AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: 2026ರ ವರ್ಷ ಪೂರ್ತಿ ಈ 4 ರಾಶಿಯ ಮಹಿಳೆಯರಿಗೆ ಅದೃಷ್ಟದ ಸುರಿಮಳೆ

2026ರಲ್ಲಿ ಕರ್ಕಾಟಕ, ಸಿಂಹ, ಕುಂಭ, ಮೀನ ರಾಶಿಯ ಮಹಿಳೆಯರಿಗೆ ಅಪಾರ ಅದೃಷ್ಟ ಕೂಡಿಬರಲಿದೆ. ಗ್ರಹಗಳ ಪ್ರಭಾವದಿಂದ ಈ ರಾಶಿಯವರಿಗೆ ವೃತ್ತಿ, ಆರೋಗ್ಯ, ಕುಟುಂಬ ಮತ್ತು ವೈಯಕ್ತಿಕ ಜೀವನದಲ್ಲಿ ಯಶಸ್ಸು ದೊರೆಯಲಿದೆ. ತಾಳ್ಮೆ ಮತ್ತು ಸರಿಯಾದ ಯೋಜನೆಗಳೊಂದಿಗೆ ಮುನ್ನಡೆದರೆ, ಈ ವರ್ಷ ಪವಾಡಗಳನ್ನು ಸೃಷ್ಟಿಸುವ ಅವಕಾಶಗಳು ಹೆಚ್ಚಾಗಿವೆ.

Daily Devotional: 2026ರ ವರ್ಷ ಪೂರ್ತಿ ಈ 4 ರಾಶಿಯ ಮಹಿಳೆಯರಿಗೆ ಅದೃಷ್ಟದ ಸುರಿಮಳೆ
ವರ್ಷಪೂರ್ತಿ ಅದೃಷ್ಟ
ಅಕ್ಷತಾ ವರ್ಕಾಡಿ
|

Updated on: Jan 08, 2026 | 9:42 AM

Share

2026ರ ಹೊಸ ವರ್ಷ ಪ್ರಾರಂಭವಾಗಿದೆ. ಈ ವರ್ಷ 12ರಾಶಿಗಳಲ್ಲಿ ಪ್ರಮುಖವಾಗಿ ಈ 4 ರಾಶಿಯ ಮಹಿಳೆಯರಿಗೆ ಭಾರೀ ಅದೃಷ್ಟದ ವರ್ಷವಾಗಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಗ್ರಹಗಳ ಯಾವುದೇ ಸಂಚಾರವಿದ್ದರೂ, ಈ ವರ್ಷವು ಮೂರು ನಿರ್ದಿಷ್ಟ ರಾಶಿಗಳ ಮಹಿಳೆಯರಿಗೆ ವರ್ಷಪೂರ್ತಿ ಅದೃಷ್ಟವನ್ನು ತರಲಿದೆ. ಇದರ ಜೊತೆಗೆ, ಇನ್ನೊಂದು ರಾಶಿಗೂ ಸಹ ಒಂದಷ್ಟು ಅದೃಷ್ಟ ಕೂಡಿಬರಲಿದೆ. ಹೀಗೆ ಒಟ್ಟಾರೆ ಮೂರು ಪ್ರಮುಖ ರಾಶಿಗಳು ಮತ್ತು ಒಂದು ಅತೀ ಕಡಿಮೆ ಲಾಭ ಪಡೆಯುವ ರಾಶಿ, ಅಂದರೆ ಒಟ್ಟು ನಾಲ್ಕು ರಾಶಿಗಳ ಮಹಿಳೆಯರಿಗೆ 2026 ಅತ್ಯಂತ ಶುಭ ವರ್ಷವಾಗಲಿದೆ.

