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​
|

Updated on:Nov 14, 2019 | 3:26 PM

Share

ಬೆಂಗಳೂರನ್ನ ಸಿಲಿಕಾನ್​ ಸಿಟಿ, ಗಾರ್ಡನ್​ ಸಿಟಿ ಅಂತೆಲ್ಲಾ ಕರೀತಾರೆ. ಈಗೀಗ ಗಾರ್ಬೇಜ್​ ಸಿಟಿ, ಪಲ್ಯೂಶನ್ ಸಿಟಿ ಅಂತಾನೂ ಕರೀತಾರೆ. ಅಷ್ಟರಮಟ್ಟಿಗೆ ರಾಜಧಾನಿಯ ಗಾಳಿ ವಿಷಯುಕ್ತವಾಗ್ತಿದೆ. ಈಗಲೇ ಎಚ್ಚೆತ್ತುಕೊಂಡ್ರೆ ಒಳ್ಳೇದು. ಇಲ್ಲದಿದ್ರೆ ಮುಂದೊಂದು ದಿನ ದಿಲ್ಲಿ ಸ್ಥಿತಿ ಬೆಂಗಳೂರಿಗೂ ಬರೋ ಸಾಧ್ಯತೆ ದಟ್ಟವಾಗಿದೆ.

ಮುಂಜಾನೆ ವಾಕ್ ಮಾಡೋರಿಗೂ ಡೇಂಜರ್ ವೆದರ್: ಸಿಲಿಕಾನ್ ಸಿಟಿ ಬೆಂಗಳೂರು ಕಳೆದೊಂದು ದಶಕದಿಂದ ಪಲ್ಯೂಶನ್ ಸಿಟಿ ಅನ್ನೋ ಹಣೆಪಟ್ಟಿ ಕಟ್ಟಿಕೊಳ್ತಿದೆ. ನಗರದಲ್ಲಿ ಹೆಚ್ಚಾಗ್ತಿರೋ ಧೂಳಿನ ಕಣಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಿಎಂ ಮೌಲ್ಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ರೋಗಗಳ ಸಂಖ್ಯೆ ಕೂಡ ಏರುತ್ತಿದೆ. ಅದ್ರಲ್ಲೂ ನವೆಂಬರ್ ಟು ಮಾರ್ಚ್ ಸಿಟಿ ಮಂದಿಗೆ ವೆರಿ ವೆರಿ ಡೇಂಜರಸ್.

ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿದೆ ಮಾಲಿನ್ಯ: ಅಂದ್ಹಾಗೆ ಆರೋಗ್ಯಯುತ ಗಾಳಿಗೆ ಪಿಎಂ10 ಅಂದ್ರೆ ಧೂಳಿನ ಕಣಗಳ ಮೌಲ್ಯ 100ರೊಳಗೆ ಇರಬೇಕು. ಶುದ್ಧ ಗಾಳಿಗೆ ಪಿಎಂ10 ಮೌಲ್ಯ ಝೀರೋ ಟು 50 ವರೆಗೆ ಇರಬೇಕು. ಸದ್ಯ ನಗರದಲ್ಲಿ ಪಿಎಂ10 ಪ್ರಮಾಣ 400ರಿಂದ 500ರವರೆಗೆ ರೀಚ್ ಆಗಿದೆ. ಕಳೆದ ವರ್ಷ ಈ ಪ್ರಮಾಣ 350ರಿಂದ 400 ಇತ್ತು. ಈ ಸಲ 100 ರಷ್ಟು ಧೂಳಿನ ಕಣಗಳ ಪ್ರಮಾಣ ಹೆಚ್ಚಾಗಿದೆ. ವಾಹನ ಹಾಗೂ ಕಾರ್ಖಾನೆಗಳ ಹೊಗೆ, ಕಟ್ಟಡಗಳ ಧೂಳಿನಿಂದಲೇ ವಾಯು ಮಾಲಿನ್ಯ ಹೆಚ್ಚಾಗ್ತಿದೆ. ಇದರಿಂದ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ, ಚರ್ಮ ರೋಗ, ಮೆದುಳಿಗೆ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚಿದೆ.

ಇಷ್ಟೆಲ್ಲಾ ಇದ್ರೂ ಮಾಲಿನ್ಯ ನಿಯಂತ್ರಣ ಮಂಡಳಿ ಸರಿಯಾಗಿ ಮಾಲಿನ್ಯವನ್ನ ನಿಯಂತ್ರಿಸುತ್ತಿಲ್ಲವೆಂಬ ಮಾತುಗಳು ಕೇಳಿ ಬಂದಿದೆ. ಹೀಗಾಗಿ, ದೆಹಲಿ ರೀತಿಯ ಸಿಚುವೇಶನ್ ಮುಂದಿನ ದಿನಗಳಲ್ಲಿ ಇಲ್ಲೂ ಬರಬಹುದು. ಸೋ ಈಗಲೇ ಎಚ್ಚೆತ್ತುಕೊಂಡ್ರೆ ಒಳ್ಳೇದು ಅಂತಾರೆ ಪರಿಸರ ತಜ್ಞರು.

Published On - 3:11 pm, Thu, 14 November 19

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