AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿಯನಿಗಾಗಿ 67 ಐಟಂಗಳ ಭರ್ಜರಿ ಊಟ! ಲಾಕ್​ಡೌನ್​ ಮಧ್ಯೆ ಅತ್ತೆಯ ಸ್ಪೆಷಲ್​ ಮೀಲ್ಸ್!

ಹೈದರಾಬಾದ್​: ರಾಯರು ಬಂದರು ಮಾವನ ಮನೆಗೆ ಎಂಬ ಪ್ರಸಿದ್ಧ ಕವಿ ಡಾ. ಕೆ.ಎಸ್ ನರಸಿಂಹಸ್ವಾಮಿ ಅವರ ಕವನವನ್ನು ಕೇಳದವರೇ ಇಲ್ಲ. ಆ ಕವನದ ಸಾಲೊಂದರಲ್ಲಿ ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರಿಗೆ ಕಾದಿತ್ತು ಅನ್ನೋ ಮಾತಿದೆ. ಅಂತೆಯೇ, ಮನೆಗೆ ಬಂದ ಅಳಿಯನಿಗೋಸ್ಕರ ಆತನ ಪ್ರೀತಿಯ ಅತ್ತೆ 67 ಭಕ್ಷ್ಯಗಳನ್ನ ಒಳಗೊಂಡ ಭರ್ಜರಿ ಭೋಜನ ತಯಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ಅಂದ ಹಾಗೆ, ಇಂಥ ಒಳ್ಳೇ ಅತ್ತೆ ಎಲ್ಲಿದ್ದಾರೆ ಗೊತ್ತಾ? ನೆರೆಯ ಆಂಧ್ರದಲ್ಲಿ. ಹೌದು, ಮನೆಗೆ […]

ಅಳಿಯನಿಗಾಗಿ 67 ಐಟಂಗಳ ಭರ್ಜರಿ ಊಟ! ಲಾಕ್​ಡೌನ್​ ಮಧ್ಯೆ ಅತ್ತೆಯ ಸ್ಪೆಷಲ್​ ಮೀಲ್ಸ್!
Follow us
KUSHAL V
| Updated By:

Updated on:Jul 09, 2020 | 5:44 PM

ಹೈದರಾಬಾದ್​: ರಾಯರು ಬಂದರು ಮಾವನ ಮನೆಗೆ ಎಂಬ ಪ್ರಸಿದ್ಧ ಕವಿ ಡಾ. ಕೆ.ಎಸ್ ನರಸಿಂಹಸ್ವಾಮಿ ಅವರ ಕವನವನ್ನು ಕೇಳದವರೇ ಇಲ್ಲ. ಆ ಕವನದ ಸಾಲೊಂದರಲ್ಲಿ ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರಿಗೆ ಕಾದಿತ್ತು ಅನ್ನೋ ಮಾತಿದೆ. ಅಂತೆಯೇ, ಮನೆಗೆ ಬಂದ ಅಳಿಯನಿಗೋಸ್ಕರ ಆತನ ಪ್ರೀತಿಯ ಅತ್ತೆ 67 ಭಕ್ಷ್ಯಗಳನ್ನ ಒಳಗೊಂಡ ಭರ್ಜರಿ ಭೋಜನ ತಯಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಅಂದ ಹಾಗೆ, ಇಂಥ ಒಳ್ಳೇ ಅತ್ತೆ ಎಲ್ಲಿದ್ದಾರೆ ಗೊತ್ತಾ? ನೆರೆಯ ಆಂಧ್ರದಲ್ಲಿ. ಹೌದು, ಮನೆಗೆ ಬರುತ್ತಿರುವ ತನ್ನ ಪ್ರೀತಿಯ ಅಳಿಮಯ್ಯನಿಗೋಸ್ಕರ ಇವರು ತಯಾರಿಸಿರುವ ಐಟಂಗಳನ್ನ ಕೇಳಿದ್ರೆ ಬಾಯಲ್ಲಿ ನೀರೂರುವುದು ಗ್ಯಾರಂಟಿ.

