Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಚಾರ್ಯ ಚಾಣಕ್ಯ ಪ್ರಕಾರ ಈ ನಾಲ್ಕು ಜನರೊಂದಿಗೆ ಅಪ್ಪಿತಪ್ಪಿಯೂ ಜಗಳವಾಡಬಾರದಂತೆ!

Chanakya Niti: ಚಾಣ್ಯಕ್ಯ ನೀತಿಯ ಪ್ರಕಾರ ಒಬ್ಬ ಶ್ರೀಮಂತ ವ್ಯಕ್ತಿಯೊಂದಿಗೆ ಎಂದಿಗೂ ಜಗಳವಾಡಬಾರದು. ಏಕೆಂದರೆ ಅಂತಹ ವ್ಯಕ್ತಿಯು ಹಣ ಮತ್ತು ಅಧಿಕಾರದ ಬಲದಿಂದ ನಮಗೆ ಹಾನಿ ಮಾಡಬಹುದು.

ಆಚಾರ್ಯ ಚಾಣಕ್ಯ ಪ್ರಕಾರ ಈ ನಾಲ್ಕು ಜನರೊಂದಿಗೆ ಅಪ್ಪಿತಪ್ಪಿಯೂ ಜಗಳವಾಡಬಾರದಂತೆ!
ಆಚಾರ್ಯ ಚಾಣಕ್ಯ ಪ್ರಕಾರ ಈ 4 ಜನರೊಂದಿಗೆ ಅಪ್ಪಿತಪ್ಪಿಯೂ ಜಗಳವಾಡಬಾರದಂತೆ!
Follow us
ಸಾಧು ಶ್ರೀನಾಥ್​
|

Updated on: Feb 29, 2024 | 6:06 AM

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯ (Acharya Chanakya) ಬರೆದ ಕಾಲಾತೀತ ಚಾಣಕ್ಯ ನೀತಿ ಇಂದಿನ ಜೀವನದಲ್ಲಿಯೂ ಸಮಾನವಾಗಿ ಪ್ರಸ್ತುತವಾಗಿದೆ. ಅವರ ತತ್ವಾದರ್ಶಗಳನ್ನು ಪಾಲಿಸುವುದರಿಂದ ಇಂದಿಗೂ ಉತ್ತಮ ಜೀವನ ನಡೆಸಲು ಸಾಧ್ಯ. ಆದ್ದರಿಂದ, ಜನರು ಯಾವಾಗಲೂ ಆಚಾರ್ಯ ಚಾಣಕ್ಯ (Chanakya Niti) ನೀಡಿದ ಗುರಿಗಳು ಮತ್ತು ತಂತ್ರಗಳ ಬಗ್ಗೆ ಕುತೂಹಲದಿಂದ ಇರುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ ಶಾಂತಿಯುತ ಮತ್ತು ಸಂತೋಷದ ಜೀವನ ನಡೆಸಲು ಯಾರೊಂದಿಗೂ ವಾದ (Quarrel) ಮಾಡಬಾರದು. ಚಾಣಕ್ಯ ನೀತಿಯು ಯಾವ ರೀತಿಯ ಜನರೊಂದಿಗೆ ವಿವಾದ ಮಾಡಬಾರದು ಎಂದು ಹೇಳುತ್ತದೆ. ಅಂತಹ ಜನರೊಂದಿಗೆ ವಾದ ಮಾಡುವುದು ದುಬಾರಿಯಾಗಿದೆ ಮತ್ತು ನೀವು ಅವರೊಂದಿಗೆ ಕೋಪಗೊಂಡರೆ, ಅದು ನಿಮ್ಮ ಜೀವನಕ್ಕೆ ಮುಳುವಾದೀತು.

ರಹಸ್ಯ ತಿಳಿದಿರುವ ವ್ಯಕ್ತಿ ಆಚಾರ್ಯ ಚಾಣಕ್ಯರ ಪ್ರಕಾರ ಯಾವುದೇ ರಹಸ್ಯವನ್ನು ತಿಳಿದಿರುವ ವ್ಯಕ್ತಿಯೊಂದಿಗೆ ಎಂದಿಗೂ ಜಗಳವಾಡಬಾರದು. ಸಂಬಂಧಪಟ್ಟ ವ್ಯಕ್ತಿ ತನ್ನ ರಹಸ್ಯವನ್ನು ಬಹಿರಂಗಪಡಿಸಬಹುದು.

ಮೂರ್ಖ ವ್ಯಕ್ತಿ ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ಮೂರ್ಖ ವ್ಯಕ್ತಿಯೊಡನೆ ಎಂದಿಗೂ ಜಗಳವಾಡಬಾರದು. ಅಂಥವರೊಂದಿಗೆ ಸ್ನೇಹ, ದ್ವೇಷ ಸಾಧಿಸಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಏಕೆಂದರೆ ಅಂತಹವರಿಗೆ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸವು ತಿಳಿದಿರುವುದಿಲ್ಲ. ಇದು ನಿಮಗೆ ಹಾನಿ ಉಂಟುಮಾಡಬಹುದು.

Also Read: ಚಾಣಕ್ಯನ ಈ ನೀತಿಗಳು ನಿಮ್ಮ ಹಣೆಬರಹವನ್ನು ಬದಲಾಯಿಸಬಲ್ಲದು, ಜೀವನದಲ್ಲಿ ಇವುಗಳನ್ನು ಪಾಲಿಸಿ

ಆಯುಧವನ್ನು ಹೊಂದಿರುವ ವ್ಯಕ್ತಿ ಆಚಾರ್ಯ ಚಾಣಕ್ಯರ ಪ್ರಕಾರ ಕೈಯಲ್ಲಿ ಆಯುಧ ಹೊಂದಿರುವವರಿಂದ ದೂರವಿರುವುದು ಉತ್ತಮ. ಈ ಜನರೊಂದಿಗೆ ಎಂದಿಗೂ ಜಗಳವಾಡಬಾರದು. ಏಕೆಂದರೆ ಆ ವ್ಯಕ್ತಿಯು ಕೋಪದಲ್ಲಿ ಏನು ಬೇಕಾದರೂ ಮಾಡಬಹುದು. ಇವರು ಶಸ್ತ್ರಾಸ್ತ್ರಗಳೊಂದಿಗೆ ಮಾರಣಾಂತಿಕ ದಾಳಿಯನ್ನು ಸಹ ನಡೆಸಬಹುದು.

ಶ್ರೀಮಂತ ವ್ಯಕ್ತಿ ಚಾಣ್ಯಕ್ಯ ನೀತಿಯ ಪ್ರಕಾರ ಒಬ್ಬ ಶ್ರೀಮಂತ ವ್ಯಕ್ತಿಯೊಂದಿಗೆ ಎಂದಿಗೂ ಜಗಳವಾಡಬಾರದು. ಏಕೆಂದರೆ ಅಂತಹ ವ್ಯಕ್ತಿಯು ಹಣ ಮತ್ತು ಅಧಿಕಾರದ ಬಲದಿಂದ ನಮಗೆ ಹಾನಿ ಮಾಡಬಹುದು. ಇದಕ್ಕಾಗಿ ಅಂತಹವರಿಂದ ದೂರವಿರುವುದು ಮುಖ್ಯ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