
ಜ್ಯೋತಿಷ್ಯದ ಪ್ರಕಾರ, ಜಾತಕದಲ್ಲಿ ಗ್ರಹಗಳ ಸ್ಥಾನವು ಜೀವನದ ದಿಕ್ಕನ್ನು ನಿರ್ಧರಿಸುತ್ತದೆ. ಬುಧ ಈ ಗ್ರಹಗಳಲ್ಲಿ ಒಂದಾಗಿದೆ. ಬುಧವು ಬುದ್ಧಿವಂತಿಕೆ ಮತ್ತು ಸಂವಹನ ಕೌಶಲ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಬುಧನು ಶುಭ ಸ್ಥಾನದಲ್ಲಿದ್ದರೆ, ಒಬ್ಬ ವ್ಯಕ್ತಿಯು ತನ್ನ ಮಾತುಗಳಿಂದ ಹೃದಯಗಳನ್ನು ಗೆಲ್ಲುತ್ತಾನೆ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಾನೆ. ಆದಾಗ್ಯೂ, ಬುಧ ಜಾತಕದಲ್ಲಿ ದುರ್ಬಲ ಸ್ಥಾನದಲ್ಲಿದ್ದರೆ, ಸುಸ್ಥಾಪಿತವಾದ ಕೆಲಸಗಳು ಸಹ ತಪ್ಪಾಗಲು ಪ್ರಾರಂಭಿಸುತ್ತವೆ. ಜಾತಕದಲ್ಲಿ ಬುಧ ದೋಷವು ಹೇಗೆ ರೂಪುಗೊಳ್ಳುತ್ತದೆ, ಅದರ ಲಕ್ಷಣಗಳು ಮತ್ತು ಅದನ್ನು ತೆಗೆದುಹಾಕಲು ಜ್ಯೋತಿಷ್ಯ ಪರಿಹಾರಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಬುಧ ದೋಷ ಇರುವವರಲ್ಲಿ ಕೆಲವು ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಜ್ಯೋತಿಷ್ಯ ಹೇಳುತ್ತದೆ. ತಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ಹೇಳಲಾಗದಿರುವುದು, ಮಾತಿನಲ್ಲಿ ತೊದಲುವಿಕೆ ಅಥವಾ ಸಂವಹನದ ಸಮಸ್ಯೆಗಳು ಎದುರಾಗಬಹುದು. ಕೆಲವರು ಎಷ್ಟು ಶ್ರಮಿಸಿದರೂ ವ್ಯವಹಾರದಲ್ಲಿ ನಷ್ಟ ಅನುಭವಿಸುವುದು ಅಥವಾ ಸಾಲದ ಒತ್ತಡ ಹೆಚ್ಚಾಗುವುದು ಕಂಡುಬರುತ್ತದೆ. ಓದಿದ ವಿಷಯಗಳನ್ನು ಮರೆತುಬಿಡುವುದು, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಕಷ್ಟಪಡುವುದು ಮುಂತಾದವು ದುರ್ಬಲ ಬುಧನ ಸೂಚನೆಗಳಾಗಿವೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಕೆಲವು ಸಂದರ್ಭಗಳಲ್ಲಿ ಬುಧ ದೋಷದ ಪರಿಣಾಮವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ
ಈ ರೀತಿಯ ಸಮಸ್ಯೆಗಳನ್ನು ನಿವಾರಿಸಲು ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸುವಂತೆ ಸೂಚಿಸಲಾಗುತ್ತದೆ. ಬುಧ ದೋಷ ನಿವಾರಣೆಗೆ ಗಣೇಶನ ಆರಾಧನೆ ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಬುಧವಾರದಂದು ಗಣೇಶನಿಗೆ ದೂರ್ವಾ ಅರ್ಪಿಸಿ ಪ್ರಾರ್ಥನೆ ಸಲ್ಲಿಸುವುದು ಶುಭಕರ. ಬುಧನೊಂದಿಗೆ ಹಸಿರು ಬಣ್ಣ ಸಂಬಂಧಪಟ್ಟಿರುವುದರಿಂದ ಬುಧವಾರ ಹಸಿರು ವಸ್ತ್ರ ಧರಿಸುವುದು ಅಥವಾ ಹಸಿರು ವಸ್ತುವನ್ನು ತಮ್ಮ ಬಳಿಯಲ್ಲಿ ಇಡುವುದು ಒಳ್ಳೆಯದು ಎಂದು ನಂಬಲಾಗುತ್ತದೆ. ಅದೇ ದಿನ ಹಸಿರು ತರಕಾರಿಗಳು, ಬೇಳೆಕಾಳು ಅಥವಾ ಹಸಿರು ಬಟ್ಟೆಗಳನ್ನು ಅಗತ್ಯವಿರುವವರಿಗೆ ದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗುತ್ತದೆ.
ಬುಧ ಗ್ರಹವನ್ನು ಬಲಪಡಿಸಲು “ಓಂ ಬಂ ಬುಧಾಯ ನಮಃ” ಮಂತ್ರವನ್ನು 108 ಬಾರಿ ಜಪಿಸುವುದು ಸಹ ಶ್ರೇಯಸ್ಕರ. ಜೊತೆಗೆ ತುಳಸಿ ಗಿಡವನ್ನು ನೆಟ್ಟು ಅದರ ಆರೈಕೆ ಮಾಡುವುದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