AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೇಲಿನ ವಿಶ್ವಾಸವೇ ನಮ್ಮನ್ನು ಕಾಪಾಡುತ್ತದೆ: ಹೆಸರಾಂತ ಉದ್ಯಮಿ ರತನ್ ಟಾಟಾ ಹಿತವಚನ

ಭಾರತ ಆಟೊ ಮೊಬೈಲ್ ಕ್ಷೇತ್ರದಲ್ಲಿ ಸ್ವಂತ ಕಾಲ ಮೇಲೆ ನಿಲ್ಲಲು ಟಾಟಾ ಸಂಸ್ಥೆಯ ಕೊಡುಗೆ ಅಪಾರ. 2021ರಲ್ಲಿ ಜೀವನದ ಗುರಿ ಸಾಧನೆಗೆ 82ರ ಹರೆಯದ ರತನ್ ಟಾಟಾರ ಈ ಮಾತುಗಳು ನಮಗೆ ಪ್ರೇರಣೆ ನೀಡಬಲ್ಲದು.

ನಮ್ಮ ಮೇಲಿನ ವಿಶ್ವಾಸವೇ ನಮ್ಮನ್ನು ಕಾಪಾಡುತ್ತದೆ: ಹೆಸರಾಂತ ಉದ್ಯಮಿ ರತನ್ ಟಾಟಾ ಹಿತವಚನ
ರತನ್ ಟಾಟಾ (ಸಂಗ್ರಹ ಚಿತ್ರ)
guruganesh bhat
| Edited By: ಸಾಧು ಶ್ರೀನಾಥ್​|

Updated on:Dec 31, 2020 | 1:31 PM

Share

‘ಭಾರತದಲ್ಲೇ ಕಾರುಗಳನ್ನು ಉತ್ಪಾದಿಸಬೇಕೆಂಬ ಇಚ್ಛೆಯಿತ್ತು. ಅದನ್ನು ನೆರವೇರಿಸಲೆಂದೇ ಇಂಡಿಕಾ ಕಾರನ್ನು ತಯಾರಿಸಿದೆವು. ಇಂಡಿಕಾ ಕಾರಿನ ಉತ್ಪಾದನೆಯ ಹಂತದಲ್ಲಿ ನನ್ನ ಆಪ್ತರೇ ನನ್ನನ್ನು ದೂರವಿಟ್ಟರು. ಆದರೆ ಭಾರತದ ಕಾರು ಮಾರುಕಟ್ಟೆಯ ಶೇ.20 ಪಾಲು ಇಂಡಿಕಾದ ಪಾಲಾಯಿತು. ಸರಿಯಾದ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ, ಕೈಗೊಂಡ ನಿರ್ಧಾರವನ್ನು ಸರಿಯೆಂದು ಸಾಬೀತುಪಡಿಸಬೇಕು. ಅದರಲ್ಲೇ ನನಗೆ ದೃಢ ನಂಬಿಕೆಯಿದೆ. ನಮ್ಮ ಮೇಲಿನ ನಂಬಿಕೆಯನ್ನು ಇದು ಹೆಚ್ಚಿಸುತ್ತದೆ’ ಎಂದು ತಮ್ಮ ಅನುಭವದ ಕಣಜದಿಂದ ದೇಶದ ಯುವ ಜನತೆಗೆ ಪಾಠ ಹೇಳುತ್ತಾರೆ ರತನ್ ಟಾಟಾ.

ಭಾರತ ಆಟೋ ಮೊಬೈಲ್ ಕ್ಷೇತ್ರದಲ್ಲಿ ಸ್ವಂತಿಕೆ ಕಂಡುಕೊಳ್ಳಲು ರತನ್ ಟಾಟಾರ ಕೊಡುಗೆ ಅಗಾಧ. ಒಂದು ಕಾಲದಲ್ಲಿ ದೇಶೀಯ ಕಂಪನಿಯೊಂದು ವಾಹನಗಳನ್ನು ಉತ್ಪಾದಿಸುವುದು ಭಾರತದ ಮಟ್ಟಿಗೆ ಕನಸೇ ಆಗಿತ್ತು. ಆ ಕನಸನ್ನು ನನಸು ಮಾಡಿದ್ದು ಟಾಟಾ ಸಂಸ್ಥೆ.

ಭಾರತದ ಉದ್ಯಮ ಕ್ಷೇತ್ರದ ದೈತ್ಯ, ಇಂದಿಗೂ ಉದ್ಯಮದಲ್ಲಿ ನೈತಿಕತೆಯನ್ನು ಪಾಲಿಸುವ 82ರ ಹಿರಿಯಜ್ಜನಿಗೆ ತಮ್ಮ ನಿರ್ಧಾರಗಳ ಮೇಲೆ ದೃಢ ವಿಶ್ವಾಸ. ದೇಶದ ಯುವ ತಲೆಮಾರಿಗೆ ಪ್ರೀತಿಯಿಂದ ಪಾಠ ಹೇಳುವ ಉದ್ಯಮ ಜಗತ್ತಿನ ಮೇರು ವ್ಯಕ್ತಿತ್ವದ ರತನ್ ಟಾಟಾ.

ನಾನು ದೇಶದಲ್ಲೇ ಕಾರುಗಳನ್ನು ಉತ್ಪಾದಿಸುವೆ ಎಂದು ನಿರ್ಧರಿಸಿದಾಗ ವಿದೇಶದಲ್ಲಿನ ನನ್ನ ಗೆಳೆಯರು ‘ಅದು ಸಾಧ್ಯವೇ ಇಲ್ಲ’ ಎಂದರು. ಇತರರ ಅಭಿಪ್ರಾಯಕ್ಕಿಂತ ನಮ್ಮ ಮೇಲಿನ ವಿಶ್ವಾಸವೇ ನಮ್ಮನ್ನು ಕಾಪಾಡುತ್ತದೆ. ಸಮಂಜಸ ಎಂದು ಇತರರು ಹೇಳಬಹುದಾದ ನಿರ್ಧಾರ ಕೈಗೊಳ್ಳುವುದಕ್ಕಿಂತ, ನಮ್ಮ ನಿರ್ಧಾರ ಸರಿ ಇರುವಂತೆ ಕೆಲಸ ಮಾಡಿ ಸಾಧಿಸಬೇಕು ಎಂದು ಅವರು ಯುವ ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ. 2021ರಲ್ಲಿ ದೇಶದ ಎಲ್ಲ ಯುವ ಉತ್ಸಾಹಿಗಳಿಗೆ ಅವರ ಮಾರ್ಗದರ್ಶನ ಪ್ರೇರಣಾದಾಯಕವಾಗಿದೆ.

ಉದ್ಯಮಿ ರತನ್ ಟಾಟಾಗೆ ಭಾರತ-ಇಸ್ರೇಲ್ ವಾಣಿಜ್ಯ ಮಂಡಳಿಯಿಂದ ಗೌರವ

Published On - 1:08 pm, Thu, 31 December 20

Follow Us
guruganesh bhat
guruganesh bhat
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್