AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಕನಸು ನನಸು ಮಾಡಿಕೊಳ್ಳೋಕೆ ಏನು ಮಾಡಬೇಕು? ಹಿತೋಕ್ತಿಯ ಈ ಒಂದು ಸಾಲಿನಲ್ಲಿದೆ ಉತ್ತರ!

ಜೀವನದಲ್ಲಿ ಉತ್ಸಾಹ ಅನ್ನೋದು ನಮ್ಮ ಕನಸುಗಳೆಂಬ ಗಿಡಗಳಿಗೆ ನೀರಿದ್ದಂತೆ. ಕನಸೆಂಬ ಗಿಡಗಳಿಗೆ ನೀರೆಂಬ ಉತ್ಸಾಹವನ್ನು ಹಾಕಿದ್ರೆ, ಭವಿಷ್ಯದಲ್ಲಿ ನನಸೆಂಬ ಫಲ ದೊರೆಯುತ್ತೆ. ಇಂತಹ ಮಾತುಗಳಿಗೆ ಹಿತೋಕ್ತಿಯ ಆ ಸಾಲೇ ಸಾಕ್ಷಿಯಾಗಿದೆ. ಅಷ್ಟಕ್ಕೂ, ಕನಸನ್ನು ನನಸಾಗಿಸುವ ಆಧ್ಯಾತ್ಮದಲ್ಲಿನ ಆ ಹಿತೋಕ್ತಿಯಾದ್ರು ಯಾವುದು ಅಂದ್ರೆ.. ಜೀವನದಲ್ಲಿ ಉತ್ಸಾಹವಿದ್ರೆ ಕನಸನ್ನು.. ಜೀವನದಲ್ಲಿ ಉತ್ಸಾಹವಿದ್ರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗೇ ತೆರೆಯುತ್ತೆ. ಈ ಮಾತಿಗೆ ಸಾಕ್ಷಿಯಾಗಿರೋದು ಮೈಕ್ರೋಸಾಫ್ಟ್​ನ ಕೋ ಫೌಂಡರ್, ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಬಿಲ್​ ಗೇಟ್ಸ್. ಬಿಲ್ ಗೇಟ್ಸ್​ ಪ್ರತಿನಿತ್ಯ […]

ನಿಮ್ಮ ಕನಸು ನನಸು ಮಾಡಿಕೊಳ್ಳೋಕೆ ಏನು ಮಾಡಬೇಕು? ಹಿತೋಕ್ತಿಯ ಈ ಒಂದು ಸಾಲಿನಲ್ಲಿದೆ ಉತ್ತರ!
ಬಿಲ್ ಗೇಟ್ಸ್ (ಸಂಗ್ರಹ ಚಿತ್ರ)
ಆಯೇಷಾ ಬಾನು
| Edited By: |

Updated on: Sep 08, 2020 | 5:32 PM

Share

ಜೀವನದಲ್ಲಿ ಉತ್ಸಾಹ ಅನ್ನೋದು ನಮ್ಮ ಕನಸುಗಳೆಂಬ ಗಿಡಗಳಿಗೆ ನೀರಿದ್ದಂತೆ. ಕನಸೆಂಬ ಗಿಡಗಳಿಗೆ ನೀರೆಂಬ ಉತ್ಸಾಹವನ್ನು ಹಾಕಿದ್ರೆ, ಭವಿಷ್ಯದಲ್ಲಿ ನನಸೆಂಬ ಫಲ ದೊರೆಯುತ್ತೆ. ಇಂತಹ ಮಾತುಗಳಿಗೆ ಹಿತೋಕ್ತಿಯ ಆ ಸಾಲೇ ಸಾಕ್ಷಿಯಾಗಿದೆ. ಅಷ್ಟಕ್ಕೂ, ಕನಸನ್ನು ನನಸಾಗಿಸುವ ಆಧ್ಯಾತ್ಮದಲ್ಲಿನ ಆ ಹಿತೋಕ್ತಿಯಾದ್ರು ಯಾವುದು ಅಂದ್ರೆ..

