New Year Resolution | ಇನ್ನು ಇರುವಷ್ಟು ಕಾಲ ಇರುವಂತೆಯೇ ಇರಬೇಕೆಂದು ಅಂದುಕೊಂಡಿದ್ದೇನೆ: ಕತೆಗಾರ ಎಸ್​.ಸುರೇಂದ್ರನಾಥ್

ಎಲ್ಲರಿಗೂ ಸ್ವಾತಂತ್ರ್ಯ ಸಾಧ್ಯವಾಗಬೇಕು. ಆದರೆ ಸದ್ಯಕ್ಕೆ ಭಯದ ವಾತಾವರಣ ನಿವಾರಣೆಯಾಗುವ ಸನ್ನಿವೇಶ ಕಾಣೆ. ರಾಜ್ಯದಲ್ಲೂ, ದೇಶದಲ್ಲೂ ರಾಜಕೀಯವಾಗಿ ಪ್ರಸ್ತುತ ದಿವಾಳಿಯೆದ್ದಿದ್ದೇವೆ. ಯಾರನ್ನೂ ಯಾವ ಪಕ್ಷವನ್ನೂ ನಂಬುವ ಸ್ಥಿತಿಯಲ್ಲಿ ಭಾರತವಿಲ್ಲ. ಹಾಗಿದ್ದ ಮೇಲೆ ಬರುವ ವರ್ಷ ಏನಾದರೂ ಬದಲಾವಣೆ ಸಾಧ್ಯ ಎಂದು ನಿರೀಕ್ಷಿಸುವುದು ನನ್ನಿಂದ ಸಾಧ್ಯವಾಗುತ್ತಿಲ್ಲ.

New Year Resolution | ಇನ್ನು ಇರುವಷ್ಟು ಕಾಲ ಇರುವಂತೆಯೇ ಇರಬೇಕೆಂದು ಅಂದುಕೊಂಡಿದ್ದೇನೆ: ಕತೆಗಾರ ಎಸ್​.ಸುರೇಂದ್ರನಾಥ್
ಕತೆಗಾರ ಎಸ್​.ಸುರೇಂದ್ರನಾಥ್
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 31, 2020 | 11:03 PM

ಹೊಸ ವರ್ಷದಲ್ಲಿ ಒಂದಿಷ್ಟು ಹೊಸತನಗಳನ್ನು ಮೈಗೂಡಿಸಿಕೊಳ್ಳುವ ಕನಸು ಕಟ್ಟಿಕೊಳ್ಳುವುದು ಸಾಮಾನ್ಯ ಸಂಗತಿ. ವೈಯಕ್ತಿಕವಾಗಿ ನಾನು ಹೀಗೆ ಬದಲಾಗುತ್ತೇನೆ, ಸಮಾಜ ಹೀಗಾಗಬೇಕೆಂಬ ಆಸೆ ನನಗಿದೆ, ಸಮಾಜದ ಬದಲಾವಣೆಗೆ ನಾನು ಹೀಗೆ ಸಹಕರಿಸುತ್ತೇನೆ ಎನ್ನುವುದನ್ನು ಕತೆಗಾರ, ರಂಗ ನಿರ್ದೇಶಕ ಎಸ್.ಸುರೇಂದ್ರನಾಥ್ ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ಹಂಚಿಕೊಂಡಿದ್ದು ಹೀಗೆ..

ವೈಯಕ್ತಿಕವಾಗಿ ನಾನು ಹೀಗೆ ಬದಲಾಗಬೇಕು ಅಂದುಕೊಂಡಿದ್ದೇನೆ ಇನ್ನು ಇರುವಷ್ಟು ಕಾಲ ಇರುವಂತೆಯೇ ಇರಬೇಕೆಂದು ಅಂದುಕೊಂಡಿದ್ದೇನೆ. ಬದಲಾವಣೆಗಳನ್ನು ನಿರೀಕ್ಷಿಸುವ ವಯಸ್ಸು ನನ್ನದಲ್ಲ. ಆದರೆ, ನನ್ನಿಂದ ‘ಏನಾದರೂ’ ಸಾಧ್ಯವಾಗುತ್ತದೆ ಎನ್ನುವುದಾದಲ್ಲಿ ಖಂಡಿತಾ ಆ ಮಟ್ಟಿಗೆ ಆ ದಿಕ್ಕಿನಲ್ಲಿ ಬದಲಾಗಲು ಪ್ರಯತ್ನಿಸುತ್ತೇನೆ. ಈ ವರ್ಷದ ಪಿಡುಗಿನಿಂದ ಆವರಿಸಿದ ಖಿನ್ನತೆ, ಅನಿಶ್ಚಿತತೆ ಮುಂದುವರೆದರೂ ನಗಲು ಸಾಧ್ಯವಾಗಬೇಕು ಅನಿಸುತ್ತದೆ.

