AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Chandal Yoga: ಗುರು ಚಂಡಾಲ ಯೋಗ ಎಂದರೇನು? ಇದರಿಂದಾಗುವ ಸಮಸ್ಯೆಗಳೇನು?

ಜಾತಕದಲ್ಲಿ ಗ್ರಹಗಳ ಅಶುಭ ಸಂಯೋಗದಿಂದ ಉಂಟಾಗುವ ಗುರು ಚಂಡಾಲ ಯೋಗವು ಮಾನಸಿಕ ಗೊಂದಲ, ತಪ್ಪು ನಿರ್ಧಾರಗಳು ಮತ್ತು ಆರ್ಥಿಕ ಸಂಕಷ್ಟಗಳನ್ನು ತರುತ್ತದೆ. ದೇವಗುರು ಬೃಹಸ್ಪತಿ ಮತ್ತು ರಾಹು ಅಥವಾ ಕೇತುವಿನ ಸಂಯೋಗದಿಂದ ರೂಪುಗೊಳ್ಳುವ ಈ ಯೋಗದ ಪ್ರಭಾವವನ್ನು ವಿಷ್ಣು ಆರಾಧನೆ, ಮಂತ್ರ ಪಠಣ, ದಾನ ಧರ್ಮಗಳು ಹಾಗೂ ಹಿರಿಯರ ಗೌರವದ ಮೂಲಕ ಪರಿಣಾಮಕಾರಿಯಾಗಿ ಕಡಿಮೆ ಮಾಡಿಕೊಳ್ಳಬಹುದು.

Guru Chandal Yoga: ಗುರು ಚಂಡಾಲ ಯೋಗ ಎಂದರೇನು? ಇದರಿಂದಾಗುವ ಸಮಸ್ಯೆಗಳೇನು?
ಗುರು ಚಂಡಾಲ ಯೋಗ
ಅಕ್ಷತಾ ವರ್ಕಾಡಿ
|

Updated on: Mar 17, 2026 | 5:23 PM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಚಾರ ಮತ್ತು ಅವುಗಳ ಸ್ಥಾನಪಲ್ಲಟವು ಮನುಷ್ಯನ ಜೀವನದ ಮೇಲೆ ಅಪಾರ ಪ್ರಭಾವ ಬೀರುತ್ತದೆ. ಜಾತಕದಲ್ಲಿ ಗ್ರಹಗಳು ಶುಭ ಸ್ಥಾನದಲ್ಲಿದ್ದರೆ ಜೀವನ ಸುಗಮವಾಗಿರುತ್ತದೆ, ಆದರೆ ಕೆಲವು ಗ್ರಹಗಳ ಸಂಯೋಗವು ಅಶುಭ ‘ಯೋಗ’ಗಳನ್ನು ಸೃಷ್ಟಿಸುತ್ತವೆ. ಅಂತಹವುಗಳಲ್ಲಿ ಪ್ರಮುಖವಾದುದು ‘ಗುರು ಚಂಡಾಲ ಯೋಗ’. ಈ ಯೋಗವು ಜಾತಕದಲ್ಲಿ ಕಂಡುಬಂದಾಗ ವ್ಯಕ್ತಿಯು ಮಾನಸಿಕ ಗೊಂದಲ, ತಪ್ಪು ನಿರ್ಧಾರಗಳು ಮತ್ತು ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು. ಆದರೆ ಸರಿಯಾದ ಧಾರ್ಮಿಕ ಪರಿಹಾರಗಳು ಮತ್ತು ಪ್ರಾರ್ಥನೆಗಳ ಮೂಲಕ ಇದರ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿದೆ.

ಗುರು ಚಂಡಾಲ ಯೋಗ ಎಂದರೇನು ಮತ್ತು ಅದು ಹೇಗೆ ರೂಪುಗೊಳ್ಳುತ್ತದೆ?

ದೇವಗುರು ಬೃಹಸ್ಪತಿಯು ರಾಹು ಅಥವಾ ಕೇತುವಿನೊಂದಿಗೆ ಒಂದೇ ಮನೆಯಲ್ಲಿ ಸ್ಥಿತನಾಗಿದ್ದಾಗ ಅಥವಾ ಇವರು ಪರಸ್ಪರ ದೃಷ್ಟಿಯನ್ನು ಹೊಂದಿದ್ದಾಗ ಜಾತಕದಲ್ಲಿ ಗುರು ಚಂಡಾಲ ಯೋಗ ಉಂಟಾಗುತ್ತದೆ. ಗುರುವು ಜ್ಞಾನ ಮತ್ತು ಧರ್ಮದ ಸಂಕೇತವಾದರೆ, ರಾಹು-ಕೇತುಗಳು ಅನಿಶ್ಚಿತತೆ ಮತ್ತು ಭ್ರಮೆಯ ಕಾರಕರು. ಇವರ ಸಂಯೋಗದಿಂದಾಗಿ ವ್ಯಕ್ತಿಯ ಶುದ್ಧ ಆಲೋಚನಾ ಶಕ್ತಿಯು ಮಂಕಾಗಬಹುದು. ಈ ಯೋಗದ ಪ್ರಭಾವವು ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ಬಲಾಬಲದ ಮೇಲೆ ನಿರ್ಧಾರವಾಗುತ್ತದೆ.

