AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ದೀಪ ನಂದಿದ ಬಳಿಕದ ಬತ್ತಿಯ ಮಹತ್ವ ಮತ್ತು ಅದೃಷ್ಟ ವೃದ್ಧಿಗೆ ಸರಳ ಕ್ರಮ

Daily Devotional: ದೀಪ ನಂದಿದ ಬಳಿಕದ ಬತ್ತಿಯ ಮಹತ್ವ ಮತ್ತು ಅದೃಷ್ಟ ವೃದ್ಧಿಗೆ ಸರಳ ಕ್ರಮ

ಭಾವನಾ ಹೆಗಡೆ
|

Updated on: Oct 31, 2025 | 7:03 AM

Share

ದೀಪ ನಂದಿದ ಬಳಿಕ ಅದರ ಬತ್ತಿಗಳನ್ನು ಕಸಕ್ಕೆ ಬಿಸಾಡುವುದು ಅದೃಷ್ಟ ಕಳೆದುಕೊಳ್ಳಲು ಕಾರಣವಾಗುತ್ತದೆ. ಸುಟ್ಟ ಬತ್ತಿಗಳಲ್ಲಿ ಧನಾತ್ಮಕ ಶಕ್ತಿ ಇರುತ್ತದೆ. ಅವುಗಳನ್ನು ಸಂಗ್ರಹಿಸಿ ಹುಣ್ಣಿಮೆ, ಅಮಾವಾಸ್ಯೆ, ಅಥವಾ ಪರ್ವ ದಿನಗಳಲ್ಲಿ ಕರ್ಪೂರ-ತುಪ್ಪದೊಂದಿಗೆ ಸುಟ್ಟು ಬರುವ ವಿಭೂತಿಯನ್ನು ಹಚ್ಚಿಕೊಂಡರೆ ಶುಭ ಫಲಗಳು ಹಾಗೂ ಅದೃಷ್ಟ ಪ್ರಾಪ್ತಿಯಾಗುತ್ತದೆ.

ಬೆಂಗಳೂರು, ಅಕ್ಟೋಬರ್ 31: ಪ್ರತಿದಿನ ಮನೆಯಲ್ಲಿ ದೀಪವನ್ನು ಹಚ್ಚುವುದು ಹಿಂದೂ ಸಂಪ್ರದಾಯದ ಒಂದು ಅವಿಭಾಜ್ಯ ಅಂಗವಾಗಿದೆ. ದೀಪವು ಜ್ಞಾನ, ಬೆಳಕು ಮತ್ತು ಶುಭದ ಸಂಕೇತ. ಆದರೆ, ದೀಪ ನಂದಿದ ನಂತರ ಅದರ ಬತ್ತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ. ಶಾಸ್ತ್ರಗಳ ಪ್ರಕಾರ, ಈ ಸುಟ್ಟ ಬತ್ತಿಗಳನ್ನು ಅಸಡ್ಡೆಯಿಂದ ಕಸಕ್ಕೆ ಬಿಸಾಡುವುದು ಅಥವಾ ನಿರ್ಲಕ್ಷಿಸುವುದು ಸೂಕ್ತವಲ್ಲ. ಯಾಕೆಂದರೆ, ದೀಪ ಉರಿಯುವಾಗ ಸಂಗ್ರಹವಾದ ಧನಾತ್ಮಕ ಶಕ್ತಿ ಆ ಬತ್ತಿಗಳಲ್ಲಿ ಅಡಗಿರುತ್ತದೆ. ಅವುಗಳನ್ನು ಬಿಸಾಡುವುದರಿಂದ ಅದೃಷ್ಟವೂ ಹೊರಟುಹೋಗುತ್ತದೆ ಎಂದು ನಂಬಲಾಗಿದೆ.

ಹಾಗಿದ್ದರೆ, ದೀಪದ ಬತ್ತಿಗಳನ್ನು ಏನು ಮಾಡಬೇಕು? ದೀಪ ಆರಿದ ಬಳಿಕ, ಸುಟ್ಟ ಬತ್ತಿಗಳನ್ನು ಸಂಗ್ರಹಿಸಿ ಒಂದು ಡಬ್ಬದಲ್ಲಿ ಇಡಬೇಕು. ಹುಣ್ಣಿಮೆ, ಅಮಾವಾಸ್ಯೆ, ಅಷ್ಟಮಿ, ನವಮಿ ಅಥವಾ ಇತರ ಪರ್ವ ಕಾಲಗಳಲ್ಲಿ ಈ ಸಂಗ್ರಹಿಸಿದ ಬತ್ತಿಗಳ ಮೇಲೆ ಸ್ವಲ್ಪ ಕರ್ಪೂರ ಹಾಗೂ ಸಾಧ್ಯವಾದರೆ ತುಪ್ಪವನ್ನು ಹಾಕಿ ಮತ್ತೆ ಹಚ್ಚಬೇಕು. ಇದರಿಂದ ಬರುವ ವಿಭೂತಿಯನ್ನು ಹಣೆಗೆ ಹಚ್ಚಿಕೊಳ್ಳಬಹುದು, ಮಕ್ಕಳಿಗೆ ಇಡಬಹುದು, ಅಥವಾ ಯಾವುದೇ ಶುಭ ಕಾರ್ಯಗಳಿಗೆ ಹೋಗುವ ಮುನ್ನ ಹಚ್ಚಿಕೊಂಡು ಹೋದರೆ ಒಳ್ಳೆಯದಾಗುತ್ತದೆ. ಮನೆಯ ಸಿಂಹದ್ವಾರದಲ್ಲಿ ಈ ವಿಭೂತಿಯನ್ನು ಹಚ್ಚುವುದರಿಂದ ಶ್ರೇಯಸ್ಸು, ಕೀರ್ತಿ, ಪ್ರತಿಷ್ಠೆ ವೃದ್ಧಿಯಾಗುತ್ತದೆ ಹಾಗೂ ವಾಮಾಚಾರದಂತಹ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ. ಇದು ನಂಬಿಕೆಯ ಆಧಾರದ ಮೇಲೆ ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತದೆ.