AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharana Pratap Jayanti: ಮೇವಾರದ ಮಹಾರಾಣಾ ಪ್ರತಾಪ್ ಸಿಂಗ್​ ಕುರಿತಾಗಿ ತಿಳಿಯಬೇಕಾದ ಕೆಲವು ಸಂಗತಿಗಳು ಹೀಗಿವೆ

ಭಾರತ ಇತಿಹಾಸದಲ್ಲಿ ಮಹಾರಾಣಾ ಪ್ರತಾಪ್​ ಸಿಂಗ್​ ದೈರ್ಯಶಾಲಿಗೆ ಹೆಸರಾಗಿದ್ದವರು. 7 ಅಡಿ ಎತ್ತರ ಹಾಗೂ 81 ಕೆಜಿ ದೇಹವುಳ್ಳ ಸದೃಢ ರಾಜನೆಂದು ಹೆಸರುವಾಸಿಯಾಗಿದ್ದರು.

Maharana Pratap Jayanti: ಮೇವಾರದ ಮಹಾರಾಣಾ ಪ್ರತಾಪ್ ಸಿಂಗ್​ ಕುರಿತಾಗಿ ತಿಳಿಯಬೇಕಾದ ಕೆಲವು ಸಂಗತಿಗಳು ಹೀಗಿವೆ
ಮೇವಾರದ ಮಹಾರಾಣಾ ಪ್ರತಾಪ್ ಸಿಂಗ್
TV9 Web
| Edited By: |

Updated on:Jun 13, 2021 | 10:59 AM

Share

ಮೇವಾರದ 13ನೇ ರಾಜ ಮಹಾರಾಣಾ ಪ್ರತಾಪ್​ ಸಿಂಗ್​. ಇವರ ಜನ್ಮ ದಿನಾಚರಣೆಯನ್ನು ಇಂದು ಭಾನುವಾರ ಆಚರಿಸಲಾಗುತ್ತಿದೆ. ಇಂಗ್ಲಿಷ್​ ಕ್ಯಾಲೆಂಡರ್​ ಪ್ರಕಾರ ಪ್ರತೀ ವರ್ಷ ಮೇ 9ನೇ ತಾರೀಕಿನಂದು ಇವರ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಆದರೆ ಹಿಂದೂ ಕ್ಯಾಲೆಂಡರ್​ ಪ್ರಕಾರ ಜ್ಯೇಷ್ಠ ಶುಕ್ಲ ಪಕ್ಷದ ತೃತೀಯ ತಿಥಿಯಂದು ಅಂದರೆ ಇಂದು ಜೂನ್​ 13ರಂದು ಆಚರಿಸಲಾಗುತ್ತದೆ. ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ಕಡೆಗಳಲ್ಲಿ ಮಹಾರಾಣಾ ಪ್ರತಾಪ್​ ಸಿಂಗ್​ ಜನ್ಮ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಾಗೂ ಈ ದಿನವನ್ನು ಸಾರ್ವಜನಿಕ ರಜಾ ದಿನವನ್ನಾಗಿ ಘೋಷಿಸುತ್ತಾರೆ.

ಮಹಾರಾಣಾ ಪ್ರತಾಪ್​ ಸಿಂಗ್​ ಕುರಿತಾಗಿ ತಿಳಿಯ ಬೇಕಾದ ಒಂದಿಷ್ಟು ಸಂಗತಿಗಳು * 1950, ಮೇ 9ನೇ ತಾರೀಕಿನಂದು ರಜಪೂತರ ಕುಟುಂಬದಲ್ಲಿ ಮಹಾರಾಣಾ ಪ್ರತಾಪ್​ ಸಿಂಗ್​ ಜನಿಸಿದರು. ಇವರ ತಂದೆ ಉದಯ್​ ಸಿಂಗ್​ ಹಾಗೂ ಇವರು ಉದಯಪುರದ ಸ್ಥಾಪಕ. ಉದಯ್​ ಸಿಂಗ್​ ಅವರಿಗೆ ಹಿರಿಯ ಮಗನಾಗಿ ಪ್ರತಾಪ್​ ಸಿಂಗ್​ ಜನಸಿದರು. ಹಾಗೂ ಇವರಿಗೆ ಮೂರು ಜನ ಸಹೋದರರು ಮತ್ತು ಇಬ್ಬರು ಸಹೋದರಿಯರಿದ್ದರು.

