AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಳಿಯನಿಗಾಗಿ 67 ಐಟಂಗಳ ಭರ್ಜರಿ ಊಟ! ಲಾಕ್​ಡೌನ್​ ಮಧ್ಯೆ ಅತ್ತೆಯ ಸ್ಪೆಷಲ್​ ಮೀಲ್ಸ್!

ಹೈದರಾಬಾದ್​: ರಾಯರು ಬಂದರು ಮಾವನ ಮನೆಗೆ ಎಂಬ ಪ್ರಸಿದ್ಧ ಕವಿ ಡಾ. ಕೆ.ಎಸ್ ನರಸಿಂಹಸ್ವಾಮಿ ಅವರ ಕವನವನ್ನು ಕೇಳದವರೇ ಇಲ್ಲ. ಆ ಕವನದ ಸಾಲೊಂದರಲ್ಲಿ ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರಿಗೆ ಕಾದಿತ್ತು ಅನ್ನೋ ಮಾತಿದೆ. ಅಂತೆಯೇ, ಮನೆಗೆ ಬಂದ ಅಳಿಯನಿಗೋಸ್ಕರ ಆತನ ಪ್ರೀತಿಯ ಅತ್ತೆ 67 ಭಕ್ಷ್ಯಗಳನ್ನ ಒಳಗೊಂಡ ಭರ್ಜರಿ ಭೋಜನ ತಯಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ. ಅಂದ ಹಾಗೆ, ಇಂಥ ಒಳ್ಳೇ ಅತ್ತೆ ಎಲ್ಲಿದ್ದಾರೆ ಗೊತ್ತಾ? ನೆರೆಯ ಆಂಧ್ರದಲ್ಲಿ. ಹೌದು, ಮನೆಗೆ […]

ಅಳಿಯನಿಗಾಗಿ 67 ಐಟಂಗಳ ಭರ್ಜರಿ ಊಟ! ಲಾಕ್​ಡೌನ್​ ಮಧ್ಯೆ ಅತ್ತೆಯ ಸ್ಪೆಷಲ್​ ಮೀಲ್ಸ್!
KUSHAL V
| Edited By: |

Updated on:Jul 09, 2020 | 5:44 PM

Share

ಹೈದರಾಬಾದ್​: ರಾಯರು ಬಂದರು ಮಾವನ ಮನೆಗೆ ಎಂಬ ಪ್ರಸಿದ್ಧ ಕವಿ ಡಾ. ಕೆ.ಎಸ್ ನರಸಿಂಹಸ್ವಾಮಿ ಅವರ ಕವನವನ್ನು ಕೇಳದವರೇ ಇಲ್ಲ. ಆ ಕವನದ ಸಾಲೊಂದರಲ್ಲಿ ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರಿಗೆ ಕಾದಿತ್ತು ಅನ್ನೋ ಮಾತಿದೆ. ಅಂತೆಯೇ, ಮನೆಗೆ ಬಂದ ಅಳಿಯನಿಗೋಸ್ಕರ ಆತನ ಪ್ರೀತಿಯ ಅತ್ತೆ 67 ಭಕ್ಷ್ಯಗಳನ್ನ ಒಳಗೊಂಡ ಭರ್ಜರಿ ಭೋಜನ ತಯಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಅಂದ ಹಾಗೆ, ಇಂಥ ಒಳ್ಳೇ ಅತ್ತೆ ಎಲ್ಲಿದ್ದಾರೆ ಗೊತ್ತಾ? ನೆರೆಯ ಆಂಧ್ರದಲ್ಲಿ. ಹೌದು, ಮನೆಗೆ ಬರುತ್ತಿರುವ ತನ್ನ ಪ್ರೀತಿಯ ಅಳಿಮಯ್ಯನಿಗೋಸ್ಕರ ಇವರು ತಯಾರಿಸಿರುವ ಐಟಂಗಳನ್ನ ಕೇಳಿದ್ರೆ ಬಾಯಲ್ಲಿ ನೀರೂರುವುದು ಗ್ಯಾರಂಟಿ.

ಲಾಕ್​ಡೌನ್​ ಮಧ್ಯೆ ಮಾವನ ಮನೆಗೆ ದಣಿದು ಬಂದ ಅಳಿಯನಿಗೆ ಮೊದಲು ವೆಲ್ಕಮ್​ ಡ್ರಿಂಕ್​. ತದ ನಂತರ ನಂಚುಕೊಳ್ಳಲು ಸ್ಟಾರ್ಟರ್ಸ್​. ಆಮೇಲೆ ಚಾಟ್ಸ್​. ಅಷ್ಟೇ ಅಲ್ಲ ಸ್ವಾಮಿ. ಇದು ಬರೀ ಓಪನಿಂಗ್​. ಇನ್ನೂ ಬ್ಯಾಟಿಂಗ್​ ಮಾಡೋಕೆ ಮೇನ್​ ಊಟ ಇದೆ. ಆಮೇಲೆ ಸ್ವಲ್ಪ ಬಾಯಿ ಸಿಹಿ ಮಾಡೋಕೆ ಡೆಸರ್ಟ್​ ಕೂಡ ಈ ಅತ್ತೆಮ್ಮಾ ತಯಾರಿಸಿದ್ದಾರೆ.

ವೈರಲ್​ ವಿಡಿಯೋಗೆ ಸಿಕ್ತು 1 ಲಕ್ಷ Views, 2.5 ಸಾವಿರ ಲೈಕ್ಸ್​ ಜೊತೆಗೆ, ಮನೆಗೆ ಬರುತ್ತಿರುವ ಅಳಿಯನಿಗೆ ಅತ್ತೆ ಟ್ರೈಲರ್​ ಮಾದರಿಯಲ್ಲಿ ವಿಡಿಯೋ ಸಹ ಮಾಡಿ ಕಳಿಸಿದ್ದಾರೆ. ಬಾಳೆ ಎಲೆ ಮೇಲೆ ಬಡಿಸಿರುವ ಪ್ರತಿಯೊಂದು ಐಟಂ ವಿವರಣೆಯನ್ನ ಸಹ ಸುವಿಸ್ತಾರವಾಗಿ ನೀಡಿರುವ ಈ ವಿಡಿಯೋ ಸದ್ಯಕ್ಕೆ ಸಖತ್​ ವೈರಲ್​ ಆಗಿದ್ದು ಬರೋಬ್ಬರಿ ಒಂದು ಲಕ್ಷ Views ಮತ್ತು 2.5 ಸಾವಿರ ಲೈಕ್ಸ್​ ಸಹ ಪಡೆದಿದೆ.

ಆದರೆ, ಇದು ಒಂದು ಅಡುಗೆ ಸ್ಪರ್ಧೆಗೆ ತಯಾರಿಸಿದ ಭೋಜನ ಎಂದು ಮತ್ತೊಬ್ಬರು ಸ್ಪಷ್ಟನೆ ನೀಡಿದ್ದಾರೆ. ‘ಅಲ್ಲುಡು ವಿಂಧು ಭೋಜನಂ’ ಎಂಬ ಹೆಸರಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ, ಏನೇ ಆಗಲಿ ನಿಜಕ್ಕೂ ಇಂಥ ಒಳ್ಳೇ ಅತ್ತೆ ಸಿಗೋ ಅಳಿಯ ನಿಜಕ್ಕೂ ಪುಣ್ಯವಂತ.

Published On - 4:10 pm, Thu, 9 July 20

Follow Us
KUSHAL V
KUSHAL V
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