ಸಮಾಜ, ರಾಜ್ಯ ಅಥವಾ ದೇಶದಲ್ಲಿ ಇಂಥ ಬದಲಾವಣೆ ಆಗಬೇಕು ಎಂದು ನಿರೀಕ್ಷಿಸುತ್ತೇನೆ ಎಲ್ಲರಿಗೂ ಸ್ವಾತಂತ್ರ್ಯ ಸಾಧ್ಯವಾಗಬೇಕು. ಸದ್ಯದ ಭಯಭೀತ ವಾತಾವರಣ ಇದೆಯಲ್ಲಾ.. ಅದು ಸಾಮಾಜಿಕವಾಗಿರಬಹುದು, ವೈಯಕ್ತಿಕವಾಗಿರಬಹುದು – ಅದು ಇಲ್ಲವಾಗಬೇಕು. ಆದರೆ ಸದ್ಯಕ್ಕೆ ಅದು ಸಾಧ್ಯವಾಗುವ ಸನ್ನಿವೇಶ ಕಾಣೆ. ರಾಜ್ಯದಲ್ಲೂ, ದೇಶದಲ್ಲೂ ರಾಜಕೀಯವಾಗಿ ಪ್ರಸ್ತುತ ದಿವಾಳಿಯೆದ್ದಿದ್ದೇವೆ. ಯಾರನ್ನೂ ಯಾವ ಪಕ್ಷವನ್ನೂ ನಂಬುವ ಸ್ಥಿತಿಯಲ್ಲಿ ಭಾರತವಿಲ್ಲ. ಹಾಗಿದ್ದ ಮೇಲೆ ಬರುವ ವರ್ಷ ಏನಾದರೂ ಬದಲಾವಣೆ ಸಾಧ್ಯ ಎಂದು ನಿರೀಕ್ಷಿಸುವುದು ನನ್ನಿಂದ ಸಾಧ್ಯವಾಗುತ್ತಿಲ್ಲ. ಆದರೆ, ಯಾವುದೇ ನಂಬಿಕೆಯಿಲ್ಲದೇ ಹೋದಲ್ಲಿ ಬದುಕು ದುರ್ಬರವಾಗುತ್ತದಲ್ಲವಾ? ಹಾಗಾಗಿ ಬದಲಾಗುತ್ತದೆ ಏನ್ನುವ ನಂಬಿಕೆ ಇಟ್ಟುಕೊಂಡಿದ್ದೇನೆ. ಗೆಳೆಯರಲ್ಲಿ ನಂಬಿಕೆ ಇದೆ. ಆತ್ಮೀಯರಲ್ಲಿ ನಂಬಿಕೆ ಇದೆ. ಅಂದುಕೊಂಡಿದ್ದು ಸಿಗಬಹುದೇನೋ..

ಅಂಥ ಬದಲಾವಣೆ ಸಮಾಜದಲ್ಲಿ ಕಾಣಲು ನಾನು ಏನು ಮಾಡಬಲ್ಲೆ? ಬರೆಯಬೇಕು. ನಾಟಕ ಮಾಡಬೇಕು. ಆ ಮೂಲಕ ಒಂದೈದಾರು ಜನಕ್ಕಾದರೂ ಸರಿಯೇ, ಹೇಳಬೇಕು. ಅವರನ್ನು ಮುಟ್ಟಬೇಕು. ಅಷ್ಟೇ…ಆದರೂ ‘ನಾನು’ ಅನ್ನುವುದಕ್ಕಿಂತಾ ‘ನಾವು’ ಅನ್ನುವುದೇ ಮೇಲು.

ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ
ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ
ಬಿಜೆಪಿಯಲ್ಲಿದ್ದಾಗ ಒಳ್ಳೆಯವನಾಗಿದ್ದವನು ಕಾಂಗ್ರೆಸ್ ಸೇರಿ ಕೆಟ್ಟನೇ? ಶಾಸಕ
ಬಿಜೆಪಿಯಲ್ಲಿದ್ದಾಗ ಒಳ್ಳೆಯವನಾಗಿದ್ದವನು ಕಾಂಗ್ರೆಸ್ ಸೇರಿ ಕೆಟ್ಟನೇ? ಶಾಸಕ