AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narasimha Jayanti 2021: ನರಸಿಂಹ ಜಯಂತಿಯ ಮಹತ್ವ, ಶುಭ ಮುಹೂರ್ತ ಮತ್ತು ಪೂಜೆಯ ಸಮಯ

ಅರ್ಧ ಮನುಷ್ಯ ಮತ್ತು ಅರ್ಧ ಸಿಂಹನ ಅವತಾರದಲ್ಲಿ ಭಗವಾನ್​ ವಿಷ್ಣುವು ನರಸಿಂಹನಾಗಿ ಅವತಾರ ಪಡೆಯುತ್ತಾನೆ. ಈ ದಿನವನ್ನು ನರಸಿಂಹ ಜಯಂತಿ ಎಂದು ಆಚರಿಸಲಾಗುತ್ತದೆ.

Narasimha Jayanti 2021: ನರಸಿಂಹ ಜಯಂತಿಯ ಮಹತ್ವ, ಶುಭ ಮುಹೂರ್ತ ಮತ್ತು ಪೂಜೆಯ ಸಮಯ
Narasimha jayanti 2021
Follow us
shruti hegde
|

Updated on:May 25, 2021 | 10:01 AM

ನರಸಿಂಹ ಜಯಂತಿ ಆಚರಣೆಯನ್ನು ಇಂದು(ಮೇ 25) ಆಚರಿಸಲಾಗುತ್ತಿದೆ. ಪೂರ್ಣಿಮೆಗೆ ಒಂದು ದಿನ ಮೊದಲು ಶುಕ್ಲ ಪಕ್ಷದ ವೈಶಾಖ ಚತುರ್ಥಿಯಂದು ಆಚರಿಸಲಾಗುತ್ತದೆ. ಜಗತ್ತನ್ನು ರಕ್ಷಿಸಲು ಮತ್ತು ತನ್ನ ಭಕ್ತರನ್ನು ಕಾಪಾಡಲು ವಿಷ್ಣುವು 10 ರೂಪಗಳಲ್ಲಿ ಕಾಣಿಸಿಕೊಂಡಿದ್ದಾನೆ ಎಂಬುದನ್ನು ಪುರಾಣ ತಿಳಿಸುತ್ತದೆ. ಅವುಗಳಲ್ಲಿ ವಿಷ್ಣುವಿನ ನಾಲ್ಕನೇ ಅವತಾರ ನರಸಿಂಹನ ಅವತಾರವಾಗಿದೆ. ನರಸಿಂಹನ ಅವತಾರವನ್ನು ನಾವು ಪುರಾಣಗಳಲ್ಲಿ ತಿಳಿದುಕೊಳ್ಳಬಹುದು. ಅರ್ಧ ಮನುಷ್ಯ ಮತ್ತು ಅರ್ಧ ಸಿಂಹನ ಅವತಾರದಲ್ಲಿ ಭಗವಾನ್​ ವಿಷ್ಣುವು ನರಸಿಂಹನಾಗಿ ಅವತಾರ ಪಡೆಯುತ್ತಾನೆ. ಈ ದಿನವನ್ನು ನರಸಿಂಹ ಜಯಂತಿ ಎಂದು ಆಚರಿಸಲಾಗುತ್ತದೆ.

ಪುರಾಣ ಅಸುರರಾಜ ಹಿರಣ್ಯಕಶ್ಯಪು ತನ್ನನ್ನು ದೇವರು ಎಂದು ಭಾವಿಸಿ, ತಾನು ಹೇಳಿದಂತೆಯೇ ಕೇಳಬೇಕು, ನನ್ನನ್ನೇ ಆರಾಧಿಸಬೇಕು ಎಂದು ಪ್ರಜೆಗಳಿಗೆ ಹಿಂಸೆ ಕೊಡುತ್ತಿರುತ್ತಾನೆ. ಆದರೆ ಆತನ ಪುತ್ರ ಪ್ರಹ್ಲಾದ ವಿಷ್ಣುವಿನ ಭಕ್ತನಾದ್ದರಿಂದ ಎಂದಿಗೂ ತನ್ನ ತಂದೆಯ ಮಾತನ್ನು ಕೇಳದೇ ವಿಷ್ಣು ದೇವನನ್ನು ಪೂಜಿಸುತ್ತಿರುತ್ತಾನೆ. ಈ ಕಾರಣದಿಂದ ತನ್ನ ಮಗನನ್ನೇ ಹತ್ಯೆಗೈಯಲು ಯತ್ನಿಸುತ್ತಾನೆ. ಆದರೆ ವಿಷ್ಣುವಿನ ಮೇಲಿನ ಭಕ್ತಿಯು ಪ್ರಹ್ಲಾದನನ್ನು ರಕ್ಷಿಸುತ್ತದೆ. ದೇವರು ಎಲ್ಲೆಲ್ಲೂ ಇದ್ದಾನೆ ಎಂದು ಪ್ರಹ್ಲಾದ ತನ್ನ ತಂದೆ ಹಿರಣ್ಯಕಶ್ಯಪುವಿನಲ್ಲಿ ಕೇಳಿದಾಗ ಈ ಕಂಬದಲ್ಲಿದ್ದಾನೆಯೇ? ಎಂದು ಸಿಟ್ಟಿನಿಂದ ಕಂಬಕ್ಕೆ ಹೊಡೆಯುತ್ತಾನೆ. ಕಂಬದಿಂದ ನರಸಿಂಹನ ಅವತಾರದಲ್ಲಿ ಕಾಣಿಸಿಕೊಂಡ ವಿಷ್ಣುವು ತನ್ನ ಭಕ್ತ ಪ್ರಹ್ಲಾದನನ್ನು ರಕ್ಷಿಸುತ್ತಾನೆ. ಈ ದಿನ ವೈಶಾಖ ತಿಂಗಳ ಶುಕ್ಲ ಪಕ್ಷದ ಚತುರ್ಥಿಯ ದಿನವಾದ್ದರಿಂದ ಈ ದಿನದಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ.

