AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿಯನಿಗಾಗಿ 67 ಐಟಂಗಳ ಭರ್ಜರಿ ಊಟ! ಲಾಕ್​ಡೌನ್​ ಮಧ್ಯೆ ಅತ್ತೆಯ ಸ್ಪೆಷಲ್​ ಮೀಲ್ಸ್!

ಹೈದರಾಬಾದ್​: ರಾಯರು ಬಂದರು ಮಾವನ ಮನೆಗೆ ಎಂಬ ಪ್ರಸಿದ್ಧ ಕವಿ ಡಾ. ಕೆ.ಎಸ್ ನರಸಿಂಹಸ್ವಾಮಿ ಅವರ ಕವನವನ್ನು ಕೇಳದವರೇ ಇಲ್ಲ. ಆ ಕವನದ ಸಾಲೊಂದರಲ್ಲಿ ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರಿಗೆ ಕಾದಿತ್ತು ಅನ್ನೋ ಮಾತಿದೆ. ಅಂತೆಯೇ, ಮನೆಗೆ ಬಂದ ಅಳಿಯನಿಗೋಸ್ಕರ ಆತನ ಪ್ರೀತಿಯ ಅತ್ತೆ 67 ಭಕ್ಷ್ಯಗಳನ್ನ ಒಳಗೊಂಡ ಭರ್ಜರಿ ಭೋಜನ ತಯಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ಅಂದ ಹಾಗೆ, ಇಂಥ ಒಳ್ಳೇ ಅತ್ತೆ ಎಲ್ಲಿದ್ದಾರೆ ಗೊತ್ತಾ? ನೆರೆಯ ಆಂಧ್ರದಲ್ಲಿ. ಹೌದು, ಮನೆಗೆ […]

ಅಳಿಯನಿಗಾಗಿ 67 ಐಟಂಗಳ ಭರ್ಜರಿ ಊಟ! ಲಾಕ್​ಡೌನ್​ ಮಧ್ಯೆ ಅತ್ತೆಯ ಸ್ಪೆಷಲ್​ ಮೀಲ್ಸ್!
KUSHAL V
| Edited By: |

Updated on:Jul 09, 2020 | 5:44 PM

Share

ಹೈದರಾಬಾದ್​: ರಾಯರು ಬಂದರು ಮಾವನ ಮನೆಗೆ ಎಂಬ ಪ್ರಸಿದ್ಧ ಕವಿ ಡಾ. ಕೆ.ಎಸ್ ನರಸಿಂಹಸ್ವಾಮಿ ಅವರ ಕವನವನ್ನು ಕೇಳದವರೇ ಇಲ್ಲ. ಆ ಕವನದ ಸಾಲೊಂದರಲ್ಲಿ ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರಿಗೆ ಕಾದಿತ್ತು ಅನ್ನೋ ಮಾತಿದೆ. ಅಂತೆಯೇ, ಮನೆಗೆ ಬಂದ ಅಳಿಯನಿಗೋಸ್ಕರ ಆತನ ಪ್ರೀತಿಯ ಅತ್ತೆ 67 ಭಕ್ಷ್ಯಗಳನ್ನ ಒಳಗೊಂಡ ಭರ್ಜರಿ ಭೋಜನ ತಯಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಅಂದ ಹಾಗೆ, ಇಂಥ ಒಳ್ಳೇ ಅತ್ತೆ ಎಲ್ಲಿದ್ದಾರೆ ಗೊತ್ತಾ? ನೆರೆಯ ಆಂಧ್ರದಲ್ಲಿ. ಹೌದು, ಮನೆಗೆ ಬರುತ್ತಿರುವ ತನ್ನ ಪ್ರೀತಿಯ ಅಳಿಮಯ್ಯನಿಗೋಸ್ಕರ ಇವರು ತಯಾರಿಸಿರುವ ಐಟಂಗಳನ್ನ ಕೇಳಿದ್ರೆ ಬಾಯಲ್ಲಿ ನೀರೂರುವುದು ಗ್ಯಾರಂಟಿ.

ಲಾಕ್​ಡೌನ್​ ಮಧ್ಯೆ ಮಾವನ ಮನೆಗೆ ದಣಿದು ಬಂದ ಅಳಿಯನಿಗೆ ಮೊದಲು ವೆಲ್ಕಮ್​ ಡ್ರಿಂಕ್​. ತದ ನಂತರ ನಂಚುಕೊಳ್ಳಲು ಸ್ಟಾರ್ಟರ್ಸ್​. ಆಮೇಲೆ ಚಾಟ್ಸ್​. ಅಷ್ಟೇ ಅಲ್ಲ ಸ್ವಾಮಿ. ಇದು ಬರೀ ಓಪನಿಂಗ್​. ಇನ್ನೂ ಬ್ಯಾಟಿಂಗ್​ ಮಾಡೋಕೆ ಮೇನ್​ ಊಟ ಇದೆ. ಆಮೇಲೆ ಸ್ವಲ್ಪ ಬಾಯಿ ಸಿಹಿ ಮಾಡೋಕೆ ಡೆಸರ್ಟ್​ ಕೂಡ ಈ ಅತ್ತೆಮ್ಮಾ ತಯಾರಿಸಿದ್ದಾರೆ.

ವೈರಲ್​ ವಿಡಿಯೋಗೆ ಸಿಕ್ತು 1 ಲಕ್ಷ Views, 2.5 ಸಾವಿರ ಲೈಕ್ಸ್​ ಜೊತೆಗೆ, ಮನೆಗೆ ಬರುತ್ತಿರುವ ಅಳಿಯನಿಗೆ ಅತ್ತೆ ಟ್ರೈಲರ್​ ಮಾದರಿಯಲ್ಲಿ ವಿಡಿಯೋ ಸಹ ಮಾಡಿ ಕಳಿಸಿದ್ದಾರೆ. ಬಾಳೆ ಎಲೆ ಮೇಲೆ ಬಡಿಸಿರುವ ಪ್ರತಿಯೊಂದು ಐಟಂ ವಿವರಣೆಯನ್ನ ಸಹ ಸುವಿಸ್ತಾರವಾಗಿ ನೀಡಿರುವ ಈ ವಿಡಿಯೋ ಸದ್ಯಕ್ಕೆ ಸಖತ್​ ವೈರಲ್​ ಆಗಿದ್ದು ಬರೋಬ್ಬರಿ ಒಂದು ಲಕ್ಷ Views ಮತ್ತು 2.5 ಸಾವಿರ ಲೈಕ್ಸ್​ ಸಹ ಪಡೆದಿದೆ.

ಆದರೆ, ಇದು ಒಂದು ಅಡುಗೆ ಸ್ಪರ್ಧೆಗೆ ತಯಾರಿಸಿದ ಭೋಜನ ಎಂದು ಮತ್ತೊಬ್ಬರು ಸ್ಪಷ್ಟನೆ ನೀಡಿದ್ದಾರೆ. ‘ಅಲ್ಲುಡು ವಿಂಧು ಭೋಜನಂ’ ಎಂಬ ಹೆಸರಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ, ಏನೇ ಆಗಲಿ ನಿಜಕ್ಕೂ ಇಂಥ ಒಳ್ಳೇ ಅತ್ತೆ ಸಿಗೋ ಅಳಿಯ ನಿಜಕ್ಕೂ ಪುಣ್ಯವಂತ.

Published On - 4:10 pm, Thu, 9 July 20

Follow Us
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಬೆಂಗಳೂರಿನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ನಗದು ಜಪ್ತಿ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಶ್ರೀರಂಗಪಟ್ಟಣದ ಚಾಮುಂಡೇಶ್ವರಿಗೆ 3 ಲಕ್ಷ ರೂಪಾಯಿ ನೋಟುಗಳ ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ
ಹುಬ್ಬಳ್ಳಿ ಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರ ದಂಡು, ವಿಶೇಷ ಅಲಂಕಾರ