Ratha Saptami 2024: ರಥ ಸಪ್ತಮಿಯ ದಿನ ಪಾಲಿಸಬೇಕಾದ ಕೆಲವು ನಿಯಮಗಳು ಇಲ್ಲಿದೆ

Ratha Saptami: ಹಿಂದೂ ಕ್ಯಾಲೆಂಡರ್ ಪ್ರಕಾರ, ರಥ ಸಪ್ತಮಿಯನ್ನು ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನದಂದು ಆಚರಿಸಲಾಗುತ್ತದೆ. ಈ ದಿನವನ್ನು ಅಚಲ ಸಪ್ತಮಿ ಎಂದೂ ಕರೆಯುತ್ತಾರೆ. ಅಲ್ಲದೆ ಈ ದಿನ ಸೂರ್ಯನನ್ನು ಪೂಜಿಸುವ ಮೂಲಕ ಮತ್ತು ಉಪವಾಸ ಮಾಡುವುದರಿಂದ, ಒಬ್ಬ ವ್ಯಕ್ತಿ ಎಲ್ಲಾ ರೋಗ ಮತ್ತು ತನ್ನ ಜೀವನದಲ್ಲಿ ಮಾಡಿದ ಪಾಪಗಳಿಂದ ಪರಿಹಾರ ಪಡೆದುಕೊಳ್ಳುತ್ತಾನೆ ಎಂದು ನಂಬಲಾಗಿದೆ.

Ratha Saptami 2024: ರಥ ಸಪ್ತಮಿಯ ದಿನ ಪಾಲಿಸಬೇಕಾದ ಕೆಲವು ನಿಯಮಗಳು ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 15, 2024 | 3:24 PM

ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನವನ್ನು ರಥ ಸಪ್ತಮಿ (Ratha Saptami) ಎಂದು ಕರೆಯಲಾಗುತ್ತದೆ. ಈ ದಿನವನ್ನು ಅಚಲ ಸಪ್ತಮಿ ಮತ್ತು ಮಾಘಿ ಸಪ್ತಮಿ ಎಂದೂ ಕೂಡ ಕರೆಯಲಾಗುತ್ತದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಸೂರ್ಯ ದೇವನು ತನ್ನ ದೈವಿಕ ಬೆಳಕಿನಿಂದ ಇಡೀ ಬ್ರಹ್ಮಾಂಡವನ್ನು ಬೆಳಗಿಸಿದನು. ಹಾಗಾಗಿ ಸಪ್ತಮಿ ತಿಥಿ ಸೂರ್ಯ ದೇವರಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಈ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಮತ್ತು ದಾನ ಮಾಡುವ ಮೂಲಕ, ಪಾಪಗಳಿಂದ ಮುಕ್ತಿ ಪಡೆಯಬಹುದಾಗಿದೆ. ಆದರೆ ರಥ ಸಪ್ತಮಿ ವ್ರತವನ್ನು ಆಚರಣೆ ಮಾಡುವವರು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ರಥ ಸಪ್ತಮಿ ಯಾವಾಗ ಮತ್ತು ಆ ದಿನದ ಶುಭ ಸಮಯ!

ಪಂಚಾಂಗದ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯು ಫೆ. 15 ರಂದು ಬೆಳಿಗ್ಗೆ 10:13 ರಿಂದ ಪ್ರಾರಂಭವಾಗಿ ಫೆ. 16 ರಂದು ಬೆಳಿಗ್ಗೆ 08:54ಕ್ಕೆ ಕೊನೆಗೊಳ್ಳುತ್ತದೆ. ಹಾಗಾಗಿ ಸಪ್ತಮಿ ತಿಥಿಯಲ್ಲಿ ಸೂರ್ಯೋದಯ ಬಂದಿರುವ ದಿನವನ್ನು ಅಂದರೆ ಫೆ. 16 ರಂದು ಆಚರಣೆ ಮಾಡಲಾಗುತ್ತದೆ. ಈ ದಿನ ಸ್ನಾನ ಮಾಡಲು ಶುಭ ಸಮಯ, ಬೆಳಿಗ್ಗೆ 05:17 ರಿಂದ 06:59 ರವರೆಗೆ. ಪೂಜೆಗೆ ಶುಭ ಸಮಯ ಬೆಳಿಗ್ಗೆ 08:23 ರಿಂದ 11.11 ರವರೆಗೆ ಮತ್ತು ಮಧ್ಯಾಹ್ನ 12:35 ರಿಂದ 01:59 ರವರೆಗೆ.

ರಥ ಸಪ್ತಮಿಯ ದಿನದಂದು ಯಾವ ರೀತಿಯ ಆಹಾರವನ್ನು ಸೇವನೆ ಮಾಡಬೇಕು?