ಈ ವರ್ಷ ಗ್ರಹಗಳ ಸ್ಥಿತಿಗತಿಗಳು ಮಹಿಳೆಯರ ಜೀವನದ ಮೇಲೆ ವಿಶೇಷ ಪ್ರಭಾವ ಬೀರಲಿವೆ. ಜೂನ್ 2ರಂದು ಗುರು ಗ್ರಹ ಬದಲಾವಣೆಯಾಗುತ್ತದೆ. ಶನಿ ಗ್ರಹವು ವರ್ಷಪೂರ್ತಿ ಮೀನ ರಾಶಿಯಲ್ಲಿಯೇ ನೆಲೆಸಿರುತ್ತದೆ. ಡಿಸೆಂಬರ್ 5ರಂದು ರಾಹು-ಕೇತು ಗ್ರಹಗಳು ತಮ್ಮ ಸ್ಥಾನಗಳನ್ನು ಬದಲಿಸುತ್ತವೆ. ಇವುಗಳ ಪ್ರಭಾವದ ಜೊತೆಗೆ, ಬುಧ, ಮಂಗಳ, ಶುಕ್ರ, ಗುರು ಗ್ರಹಗಳ ಧನಾತ್ಮಕ ಪ್ರಭಾವವು ಈ ಅದೃಷ್ಟವಂತ ರಾಶಿಗಳ ಮಹಿಳೆಯರಿಗೆ ಅಭೂತಪೂರ್ವ ಯಶಸ್ಸನ್ನು ತರಲಿದೆ. 2025 ಈಗಾಗಲೇ ಮುಗಿದ ಅಧ್ಯಾಯ. 2026ರ ಈ ವರ್ಷ ಹೊಸದಾದ, ಶುಭ ಸುದ್ದಿಗಳ ವರ್ಷವಾಗಿದೆ.

ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀಯರನ್ನು ಪ್ರಕೃತಿ, ತಾಯಿ, ದೇವಿಗೆ ಹೋಲಿಸಲಾಗುತ್ತದೆ. ನೀರನ್ನು ಗಂಗೆ ಎಂದೂ, ಆಹಾರವನ್ನು ಅನ್ನಪೂರ್ಣೇಶ್ವರಿ ಎಂದೂ ಪೂಜಿಸುತ್ತೇವೆ. ಅದೇ ರೀತಿ, ಈ ವರ್ಷ ಕೆಲವು ರಾಶಿಗಳ ಮಹಿಳೆಯರಿಗೆ ಅದೃಷ್ಟದ ಯೋಗವಿದೆ. ನೀವು ಸಾಡೇಸಾತಿ ಅಥವಾ ಇನ್ನಾವುದೇ ಗ್ರಹದೋಷದ ಬಗ್ಗೆ ಚಿಂತಿಸಬೇಕಾಗಿಲ್ಲ. ತಾಳ್ಮೆ, ಸಹನೆ, ಯೋಚನಾ ಲಹರಿ, ಮತ್ತು ಆತುರದ ನಿರ್ಧಾರಗಳನ್ನು ತ್ಯಜಿಸಿ, ಸರಿಯಾದ ಯೋಜನೆಗಳೊಂದಿಗೆ ಮುನ್ನಡೆದರೆ ಈ ವರ್ಷವು ನಿಮಗೆ ಪವಾಡ ಸದೃಶ ಫಲಗಳನ್ನು ನೀಡಲಿದೆ. ಕಷ್ಟ ಪಡುವುದರ ಜೊತೆಗೆ ಅದೃಷ್ಟವೂ ಇರಬೇಕು. ಆ ಅದೃಷ್ಟ 2026ರಲ್ಲಿ ಈ ಕೆಳಗಿನ ರಾಶಿಗಳಿಗೆ ಇರಲಿದೆ.

ಕರ್ಕಾಟಕ ರಾಶಿ (Cancer):

ಚಂದ್ರನು ಅಧಿಪತಿಯಾಗಿರುವ ಕರ್ಕಾಟಕ ರಾಶಿಯ ಮಹಿಳೆಯರಿಗೆ ಈ ವರ್ಷದಲ್ಲಿ ಅವರ ಅನಿಸಿಕೆಗಳಿಗೆ ಮತ್ತು ಯೋಜನೆಗಳಿಗೆ ವಿಶೇಷ ಮನ್ನಣೆ ಸಿಗಲಿದೆ. ಕೀರ್ತಿ ಪ್ರತಿಷ್ಠೆಗಳಿಗೆ ಭಾಜನರಾಗುವಿರಿ. ಆರೋಗ್ಯವು ಉತ್ತಮವಾಗಿರುತ್ತದೆ. ಮನೆ ಯೋಗ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಮಕ್ಕಳು, ಗಂಡ, ಕುಟುಂಬದ ವಿಚಾರಗಳಲ್ಲಿ ಶುಭ ಫಲಗಳು ದೊರೆಯುತ್ತವೆ. ವಿವಾಹದ ವಿಷಯದಲ್ಲಿಯೂ ಯಶಸ್ಸು ದೊರೆಯುವ ಸಾಧ್ಯತೆಗಳಿವೆ.

