Dr. Veena Shanteshwar‘s Birthday: ಅಪೂರ್ಣಗೊಂಡ ಮಾನವಾನುಭವವನ್ನು ವೀಣಾ ಪೂರ್ಣಗೊಳಿಸಿದ್ದಾರೆ

Shantinath Desai : ‘ಶಾಂತಿನಾಥ ದೇಸಾಯಿಯವರಿಗೆ ಅವರದೇ ಆದ ಸೂಕ್ಷ್ಮತನದಲ್ಲಿ ಹೆಣ್ಣನ್ನು ಗುರುತಿಸುವ ಶಕ್ತಿ ಇತ್ತು. ಹಾಗಾಗಿ ಅಷ್ಟಾದರೂ ವೀಣಾ ಅವರ ಕಥೆಗಳನ್ನು ಆರಂಭದ ದಿನಗಳಲ್ಲಿ ನಿಜದ ನೆಲೆಯಲ್ಲಿ ಚರ್ಚಿಸೋಕೆ ಸಾಧ್ಯವಾಯಿತು ಎನ್ನಿಸುತ್ತದೆ.’

Dr. Veena Shanteshwar‘s Birthday: ಅಪೂರ್ಣಗೊಂಡ ಮಾನವಾನುಭವವನ್ನು ವೀಣಾ ಪೂರ್ಣಗೊಳಿಸಿದ್ದಾರೆ
ಡಾ. ಎಂ. ಎಸ್. ಆಶಾದೇವಿ ಮತ್ತು ಡಾ. ವೀಣಾ ಶಾಂತೇಶ್ವರ
Follow us
|

Updated on:Feb 22, 2022 | 7:01 PM

ಡಾ. ವೀಣಾ ಶಾಂತೇಶ್ವರ | Dr. Veena Shanteshwar : ಸ್ತ್ರೀಮನ ಕ್ವಚಿತ್ತಾದದ್ದು, ಗೌಣವಾದದ್ದು, ಅದನ್ನು ಪುರುಷಲೋಕದಲ್ಲಿ ಅಷ್ಟೊಂದು ಘನತೆಯಿಂದ ನೋಡಬೇಕಾಗಿಲ್ಲ. ಹೆಣ್ಣುಮಕ್ಕಳಿಗೆ ಮಾತ್ರ ಅದು ಗೊತ್ತಾಗುತ್ತದೆ. ಪಾಪ ಅವರೇ ಬರೆದುಕೊಳ್ಳಲಿ ಬಿಡಿ… ಇವೆಲ್ಲ ಮೌಲ್ಯಮಾಪನ, ಅಧ್ಯಯನ, ದೃಷ್ಟಿಕೋನದ ಮಾತುಗಳು ಆಗಿರಬಹುದು. ಆದರೆ ಇವು ಅವಳ ಅಭಿವ್ಯಕ್ತಿಯನ್ನು ಅಪಮೌಲ್ಯೀಕರಣಗೊಳಿಸುತ್ತ ಬಂದಿವೆ. ಇದು ಒಟ್ಟು ಸ್ತ್ರೀ ಅಭಿವ್ಯಕ್ತಿಗೆ ಮಾಡುತ್ತಿರುವ ಅವಮಾನದ ಮಾತುಗಳಾಗಿ ಕೇಳಿಸುತ್ತವೆ. ಅಂದರೆ, ಯಾವ ಮಾನವಾನುಭವವೇ ಕಲೆಯ ಅನುಭವ ಎಂದು ಹೇಳುತ್ತಿದ್ದರೋ ಆ ಮಾನುಭಾವದಲ್ಲಿ ಹೆಣ್ಣಿನ ಸಂವೇದನೆ ತುಂಬಾ ಗೌಣವಾಗಿತ್ತು ಎನ್ನುವುದನ್ನೂ ನೀವು ಯಾವತ್ತೂ ಗುರುತಿಸಿಕೊಳ್ಳಲಿಲ್ಲ. ಲೇಖಕಿಯರು ಬರೆಯಲಾರಂಭಿಸಿದಾಗಲೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದೊಂದು ಊನವಾಗಿ ಕಾಣುತ್ತದೆ, ದೌರ್ಬಲ್ಯವಾಗಿ ಕಾಣುತ್ತದೆ ಹಾಗೆಯೇ ವೈಕಲ್ಯವೂ. ಇಂಥ ಸನ್ನಿವೇಶದಲ್ಲಿ ವೀಣಾ ಅಂಥವರು ಅಪೂರ್ಣಗೊಂಡ ಮಾನವಾನುಭವವನ್ನು ಪೂರ್ಣಗೊಳಿಸುತ್ತಿದ್ದಾರೆ ಎನ್ನುವ ಕೃತಜ್ಞತಾ ಭಾವವೂ ಹೊಮ್ಮಲಿಲ್ಲವಲ್ಲ? ಡಾ. ಎಂ. ಎಸ್. ಆಶಾದೇವಿ, ವಿಮರ್ಶಕಿ

