AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಇಂತಹ ಜೀವನ ಸಿಕ್ಕವರು ಮತ್ತೊಂದು ಸ್ವರ್ಗ ಬೇಕು ಎಂದು ಬಯಸುವುದಿಲ್ಲ; ಚಾಣಕ್ಯ ನೀತಿ ಇಲ್ಲಿದೆ

ಆಚಾರ್ಯ ಚಾಣಕ್ಯನ ನುಡಿಗಳನ್ನು ನೋಡಿದರೆ ಅದು ಕೆಲವೊಮ್ಮೆ ಕಟುಸತ್ಯ, ಅಥವಾ ಕಹಿ ಎಂದೂ ಕಾಣಿಸಬಹುದು. ಆದರೆ, ನೈಜವಾಗಿ ಅದು ನಿಜ ಜೀವನದ ದರ್ಶನ ಮಾಡಿಸುತ್ತದೆ. ಅಂತಹಾ ಕೆಲವು ವಿಚಾರಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ.

Chanakya Niti: ಇಂತಹ ಜೀವನ ಸಿಕ್ಕವರು ಮತ್ತೊಂದು ಸ್ವರ್ಗ ಬೇಕು ಎಂದು ಬಯಸುವುದಿಲ್ಲ; ಚಾಣಕ್ಯ ನೀತಿ ಇಲ್ಲಿದೆ
ಚಾಣಕ್ಯ ನೀತಿ
TV9 Web
| Updated By: Skanda|

Updated on: Aug 21, 2021 | 7:12 AM

Share

ಆಚಾರ್ಯ ಚಾಣಕ್ಯ ಘನ ವಿದ್ವಾಂಸ ಆಗಿದ್ದ. ಆತ ಅರ್ಥಶಾಸ್ತ್ರ, ರಾಜನೀತಿ ಇತ್ಯಾದಿಗಳಲ್ಲಿ ಅಪಾರ ಜ್ಞಾನ ಹೊಂದಿದ್ದ. ಅದೇ ರೀತಿ ಸಾಮಾಜಿಕ ವಿಚಾರಗಳಲ್ಲಿ ಕೂಡ ಚಾಣಕ್ಯನಿಗೆ ಬಹಳಷ್ಟು ತಿಳುವಳಿಕೆ ಇತ್ತು. ತನ್ನ ಎಲ್ಲಾ ಜ್ಞಾನ ಸಂಪತ್ತನ್ನು ಚಾನಕ್ಯ ಸಮಾಜಕ್ಕೆ ನೀಡಿದ್ದಾನೆ. ಆತನ ನೀತಿ ಎಲ್ಲರಿಗೂ ಮಾರ್ಗದರ್ಶಿಯಾಗಿದೆ. ಚಾಣಕ್ಯನ ನೀತಿಗಳನ್ನು ಜನರು ತಿಳಿದು ಅದನ್ನು ಅಳವಡಿಸಲು ಪ್ರಯತ್ನಿಸಿದರೆ ಅಂತವರು ಖಂಡಿತವಾಗಿ ಜೀವನದಲ್ಲಿ ಯಶಸ್ವಿ ಆಗಬಹುದು.

ಚಾಣಕ್ಯ ಅಂತಹ ಹಲವು ಮಾರ್ಗದರ್ಶಿ ಸೂತ್ರಗಳನ್ನು ಚಾಣಕ್ಯ ನೀತಿ ಪುಸ್ತಕದಲ್ಲಿ ಬರೆದಿದ್ದಾನೆ. ಅದರಿಂದ ಇತರರ ಭವಿಷ್ಯ ಉತ್ತಮಗೊಳಿಸಬಹುದಾಗಿದೆ. ಆಚಾರ್ಯ ಚಾಣಕ್ಯನ ನುಡಿಗಳನ್ನು ನೋಡಿದರೆ ಅದು ಕೆಲವೊಮ್ಮೆ ಕಟುಸತ್ಯ, ಅಥವಾ ಕಹಿ ಎಂದೂ ಕಾಣಿಸಬಹುದು. ಆದರೆ, ನೈಜವಾಗಿ ಅದು ನಿಜ ಜೀವನದ ದರ್ಶನ ಮಾಡಿಸುತ್ತದೆ. ಅಂತಹಾ ಕೆಲವು ವಿಚಾರಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ. ಇಂತಹ ಜೀವನ ಸಿಕ್ಕರೆ ಮನುಷ್ಯನೊಬ್ಬ ಮತ್ತೊಂದು ಸ್ವರ್ಗ ಬೇಕು ಎಂದು ಬಯಸುವುದಿಲ್ಲ ಎಂದು ಹೇಳುತ್ತಾನೆ ಚಾಣಕ್ಯ.