ಜೀವನದಲ್ಲಿ ಉತ್ಸಾಹವಿದ್ರೆ ಕನಸನ್ನು.. ಜೀವನದಲ್ಲಿ ಉತ್ಸಾಹವಿದ್ರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗೇ ತೆರೆಯುತ್ತೆ. ಈ ಮಾತಿಗೆ ಸಾಕ್ಷಿಯಾಗಿರೋದು ಮೈಕ್ರೋಸಾಫ್ಟ್​ನ ಕೋ ಫೌಂಡರ್, ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಬಿಲ್​ ಗೇಟ್ಸ್.

ಬಿಲ್ ಗೇಟ್ಸ್​ ಪ್ರತಿನಿತ್ಯ 100 ಕೋಟಿಗಿಂತಲೂ ಹೆಚ್ಚು ಹಣವನ್ನು ಗಳಿಸ್ತಾರೆ. ವಿಲಿಯಂ ಹೆನ್ರಿ ಗೇಟ್ಸ್ ವಾಷಿಂಗ್ಟನ್​ನ ಸಿಯಾಟಲ್​ನಲ್ಲಿ 28 ಅಕ್ಟೋಬರ್ 1955​ ರಲ್ಲಿ ಜನಿಸಿದ್ರು. ಇವರ ತಂದೆ ವಿಲಿಯಂ ಹೆಚ್ ಗೇಟ್ಸ್ ವಕೀಲರಾಗಿದ್ರು. ಬಿಲ್ ​ಗೇಟ್ಸ್​ ತಂದೆ-ತಾಯಿಗೆ ಮಗನನ್ನ ಲಾ ಓದಿಸಬೇಕೆಂಬ ಆಸೆ ಇತ್ತು. ಆದ್ರೆ ಬಿಲ್​ ಗೇಟ್ಸ್​ಗೆ ಕಂಪ್ಯೂಟರ್​ ಹಾಗೂ ಅದರ ಪ್ರೋಗ್ರಾಮಿಂಗ್​ನಲ್ಲಿ ಬಹಳ ಆಸಕ್ತಿ ಇತ್ತು.

ಲೇಕ್ ಸೈಡ್ ಶಾಲೆಯಲ್ಲಿ ಓದುತ್ತಿದ್ದ ಬಿಲ್​ ಗೇಟ್ಸ್​ಗೆ ಕಂಪ್ಯೂಟರ್ ಬಗ್ಗೆ ಹೆಚ್ಚು ತಿಳಿಯಲು ಶಾಲೆಯ ವತಿಯಿಂದ ಕಂಪ್ಯೂಟರ್ ನೀಡಲಾಗಿತ್ತು. ಇದ್ರಿಂದ ಬಿಲ್​ ಗೇಟ್ಸ್​ಗೆ ಕಂಪ್ಯೂಟರ್​ ಮೇಲಿನ ಆಸಕ್ತಿ ಇನ್ನೂ ಹೆಚ್ಚಿತು. ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತೆ ಅಂತಾ ತಿಳಿಯೋ ಆಸಕ್ತಿ ಮೂಡಿತು. ತಮ್ಮ 13 ನೇ ವಯಸ್ಸಲ್ಲಿ ಬೇಸಿಕ್ ಕಂಪ್ಯೂಟರ್ ಲ್ಯಾಂಗ್ವೇಜ್​ನಲ್ಲಿ ಟಿಕ್ ಟಾಕ್ ಟೋ ಎಂಬ ಗೇಮಿಂಗ್ ಪ್ರೋಗ್ರಾಂ ಸೃಷ್ಟಿಸಿದ್ರು. ಇದರ ವಿಶೇಷ ಏನು ಅಂದ್ರೆ ಇದು ಕೇವಲ ಒಬ್ಬರೇ ಆಡುವ ಆಟವಾಗಿತ್ತು.