*

ಯಾವ ಹೊಸ ಹೆಣ್ಣನ್ನು ಚಿತ್ರಿಸುತ್ತಿದ್ದೀವಿ ಎಂದು ನವ್ಯರು ಹೇಳಲು ಪ್ರಯತ್ನ ಪಡುತ್ತಿದ್ದರೋ ಅಂಥ ಹೆಣ್ಣನ್ನು ಚಿತ್ರಿಸುವುದಕ್ಕೆ ಸಾಧ್ಯವಾಗಿದ್ದು ಕೆಲವೇ ಕೆಲ ಲೇಖಕರಿಗೆ ಮಾತ್ರ. ಎಲ್ಲರಿಗೂ ಸಾಧ್ಯವಾಯಿತು ಎಂದು ನನಗಂತೂ ಅನ್ನಿಸಿಲ್ಲ. ಸ್ವತಃ ಅನಂತಮೂರ್ತಿಯವರು ಚಿತ್ರಿಸಲು ಪ್ರಯತ್ನಿಸಿದ ಹೆಣ್ಣು ಯಾವ ಅರ್ಥದಲ್ಲಿಯೂ ಆಧುನಿಕವಾದ ಹೆಣ್ಣಲ್ಲ. ಅವರ ಚಂದ್ರಿ ಕೂಡ ದೇಹ ಸರ್ವಸ್ವದ ಹೆಣ್ಣು ಮಾತ್ರ. ಇಡೀ ಕಾದಂಬರಿಯಲ್ಲಿ ಅವಳನ್ನು ಲೈಂಗಿಕತೆಯ ಮೂಲಕವೇ ಕಟ್ಟಿಕೊಟ್ಟಿದ್ದಾರೆ ಹೊರತು, ಅವಳ ಘನ ವ್ಯಕ್ತಿತ್ವ ಮತ್ತು ಬೌದ್ಧಿಕತೆಯ ಮೂಲಕ ಅಲ್ಲ. ಅವಳ ಅಸ್ತಿತ್ವ ಕಾಣಿಸದ ಹಾಗೆ ಇಡೀ ಕಾದಂಬರಿ ರೂಪಿತಗೊಂಡಿದೆ. ಪ್ರಾಣೇಶಾಚಾರ್ಯರಿಗೆ ಆಕೆ ಅದ್ಭುತವಾದ ಅನುಭವವನ್ನು ತಂದುಕೊಡುತ್ತಾಳೆ ಎನ್ನುವುದು ಬೇರೆ. ಆದರೆ, ಆ ಅನುಭವ ಮತ್ತದೇ ಹಳೆಯ ಹೆಣ್ಣಿನ ಚಿತ್ರಣವನ್ನೇ ಭದ್ರವಾಗಿ ಸ್ಥಾಪಿಸುತ್ತಾ ಹೋಯಿತಲ್ಲ?