ಗುರು ಚಂಡಾಲ ಯೋಗದ ಲಕ್ಷಣಗಳು:

  • ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪದೇ ಪದೇ ತಪ್ಪುಗಳಾಗುವುದು.
  • ಶಿಕ್ಷಣ ಅಥವಾ ವೃತ್ತಿಜೀವನದಲ್ಲಿ ಅನಿರೀಕ್ಷಿತ ಅಡೆತಡೆಗಳು ಎದುರಾಗುವುದು.
  • ಆರ್ಥಿಕ ಅಸ್ಥಿರತೆ ಅಥವಾ ಹಣಕಾಸಿನ ನಷ್ಟ ಉಂಟಾಗುವುದು.
  • ಸದಾ ಮನಸ್ಸಿನಲ್ಲಿ ಗೊಂದಲ, ತಪ್ಪು ತಿಳುವಳಿಕೆ ಮತ್ತು ಅಶಾಂತಿ ನೆಲೆಸುವುದು.
  • ಸಮಾಜದಲ್ಲಿ ಗೌರವಕ್ಕೆ ಧಕ್ಕೆ ಬರುವಂತಹ ಸಂದರ್ಭಗಳು ಎದುರಾಗುವುದು.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಪರಿಹಾರ ಮಾರ್ಗಗಳು ಮತ್ತು ಪೂಜಾ ವಿಧಾನಗಳು:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದೋಷದ ಪ್ರಭಾವ ತಗ್ಗಿಸಲು ವಿಷ್ಣು ಸಹಸ್ರನಾಮ ಪಠಣ ಮತ್ತು ಗುರು ದೇವನ ಆರಾಧನೆ ಅತ್ಯಂತ ಫಲದಾಯಕ.