* ಭಾರತ ಇತಿಹಾಸದಲ್ಲಿ ಮಹಾರಾಣಾ ಪ್ರತಾಪ್​ ಸಿಂಗ್​ ದೈರ್ಯಶಾಲಿಗೆ ಹೆಸರಾಗಿದ್ದವರು. 7 ಅಡಿ ಎತ್ತರ ಹಾಗೂ 81 ಕೆಜಿ ದೇಹವುಳ್ಳ ಸದೃಢ ರಾಜನೆಂದು ಹೆಸರುವಾಸಿಯಾಗಿದ್ದರು.

* ಮಹಾರಾಣಾ ಪ್ರತಾಪ್​ ಸಿಂಗ್​ 11 ಹೆಂಡತಿಯರು ಮತ್ತು 17 ಮಕ್ಕಳನ್ನು ಪಡೆದಿದ್ದರು. ಇವರ ಹಿರಿಯ ಮಗ ಮಹಾರಾಣ ಅಮರ್​ ಸಿಂಗ್​ ಮೇವಾರದ 14ನೇ ರಾಜನಾಗಿ ಆಡಳಿತ ನಡೆಸಿದ್ದರು.

* ಭೀಕರ ಅಪಘಾತದಲ್ಲಿ ಗಾಯಗೊಂಡ ಮಹಾರಾಣಾ ಪ್ರತಾಪ್​ ಸಿಂಗ್​ ತಮ್ಮ 56ನೇ ವಯಸ್ಸಿನಲ್ಲಿ, 1597 ಜನವರಿ 19ರಂದು ಕೊನೆಯುಸಿರೆಳೆದರು.

ಕಳೆದ ವರ್ಷ ಮೇ 9ನೇ ತಾರೀಕಿನಂದು ಪ್ರಧಾನಿ ನರೇಂದ್ರೆ ಮೋದಿ ಅವರು ಮಹಾರಾಣಾ ಪ್ರತಾಪ್​ ಸಿಂಗ್​ ಜನ್ಮ ದಿನದಂದು ಗೌರವ ಸಲ್ಲಿಸಿದ್ದರು. ಅವರ ಶೌರ್ಯ ಮತ್ತು ಧೈರ್ಯದ ಕುರಿತಾಗಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಮಾತೃಭೂಮಿಯ ಮೇಲಿನ ತ್ಯಾಗ ಮತ್ತು ಭಕ್ತಿ ಯಾವಾಗಲೂ ಸ್ಮರಣೀಯವಾಗಿರುತ್ತದೆ ಎಂದು ಪ್ರಧಾನಿ ಗೌರವ ಸಲ್ಲಿಸಿದ್ದರು.

ಇದನ್ನೂ ಓದಿ:

Narasimha Jayanti 2021: ನರಸಿಂಹ ಜಯಂತಿಯ ಮಹತ್ವ, ಶುಭ ಮುಹೂರ್ತ ಮತ್ತು ಪೂಜೆಯ ಸಮಯ

Shankaracharya Jayanti 2021: ಇಂದು ಶಂಕರಾಚಾರ್ಯ ಜಯಂತಿ; ಆಧ್ಯಾತ್ಮ ಲೋಕಕ್ಕೆ ಚೈತನ್ಯ ನೀಡಿದ ಆದಿ ಗುರು ಶ್ರೀ ಶಂಕರಾಚಾರ್ಯ

Published On - 10:59 am, Sun, 13 June 21

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು