
ವಿದ್ಯಾಗಿಂತ ಮೊದಲು, ರಿಯಾ ಅನುಭವಿಸುತ್ತಿರುವ ಮಾನಸಿಕ ಹಿಂಸೆಗೆ ಸ್ಪಂದಿಸಿದ್ದು ದಕ್ಷಿಣ ಭಾರತದ ನಟಿ ಲಕ್ಷ್ಮಿ ಮಂಚು. ರವಿವಾರದಂದು ರಿಯಾಳ ಸ್ಥಿತಿಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾ ಟ್ವೀಟ್ ಮಾಡಿರುವ ಲಕ್ಷ್ಮಿ, ಮಾಧ್ಯಮದಲ್ಲಿ ಆಕೆಯನ್ನು ರಾಕ್ಷಸಿಯಂತೆ ಚಿತ್ರಿಸಲಾಗುತ್ತಿದೆ ಎಂದು ಹೇಳುತ್ತಾ, ಆಕೆಯೆಡೆ ಕ್ರೌರ್ಯತೆ ಬಿಟ್ಟು, ಕನಿಕರ ತೋರಿ ಎಂದು ಮಾಧ್ಯಮದವರಿಗೆ ವಿನಂತಿಸಿಕೊಂಡಿದ್ದಾರೆ.
ರಿಯಾಳನ್ನು ಸಪೋರ್ಟ್ ಮಾಡಿರುವ ಲಕ್ಷ್ಮಿ ಬಗ್ಗೆ ಮೆಚ್ಚುಗೆ ಸೂಚಿಸಿರುವ ವಿದ್ಯಾ ಬಾಲನ್, ರಿಯಾ ಅನುಭವಿಸುತ್ತಿರುವ ಸಂಕಟ ನೋಡುತ್ತಿದ್ದರೆ, ಹೃದಯ ಕಿತ್ತುಬಂದಂತಾಗುತ್ತದೆ ಎಂದು ಹೇಳಿದ್ದಾರೆ.
‘‘ನಮ್ಮೆಲ್ಲರ ಅಚ್ಚುಮೆಚ್ಚಿನ ಯುವನಟರಾಗಿದ್ದ ಸುಶಾಂತ್ ಸಿಂಗ್ ರಜಪೂತನ ಅಕಾಲಿಕ ಮರಣವು ಒಂದು ಮಿಡಿಯಾ ಸರ್ಕಸ್ ಆಗಿ ಮಾರ್ಪಟ್ಟಿರುವುದು ನಿಜಕ್ಕೂ ದುರಂತ. ಮಿಡಿಯಾದಲ್ಲಿ ಪ್ರತಿದಿನ ರಿಯಾಳ ಚಾರಿತ್ರ್ಯವಧೆಯಾಗುತ್ತಿರುವದನ್ನು ನೋಡುತ್ತಿದ್ದರೆ ಕರುಳು ಕಿತ್ತುಬಂದಂತಾಗುತ್ತದೆ. ನಮಗೆಲ್ಲ ಗೊತ್ತಿರೋದು ಆರೋಪ ಸಾಬೀತಾಗುವವರೆಗೂ ಯಾರೊಬ್ಬರೂ ದೋಷಿಯಲ್ಲ. ಅದರಿದು ಉಲ್ಟಾ ಆದಂತಿದೆ. ನಿರ್ದೋಷಿಯೊಬ್ಬನ ಅಮಾಯಕತನ ಸಾಬೀತಾಗುವವರೆಗೆ ಅವನು ಆರೋಪಿ ಎಂದು ಬಿಂಬಿಸಲಾಗುತ್ತಿದೆ. ನ್ಯಾಯಾಂಗದ ಏಜೆನ್ಸಿಗಳು ತಮ್ಮ ಕೆಲಸ ಮಾಡುತ್ತಿವೆ. ತೀರ್ಪುಗಳನ್ನು ಹೇಳಿಬಿಡುವ ಪ್ರವೃತ್ತಿಯಿಂದ ನಾವು ದೂರವಿರವುದು ಒಳಿತು.‘‘ ಎಂದು ವಿದ್ಯಾ ಹೇಳಿದ್ದ್ದಾರೆ.