ಪೂಜಾ ಸಮಯ ನರಸಿಂಹ ಜಯಂತಿಯನ್ನು ಇಂದು ಸಂಜೆ 4:26 ರಿಂದ 07:11ರವರೆಗೆ ಆಚರಿಸಲಾಗುತ್ತದೆ. ಅಂದರೆ ದಿನದ ಸಾಯಂಕಾಲ ಪೂಜೆ ನೆರವೇರಿಸಲಾಗುತ್ತದೆ. ಚತುರ್ಥಿ ತಿಥಿ ಮೇ 25ರ ಬೆಳಿಗ್ಗೆ 12:11ಕ್ಕೆ ಪ್ರಾರಂಭವಾಗಲಿದ್ದು, ರಾತ್ರಿ 08:29ಕ್ಕೆ ಕೊನೆಗೊಳ್ಳುತ್ತದೆ. ಹಾಗೆಯೇ ಸಂಕಲ್ಪ ತಿಥಿ ಬೆಳಿಗ್ಗೆ 10:56ರಿಂದ ಮಧ್ಯಾಹ್ನ 01:41ರವರೆಗೆ ಇರುತ್ತದೆ.

ಆಚರಣೆ ನರಸಿಂಹ ಚತುರ್ಥಿ ಅಂಗವಾಗಿ ಭಕ್ತರು ಉಪವಾಸ ಕೈಗೊಳ್ಳುತ್ತಾರೆ. ಜತೆಗೆ ಮಧ್ಯಾಹ್ನದ ಸಮಯದಲ್ಲಿ ನರಸಿಂಹನ ಭಜನೆ ಮಾಡುವ ಮೂಲಕ ಪೂಜೆ ನೆವೇರಿಸುತ್ತಾರೆ. ಜೀವನಪೂರ್ತಿ ವಿಜಯವನ್ನೇ ಸಾಧಿಸಬೇಕು ಎಂಬ ಬೇಡಿಕೆಯೊಂದಿಗೆ ನರಸಿಂಹನಲ್ಲಿ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಮತ್ತು ಸಂಕಲ್ಪ(ಪ್ರತಿಜ್ಞೆ) ಮಾಡುವ ಮೂಲಕ ಬೇಡಿಕೆಯನ್ನು ನರಸಿಂಹನ ಮುಂದಿಡುವ ಆಚರಣೆ ಇಂದಿನವರೆಗೂ ನಡೆದುಕೊಂಡು ಬಂದಿದೆ.

ಬೆಳಿಗ್ಗೆ ಬೇಗ ಎದ್ದು ಬ್ರಹ್ಮ ಮುಹೂರ್ತ ಕಾಲದಲ್ಲಿ ಸ್ನಾನ ಮಾಡಿ, ಮಡಿ ವಸ್ತ್ರ(ಶುಭ್ರ ವಸ್ತ್ರ) ಧರಿಸಿ, ನರಸಿಂಹನ ವಿಗ್ರಹದ ಮುಂದೆ ಪೂಜೆ ಸಲ್ಲಿಸಲಾಗುತ್ತದೆ. ನರಸಿಂಹನಿಗೆ ಅರ್ಪಿಸಲು ನೈವೇದ್ಯಕ್ಕಾಗಿ ಸಿಹಿತಿಂಡಿಗಳನ್ನು ಮಾಡಲಾಗುತ್ತದೆ. ಜತೆಗೆ ಪೂಜಾ ಸಮಯದಲ್ಲಿ ಶ್ರೀಗಂಧವನ್ನು ನರಸಿಂಹನಿಗೆ ಹಚ್ಚಿ, ಹೂವುಗಳಿಂದ ಅಲಂಕರಿಸಿ ತೆಂಗಿನ ಕಾಯಿ ಒಡೆದು ಪೂಜೆಯನ್ನು ನೆರವೇರಿಸಲಾಗುತ್ತದೆ. ಕೆಲವರು ಈ ವಿಶೇಷ ಆಚರಣೆಯ ಅಂಗವಾಗಿ ತಮ್ಮ ಕೈಯಲ್ಲಾದಷ್ಟು ದಾನ ಧರ್ಮ ಮಾಡಿ ತಮ್ಮ ಜೀವನದ ಯಶಸ್ಸಿಗಾಗಿ ನರಸಿಂಹನಲ್ಲಿ ಬೇಡಿಕೊಳ್ಳುತ್ತಾರೆ.

ಇದನ್ನೂ ಓದಿ:  Paytm Mall Flagship Fest Sale 2021: ಪೇಟಿಎಂ ಮಾಲ್ ಹಬ್ಬದ ಮಾರಾಟದಲ್ಲಿ ಪ್ರೀಮಿಯಂ ಮೊಬೈಲ್​ ಫೋನ್​ಗಳು ಸಸ್ತಾ

Radhe Collection: ಈದ್ ಹಬ್ಬದಂದು ಸಲ್ಲುಗೆ ಸಿಹಿ; ರಾಧೆ ಚಿತ್ರದಿಂದ ಸಲ್ಮಾನ್ ಖಾನ್ ಗಳಿಸಿದ್ದೆಷ್ಟು?

Published On - 9:59 am, Tue, 25 May 21

ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!