ಸಿಂಹ ರಾಶಿ (Leo):

ರವಿಯ ಅನುಗ್ರಹವನ್ನು ಹೊಂದಿರುವ ಸಿಂಹ ರಾಶಿಯ ಮಹಿಳೆಯರಿಗೆ ಉದ್ಯೋಗ ಪ್ರಾಪ್ತಿ, ರಾಜಕೀಯವಾಗಿ ಪ್ರಗತಿ, ಮತ್ತು ಸ್ಥಾನಮಾನ ಲಭಿಸುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಬಡ್ತಿ ದೊರೆಯಬಹುದು. ಬಹುದಿನಗಳಿಂದ ಕಾಡುತ್ತಿದ್ದ ನೋವುಗಳಿಗೆ ಪರಿಹಾರ ಸಿಗಲಿದೆ. ಇದು ಸಿಂಹ ರಾಶಿಯ ಮಹಿಳೆಯರಿಗೆ ಬಹಳ ಶುಭ ವರ್ಷವಾಗಿದೆ.

ಕುಂಭ ರಾಶಿ (Aquarius):

ಶನಿ ಅಧಿಪತಿಯಾಗಿರುವ ಕುಂಭ ರಾಶಿಯ ಮಹಿಳೆಯರಿಗೆ ಈ ವರ್ಷ ಸಾಹಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಸವಾಲುಗಳನ್ನು ಎದುರಿಸಿ ಗುರಿ ಮುಟ್ಟಲು ಅನುಕೂಲಕರ ವಾತಾವರಣವಿದೆ. ಬಂಗಾರದ ಯೋಗ, ಭೂಮಿ ಯೋಗಗಳು ಕೂಡಿಬರಲಿವೆ. ಆಸ್ತಿ ಕಲಹಗಳು ಇತ್ಯರ್ಥವಾಗುತ್ತವೆ. ತವರು ಮನೆಯಿಂದ ಉಡುಗೊರೆಗಳು ಸಿಗಬಹುದು. ಗಂಡನ ಜೊತೆ ಅನ್ಯೋನ್ಯತೆ ಹೆಚ್ಚಲಿದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಮೀನ ರಾಶಿ (Pisces):

ಗುರು ರಾಶ್ಯಾಧಿಪತಿಯಾಗಿದ್ದರೂ, ಶನಿ ಗ್ರಹವು ಅಲ್ಲೇ ಇದ್ದರೂ ಸಹ ಮೀನ ರಾಶಿಯ ಮಹಿಳೆಯರಿಗೆ ಈ ವರ್ಷ ನಿಧಾನವಾದರೂ ಪ್ರಧಾನವಾದ ಪ್ರಗತಿ ಇರಲಿದೆ. ತಡವಾದರೂ ಒಳ್ಳೆಯ ಫಲಿತಾಂಶಗಳು ದೊರೆಯಲಿವೆ. ಸಾಕಷ್ಟು ಅದೃಷ್ಟಗಳು ಈ ವರ್ಷ ಮೀನ ರಾಶಿಯವರ ಪಾಲಿಗೆ ಬರಲಿವೆ.

ಹೀಗೆ ಕರ್ಕಾಟಕ, ಸಿಂಹ, ಕುಂಭ, ಮೀನ ರಾಶಿಯ ಮಹಿಳೆಯರಿಗೆ, ಕನ್ಯೆಯರಿಗೆ, ಹೆಣ್ಣುಮಕ್ಕಳಿಗೆ 2026 ಅತ್ಯಂತ ಅದೃಷ್ಟದ ವರ್ಷವಾಗಿದೆ. ಯಾವುದೇ ಸಣ್ಣ ದುರಂತ ನಡೀತು ಎಂದು ತಲೆ ಮೇಲೆ ಕೈಯಿಟ್ಟುಕೊಂಡು ಕೂರಬಾರದು. ವಿದ್ಯಾರ್ಥಿಗಳು ಸರಿಯಾಗಿ ಪ್ರಯತ್ನ ಪಟ್ಟರೆ ಒಳ್ಳೆಯ ವಿದ್ಯಾ ಯೋಗವಿದೆ. ಕುಟುಂಬದಲ್ಲಿ ಗಂಡ-ಹೆಂಡತಿಯರ ಕಲಹಗಳು ಇತ್ಯರ್ಥವಾಗುತ್ತವೆ. ಕಾನೂನು ವಿಷಯಗಳಲ್ಲಿ ಜಯ ಸಿಗಲಿದೆ. ಭೂಮಿ ಯೋಗ ಮತ್ತು ಉದ್ಯೋಗ ಯೋಗಗಳು ಈ ರಾಶಿಗಳ ಮಹಿಳೆಯರಿಗೆ ಶುಭವನ್ನು ತರಲಿವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು