AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಜೀವನದಲ್ಲಿ ಸಮಸ್ಯೆಗಳಿಂದ ದೂರ ಉಳಿಯಬೇಕಾದರೆ ಈ 4 ಅಂಶಗಳ ಬಗ್ಗೆ ಗಮನವಿಡಿ- ಚಾಣಕ್ಯ ನೀತಿ ಇಲ್ಲಿದೆ

Chanakya: ಒಬ್ಬಾತ ಪರಿಸ್ಥಿತಿಯನ್ನು ಮೊದಲೇ ಅವಲೋಕಿಸಬಲ್ಲ ಸಾಮರ್ಥ್ಯ ಹೊಂದಿದ್ದರೆ ಆ ಸಮಸ್ಯೆಯನ್ನು ಸರಿದೂಗಿಸಲು ಆತ ಮೊದಲೇ ಸಿದ್ಧನಾಗಿ ಇರಬಹುದು. ಚಾಣಕ್ಯ ಕೂಡ ಇದನ್ನು ತಿಳಿಸಿದ್ದಾನೆ.

Chanakya Niti: ಜೀವನದಲ್ಲಿ ಸಮಸ್ಯೆಗಳಿಂದ ದೂರ ಉಳಿಯಬೇಕಾದರೆ ಈ 4 ಅಂಶಗಳ ಬಗ್ಗೆ ಗಮನವಿಡಿ- ಚಾಣಕ್ಯ ನೀತಿ ಇಲ್ಲಿದೆ
ಚಾಣಕ್ಯ
TV9 Web
| Edited By: |

Updated on: Sep 20, 2021 | 7:08 AM

Share

ಸಣ್ಣ ತಪ್ಪುಗಳು ದೊಡ್ಡ ಸಮಸ್ತೆಗಳಿಗೆ ಕಾರಣ ಆಗಬಹುದು. ಹಾಗಾಗಿ ನಾವು ಯಾವುದೇ ಕೆಲಸವನ್ನು ತಪ್ಪುಗಳು ಆದಷ್ಟು ಕಡಿಮೆ ಇರುವಂತೆ ನೋಡಿಕೊಂಡು ಮಾಡಬೇಕು. ಒಂದುವೇಳೆ ಒಮ್ಮೆ ತಪ್ಪು ಸಂಭವಿಸಿದರೂ ಅದು ಪುನಾರವರ್ತಿಸದಂತೆ ನೋಡಿಕೊಳ್ಳಬೇಕು. ಒಂದು ತಪ್ಪು ಮತ್ತೆ ಮತ್ತೆ ಸಂಭವಿಸಿದರೆ ಅದು ದೊಡ್ಡ ಸಮಸ್ಯೆ ಆಗಿ ಕಾಡುವ ಸಾಧ್ಯತೆ ಇರುತ್ತದೆ. ಎಲ್ಲಕ್ಕೂ ಮಿಗಿಲಾಗಿ ಒಬ್ಬಾತ ದೂರದೃಷ್ಟಿ ಉಳ್ಳವನಾಗಿ ಇರಬೇಕು.

ಒಬ್ಬಾತ ಪರಿಸ್ಥಿತಿಯನ್ನು ಮೊದಲೇ ಅವಲೋಕಿಸಬಲ್ಲ ಸಾಮರ್ಥ್ಯ ಹೊಂದಿದ್ದರೆ ಆ ಸಮಸ್ಯೆಯನ್ನು ಸರಿದೂಗಿಸಲು ಆತ ಮೊದಲೇ ಸಿದ್ಧನಾಗಿ ಇರಬಹುದು. ಚಾಣಕ್ಯ ಕೂಡ ಇದನ್ನು ತಿಳಿಸಿದ್ದಾನೆ. ಮುಂದೆ ಎದುರಾಗಬಹುದಾದ ಸಮಸ್ಯೆಯನ್ನು ಊಹಿಸಿ ನಿಭಾಯಿಸುವ ಚಾಣಕ್ಷತನ ಇದ್ದರೆ ಅಥವಾ ಅದಕ್ಕೆ ಸಿದ್ಧರಾಗುವ ಮನಸ್ಥಿತಿ ಇದ್ದರೆ ಕಷ್ಟಕರ ಪರಿಸ್ಥಿತಿಯನ್ನು ಕೂಡ ಗೆಲ್ಲಬಹುದು. ಚಾಣಕ್ಯ ನೀತಿಯಲ್ಲಿ ಆತ ಅದಕ್ಕಾಗಿ ಕೆಲ ಸಲಹೆಗಳನ್ನು ತಿಳಿಸಿದ್ದಾನೆ.

