Akshaya Tritiya: ಜ್ಯೋತಿಷ ಪ್ರಕಾರ ಅಕ್ಷಯ ತೃತೀಯಕ್ಕೆ ಯಾವ ರಾಶಿಯವರು ಏನು ಖರೀದಿಸಿದರೆ ಉತ್ತಮ?

Akshaya Tritiya: ಅಕ್ಷಯ ತೃತೀಯದ ದಿನವಾದ ಮೇ 14, 2021ರಂದು ಜ್ಯೋತಿಷ ರೀತಿಯಾಗಿ ದ್ವಾದಶ ರಾಶಿಯವರು ಏನನ್ನು ಖರೀದಿಸಿ ತಂದಲ್ಲಿ ಉತ್ತಮ ಫಲಗಳನ್ನು ಪಡೆಯುತ್ತಾರೆ? ಇಲ್ಲಿದೆ ಮಾಹಿತಿ.

Akshaya Tritiya: ಜ್ಯೋತಿಷ ಪ್ರಕಾರ ಅಕ್ಷಯ ತೃತೀಯಕ್ಕೆ ಯಾವ ರಾಶಿಯವರು ಏನು ಖರೀದಿಸಿದರೆ ಉತ್ತಮ?
ರಾಶಿ ಚಕ್ರ
Follow us
|

Updated on:May 12, 2021 | 11:18 PM

ಇದೇ ಮೇ 14ನೇ ತಾರೀಕು, ಶುಕ್ರವಾರ ಅಕ್ಷಯ ತೃತೀಯ ಇದೆ. ಬಹಳ ಮಂದಿಗೆ ಗೊತ್ತಿರೋದು ಏನು ಅಂದರೆ, ಈ ದಿನ ಬೆಲೆ ಬಾಳುವ ಲೋಹಗಳು, ರತ್ನಗಳನ್ನು ಖರೀದಿ ಮಾಡಿದರೆ ಮನೆಯಲ್ಲಿ ಅವುಗಳ ಪ್ರಮಾಣ ವೃದ್ಧಿ ಆಗುತ್ತದೆ. ಸಂಪತ್ತು ಸಂಗ್ರಹ ಆಗುತ್ತದೆ. ಅದರಲ್ಲೂ ಚಿನ್ನದ ಆಭರಣಗಳನ್ನು ಖರೀದಿ ಮಾಡಿದಲ್ಲಿ, ಹೂಡಿಕೆ ಮಾಡಿದಲ್ಲಿ ಮತ್ತೂ ಒಳ್ಳೆಯದಾಗುತ್ತದೆ ಎಂಬುದೊಂದು ಭಾವನೆ ಇದೆ. ಇದನ್ನು ಅಲ್ಲಗಳೆಯುವುದಿಲ್ಲ. ಏಕೆಂದರೆ ಇದು ಹೆಸರೇ ಹೇಳುವಂತೆ ಅಕ್ಷಯ ತೃತೀಯ. ಶುಃಭ ಎನಿಸಿದ್ದೆಲ್ಲ ವೃದ್ಧಿ ಆಗುತ್ತದೆ. ಅದರ ಜತೆಗೆ ದೇವರ ಪೂಜೆಗಳು, ಜಪ- ತಪಾದಿ, ದಾನ-ಧರ್ಮಗಳನ್ನು ಸಹ ಮಾಡಿದರೆ ಶುಭ ಫಲವನ್ನು ಪಡೆಯುತ್ತೀರಿ. ವಿಶೇಷವಾಗಿ ಅಕ್ಷಯ ತೃತೀಯದಂದು ದಾನ- ಧರ್ಮಾದಿಗಳಾಗಿ ಪ್ರಾಶಸ್ತ್ಯ ಇದೆ. ನಿಮ್ಮ ಕೈ ಮೀರಿದ್ದನ್ನೂ ಯಾವ ಕಾರಣಕ್ಕೂ ಮಾಡಬೇಡಿ. ಸಾಲ ಮಾಡಿಕೊಳ್ಳಬೇಡಿ. ಈಗಿನ ಸನ್ನಿವೇಶದಲ್ಲಿ ರಿಸ್ಕ್ ತಗೊಂಡು ಮನೆಯಿಂದ ಹೊರಹೋಗಬೇಡಿ. ಆದರೆ ರಾಶಿಗೆ ಅನುಗುಣವಾಗಿ ಏನು ಮಾಡಬೇಕು ಎಂಬುದನ್ನು ತಿಳಿಯಿರಿ. ಒಂದು ವೇಳೆ ನಿಮ್ಮಿಂದ ಇದು ಸಾಧ್ಯವಾದಲ್ಲಿ ಮಾತ್ರ ಮಾಡಿ. ಇಲ್ಲದಿದ್ದಲ್ಲಿ ದೇವರ ಪೂಜೆಯನ್ನು ಶ್ರದ್ಧೆಯಿಂದ ಮಾಡಿ; ಜ್ಞಾನ, ಭಕ್ತಿ ಹಾಗೂ ಧರ್ಮ ವೃದ್ಧಿ ಮಾಡುವಂತೆ ಕೇಳಿಕೊಳ್ಳಿ. ಆರೋಗ್ಯ- ಆಯುಷ್ಯ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸಿ.

ಮೇಷ ಈ ರಾಶಿಯವರು ಕೇಸರಿ ಬಣ್ಣದ ತೊಗರಿ ಬೇಳೆಯನ್ನು ಮನೆಗೆ ಖರೀದಿಸಿ ತರಬೇಕು. ಇದು ಶಾಂತಿ ತರುತ್ತದೆ ಮತ್ತು ಗೃಹದಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.

ವೃಷಭ ಈ ರಾಶಿಯವರು ಅಕ್ಕಿ ಅಥವಾ ಕಿರುಧಾನ್ಯವನ್ನು ಖರೀದಿಬೇಕು. ಇದರಿಂದಾಗಿ ಹಣಕಾಸು ಸ್ಥಿತಿ ಉತ್ತಮಗೊಳ್ಳುತ್ತದೆ.

ಮಿಥುನ ಈ ರಾಶಿಯ ಜನರು ಹೆಸರುಬೇಳೆ, ಕೊತ್ತಂಬರಿ ಮತ್ತು ಬಟ್ಟೆಗಳನ್ನು ಖರೀದಿ ಮಾಡಬೇಕು. ಇದರಿಂದ ಒಳ್ಳೆ ಫಲಿತವನ್ನು ಪಡೆಯಬಹುದು.

ಕರ್ಕಾಟಕ ಈ ರಾಶಿಯವರು ಅಕ್ಕಿ ಮತ್ತು ಹಾಲನ್ನು ಕೊಂಡುಕೊಳ್ಳಬೇಕು. ಇದರಿಂದ ಒಳ್ಳೆ ಫಲಿತಾಂಶವನ್ನು ಕಾಣಬಹುದು.

ಸಿಂಹ ಈ ರಾಶಿಯವರು ಕೆಂಪು ಹಣ್ಣು ಅಥವಾ ತಾಮ್ರದ ಪಾತ್ರೆಗಳನ್ನು ಖರೀದಿಸಬೇಕು. ಇದರಿಂದ ಕುಟುಂಬದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ.

ಕನ್ಯಾ ಈ ರಾಶಿಯವರು ಹೆಸರು ಬೇಳೆ ಖರೀದಿಸಬೇಕು. ಇದರಿಂದ ಇವರಿಗೆ ದೈವಾಶೀರ್ವಾದ ದೊರೆಯುತ್ತದೆ.

ತುಲಾ ಇವರು ಸಕ್ಕರೆ ಮತ್ತು ಅಕ್ಕಿಯನ್ನು ಖರೀದಿಸಬೇಕು. ಹೀಗೆ ಮಾಡುವುದರಿಂದ ವೈವಾಹಿಕ ಮತ್ತು ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ.

ವೃಶ್ಚಿಕ ಈ ರಾಶಿಯವರು ಮನೆಗೆ ನೀರು ಮತ್ತು ಬೆಲ್ಲವನ್ನು ಕೊಂಡು ತರಬೇಕು. ಇದರಿಂದ ನಿಮ್ಮ ಶತ್ರುಗಳು ದುರ್ಬಲರಾಗುತ್ತಾರೆ. ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ.

ಧನುಸ್ಸು ಈ ರಾಶಿಯವರು ಮನೆಗೆ ಬಾಳೆಹಣ್ಣು ಮತ್ತು ಹಳದಿ ಅಕ್ಕಿಯನ್ನು ತರಬೇಕು. ಇದರಿಂದ ಹಲವು ಬಗೆಯಲ್ಲಿ ಉತ್ತಮ ಫಲಿತವನ್ನು ತಂದುಕೊಡುತ್ತದೆ.

ಮಕರ ಉದ್ದಿನ ಬೇಳೆ ಅಥವಾ ಮೊಸರು ಖರೀದಿಸಿ ಮನೆಗೆ ತನ್ನಿ. ಇದರಿಂದ ಕೆಟ್ಟ ದೃಷ್ಟಿ ದೂರವಾಗುತ್ತದೆ.

ಕುಂಭ ಈ ರಾಶಿಯವರು ಕಪ್ಪು ಬಣ್ಣದ ಬಟ್ಟೆ ಮತ್ತು ಕಪ್ಪು ಎಳ್ಳು ಖರೀದಿಸಬೇಕು. ಹೀಗೆ ಮಾಡುವುದರಿಂದ ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತವೆ.

ಮೀನ ಈ ರಾಶಿಯವರು ಅರಿಶಿಣ ಮತ್ತು ಕಡಲೇಕಾಳು ಖರೀದಿ ಮಾಡಬೇಕು. ಇದರಿಂದ ಆರೋಗ್ಯವು ಉತ್ತಮವಾಗುತ್ತದೆ.