  • ಶ್ರೀ ಮಹಾವಿಷ್ಣುವಿನ ಆರಾಧನೆ: ಗುರುವಾರದಂದು ವಿಷ್ಣುವಿಗೆ ವಿಶೇಷ ಪೂಜೆ ಸಲ್ಲಿಸಿ. ಹಳದಿ ಬಣ್ಣದ ಹೂವುಗಳು, ಬಟ್ಟೆ ಹಾಗೂ ಕಡಲೆ ಹಿಟ್ಟಿನ ಸಿಹಿತಿಂಡಿಗಳನ್ನು ನೈವೇದ್ಯವಾಗಿ ಅರ್ಪಿಸುವುದರಿಂದ ಗುರು ಗ್ರಹವು ಬಲಗೊಂಡು ನಕಾರಾತ್ಮಕತೆ ದೂರವಾಗುತ್ತದೆ.
  • ಮಂತ್ರ ಪಠಣ: ಪ್ರತಿ ಗುರುವಾರ ‘ಓಂ ಬೃಂ ಬೃಹಸ್ಪತಯೇ ನಮಃ’ ಎಂಬ ಮಂತ್ರವನ್ನು ಕನಿಷ್ಠ 108 ಬಾರಿ ಜಪಿಸುವುದು ಉತ್ತಮ.
  • ರಾಹು-ಕೇತು ಶಾಂತಿ: ರಾಹುವಿನ ಅಶುಭ ದೃಷ್ಟಿ ನಿವಾರಿಸಲು ಶನಿವಾರದಂದು ಬಡವರಿಗೆ ಕಪ್ಪು ಎಳ್ಳು, ಸಾಸಿವೆ ಎಣ್ಣೆ ಅಥವಾ ಕಪ್ಪು ಬಟ್ಟೆಯನ್ನು ದಾನ ಮಾಡಿ.
  • ದಾನ ಧರ್ಮ: ಗುರುವಾರದಂದು ಹಳದಿ ವಸ್ತುಗಳಾದ ಅರಿಶಿನ, ಕಡಲೆ ಬೇಳೆ ಅಥವಾ ಬಾಳೆಹಣ್ಣನ್ನು ದಾನ ಮಾಡುವುದರಿಂದ ಗುರುವಿನ ಅನುಗ್ರಹ ಲಭಿಸುತ್ತದೆ.
  • ಗುರು ಹಿರಿಯರ ಗೌರವ: ಆಧ್ಯಾತ್ಮಿಕ ಗುರುಗಳನ್ನು, ಹಿರಿಯರನ್ನು ಗೌರವಿಸುವುದು ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಈ ಯೋಗದ ದುಷ್ಪರಿಣಾಮಗಳನ್ನು ತಗ್ಗಿಸಲು ಇರುವ ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಮಾರ್ಗವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಎಸ್​​ಎಸ್​​ಎಲ್​​ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮಿಡಿದ ಕಂಡಕ್ಟರ್​​ ಮನ
ಎಸ್​​ಎಸ್​​ಎಲ್​​ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಮಿಡಿದ ಕಂಡಕ್ಟರ್​​ ಮನ
ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಕಾಪಾಡಿದ ಹೆಡ್ ಕಾನ್ಸ್‌ಟೇಬಲ್
ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಕಾಪಾಡಿದ ಹೆಡ್ ಕಾನ್ಸ್‌ಟೇಬಲ್
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು?
ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಸೇಲ್ ಆಗ್ತಿತ್ತು?
ಪಬ್ಗಳಿಗೂ ಸಿಲಿಂಡರ್ ಸಮಸ್ಯೆ:  ಹೋಟೆಲ್ ಗ್ರಾಹಕರಿಗೆ ಕಲ್ಯಾಣ ಮಂಟಪದ ಊಟ!
ಪಬ್ಗಳಿಗೂ ಸಿಲಿಂಡರ್ ಸಮಸ್ಯೆ:  ಹೋಟೆಲ್ ಗ್ರಾಹಕರಿಗೆ ಕಲ್ಯಾಣ ಮಂಟಪದ ಊಟ!
ರೀಲ್ಸ್​​​​ಗಾಗಿ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್‌ಫೈರ್
ರೀಲ್ಸ್​​​​ಗಾಗಿ ಎದೆಗೆ ರಿವಾಲ್ವರ್ ಇಟ್ಟು ವಿಡಿಯೋ ಮಾಡುವಾಗ ಮಿಸ್‌ಫೈರ್
ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​​
ಮಗನ ಆಸ್ಪತ್ರೆಗೆ ಕರೆದೊಯ್ದಿದ್ದ ಮಹಿಳೆಯ ಬಲಿ ಪಡೆದ ಬಿಎಂಟಿಸಿ ಬಸ್​​
ಚಿಕ್ಕಪ್ಪ ಇದ್ದಾಗಿನ ಹುಟ್ಟುಹಬ್ಬ ಹೇಗಿತ್ತು? ನೆನಪಿಸಿಕೊಂಡ ವಿನಯ್-ಯುವ
ಚಿಕ್ಕಪ್ಪ ಇದ್ದಾಗಿನ ಹುಟ್ಟುಹಬ್ಬ ಹೇಗಿತ್ತು? ನೆನಪಿಸಿಕೊಂಡ ವಿನಯ್-ಯುವ
ಗೃಹ ಸಚಿವರಿಗೇ 50 ಲಕ್ಷ ಲಂಚ ಕೊಟ್ಟಿದ್ರಾ ಇನ್ಸ್‌ಪೆಕ್ಟರ್? ಸಂತ್ರಸ್ತೆ ಆರೋಪ
ಗೃಹ ಸಚಿವರಿಗೇ 50 ಲಕ್ಷ ಲಂಚ ಕೊಟ್ಟಿದ್ರಾ ಇನ್ಸ್‌ಪೆಕ್ಟರ್? ಸಂತ್ರಸ್ತೆ ಆರೋಪ
ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಮುಂಬಡ್ತಿ ಪರೀಕ್ಷೆ ಮುಂದೂಡಿಕೆ
ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ: ಮುಂಬಡ್ತಿ ಪರೀಕ್ಷೆ ಮುಂದೂಡಿಕೆ
ಪುನೀತ್ ಸಮಾಧಿಗೆ ಪೂಜೆ ಮಾಡಿದ ಕುಟುಂಬಸ್ಥರು; ಅಪ್ಪುನ ನೆನಪಿಸಿಕೊಂಡ ಕುಟುಂಬ
ಪುನೀತ್ ಸಮಾಧಿಗೆ ಪೂಜೆ ಮಾಡಿದ ಕುಟುಂಬಸ್ಥರು; ಅಪ್ಪುನ ನೆನಪಿಸಿಕೊಂಡ ಕುಟುಂಬ