AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Swapna Shastra: ಈ ರೀತಿಯ ಕನಸು ಕಂಡರೆ ಒಳ್ಳೆಯ ದಿನಗಳ ಪ್ರಾರಂಭದ ಸೂಚನೆ

ಹಿಂದೂ ಧರ್ಮದಲ್ಲಿ ಸ್ವಪ್ನಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ಕನಸಿನಲ್ಲಿ ಬರುವ ಶುಭ ಮತ್ತು ಅಶುಭ ಸೂಚನೆಗಳನ್ನು ಸ್ವಪ್ನ ಶಾಸ್ತ್ರದ ಮೂಲಕ ತಿಳಿದುಕೊಳ್ಳುಬಹುದು. ಕೆಲ ಕನಸುಗಳ ಶುಭ ಸೂಚನೆಗಳನ್ನು ತಿಳಿದುಕೊಳ್ಳುವುದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಆದ್ದರಿಂದ ಜೀವನದಲ್ಲಿ ಶುಭ ಸೂಚನೆಗಳನ್ನು ನೀಡುವ ಕನಸುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

Swapna Shastra: ಈ ರೀತಿಯ ಕನಸು ಕಂಡರೆ ಒಳ್ಳೆಯ ದಿನಗಳ ಪ್ರಾರಂಭದ ಸೂಚನೆ
Swapna Shastra
Follow us
ಅಕ್ಷತಾ ವರ್ಕಾಡಿ
|

Updated on: Mar 04, 2025 | 7:55 AM

ಹಿಂದೂ ಧರ್ಮದಲ್ಲಿ ಸ್ವಪ್ನ ಶಾಸ್ತ್ರವನ್ನು ಬಹಳ ವಿಶೇಷ ಎಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ನಿದ್ದೆಯಲ್ಲಿ ಕನಸು ಕಾಣುತ್ತಾರೆ. ಈ ಕನಸುಗಳು ಶುಭ ಮತ್ತು ಅಶುಭ ಸೂಚನೆಗಳನ್ನು ನೀಡುತ್ತವೆ ಎಂದು ನಂಬಲಾಗಿದೆ. ಕನಸಿನಲ್ಲಿ ಬರುವ ಶುಭ ಮತ್ತು ಅಶುಭ ಸೂಚನೆಗಳನ್ನು ಸ್ವಪ್ನ ಶಾಸ್ತ್ರದ ಮೂಲಕ ತಿಳಿದುಕೊಳ್ಳುವುದರಿಂದ, ವ್ಯಕ್ತಿಯು ಮುಂದಿನ ದಿನಗಳಲ್ಲಿ ಜಾಗರೂಕರಾಗಿರಬಹುದು. ಆದರೆ, ಇಂದು ಜೀವನದಲ್ಲಿ ಶುಭ ಚಿಹ್ನೆಗಳನ್ನು ನೀಡುವ ಕನಸುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಕನಸಿನಲ್ಲಿ ಲಕ್ಷ್ಮಿ ದೇವಿ:

ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ, ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ತಾಯಿ ಲಕ್ಷ್ಮಿ ಕಾಣಿಸಿಕೊಂಡಳು. ಯಾರಾದರೂ ಕನಸಿನಲ್ಲಿ ಲಕ್ಷ್ಮಿ ದೇವಿಯನ್ನು ನೋಡಿದರೆ, ಅದು ತುಂಬಾ ಶುಭ ಕನಸು ಎಂದು ಸ್ವಪ್ನಶಾಸ್ತ್ರದಲ್ಲಿ ಹೇಳಲಾಗಿದೆ. ಕನಸಿನಲ್ಲಿ ಲಕ್ಷ್ಮಿ ದೇವಿಯನ್ನು ನೋಡುವುದು ಎಂದರೆ ಆ ವ್ಯಕ್ತಿಯ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ ಎಂದರ್ಥ. ಅವನಿಗೆ ಹಣ ಸಿಗಲಿದೆ. ಲಕ್ಷ್ಮಿ ದೇವಿಯು ಅವನನ್ನು ಆಶೀರ್ವದಿಸಲಿದ್ದಾಳೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗಲಿದೆ ಎಂದು ನಂಬಲಾಗಿದೆ.

ಕನಸಿನಲ್ಲಿ ಓಂ:

ಓಂ ಕನಸು ಬೀಳುವುದು ಬಹಳ ಅಪರೂಪ. ಕನಸಿನಲ್ಲಿ ಓಂ ಅನ್ನು ನೋಡಿದರೆ ಅದರಿಂದ ನಿಮ್ಮ ಜೀವನದಲ್ಲಿ ಅದೃಷ್ಟ ನಕ್ಷತ್ರ ಬೆಳಗಲಿದೆ ಎಂದು ಅರ್ಥಮಾಡಿಕೊಳ್ಳಬೇಕು. ಕನಸಿನಲ್ಲಿ ಓಂ ಅನ್ನು ನೋಡುವುದರಿಂದ ಜೀವನವು ಧನ್ಯವಾಗುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ವಾಸ್ತು ಪ್ರಕಾರ ಮನೆಯಲ್ಲಿ ಈ ವಸ್ತುಗಳನ್ನು ಇಡಬಾರದು

ಕನಸಿನಲ್ಲಿ ಚಂದ್ರ:

ಕನಸಿನ ವಿಜ್ಞಾನದಲ್ಲಿ ಯಾರಾದರೂ ಕನಸಿನಲ್ಲಿ ಚಂದ್ರನನ್ನು ನೋಡಿದರೆ ಅದು ತುಂಬಾ ಶುಭ ಎಂದು ಹೇಳಲಾಗುತ್ತದೆ. ಯಾರಾದರೂ ತಮ್ಮ ಕನಸಿನಲ್ಲಿ ಅರ್ಧಚಂದ್ರನನ್ನು ನೋಡಿದರೆ, ಅವರ ದುಃಖಗಳು ಮತ್ತು ತೊಂದರೆಗಳು ಕೊನೆಗೊಳ್ಳಲಿವೆ ಎಂದು ಹೇಳಲಾಗುತ್ತದೆ.

ಹಾಲು ಕುಡಿಯುವುದು:

ಯಾರಾದರೂ ಕನಸಿನಲ್ಲಿ ಹಾಲು ಕುಡಿಯುವುದನ್ನು ನೋಡಿದರೆ, ಅದು ಆರ್ಥಿಕ ಲಾಭ ಸೂಚನೆ. ಇದರೊಂದಿಗೆ ಜೀವನದಲ್ಲಿರುವ ಸಮಸ್ಯೆಗಳು ಸಹ ದೂರವಾಗುತ್ತವೆ ಎಂಬ ನಂಬಿಕೆಯಿದೆ.

ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