ಮಾಹಿತಿ ಮೂಲ: ಅಸ್ಟ್ರೋಸೇಜ್

ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವುದು ಅದೃಷ್ಟ ತರುತ್ತದೆಯಾ? ಇಲ್ಲಿದೆ ಪೂರ್ಣ ಮಾಹಿತಿ

ಇದನ್ನೂ ಓದಿ: Akshaya Tritiya: ಅಕ್ಷಯ ತೃತೀಯ ಆಚರಣೆಯ ಮಹತ್ವ, ಶುಭ ಮುಹೂರ್ತ ಮತ್ತು ಇತಿಹಾಸವನ್ನು ತಿಳಿಯಿರಿ

(Akshaya Tritiya auspicious purchasing by zodiac signs on the basis of astrology)

Published On - 11:14 pm, Wed, 12 May 21

ನಿಖಿಲ್​ನನ್ನು ಜನರು ಅಭಿಮನ್ಯು ಮಾಡುವುದಿಲ್ಲ, ಅರ್ಜುನ ಮಾಡುತ್ತಾರೆ: HDK
ನಿಖಿಲ್​ನನ್ನು ಜನರು ಅಭಿಮನ್ಯು ಮಾಡುವುದಿಲ್ಲ, ಅರ್ಜುನ ಮಾಡುತ್ತಾರೆ: HDK
ಹಾಸನಾಂಬೆ ದರ್ಶನ ಪಡೆದ ಬಳಿಕ ಡಿ ಬಾಸ್ ಬಗ್ಗೆ ಮಾತಾಡಿದ ಗೆಳೆಯ ತರುಣ್ ಸುಧೀರ್
ಹಾಸನಾಂಬೆ ದರ್ಶನ ಪಡೆದ ಬಳಿಕ ಡಿ ಬಾಸ್ ಬಗ್ಗೆ ಮಾತಾಡಿದ ಗೆಳೆಯ ತರುಣ್ ಸುಧೀರ್
ಪ್ರಾರ್ಥನೆ ವೇಳೆ ಬಿತ್ತು ಹೂವು: ಕುಮಾರಸ್ವಾಮಿಗೆ ಶುಭ ಸೂಚನೆನಾ?
ಪ್ರಾರ್ಥನೆ ವೇಳೆ ಬಿತ್ತು ಹೂವು: ಕುಮಾರಸ್ವಾಮಿಗೆ ಶುಭ ಸೂಚನೆನಾ?
ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ರೈಲು!
ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ರೈಲು!
ಬಿಗ್​ಬಾಸ್ ಮನೆಯಲ್ಲಿ ಮಾನಸ ಹೇಗಿರಬೇಕು? ಸಲಹೆ ಕೊಟ್ಟ ಹನುಮಂತು
ಬಿಗ್​ಬಾಸ್ ಮನೆಯಲ್ಲಿ ಮಾನಸ ಹೇಗಿರಬೇಕು? ಸಲಹೆ ಕೊಟ್ಟ ಹನುಮಂತು
ಮಾಧುರಿ ಜೊತೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಬಿದ್ದ ನಟಿ ವಿದ್ಯಾ ಬಾಲನ್
ಮಾಧುರಿ ಜೊತೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಬಿದ್ದ ನಟಿ ವಿದ್ಯಾ ಬಾಲನ್
ವಕ್ಫ್​ ಮಂಡಳಿಯವರು ದೇವಸ್ಥಾನಕ್ಕೂ ನೋಟಿಸ್ ನೀಡುತ್ತಿದ್ದಾರೆ: ಯತ್ನಾಳ್​
ವಕ್ಫ್​ ಮಂಡಳಿಯವರು ದೇವಸ್ಥಾನಕ್ಕೂ ನೋಟಿಸ್ ನೀಡುತ್ತಿದ್ದಾರೆ: ಯತ್ನಾಳ್​
ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ, ಪುತ್ರನ ಗೆಲುವಿಗಾಗಿ ವಿಶೇಷ ಪೂಜೆ
ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ, ಪುತ್ರನ ಗೆಲುವಿಗಾಗಿ ವಿಶೇಷ ಪೂಜೆ
30 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಇದ್ದ ಬ್ಯಾಗ್ ವಾಪಸ್ ನೀಡಿದ ಕಂಡಕ್ಟರ್
30 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಇದ್ದ ಬ್ಯಾಗ್ ವಾಪಸ್ ನೀಡಿದ ಕಂಡಕ್ಟರ್
ಹೊನವಾಡ ಗ್ರಾಮದ 11 ಎಕರೆ ಜಮೀನು ಮಾತ್ರ ವಕ್ಫ್​ಗೆ ಸೇರಿದ್ದು; ಎಂ ಬಿ ಪಾಟೀಲ್
ಹೊನವಾಡ ಗ್ರಾಮದ 11 ಎಕರೆ ಜಮೀನು ಮಾತ್ರ ವಕ್ಫ್​ಗೆ ಸೇರಿದ್ದು; ಎಂ ಬಿ ಪಾಟೀಲ್