1. ನಡೆಯುತ್ತಿರುವಾಗ ನಿಮ್ಮ ಕಣ್ಣುಗಳು ಮುಂದಿನ ಹಾದಿಯ ಮೇಲೆ ನೆಟ್ಟಿರಲಿ. ಅದರಲ್ಲಿ ಸಮಸ್ಯೆ ಇದ್ದರೆ ಇತರ ವ್ಯಕ್ತಿಗಳಿಗೆ ಹಾನಿ ಆಗಬಹುದು. ಅಥವಾ ನೀವು ಕೂಡ ಸಮಸ್ಯೆಯನ್ನು ತಂದುಹಾಕಿದಂತೆ ಆಗಬಹುದು. ಇದು ಕೇವಲ ದಾರಿಯ ನಡಿಗೆಗೆ ಮಾತ್ರವಲ್ಲ. ಬದುಕಿನ ನಡಿಗೆಗೆ ಕೂಡ ಅನ್ವಯವಾಗುತ್ತದೆ. ಹಾಗೆಯೂ ನಾವು ನೋಡಬಹುದು.

2. ಎರಡನೆಯದಾಗಿ ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿ ಹೊಂದಿರಬೇಕು. ಶುಚಿತ್ವದಿಂದ ನಾವು ಆರೋಗ್ಯ ಕಾಪಾಡಿಕೊಳ್ಳಬಹುದು. ಶುಚಿತ್ವ ಎಂದರೆ ಕೇವಲ ದೇಹದ ಸ್ವಚ್ಛತೆ ಅಲ್ಲ. ನಮ್ಮ ಮನಸು ಅಥವಾ ಹೊರಗಿನ ವಸ್ತುಗಳಾದ ಆಹಾರ, ನೀರು, ವಸ್ತ್ರ ಎಲ್ಲದರ ಸ್ವಚ್ಛತೆಯೂ ಮುಖ್ಯ.

3. ಯಾವುದೇ ಕೆಲಸವನ್ನು ಮಾಡುವಾಗ ಮನಸಾರೆ ಮಾಡಬೇಕು. ಕೆಲಸ ಮಾಡುವಾಗ ಎಲ್ಲಾ ಸಾಧ್ಯತೆಯುಳ್ಳ ಮಾರ್ಗಗಳಲ್ಲಿ ಕೂಡ ಯೋಚಿಸಿ, ಆ ಕೆಲಸವನ್ನು ಅರ್ಥ ಮಾಡಿಕೊಂಡು, ಸ್ಪಷ್ಟತೆಯನ್ನು ಪಡೆದುಕೊಳ್ಳಬೇಕು. ನಮ್ಮ ಬುದ್ಧಿವಂತಿಕೆ ಉಪಯೋಗಿಸಿ ಸರಿಯಾದ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.

4. ನಾವು ಸಮಸ್ಯೆಗೆ ಸಿಲುಕಬಹುದಾದ ಮತ್ತೊಂದು ಮುಖ್ಯ ಕಾರಣ ಎಂದರೆ ಅದು ಸುಳ್ಳು ಹೇಳುವುದು. ಒಂದು ಸುಳ್ಳನ್ನು ಮರೆಮಾಚಲು ಮತ್ತೆ ಮತ್ತೆ ಸುಳ್ಳು ಹೇಳುತ್ತಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ನಾವು ಪಾರಾಗುವುದು ಸುಲಭ ಇಲ್ಲ, ಅಥವಾ ಸಾಧ್ಯವೇ ಇಲ್ಲ. ಒಂದಲ್ಲಾ ಒಂದು ದಿನ ಸುಳ್ಳು ಹೇಳಿ ಸಿಕ್ಕಿಬೀಳುತ್ತೇವೆ. ಅದರಿಂದ ನಂಬಿಕೆ, ಗೌರವ ಕಳೆದುಕೊಳ್ಳುವುದು ಇರುತ್ತದೆ. ಇತರ ಸಮಸ್ಯೆಯೂ ಉಂಟಾಗಬಹುದು. ಹಾಗಾಗಿ ಈ ತಪ್ಪುಗಳನ್ನು ಮಾಡಬಾರದು.

ಇದನ್ನೂ ಓದಿ: Chanakya Niti: ಚಾಣಕ್ಯ ನೀತಿ ಪ್ರಕಾರ ಈ ಮೂರು ಸ್ವಭಾವಗಳನ್ನು ತಕ್ಷಣ ಬದಲಿಸಿಕೊಳ್ಳದಿದ್ದರೆ ಬಡತನ ಅಟ್ಟಿಸಿಕೊಂಡು ಬರುತ್ತದೆ!

ಇದನ್ನೂ ಓದಿ: Chanakya Niti: ಈ ರೀತಿಯಲ್ಲಿ ಹಣ ಗಳಿಸುವ ಇರಾದೆ ಇದ್ದರೆ ತಕ್ಷಣ ಅದನ್ನು ತ್ಯಜಿಸಿಬಿಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು