AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshaya Tritiya: ಜ್ಯೋತಿಷ ಪ್ರಕಾರ ಅಕ್ಷಯ ತೃತೀಯಕ್ಕೆ ಯಾವ ರಾಶಿಯವರು ಏನು ಖರೀದಿಸಿದರೆ ಉತ್ತಮ?

Akshaya Tritiya: ಅಕ್ಷಯ ತೃತೀಯದ ದಿನವಾದ ಮೇ 14, 2021ರಂದು ಜ್ಯೋತಿಷ ರೀತಿಯಾಗಿ ದ್ವಾದಶ ರಾಶಿಯವರು ಏನನ್ನು ಖರೀದಿಸಿ ತಂದಲ್ಲಿ ಉತ್ತಮ ಫಲಗಳನ್ನು ಪಡೆಯುತ್ತಾರೆ? ಇಲ್ಲಿದೆ ಮಾಹಿತಿ.

Akshaya Tritiya: ಜ್ಯೋತಿಷ ಪ್ರಕಾರ ಅಕ್ಷಯ ತೃತೀಯಕ್ಕೆ ಯಾವ ರಾಶಿಯವರು ಏನು ಖರೀದಿಸಿದರೆ ಉತ್ತಮ?
ರಾಶಿ ಚಕ್ರ
Srinivas Mata
|

Updated on:May 12, 2021 | 11:18 PM

Share

ಇದೇ ಮೇ 14ನೇ ತಾರೀಕು, ಶುಕ್ರವಾರ ಅಕ್ಷಯ ತೃತೀಯ ಇದೆ. ಬಹಳ ಮಂದಿಗೆ ಗೊತ್ತಿರೋದು ಏನು ಅಂದರೆ, ಈ ದಿನ ಬೆಲೆ ಬಾಳುವ ಲೋಹಗಳು, ರತ್ನಗಳನ್ನು ಖರೀದಿ ಮಾಡಿದರೆ ಮನೆಯಲ್ಲಿ ಅವುಗಳ ಪ್ರಮಾಣ ವೃದ್ಧಿ ಆಗುತ್ತದೆ. ಸಂಪತ್ತು ಸಂಗ್ರಹ ಆಗುತ್ತದೆ. ಅದರಲ್ಲೂ ಚಿನ್ನದ ಆಭರಣಗಳನ್ನು ಖರೀದಿ ಮಾಡಿದಲ್ಲಿ, ಹೂಡಿಕೆ ಮಾಡಿದಲ್ಲಿ ಮತ್ತೂ ಒಳ್ಳೆಯದಾಗುತ್ತದೆ ಎಂಬುದೊಂದು ಭಾವನೆ ಇದೆ. ಇದನ್ನು ಅಲ್ಲಗಳೆಯುವುದಿಲ್ಲ. ಏಕೆಂದರೆ ಇದು ಹೆಸರೇ ಹೇಳುವಂತೆ ಅಕ್ಷಯ ತೃತೀಯ. ಶುಃಭ ಎನಿಸಿದ್ದೆಲ್ಲ ವೃದ್ಧಿ ಆಗುತ್ತದೆ. ಅದರ ಜತೆಗೆ ದೇವರ ಪೂಜೆಗಳು, ಜಪ- ತಪಾದಿ, ದಾನ-ಧರ್ಮಗಳನ್ನು ಸಹ ಮಾಡಿದರೆ ಶುಭ ಫಲವನ್ನು ಪಡೆಯುತ್ತೀರಿ. ವಿಶೇಷವಾಗಿ ಅಕ್ಷಯ ತೃತೀಯದಂದು ದಾನ- ಧರ್ಮಾದಿಗಳಾಗಿ ಪ್ರಾಶಸ್ತ್ಯ ಇದೆ. ನಿಮ್ಮ ಕೈ ಮೀರಿದ್ದನ್ನೂ ಯಾವ ಕಾರಣಕ್ಕೂ ಮಾಡಬೇಡಿ. ಸಾಲ ಮಾಡಿಕೊಳ್ಳಬೇಡಿ. ಈಗಿನ ಸನ್ನಿವೇಶದಲ್ಲಿ ರಿಸ್ಕ್ ತಗೊಂಡು ಮನೆಯಿಂದ ಹೊರಹೋಗಬೇಡಿ. ಆದರೆ ರಾಶಿಗೆ ಅನುಗುಣವಾಗಿ ಏನು ಮಾಡಬೇಕು ಎಂಬುದನ್ನು ತಿಳಿಯಿರಿ. ಒಂದು ವೇಳೆ ನಿಮ್ಮಿಂದ ಇದು ಸಾಧ್ಯವಾದಲ್ಲಿ ಮಾತ್ರ ಮಾಡಿ. ಇಲ್ಲದಿದ್ದಲ್ಲಿ ದೇವರ ಪೂಜೆಯನ್ನು ಶ್ರದ್ಧೆಯಿಂದ ಮಾಡಿ; ಜ್ಞಾನ, ಭಕ್ತಿ ಹಾಗೂ ಧರ್ಮ ವೃದ್ಧಿ ಮಾಡುವಂತೆ ಕೇಳಿಕೊಳ್ಳಿ. ಆರೋಗ್ಯ- ಆಯುಷ್ಯ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸಿ.

ಮೇಷ ಈ ರಾಶಿಯವರು ಕೇಸರಿ ಬಣ್ಣದ ತೊಗರಿ ಬೇಳೆಯನ್ನು ಮನೆಗೆ ಖರೀದಿಸಿ ತರಬೇಕು. ಇದು ಶಾಂತಿ ತರುತ್ತದೆ ಮತ್ತು ಗೃಹದಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.

ವೃಷಭ ಈ ರಾಶಿಯವರು ಅಕ್ಕಿ ಅಥವಾ ಕಿರುಧಾನ್ಯವನ್ನು ಖರೀದಿಬೇಕು. ಇದರಿಂದಾಗಿ ಹಣಕಾಸು ಸ್ಥಿತಿ ಉತ್ತಮಗೊಳ್ಳುತ್ತದೆ.

ಮಿಥುನ ಈ ರಾಶಿಯ ಜನರು ಹೆಸರುಬೇಳೆ, ಕೊತ್ತಂಬರಿ ಮತ್ತು ಬಟ್ಟೆಗಳನ್ನು ಖರೀದಿ ಮಾಡಬೇಕು. ಇದರಿಂದ ಒಳ್ಳೆ ಫಲಿತವನ್ನು ಪಡೆಯಬಹುದು.

ಕರ್ಕಾಟಕ ಈ ರಾಶಿಯವರು ಅಕ್ಕಿ ಮತ್ತು ಹಾಲನ್ನು ಕೊಂಡುಕೊಳ್ಳಬೇಕು. ಇದರಿಂದ ಒಳ್ಳೆ ಫಲಿತಾಂಶವನ್ನು ಕಾಣಬಹುದು.

ಸಿಂಹ ಈ ರಾಶಿಯವರು ಕೆಂಪು ಹಣ್ಣು ಅಥವಾ ತಾಮ್ರದ ಪಾತ್ರೆಗಳನ್ನು ಖರೀದಿಸಬೇಕು. ಇದರಿಂದ ಕುಟುಂಬದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ.

ಕನ್ಯಾ ಈ ರಾಶಿಯವರು ಹೆಸರು ಬೇಳೆ ಖರೀದಿಸಬೇಕು. ಇದರಿಂದ ಇವರಿಗೆ ದೈವಾಶೀರ್ವಾದ ದೊರೆಯುತ್ತದೆ.

ತುಲಾ ಇವರು ಸಕ್ಕರೆ ಮತ್ತು ಅಕ್ಕಿಯನ್ನು ಖರೀದಿಸಬೇಕು. ಹೀಗೆ ಮಾಡುವುದರಿಂದ ವೈವಾಹಿಕ ಮತ್ತು ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ.

ವೃಶ್ಚಿಕ ಈ ರಾಶಿಯವರು ಮನೆಗೆ ನೀರು ಮತ್ತು ಬೆಲ್ಲವನ್ನು ಕೊಂಡು ತರಬೇಕು. ಇದರಿಂದ ನಿಮ್ಮ ಶತ್ರುಗಳು ದುರ್ಬಲರಾಗುತ್ತಾರೆ. ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ.

ಧನುಸ್ಸು ಈ ರಾಶಿಯವರು ಮನೆಗೆ ಬಾಳೆಹಣ್ಣು ಮತ್ತು ಹಳದಿ ಅಕ್ಕಿಯನ್ನು ತರಬೇಕು. ಇದರಿಂದ ಹಲವು ಬಗೆಯಲ್ಲಿ ಉತ್ತಮ ಫಲಿತವನ್ನು ತಂದುಕೊಡುತ್ತದೆ.

ಮಕರ ಉದ್ದಿನ ಬೇಳೆ ಅಥವಾ ಮೊಸರು ಖರೀದಿಸಿ ಮನೆಗೆ ತನ್ನಿ. ಇದರಿಂದ ಕೆಟ್ಟ ದೃಷ್ಟಿ ದೂರವಾಗುತ್ತದೆ.

ಕುಂಭ ಈ ರಾಶಿಯವರು ಕಪ್ಪು ಬಣ್ಣದ ಬಟ್ಟೆ ಮತ್ತು ಕಪ್ಪು ಎಳ್ಳು ಖರೀದಿಸಬೇಕು. ಹೀಗೆ ಮಾಡುವುದರಿಂದ ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತವೆ.

ಮೀನ ಈ ರಾಶಿಯವರು ಅರಿಶಿಣ ಮತ್ತು ಕಡಲೇಕಾಳು ಖರೀದಿ ಮಾಡಬೇಕು. ಇದರಿಂದ ಆರೋಗ್ಯವು ಉತ್ತಮವಾಗುತ್ತದೆ.

ಮಾಹಿತಿ ಮೂಲ: ಅಸ್ಟ್ರೋಸೇಜ್

ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವುದು ಅದೃಷ್ಟ ತರುತ್ತದೆಯಾ? ಇಲ್ಲಿದೆ ಪೂರ್ಣ ಮಾಹಿತಿ

ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯ ಆಚರಣೆಯ ಮಹತ್ವ, ಶುಭ ಮುಹೂರ್ತ ಮತ್ತು ಇತಿಹಾಸವನ್ನು ತಿಳಿಯಿರಿ

(Akshaya Tritiya auspicious purchasing by zodiac signs on the basis of astrology)

Published On - 11:14 pm, Wed, 12 May 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!