ಮಹಿಳೆಯರು ಆಲದ ಮರಕ್ಕೆ ದಾರ ಕಟ್ಟುವುದರ ಹಿಂದಿರುವ ಕಾರಣವೇನು? ಅದರ ಪ್ರಯೋಜನಗಳೇನು?

ಹಿಂದೂ ಧರ್ಮದಲ್ಲಿ, ಮಹಿಳೆಯರು ಆಲದ ಮರಕ್ಕೆ ದಾರ ಕಟ್ಟುವುದನ್ನು ನೀವು ನೋಡಿರಬಹುದು, ಆದರೆ ದಾರವನ್ನು ಏಕೆ ಕಟ್ಟುತ್ತಾರೆಂದು ನಿಮಗೆ ತಿಳಿದಿದೆಯೇ? ಆಲದ ಮರಕ್ಕೆ ದಾರವನ್ನು ಕಟ್ಟುವ ಪ್ರಾಮುಖ್ಯತೆ ಏನು ಮತ್ತು ಅದರ ಪ್ರಯೋಜನಗಳೇನು? ಈ ವಿಷಯದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಿಳೆಯರು ಆಲದ ಮರಕ್ಕೆ ದಾರ ಕಟ್ಟುವುದರ ಹಿಂದಿರುವ ಕಾರಣವೇನು? ಅದರ ಪ್ರಯೋಜನಗಳೇನು?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 15, 2024 | 10:46 AM

ಹಿಂದೂ ಧರ್ಮದಲ್ಲಿ, ಅನೇಕ ಮರ ಮತ್ತು ಗಿಡಗಳನ್ನು ದೇವರಂತೆಯೇ ಪೂಜಿಸಲಾಗುತ್ತದೆ. ಇದರಲ್ಲಿ ಆಲದ ಮರವೂ ಸೇರಿದೆ. ಏಕೆಂದರೆ ಈ ಮರದ ಪೂಜೆಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮರ ಮತ್ತು ಸಸ್ಯಗಳನ್ನು ಪೂಜಿಸುವುದರಿಂದ ಮನೆಯ ವಾಸ್ತು ದೋಷಗಳನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಮನೆ ಮಾಡಲು ಕೂಡ ಇದು ಸಹಕಾರಿಯಾಗಿದೆ. ಇನ್ನು ಪೂಜೆಯ ಹೊರತಾಗಿ ಮಹಿಳೆಯರು ಆಲದ ಮರಕ್ಕೆ ದಾರ ಕಟ್ಟುವುದನ್ನು ನೀವು ನೋಡಿರಬಹುದು. ಆದರೆ ದಾರವನ್ನು ಏಕೆ ಕಟ್ಟುತ್ತಾರೆಂದು ನಿಮಗೆ ತಿಳಿದಿದೆಯೇ? ಅದರ ಪ್ರಾಮುಖ್ಯತೆ ಏನು ಮತ್ತು ಅದರಿಂದ ಜನರು ಯಾವ ಪ್ರಯೋಜನಗಳನ್ನು ಪಡೆಯುತ್ತಾರೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಂಡಿತ್ ರಾಜೇಂದ್ರ ತಿವಾರಿ ಹೇಳುವ ಪ್ರಕಾರ ಬ್ರಹ್ಮ, ಶ್ರೀ ಹರಿ ಮತ್ತು ಶಿವ ಆಲದ ಮರದಲ್ಲಿ ವಾಸಿಸುತ್ತಾರೆ. ಆಲದ ಮರವು ಇತರ ಎಲ್ಲಾ ಮರಗಳಿಗಿಂತ ಹೆಚ್ಚಿನ ಜೀವಿತಾವಧಿಯನ್ನು ಹೊಂದಿದೆ, ಆದ್ದರಿಂದ ಇದನ್ನು ‘ಅಕ್ಷಯವೃಕ್ಷ’ ಎಂದೂ ಕರೆಯಲಾಗುತ್ತದೆ. ಆಲದ ಮರವು ದೈವಿಕ ಶಕ್ತಿಯನ್ನು ಒಳಗೊಂಡಿರುವುದರಿಂದ ಅದರ ಪೂಜೆಗೆ ವಿಶೇಷ ಮಹತ್ವವಿದೆ. ಅದಲ್ಲದೆ ಹಿಂದೂ ಧರ್ಮದಲ್ಲಿ, ಆಲದ ಮರವನ್ನು ಅದೃಷ್ಟ, ಆರೋಗ್ಯ ಮತ್ತು ಸಂಪತ್ತಿನ ಅನುಗ್ರಹ ಪಡೆಯಲು ಪೂಜೆ ಮಾಡಲಾಗುತ್ತದೆ. ಜೊತೆಗೆ ಮಹಿಳೆಯರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಆಲದ ಮರಕ್ಕೆ ದಾರವನ್ನು ಕಟ್ಟುತ್ತಾರೆ. ಇದರಿಂದ ದೇವತೆಗಳ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ.

ಆಲದ ಮರಕ್ಕೆ ದಾರವನ್ನು ಕಟ್ಟುವುದರ ಪ್ರಯೋಜನಗಳೇನು?

ಆಲದ ಮರವನ್ನು ಪೂಜಿಸಿದ ನಂತರ, ಅದಕ್ಕೆ ದಾರವನ್ನು ಕಟ್ಟುವುದರಿಂದ ಮಹಿಳೆಯರಿಗೆ ವಿವಾಹ ಭಾಗ್ಯ ಪ್ರಾಪ್ತವಾಗುತ್ತದೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಈ ರೀತಿ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ಸಂತೋಷ ಕಾಪಾಡಿಕೊಳ್ಳಬಹುದಾಗಿದೆ. ಅಲ್ಲದೆ, ಇದು ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಯಾವುದೇ ಸಮಸ್ಯೆ ಬರದಂತೆ ಕಾಪಾಡುತ್ತದೆ. ಜೊತೆಗೆ, ಆಲದ ಮರಕ್ಕೆ ದಾರವನ್ನು ಕಟ್ಟುವ ಮೂಲಕ, ಅಕಾಲಿಕ ಮರಣವನ್ನು ಸಹ ತಪ್ಪಿಸಬಹುದು ಎಂದು ನಂಬಲಾಗಿದೆ.

ಇದನ್ನೂ ಓದಿ: ದಿನಗಳಿಗೆ ಅನುಗುಣವಾಗಿ ವಸ್ತು ದಾನ ಮಾಡಿ, ಶುಭ ಫಲಿತಾಂಶ ಖಂಡಿತ

ಆಲದ ಮರದ ಮಹತ್ವವೇನು ಗೊತ್ತಾ?

ಹಿಂದೂ ಪುರಾಣಗಳ ಪ್ರಕಾರ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಆಲದ ಮರದಲ್ಲಿ ವಾಸಿಸುತ್ತಾರೆ. ಮರದ ಬೇರುಗಳು ಬ್ರಹ್ಮನನ್ನು ಪ್ರತಿನಿಧಿಸುತ್ತವೆ, ಆಲದ ಮರದ ಕಾಂಡವು ವಿಷ್ಣುವನ್ನು ಪ್ರತಿನಿಧಿಸುತ್ತದೆ ಮತ್ತು ಶಿವನು ಆಲದ ಮರದ ಮೇಲಿನ ಭಾಗವನ್ನು ಪ್ರತಿನಿಧಿಸುತ್ತಾನೆ ಹಾಗೂ ಈ ಇಡೀ ಮರವನ್ನು ಸಾವಿತ್ರಿ ಎಂದು ಪರಿಗಣಿಸಲಾಗುತ್ತದೆ. ಈ ಪವಿತ್ರ ಮರವನ್ನು ಪೂಜಿಸುವ ಮೂಲಕ, ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ವ್ಯಕ್ತಿಗೆ ಜೀವನದ ತೊಂದರೆಗಳಿಂದ ಪರಿಹಾರ ಸಿಗುತ್ತದೆ ಹಾಗೂ ಶಾಂತಿ, ಸುಖ, ಸಂಪತ್ತು ಎಲ್ಲವೂ ಪ್ರಾಪ್ತವಾಗುತ್ತದೆ. ಹಾಗಾಗಿ ಕಷ್ಟ ಬಂದವರು ಆಲದ ಮರಕ್ಕೆ ಪೂಜೆ ನೀಡುವುದರಿಂದ ಅದರಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಹೊಸ ಜೀವನ ಸಿಕ್ಕಿದೆ’; ಅಪಘಾತದ ನಂತರ ಮುಶೀರ್ ಖಾನ್ ಮೊದಲ ಮಾತು
‘ಹೊಸ ಜೀವನ ಸಿಕ್ಕಿದೆ’; ಅಪಘಾತದ ನಂತರ ಮುಶೀರ್ ಖಾನ್ ಮೊದಲ ಮಾತು
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?