1. ಕಲಿಯುಗದಲ್ಲಿ ಒಬ್ಬರಿಗೆ ನಿಜವಾದ ಸಂಪತ್ತು ಎಂದರೆ ಅದು ಅವರ ಮಕ್ಕಳು. ಇಂದಿನ ದಿನಮಾನದಲ್ಲಿ ಮಕ್ಕಳು ತಪ್ಪು ದಾರಿ ಹಿಡಿದರೆ, ಹೆತ್ತವರ ಮಾತು ಕೇಳದಿದ್ದರೆ, ಕಷ್ಟ ಕೊಟ್ಟರೆ ಅದುವೇ ಬಹುದೊಡ್ಡ ಸಂಕಷ್ಟ. ಅಂಥಾದ್ದರಲ್ಲಿ, ಮಕ್ಕಳು ಸುಸಂಸ್ಕೃತರಾಗಿ, ಹೆತ್ತವರಿಗೆ ವಿಧೇಯರಾಗಿ, ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡರೆ ಅದುವೇ ದೊಡ್ಡ ಭಾಗ್ಯ. ನಿಮ್ಮ ಮಕ್ಕಳು ನಿಮ್ಮ ಆಸ್ತಿ. ಹೀಗೆ ಸಂಪತ್ತು ಅನಿಸಲಿರುವ ಮಕ್ಕಳು ಇದ್ದರೆ ಅವರಿಗೆ ಮತ್ತೊಂದು ಸ್ವರ್ಗ ಬೇಕೆಂದು ಅನಿಸದು ಎನ್ನುತ್ತಾನೆ ಚಾಣಕ್ಯ.

2. ಮಹಿಳೆ ಅಥವಾ ಹೆಣ್ಣು ಮನೆಯನ್ನು ಕಟ್ಟಲೂ ಬಲ್ಲಳು, ಕೆಡವಲೂ ಬಲ್ಲಳು ಎಂದು ಹೇಳುತ್ತಾರೆ. ಮನೆಗೆ ಉತ್ತಮಳಾಗಿ ಇರುವ ಹೆಂಡತಿ ಮನೆಯ ಬಹುದೊಡ್ಡ ಆಸ್ತಿ. ಅಂತಹಾ ಹೆಣ್ಣು ಮನೆಯನ್ನು, ಮನೆಯವರನ್ನು ಒಟ್ಟಾಗಿ ಇಟ್ಟಿರುತ್ತಾಳೆ. ಹೆಣ್ಣಿನ ಉತ್ತಮ ನಡತೆಯಿಂದ ಗಂಡನು ಕೂಡ ಉತ್ತಮನಾಗಿ ಮತ್ತು ಸಮಾಜದಲ್ಲಿ ಘನತೆಯನ್ನು ಕಾಣಬಲ್ಲ. ಅಂತಹ ಜನರು ದೇವರಿಗೆ ಧನ್ಯವಾದ ತಿಳಿಸುತ್ತಾರೆ.

3. ಒಬ್ಬ ವ್ಯಕ್ತಿಗೆ ಎಷ್ಟೇ ಹಣ ಸಿಕ್ಕರೂ ಸರಿ, ಸಂಪತ್ತು ರಾಶಿ ಇದ್ದರೂ ಸರಿ, ಮನಸಿಗೆ ನೆಮ್ಮದಿ ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಮಾನಸಿಕ ನೆಮ್ಮದಿ ಇಲ್ಲವಾದರೆ ತೊಂದರೆಯಲ್ಲೇ ಸಿಲುಕಿದಂತೆ. ಹಾಗಾಗಿ, ಯಾರಿಗೆ ಮನಶ್ಶಾಂತಿ ಲಭಿಸುತ್ತದೆಯೋ ಅವರು ಎಲ್ಲಾ ಪರಿಸ್ಥಿತಿಯನ್ನು ಕೂಡ ಸುಲಭವಾಗಿ ಸಂತೃಪ್ತವಾಗಿ ನಡೆಸಿಕೊಂಡು ಹೋಗುತ್ತಾರೆ. ಎಲ್ಲರಿಗೂ ಸಂತೃಪ್ತಿ ಎಂಬುದು ಸಿಗುವುದಿಲ್ಲ. ಈ ಗುಣಗಳು ಹೊಂದಿರುವವರು ಕೂಡ ಭೂಮಿಯನ್ನು ಸ್ವರ್ಗಕ್ಕಿಂತ ಕಡಿಮೆ ಎಂದು ಕಾಣುವುದಿಲ್ಲ.

ಇದನ್ನೂ ಓದಿ: Chanakya Niti: ಜೀವನದಲ್ಲಿ ಪದೇ ಪದೇ ಸೋಲನ್ನು ಕಾಣುತ್ತಿದ್ದೀರಾ? ಚಾಣಕ್ಯ ತಿಳಿಸಿದ ಯಶಸ್ಸಿನ ಗುಟ್ಟುಗಳನ್ನು ಅನುಸರಿಸಿ

Chanakya Niti: ಆಲಸ್ಯ ಸ್ವಭಾವದವರು ಎಂದಿಗೂ ಹಣ ಸಂಪಾದಿಸಲು ಸಾಧ್ಯವಿಲ್ಲ- ಚಾಣಕ್ಯ ನೀತಿ

(Chanakya Niti Heaven on Earth Chanakya says these things 3 are equal to Heaven)

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?