‘ಅವಸ್ಥೆ’ಯಲ್ಲಿ ಗೌರಿ ಮಾತ್ರ ಇಂಟಲೆಕ್ಚುವಲ್ ಥರ ಕಾಣಿಸಿಕೊಳ್ಳುತ್ತಾಳೆ. ಕೃಷ್ಣೇಗೌಡರಿಗೆ ಪ್ಯಾರಲೈಸಿಸ್ ಆದ ಸಂದರ್ಭದಲ್ಲಿ ಗೌರಿ ಆಸ್ಪತ್ರೆಗೆ ಹೋಗುತ್ತಾಳೆ. ಪರಮಪ್ರಿಯನಾದ ಗೆಳೆಯನನ್ನು ಮುಟ್ಟುವಾಗ, ಕ್ಷಮಿಸು, ನನಗೆ ಈಗದೆಲ್ಲ ಆಗುವುದಿಲ್ಲ ಎಂಬರ್ಥದಲ್ಲಿ ಪ್ರತಿಕ್ರಿಯಿಸುತ್ತಾರೆ; ಹೆಣ್ಣಿನ ಸ್ಪರ್ಶ ಎನ್ನುವುದು ಮಾನವ ಘನತೆಯ ಸ್ಪರ್ಶದ ಅರಿವು ಎನ್ನುವುದು ಆ ಪಾತ್ರಕ್ಕೆ ಇಲ್ಲವಾಗುವುದನ್ನು ಗಮನಿಸಿ. ಕೊನೆಗೂ ಅನಂತಮೂರ್ತಿಯವರಿಗೆ ಹೊಸ ಹೆಣ್ಣನ್ನು ಕಾಣಿಸೋದಕ್ಕೆ ಸಾಧ್ಯವಾಯಿತಾದರೂ ಅವಳನ್ನು ಒಳಗಣ್ಣಿನಿಂದ ಕಾಣಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ : Shantinath Desai’s Birthday : ಮಂದಾಕಿನಿ ನಳಿನಿ ಶಾರದಾಬಾಯಿ ಬಂದಿದ್ದಾರೆ

ತೇಜಸ್ವಿಯವರು, ಕಿರಿಗೂರಿನ ಗಯ್ಯಾಳಿಗಳು ಬಿಟ್ಟರೆ, ಅವರ ಕಾದಂಬರಿಯಲ್ಲಿ ಹೆಣ್ಣು ಮೇಜರ್ ಅಬ್ಸೆನ್ಸ್. ಗಯ್ಯಾಳಿಗಳು ಎನ್ನುವ ಶೀರ್ಷಿಕೆ ಮತ್ತು ಆ ಕಾದಂಬರಿ ಅಂತ್ಯಗೊಂಡ ಬಗ್ಗೆ ನನಗೆ ತಕರಾರಿಗೆ, ಮಾರನೆಯ ದಿನ ಯಥಾಸ್ಥಿತಿಯಲ್ಲಿ ಆ ಊರಿನಲ್ಲಿ ಹೆಣ್ಣುಮಕ್ಕಳ ಬದುಕು ಸಾಗುತ್ತದೆ. ನಮ್ಮಲ್ಲಿ ಸ್ತ್ರೀವಾದಿ ಲೇಖಕರೆಂದರೆ ಲಂಕೇಶ್ ಮತ್ತು ಶಾಂತಿನಾಥ ದೇಸಾಯಿಯವರು ಮಾತ್ರ. ಅವರಿಬ್ಬರೇ ಅವಳನ್ನು ನಿಜದಲ್ಲಿ, ಸತ್ಯದಲ್ಲಿ, ಶಕ್ತಿಯಲ್ಲಿ ಗುರುತಿಸೋಕೆ ಪ್ರಯತ್ನ ಪಟ್ಟವರು. ಶಾಂತಿನಾಥರ ಕ್ಷಿತಿಜದ ಮಂದಾಕಿನಿ,  ಬಹುಶಃ ವೀಣಾ ಅವರ ನಾಯಕಿಯರಿಗೆ ಸರಿಸಮನಾಗಿ ನಿಲ್ಲುವ ಒಬ್ಬ ಹೆಣ್ಣು ಎನ್ನಿಸುತ್ತದೆ. ಏಕೆಂದರೆ, ದೇಸಾಯಿಯವರಿಗೆ ಅವರದೇ ಆದ ಸೂಕ್ಷ್ಮತನದಲ್ಲಿ ಹೆಣ್ಣನ್ನು ಸರಿಯಾಗಿ ಗುರುತಿಸುವ ಶಕ್ತಿ ಇತ್ತು. ಇಷ್ಟೆಲ್ಲ ಇದ್ದಾಗಲೇ ವೀಣಾ ಅವರ ಕಥೆಗಳನ್ನು ನಿಜದ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಮತ್ತು ಚರ್ಚಿಸುವುದಕ್ಕೆ ಸಾಧ್ಯವಾಯಿತು ಎನ್ನಿಸುತ್ತದೆ. ಬಹುಶಃ ಈ ಬಗೆಯ ಮಾತುಗಳನ್ನು ಬರೆದಿದ್ದು ಆರಂಭದ ದಿನಗಳಲ್ಲಿ ಇರಬಹುದು.