ಧರ್ಮಗ್ರಂಥಗಳ ಪ್ರಕಾರ, ಸೂರ್ಯ ದೇವರನ್ನು ಪೂಜಿಸಿದ ನಂತರ, ಉಪ್ಪು ಬಳಸಿದ ಆಹಾರಗಳನ್ನು ಸೇವನೆ ಮಾಡದೆಯೇ ಹಣ್ಣುಗಳನ್ನು ಮಾತ್ರ ತಿನ್ನುತ್ತಾರೋ, ಅವರು ಇಡೀ ವರ್ಷ ಸೂರ್ಯ ದೇವರನ್ನು ಪೂಜಿಸಿದಷ್ಟು ಪುಣ್ಯಗಳನ್ನು ಪಡೆಯುತ್ತಾರೆ. ಅಲ್ಲದೆ, ಜಾತಕದಲ್ಲಿ ಸೂರ್ಯನ ಸ್ಥಾನವು ಬಲವಾಗಿರುತ್ತದೆ, ಮತ್ತು ಜೀವನದಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತದೆ. ಒಂಬತ್ತು ಗ್ರಹಗಳ ರಾಜನಾದ ಸೂರ್ಯನ ಬಲವಾದ ಸ್ಥಾನದಿಂದಾಗಿ, ಸರ್ಕಾರಿ ವಲಯ, ಅಧಿಕಾರಿ ವರ್ಗ, ಪ್ರತಿಷ್ಠೆ, ಸಾಮಾಜಿಕ ಸಮೃದ್ಧಿ ಮುಂತಾದ ಕೆಲಸಗಳಲ್ಲಿ ಸೂರ್ಯನಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ: ಈ ವಾಸ್ತು ಸಲಹೆ ನಿಮಗೆ ಹಣದ ಕೊರತೆ ಬರದಂತೆ ತಡೆಯುತ್ತೆ

ರಥ ಸಪ್ತಮಿಯ ದಿನದಂದು ಏನನ್ನು ತಿನ್ನಬಾರದು?

ಪುರಾಣದಲ್ಲಿ ಹೇಳಿರುವ ಪ್ರಕಾರ ಅಚಲ ಸಪ್ತಮಿಯ ದಿನದಂದು ಉಪ್ಪು ಬಳಸಿದ ಆಹಾರವನ್ನು ಸೇವಿಸುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಈ ಉಪವಾಸವು ಅನೇಕ ಪಟ್ಟು ಪ್ರಯೋಜನಕಾರಿಯಾಗಿದೆ. ರಥ ಸಪ್ತಮಿಯ ದಿನ ಉಪವಾಸ ಮಾಡುವುದರಿಂದ ಬದುಕಿನಲ್ಲಿ ಅದೃಷ್ಟ ಒಲಿದು ಬರುತ್ತದೆ. ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಕಾಣಬಹುದಾಗಿದೆ. ಈ ಉಪವಾಸವನ್ನು ಕಟ್ಟು ನಿಟ್ಟಾಗಿ ಆಚರಿಸುವ ಮೂಲಕ ಜಾತಕದಲ್ಲಿ ಶುಭ ಫಲಿತಾಂಶಗಳನ್ನು ಪಡೆಯಬಹುದು. ಆದರೆ ಈ ದಿನ ಮಾಂಸ ಮತ್ತು ಮದ್ಯವನ್ನು ಸೇವಿಸಬಾರದು. ಅಲ್ಲದೆ, ಈ ದಿನ, ಸಂಪೂರ್ಣ ಬ್ರಹ್ಮಚರ್ಯವನ್ನು ಅನುಸರಿಸುವುದರ ಜೊತೆಗೆ, ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಬೇಕು.

ರಥ ಸಪ್ತಮಿಯ ದಿನದಂದು ಏನು ಮಾಡಬೇಕು ಮತ್ತು ಏನು ಮಾಡಬಾರದು?

-ಅಚಲ ಸಪ್ತಮಿ ಅಥವಾ ರಥ ಸಪ್ತಮಿಯಂದು ಉಪ್ಪು ತಿನ್ನುವುದನ್ನು ತಪ್ಪಿಸಬೇಕು. ಆದರೆ ಉಪ್ಪು ದಾನ ಮಾಡಲು ಮರೆಯಬೇಡಿ.

-ಈ ದಿನ, ಹಸುವಿಗೆ ಬೆಲ್ಲವನ್ನು ತಿನ್ನಿಸಬೇಕು. ಇದರಿಂದ ಶುಭ ಫಲಗಳು ಪ್ರಾಪ್ತಿಯಾಗುತ್ತದೆ.

-ರಥ ಸಪ್ತಮಿಯ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡಲು ಮರೆಯಬೇಡಿ, ಸಾಧ್ಯವಾಗದಿದ್ದರೆ ಮನೆಯಲ್ಲಿರುವ ಗಂಗಾ ಜಲವನ್ನು ಸ್ನಾನ ಮಾಡುವ ನೀರಿಗೆ ಸಿಂಪಡಿಸಿಕೊಳ್ಳಿ.

-ಅಚಲ ಸಪ್ತಮಿಯಂದು, ತಪ್ಪದೆಯೇ ಆದಿತ್ಯ ಹೃದಯ ಸ್ತೋತ್ರ, ಗಜೇಂದ್ರ ಮೋಕ್ಷ ಮತ್ತು ಸೂರ್ಯ ದೇವರ ಮಂತ್ರವನ್ನು ಪಠಿಸಿ. ‘

-ಹಲವು ವರ್ಷಗಳಾದರೂ ಮಕ್ಕಳ ಭಾಗ್ಯ ಇಲ್ಲದವರು ಈ ದಿನ ಉಪವಾಸ ಮಾಡಿ ಸೂರ್ಯ ದೇವನನ್ನು ಪೂಜಿಸಬೇಕು.

-ರಥ ಸಪ್ತಮಿಯ ದಿನದಂದು ಯಾವುದೇ ಕಾರಣಕ್ಕೂ ಕಪ್ಪು ಬಟ್ಟೆಗಳನ್ನು ಧರಿಸಬೇಡಿ, ಗೋಧಿ ಅಥವಾ ಹಳದಿ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ.

-ಈ ದಿನ, ಸೂರ್ಯ ದೇವರ ಹೆಸರಿನಲ್ಲಿ ದೀಪದ ಹಣತೆಗಳನ್ನು ದಾನ ಮಾಡಿ, ಒಳ್ಳೆಯದಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