AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೂದಲಿನ ಆರೋಗ್ಯ ಹೆಚ್ಚಿಸುವ ನೈಸರ್ಗಿಕವಾದ ಹೇರ್ ಕಂಡಿಷನರ್ ಮತ್ತು ಹಣ್ಣುಗಳು

ಸುಂದರವಾದ ಕೂದಲು ಬೇಕೆನ್ನುವ ಮಹಿಳೆಯರು ಅದಕ್ಕಾಗಿ ತುಂಬಾನೆ ಕಷ್ಟ ಪಡ್ತಾರೆ. ಒಂದು ವೇಳೆ ಸುಂದರವಾದ ಉದ್ದ ಕೂದಲು ಇದ್ರೂ ಅದ್ರಲ್ಲಿ ಸಾವಿರಾರು ಸಮಸ್ಯೆಗಳಿರುತ್ತೆ. ನಯವಾದ ಹೊಳೆಯುವ ಕೂದಲು ಪಡೆಯಬೇಕಂದ್ರೆ ನೀವೂ ಕಂಡಿಷನರ್ ಬಳಸೋದು ಕಾಮನ್. ಆದ್ರೆ ಕೆಮಿಕಲ್ ಇರುವ ಕಂಡಿಷನರ್ ಬಳಸೋ ಬದಲು ನ್ಯಾಚುರಲ್ ಆಗಿ ಹಣ್ಣುಗಳಿಂದ ತಯಾರಿಸಿ ಬಳಸಬಹುದಾದ ಕಂಡಿಷನರ್ ಬಗ್ಗೆ ಇಲ್ಲಿದೆ ಮಾಹಿತಿ. ತಲೆಕೂದಲ ಸಮಸ್ಯೆಗಳ ನಿವಾರಣೆಗೆ ನಿಂಬೆಹಣ್ಣು ಪ್ರಮುಖವಾದದ್ದು. ನಿಂಬೆ ಹಣ್ಣಿನಲ್ಲಿ ನೈಸರ್ಗಿಕ ಸಿಟ್ರಸ್‌ ಇರುವುದರಿಂದ ಇದು ನಿಮ್ಮ ಡಾಂಡ್ರಫ್‌ ಸಮಸ್ಯೆಗೆ ರಾಮಬಾಣವಿದ್ದಂತೆ. […]

ಕೂದಲಿನ ಆರೋಗ್ಯ ಹೆಚ್ಚಿಸುವ ನೈಸರ್ಗಿಕವಾದ ಹೇರ್ ಕಂಡಿಷನರ್ ಮತ್ತು ಹಣ್ಣುಗಳು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Oct 14, 2019 | 5:00 PM

Share

ಸುಂದರವಾದ ಕೂದಲು ಬೇಕೆನ್ನುವ ಮಹಿಳೆಯರು ಅದಕ್ಕಾಗಿ ತುಂಬಾನೆ ಕಷ್ಟ ಪಡ್ತಾರೆ. ಒಂದು ವೇಳೆ ಸುಂದರವಾದ ಉದ್ದ ಕೂದಲು ಇದ್ರೂ ಅದ್ರಲ್ಲಿ ಸಾವಿರಾರು ಸಮಸ್ಯೆಗಳಿರುತ್ತೆ. ನಯವಾದ ಹೊಳೆಯುವ ಕೂದಲು ಪಡೆಯಬೇಕಂದ್ರೆ ನೀವೂ ಕಂಡಿಷನರ್ ಬಳಸೋದು ಕಾಮನ್. ಆದ್ರೆ ಕೆಮಿಕಲ್ ಇರುವ ಕಂಡಿಷನರ್ ಬಳಸೋ ಬದಲು ನ್ಯಾಚುರಲ್ ಆಗಿ ಹಣ್ಣುಗಳಿಂದ ತಯಾರಿಸಿ ಬಳಸಬಹುದಾದ ಕಂಡಿಷನರ್ ಬಗ್ಗೆ ಇಲ್ಲಿದೆ ಮಾಹಿತಿ.

ತಲೆಕೂದಲ ಸಮಸ್ಯೆಗಳ ನಿವಾರಣೆಗೆ ನಿಂಬೆಹಣ್ಣು ಪ್ರಮುಖವಾದದ್ದು. ನಿಂಬೆ ಹಣ್ಣಿನಲ್ಲಿ ನೈಸರ್ಗಿಕ ಸಿಟ್ರಸ್‌ ಇರುವುದರಿಂದ ಇದು ನಿಮ್ಮ ಡಾಂಡ್ರಫ್‌ ಸಮಸ್ಯೆಗೆ ರಾಮಬಾಣವಿದ್ದಂತೆ. ಜೊತೆಗೆ ಸಾಫ್ಟ್ ಆದ ಕೂದಲನ್ನು ಪಡೆಯಬಹುದು.

