AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ಪ್ರೀತಿಯಲ್ಲಿದ್ದಾಗಲೇ ಅನಾಮಿಕನಿಗೆ ಮುತ್ತಿಟ್ಟೆ.. ಈ ವಿಷಯವನ್ನು ನನ್ನ ಹುಡುಗನಿಗೆ ಹೇಳಲೇ..?

ಈ ರೀತಿಯ ಘಟನೆ ಅನೇಕರ ಬಾಳಲ್ಲಿ ನಡೆದಿರಬಹುದು. ಆಗ ಏನು ಮಾಡಬೇಕು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಈ ಪ್ರಶ್ನೆಗೆ ತಜ್ಞರು ಉತ್ತರಿಸಿದ್ದಾರೆ.

Valentine's Day: ಪ್ರೀತಿಯಲ್ಲಿದ್ದಾಗಲೇ ಅನಾಮಿಕನಿಗೆ ಮುತ್ತಿಟ್ಟೆ.. ಈ ವಿಷಯವನ್ನು ನನ್ನ ಹುಡುಗನಿಗೆ ಹೇಳಲೇ..?
ಸಾಂದರ್ಭಿಕ ಚಿತ್ರ
ರಾಜೇಶ್ ದುಗ್ಗುಮನೆ
| Edited By: |

Updated on: Feb 10, 2021 | 4:17 PM

Share

ಆ ದಿನ ನನಗೆ ತುಂಬಾನೇ ಯಮಯಾತನೆ ಆಗಿತ್ತು. ನನ್ನ ಬಾಯ್​ಫ್ರೆಂಡ್ ಜತೆ ಜಗಳ ಮಾಡಿಕೊಂಡಿದ್ದೆ. ಜಗಳ ಸಾಮಾನ್ಯ ಹಂತವನ್ನೂ ಮೀರಿ, ಬ್ರೇಕಪ್​ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಿತ್ತು. ನನಗೂ ಗೊತ್ತು, ಈ ಸಂಬಂಧ ಅಷ್ಟು ಸುಲಭಕ್ಕೆ ಮುರಿದು ಬೀಳುವಂತದ್ದಲ್ಲ ಎಂದು. ಆಗ, ನನ್ನ ಮೊಬೈಲ್​ ರಿಂಗಣಿಸಿತು. ದೂರವಾಣಿಯಲ್ಲಿ ಮತ್ತೊಂದು ಕಡೆಯಲ್ಲಿದ್ದ ಗೆಳತಿ ಪಾರ್ಟಿಗೆ ಆಹ್ವಾನ ನೀಡಿದ್ದಳು. ನಾನು ತಡಮಾಡದೆ ಪಾರ್ಟಿ ಬಟ್ಟೆ ತೊಟ್ಟು ಕ್ಯಾಬ್​ ಹಿಡಿದು ಹೊರಟೆ.

ಪಾರ್ಟಿಯಲ್ಲಿ ಗುಂಡು-ತುಂಡು ಎಲ್ಲವೂ ಇತ್ತು. ಅಂದಿನ ಪಾರ್ಟಿಯಲ್ಲಿ ನಾನು ಉದ್ದೇಶಪೂರ್ವಕವಾಗಿಯೇ ಕುಡಿದೆ. ಆ ವೇಳೆ ಪಾರ್ಟಿಗೆ ಬಂದಿದ್ದ ಒಬ್ಬನ ಪರಿಚಯವಾಗಿತ್ತು. ಬಾಯ್​​ಫ್ರೆಂಡ್​ ಮೇಲಿದ್ದ ಸಿಟ್ಟು ಹಾಗೂ ಕುಡಿದ ಮದ್ಯ ನನ್ನ ಬುದ್ಧಿಯ ದಾರಿಯನ್ನು ತಪ್ಪಿಸಿತ್ತು. ಆಗಷ್ಟೇ ಪರಿಚಯವಾಗಿದ್ದ ಹುಡುಗನ ಜತೆ ಕ್ಲೋಸ್​ ಆಗಿ ಮೂವ್​ ಮಾಡಿದ್ದೆ. ಸಿಕ್ಕ ಐದು ನಿಮಿಷದ ಪ್ರೈವಸಿಯಲ್ಲಿ ಇಬ್ಬರೂ ತಬ್ಬಿಕೊಂಡು ಮುತ್ತಿಟ್ಟೆವು…

ಆಗ ನನಗೆ ಬಾಯ್​ಫ್ರೆಂಡ್​ ನೆನಪಾಗಿದ್ದ. ಆತನ ಮುಖ ನನ್ನ ಕಣ್ಣಿಗೆ ಕಟ್ಟಿತ್ತು. ಕುಡಿದ ಮದ್ಯವೆಲ್ಲ ಒಮ್ಮೆಲೇ ದೇಹದಿಂದ ಹರಿದು ಹೋದಂತೆ ಭಾಸವಾಗಿತ್ತು. ನಾನು ತಬ್ಬಿದ್ದ ವ್ಯಕ್ತಿಯನ್ನು ಜೋರಾಗಿ ತಳ್ಳಿದೆ. ಆತ ನೆಲಕ್ಕೆ ಬಿದ್ದನೆನಿಸುತ್ತದೆ.. ಅದನ್ನು ನೋಡದೆಯೇ ಕ್ಯಾಬ್​ ಹಿಡಿದು ಮನೆಗೆ ಬಂದುಬಿಟ್ಟೆ. ನನಗೆ ತಪ್ಪಿನ ಅರಿವಾಗಿದೆ. ಈ ತಪ್ಪನ್ನು ಮತ್ತೆ ಮಾಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ. ಈಗ ನನ್ನಲ್ಲಿರುವ ಪ್ರಶ್ನೆ ಒಂದೇ! ಈ ಘಟನೆಯನ್ನು ಬಾಯ್​ಫ್ರೆಂಡ್​ಗೆ ಹೇಳಬೇಕಾ ಅಥವಾ ಬೇಡವಾ? ಹೇಳಿದರೆ, ಸಂಬಂಧ ಮುರಿದು ಬಿದ್ದರೆ ಎನ್ನುವ ಭಯ.