ಒಮ್ಮೆ ಬಿಲ್ ​ಗೇಟ್ಸ್​ ಶಾಲೆಯಲ್ಲಿದ್ದಾಗ ಇವರ ಸೀನಿಯರ್ ಆಗಿದ್ದ ಪಾಲ್ ಅಲೇನ್​ರನ್ನು ಭೇಟಿಯಾದ್ರು. ಇಬ್ಬರಿಗೂ ಕಂಪ್ಯೂಟರ್​ನಲ್ಲಿ ಆಸಕ್ತಿ ಇತ್ತು. 1970ರಲ್ಲಿ 15 ನೇ ವಯಸ್ಸಲ್ಲಿ ಸ್ನೇಹಿತನ ಜೊತೆ ಸೇರಿ ನಗರದ ಟ್ರಾಫಿಕ್ ಪ್ಯಾಟ್ರನ್ ನೋಡಿಕೊಳ್ಳಲು ಪ್ರೋಗ್ರಾಮಿಂಗ್ ಮಾಡಿದ್ರು. ಶಾಲೆಯ ಓದು ಮುಗಿಸಿದ ಬಿಲ್ ​ಗೇಟ್ಸ್ 1973ರಲ್ಲಿ ಉತ್ತೀರ್ಣಗೊಂಡು ಹಾರ್ವರ್ಡ್ ಯೂನಿವರ್ಸಿಟಿಗೆ ಅಡ್ಮಿಷನ್ ಆದ್ರು.

ಆದ್ರೆ ಇವರಿಗೆ ಇಲ್ಲಿ ಸುಮ್ಮನೆ ಕಾಲಹರಣವಾಗ್ತಿದೆ ಅನ್ನಿಸ್ತು. ಅತೀವ ಉತ್ಸಾಹದಿಂದ ಮಹತ್ತರವಾದದ್ದನ್ನು ಸಾಧಿಸುವ ಕನಸು ಹೊಂದಿದ್ರು. ಆ ಕನಸಿನ ಬೆನ್ನತ್ತಿ ಹೊರಟ ಇವರು 2 ವರ್ಷದ ನಂತರ ಗ್ರಾಜುಯೇಷನ್ ಮಾಡದೆಯೇ ಕಾಲೇಜ್ ಬಿಟ್ಟು ಹೊರಬಂದ್ರು.

ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿ ಕಾಲೇಜಿನಿಂದ ಹೊರ ಬಂದ ಬಿಲ್​ ಗೇಟ್ಸ್​ ತಮ್ಮದೇ ಸ್ವಂತ ಕಂಪನಿ ನಡೆಸಲು ನಿರ್ಧರಿಸಿದ್ರು. ಏಪ್ರಿಲ್ 4, 1975 ರಂದು ಸ್ನೇಹಿತ ಪಾಲ್ ಅಲೆನ್ ಜೊತೆಗೂಡಿ ಮೈಕ್ರೋಸಾಫ್ಟ್ ಕಂಪನಿ ಸ್ಥಾಪಿಸಿದ್ರು. ಕೆಲವೇ ವರ್ಷಗಳಲ್ಲಿ ಸಾಫ್ಟ್​ವೇರ್ ಜಗತ್ತಿನ ಉನ್ನತ ಸ್ಥಾನಕ್ಕೇರಿದ್ರು.

ಶ್ರದ್ಧೆ, ಪರಿಶ್ರಮ, ಛಲ, ಉತ್ಸಾಹ ಇದ್ರೆ ಜಗತ್ತಲ್ಲಿ ಏನು ಬೇಕಾದ್ರೂ ಸಾಧಿಸಬಹುದು. ಕನಸನ್ನು ನನಸಾಗಿಸಿಕೊಳ್ಳಬಹುದು ಅಂತಾ ಬಿಲ್ ​ಗೇಟ್ಸ್ ತೋರಿಸಿಕೊಟ್ಟಿದ್ದಾರೆ.

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