ಇನ್ನು, ಲೇಖಕರ ಹೆಣ್ಣು ಮತ್ತು ಲೇಖಕಿಯಾಗಿ ವೀಣಾ ಅವರ ಹೆಣ್ಣು, ಇಬ್ಬರನ್ನೂ ಎದುರುಬದುರು ನಿಲ್ಲಿಸಿ ನೋಡಬೇಕಿತ್ತು. ಆಗ ವೀಣಾ ಅವರ ಹೆಣ್ಣು ಹೇಗೆ ಕಾಣುತ್ತಾಳೆ ಎನ್ನುವುದನ್ನು ನೋಡಬೇಕಿತ್ತು. ನವೋದಯದಲ್ಲಿದ್ದ ಮೀಸಲಾತಿ ಪರಿಕಲ್ಪನೆಯ ಮುಂದುವರಿಕೆಯಾಗಿ ವೀಣಾ ಮತ್ತು ವೈದೇಹಿಯವರನ್ನು ಕಾಣುತ್ತಾ ಬಂದರು. ಆದರೆ ನಾವು ಅವರನ್ನು ನಿಲ್ಲಿಸಿ, ಹೊರಳು ದಾರಿಯಲ್ಲಿ, ಅವರೇ ಕಟ್ಟಿದ ಹೊಸ ಮಾರ್ಗದಲ್ಲಿ ಚರ್ಚೆ ಮಾಡಬೇಕಿತ್ತು. ಹೊಸ ಮಾರ್ಗದ ಹರಿಕಾರರಾಗಿ ವೀಣಾ ಅವರನ್ನು ಗುರುತಿಸಬೇಕಾಗಿತ್ತು. ಹೆಣ್ಣಿಗೆ ಅವಳದೇ ಆದ ದಾರಿಯಿದೆ ಅದನ್ನವಳು ಭಾವ ಮತ್ತು ಬೌದ್ಧಿಕ ಶಕ್ತಿಯಿಂದ ವಿಶಿಷ್ಟವಾಗಿ ಕಟ್ಟಿದ್ದಾಳೆ ಎನ್ನುವುದನ್ನು ನಿಮಗೆ ಅವಳ ಭಾವವನ್ನು, ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ದೇವಿ ಅಥವಾ ದೆವ್ವ ಎಂಬ ಅತಿರೇಕದಲ್ಲಿ ಅವಳನ್ನು ನೋಡುತ್ತ ಬಂದಿರಿ. ಅವಳನ್ನು ನೋಡುವ ದಾರಿಯಲ್ಲಿ ಇದ್ದಂಥ ತಪ್ಪುದಾರಿಗಳನ್ನು ಸರಿ ಮಾಡುತ್ತ ಹೋದವರಲ್ಲಿ ವೀಣಾ ಮೊದಲಿಗರೆನ್ನಿಸಿಕೊಂಡರು.

(ಮುಂದಿನ ಭಾಗವನ್ನು ನಿರೀಕ್ಷಿಸಿ)

ಭಾಗ 1 : Dr. Veena Shanteshwar‘s Birthday: ‘ವೀಣಾ ಕನ್ನಡದ ಮುಖ್ಯ ಲೇಖಕಿ ಮಾತ್ರವಲ್ಲ ಭಾರತದ ಮುಖ್ಯ ಲೇಖಕಿ’ ಎಂಎಸ್ ಆಶಾದೇವಿ

Published On - 6:17 pm, Tue, 22 February 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