ಸೇಬುಹಣ್ಣಿನ ಸೇವನೆಯಿಂದ ಕೂದಲಿನ ಬುಡ ಸ್ಟ್ರಾಂಗ್ ಆಗುವುದು ಮಾತ್ರವಲ್ಲದೇ ಕೂದಲಿನ ಬೆಳವಣಿಗೆಗೂ ಸಹಾಯಕವಾಗುವುದು. ಅಲ್ಲದೆ ಆ್ಯಪಲ್ ಸಿಡರ್ ವೆನಿಗರ್ ಬೆಸ್ಟ್ ಹೇರ್ ಕಂಡಿಷನರ್. ಕೂದಲ ಬೆಳವಣಿಗೆಗೆ ಅವಾಕಾಡೋ ಹಣ್ಣು ಅಥವಾ ಬೆಣ್ಣೆ ಹಣ್ಣು ಸಹಾಯಕ. ವಿಟಮಿನ್‌ ಬಿ, ಸಿ ಹಾಗೂ ಇ ಅವಾಕಾಡೋ ಹಣ್ಣಿನಲ್ಲಿ ಹೇರಳವಾಗಿದೆ. ಬಟರ್ ಫ್ರೂಟ್ ಅಂತಲೂ ಕರೆಯಲ್ಪಡುವ ಈ ಹಣ್ಣಿನ ಹೇರ್ ಪ್ಯಾಕ್ ಕೂದಲಿಗೆ ಪೋಷಣೆ ನೀಡೋದ್ರ ಜೊತೆಗೆ ಹೊಳೆಯುವಂತೆ ಮಾಡುತ್ತೆ.

ಸೊಂಪಾದ ಕೂದಲಿಗೆ ಬಾಳೆಹಣ್ಣು ಸೇವನೆ ಉತ್ತಮ. ಜೊತೆಗೆ ಬಾಳೆ ಹಣ್ಣಿನ ಹೇರ್ ಪ್ಯಾಕ್​ನಿಂದ ಸಾಕಷ್ಟು ಪ್ರಯೋಜನಗಳಿವೆ. ನಿರ್ಜಿವ ಕೂದಲಿಗೆ ಜೀವ ತುಂಬಲು ಬಾಳೆಹಣ್ಣಿನ ಪ್ಯಾಕ್ ಟ್ರೈ ಮಾಡಿ. ವಿಟಮಿನ್‌ ಸಿ ಹೇರಳವಾಗಿರುವ ಕಿತ್ತಳೆ ಹಣ್ಣಿನ ಸೇವನೆಯೂ ಸಹ ಕೂದಲ ಆರೋಗ್ಯಕ್ಕೆ ಉತ್ತಮ. ಜೊತೆಗೆ ಕಿತ್ತಳೆ ಹಣ್ಣಿನ ಹೇರ್ ಪ್ಯಾಕ್​ನಿಂದ ಆರೋಗ್ಯಕಾರಿ ಕೂದಲನ್ನು ಪಡೆಯಬಹುದು. ಜೊತೆಗೆ ಕೂದಲ ಶೈನ್ ಕೂಡ ಹೆಚ್ಚುತ್ತೆ.

ವಿಟಮಿನ್‌ ಎ ಪೈನಾಪಲ್‌ ಹಣ್ಣಿನಲ್ಲಿ ಹೇರಳವಾಗಿದೆ. ಪೈನಾಪಲ್ ಸೇವನೆಯಿಂದ ಹಾಗೂ ಹೇರ್ ಪ್ಯಾಕ್ ಬಳಸೋದ್ರಿಂದ ನಿಮ್ಮ ನೆತ್ತಿಯನ್ನು ಹೆಲ್ತಿಯಾಗಿರಿಸುತ್ತದೆ. ನೀರಿನ ಅಂಶ ಜಾಸ್ತಿ ಇರುವ ದ್ರಾಕ್ಷಿ ಹೇರಳ ವಿಟಮಿನ್‌ನನ್ನು ಹೊಂದಿದೆ. ಇದು ನಿಮ್ಮ ಆರೋಗ್ಯ ಹಾಗೂ ಕೂದಲು ಉದುರುವಿಕೆಗೆ ರಾಮಬಾಣವಿದ್ದಂತೆ. ಆಪ್ರಿಕೊಟ್ ಕೂದಲು ಉದುರುವಿಕೆಗೆ, ಹಾಗೂ ಡ್ಯಾಮೇಜ್‌ ಹೇರ್‌ಗೆ ಇದು ನೈಸರ್ಗಿಕ ಪರಿಹಾರವಿದ್ದಂತೆ. ಇದು ಉತ್ತಮ ಹೇರ್‌ ಕಂಡೀಶನರ್‌ ಆಗಿ ಕಾರ್ಯನಿರ್ವಹಿಸುತ್ತದೆ.

ಪೇರಲೆ ಹಣ್ಣಿನಲ್ಲಿ ವಿಟಮಿನ್‌ ಎ ಅಧಿಕವಾಗಿರುತ್ತದೆ. ಇದರಿಂದ ಕೂದಲು ಉದುರುವುದು ಹಾಗೂ ತಲೆಹೊಟ್ಟು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹಾಗೂ ಕೂದಲ ಸಮಸ್ಯೆಗೆ ಸ್ಟ್ರಾಬೆರಿ ಹಣ್ಣಿನ ಸೇವನೆ ಉತ್ತಮ. ಅಷ್ಟೇಅಲ್ಲಾ ಸ್ಟ್ರಾಬರಿ ಹಣ್ಣಿನ ಪ್ಯಾಕ್ ತಯಾರಿಸಿ ಬಳಸೋದ್ರಿಂದ ಹೆಲ್ತಿ ಹೇರ್ ಪಡೆಯಬಹುದು.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?