ಲಾಕ್​ಡೌನ್​ ಮಧ್ಯೆ ಮಾವನ ಮನೆಗೆ ದಣಿದು ಬಂದ ಅಳಿಯನಿಗೆ ಮೊದಲು ವೆಲ್ಕಮ್​ ಡ್ರಿಂಕ್​. ತದ ನಂತರ ನಂಚುಕೊಳ್ಳಲು ಸ್ಟಾರ್ಟರ್ಸ್​. ಆಮೇಲೆ ಚಾಟ್ಸ್​. ಅಷ್ಟೇ ಅಲ್ಲ ಸ್ವಾಮಿ. ಇದು ಬರೀ ಓಪನಿಂಗ್​. ಇನ್ನೂ ಬ್ಯಾಟಿಂಗ್​ ಮಾಡೋಕೆ ಮೇನ್​ ಊಟ ಇದೆ. ಆಮೇಲೆ ಸ್ವಲ್ಪ ಬಾಯಿ ಸಿಹಿ ಮಾಡೋಕೆ ಡೆಸರ್ಟ್​ ಕೂಡ ಈ ಅತ್ತೆಮ್ಮಾ ತಯಾರಿಸಿದ್ದಾರೆ.

ವೈರಲ್​ ವಿಡಿಯೋಗೆ ಸಿಕ್ತು 1 ಲಕ್ಷ Views, 2.5 ಸಾವಿರ ಲೈಕ್ಸ್​ ಜೊತೆಗೆ, ಮನೆಗೆ ಬರುತ್ತಿರುವ ಅಳಿಯನಿಗೆ ಅತ್ತೆ ಟ್ರೈಲರ್​ ಮಾದರಿಯಲ್ಲಿ ವಿಡಿಯೋ ಸಹ ಮಾಡಿ ಕಳಿಸಿದ್ದಾರೆ. ಬಾಳೆ ಎಲೆ ಮೇಲೆ ಬಡಿಸಿರುವ ಪ್ರತಿಯೊಂದು ಐಟಂ ವಿವರಣೆಯನ್ನ ಸಹ ಸುವಿಸ್ತಾರವಾಗಿ ನೀಡಿರುವ ಈ ವಿಡಿಯೋ ಸದ್ಯಕ್ಕೆ ಸಖತ್​ ವೈರಲ್​ ಆಗಿದ್ದು ಬರೋಬ್ಬರಿ ಒಂದು ಲಕ್ಷ Views ಮತ್ತು 2.5 ಸಾವಿರ ಲೈಕ್ಸ್​ ಸಹ ಪಡೆದಿದೆ.

ಆದರೆ, ಇದು ಒಂದು ಅಡುಗೆ ಸ್ಪರ್ಧೆಗೆ ತಯಾರಿಸಿದ ಭೋಜನ ಎಂದು ಮತ್ತೊಬ್ಬರು ಸ್ಪಷ್ಟನೆ ನೀಡಿದ್ದಾರೆ. ‘ಅಲ್ಲುಡು ವಿಂಧು ಭೋಜನಂ’ ಎಂಬ ಹೆಸರಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ, ಏನೇ ಆಗಲಿ ನಿಜಕ್ಕೂ ಇಂಥ ಒಳ್ಳೇ ಅತ್ತೆ ಸಿಗೋ ಅಳಿಯ ನಿಜಕ್ಕೂ ಪುಣ್ಯವಂತ.

Published On - 4:10 pm, Thu, 9 July 20

ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
ಕಳೆದ ಚುನಾವಣೆಯಲ್ಲಿ ರೆಡ್ಡಿಗೆ ಸಹಾಯ ಮಾಡಿದ ಮಾತು ಸುಳ್ಳು: ಸಿದ್ದರಾಮಯ್ಯ
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
12ನೇಮನೆಯಲ್ಲಿ ಗುರು ಸಂಚಾರ;ಕಟಕ ರಾಶಿಯವರು ತಿಳಿದುಕೊಳ್ಳಲೇಬೇಕಾದ ವಿಷಯಗಳಿವು
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಮಿಥುನ ರಾಶಿಗೆ ಈ ವರ್ಷ ಗುರುಬಲ ಇರಲ್ಲ!
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಗುರು ಸಂಚಾರದಿಂದ ವೃಷಭ ರಾಶಿಯ ಲಕ್​​​ ಬದಲಾಗಲಿದೆಯೇ?
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಸರ್ಕಾರದ ಸಾಧನಾ ಸಮಾವೇಶ ನನಗೆ ಸಂಬಂಧಿಸಿದ ವಿಷಯವಲ್ಲ: ಯಡಿಯೂರಪ್ಪ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಗೃಹಲಕ್ಷ್ಮಿ ಹಣ ವರ್ಗಾವಣೆ ಯಾವಾಗ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?
ಮಿಥುನ ರಾಶಿಗೆ ಗುರು ಸಂಚಾರ; ಮೇಷ ರಾಶಿಯ ಮೇಲೆ ಪ್ರಭಾವ ಹೇಗಿರಲಿದೆ?