ಈ ರೀತಿಯ ಘಟನೆ ಅನೇಕರ ಬಾಳಲ್ಲಿ ನಡೆದಿರಬಹುದು. ಆಗ ಏನು ಮಾಡಬೇಕು ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಈ ಪ್ರಶ್ನೆಗೆ ತಜ್ಞರು ಉತ್ತರಿಸಿದ್ದಾರೆ.

ಮನಿಶಾ, ಸ್ತ್ರೀ ರೋಗ ತಜ್ಞೆ ನೀವು ಆತನಿಗೆ ಈ ವಿಚಾರ ಹೇಳದೇ ಇರುವುದೇ ಒಳಿತು. ನಿಮಗೆ ಆತ ಬೇಕು ಎನ್ನುವುದು ಮನಸ್ಸಲ್ಲಿದೆ ಅಲ್ಲವೇ? ಹೀಗಿರುವಾಗ, ನೀವು ಮುಂದಿನ ದಿನಗಳಲ್ಲಿ ಮತ್ತೆ ಆತನೊಂದಿಗೆ ಎಲ್ಲವನ್ನೂ ಸರಿ ಮಾಡಿಕೊಂಡು ನಡೆಯುತ್ತೀರಿ ಎನ್ನುವ ನಂಬಿಕೆ ಇದೆ ಎಂದುಕೊಂಡಿದ್ದೇನೆ. ಹೀಗಿರುವಾಗ, ಈ ತಪ್ಪು ಮತ್ತೆ ಆಗದಂತೆ ನೋಡಿಕೊಳ್ಳಿ. ಒಂದೊಮ್ಮೆ ನೀವು ಈ ವಿಚಾರವನ್ನು ಬಾಯ್​ಫ್ರೆಂಡ್​ಗೆ ಹೇಳಿದರೆ, ಆತ ಇದನ್ನು ಹೇಗೆ ಬೇಕಿದ್ದರೂ ಸ್ವೀಕರಿಸಬಹುದು. ನಿಮ್ಮ ಪರಿಸ್ಥಿತಿ ಅರ್ಥವಾಗದೇ ಆತ ನಿಮ್ಮನ್ನು ಬಿಟ್ಟು ಹೋಗಬಹುದು!

ಕವಿತಾ ಶರ್ಮಾ, ಉಪನ್ಯಾಸಕಿ ತಪ್ಪಿತಸ್ಥ ಭಾವನೆಗಿಂತ ದೊಡ್ಡ ವೈರಿ ಮತ್ತೊಂದಿಲ್ಲ. ನೀವು ಈಗ ಮಾಡಿರುವ ತಪ್ಪನ್ನು ಆತನ ಬಳಿ ಹೇಳಿಕೊಳ್ಳದೇ ಹೋದರೆ… ಮುಂದೊದು ದಿನ ತಪ್ಪಿತಸ್ಥ ಭಾವನೆ ನಿಮ್ಮನ್ನು ಕಾಡಬಹುದು. ಪ್ರತಿ ಬಾರಿ ಆತ ಪ್ರೀತಿ ತೋರಿಸಿದಾಗಲೂ ನಿಮ್ಮಲ್ಲಿರುವ ತಪ್ಪಿತಸ್ಥ ಭಾವನೆ ನಿಮ್ಮನ್ನು ಕೊಲ್ಲಲು ಆರಂಭಿಸಬಹುದು. ಹೀಗಾಗಿ, ಆತನ ಬಳಿ ತಪ್ಪನ್ನು ಹೇಳಿಕೊಳ್ಳಿ. ಅಷ್ಟೇ ಅಲ್ಲ, ಆತನನ್ನು ಸಂಪೂರ್ಣವಾಗಿ ಮನವೊಲಿಸಲು ಪ್ರಯತ್ನಿಸಿ. ಇದನ್ನು ಮೆಸೇಜ್​ ಅಥವಾ ಕಾಲ್​ನಲ್ಲಿ ಹೇಳದೆ ಮುಖಾಮುಖಿ ಭೇಟಿಯಲ್ಲಿ ವಿವರಿಸಿ.

ಇದನ್ನೂ ಓದಿ: ಆತ ನಿಮ್ಮನ್ನು ಪ್ರೀತಿಸುತ್ತಿದ್ದಾನೆಯೇ ಎಂದು ತಿಳಿಯಲು ಇಲ್ಲಿವೆ ಐದು ಮಾರ್ಗಗಳು!

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