AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಕಷ್ಟ ಮಿತಿಮೀರಿ, ದಿಕ್ಕು ತೋಚದೇ ಇದ್ದಾಗ ಈ ಒಂದು ಮಂತ್ರ ಪಠಿಸಿ; ವಾರಗಳಲ್ಲಿ ಶುಭ ಫಲಿತಾಂಶ ಪಡೆಯುವಿರಿ

ಜೀವನದ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಪಡೆಯಲು ಡಾ. ಬಸವರಾಜ್ ಗುರೂಜಿ ಅವರು ಸರಳ ಹಾಗೂ ಶಕ್ತಿಶಾಲಿ ಮಂತ್ರೋಪಾಯವನ್ನು ವಿವರಿಸಿದ್ದಾರೆ. ಪ್ರತಿದಿನ "ಓಂ ಧೂಂ ಧೂಂ ಧೂಮಾವತಿಯೇ ಸ್ವಾಹಾ" ಮಂತ್ರವನ್ನು ಜಪಿಸಿ, ಅಕ್ಕಿ, ಕುಂಕುಮ, ತುಪ್ಪದಿಂದ ಮಾಡಿದ ಮುದ್ದೆಯನ್ನು ಕಾಗೆಗಳಿಗೆ ಅರ್ಪಿಸುವ ಈ ವಿಧಾನವು ದಾರಿದ್ರ್ಯ ನಿವಾರಿಸಿ ಶುಭ ಫಲ ನೀಡುತ್ತದೆ. ಸೋಮವಾರ, ಬುಧವಾರ, ಶನಿವಾರ ಸೂರ್ಯೋದಯದ ಸಮಯದಲ್ಲಿ ಇದನ್ನು ಮಾಡಬೇಕು.

Daily Devotional: ಕಷ್ಟ ಮಿತಿಮೀರಿ, ದಿಕ್ಕು ತೋಚದೇ ಇದ್ದಾಗ ಈ ಒಂದು ಮಂತ್ರ ಪಠಿಸಿ; ವಾರಗಳಲ್ಲಿ ಶುಭ ಫಲಿತಾಂಶ ಪಡೆಯುವಿರಿ
ಮಂತ್ರ
ಅಕ್ಷತಾ ವರ್ಕಾಡಿ
|

Updated on:Nov 14, 2025 | 10:33 AM

Share

ಜೀವನದಲ್ಲಿ ಸುಖ-ದುಃಖಗಳು ಸಾಮಾನ್ಯ. ಆದರೆ ಕಷ್ಟಗಳು ಮಿತಿಮೀರಿದಾಗ, ದಿಕ್ಕು ತೋಚದ ಪರಿಸ್ಥಿತಿಯುಂಟಾದಾಗ ಅದನ್ನು ದಾರಿದ್ರ್ಯ ಎಂದು ಕರೆಯಲಾಗುತ್ತದೆ. ಇಂತಹ ಕಠಿಣ ದಾರಿದ್ರ್ಯದಿಂದ ಪಾರಾಗಲು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖಿತವಾದ ಸೂಕ್ಷ್ಮ ತಂತ್ರವೊಂದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಈ ಪರಿಹಾರವು, ಸಕಲ ಕಷ್ಟಕರವಾದ ದಾರಿದ್ರ್ಯದಿಂದ ಹೊರಬಂದು ಶುಭವನ್ನು ಪಡೆಯಲು ಸಹಕಾರಿ ಎಂದು ಗುರೂಜಿ ಹೇಳಿದ್ದಾರೆ.

ಈ ಪರಿಹಾರದ ಕೇಂದ್ರಬಿಂದು “ಓಂ ಧೂಂ ಧೂಂ ಧೂಮಾವತಿಯೇ ಸ್ವಾಹಾ” ಎಂಬ ಮಂತ್ರ. ಈ ಮಂತ್ರವನ್ನು ಪ್ರತಿನಿತ್ಯ ಜಪಿಸುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಮಂತ್ರ ಜಪದ ಜೊತೆಗೆ ಒಂದು ನಿರ್ದಿಷ್ಟ ವಿಧಿಯನ್ನು ಅನುಸರಿಸುವುದು ಸಹ ಅಗತ್ಯ.

ವಿಡಿಯೋ ಇಲ್ಲಿದೆ ನೋಡಿ:

ಮೊದಲಿಗೆ, ಊಟಕ್ಕೆ ಬಳಸುವ ಅಕ್ಕಿಯಿಂದ ಪ್ರತ್ಯೇಕವಾಗಿ, ಅಂದರೆ ಅದಕ್ಕಾಗಿಯೇ ಸ್ವಲ್ಪ ಅನ್ನವನ್ನು ತಯಾರಿಸಬೇಕು. ಈ ಅನ್ನವನ್ನು ಒಂದು ಹಿಡಿಯಷ್ಟು ತೆಗೆದುಕೊಂಡು, ಅದಕ್ಕೆ ಒಂದು ಚಿಟಿಕೆಯಷ್ಟು ಕುಂಕುಮ ಮತ್ತು ಸ್ವಲ್ಪ ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಒಂದು ಉಂಡೆಯನ್ನಾಗಿ ಮಾಡಬೇಕು. ಗಮನಿಸಿ, ಕುಂಕುಮ ಅತಿಯಾಗಿರಬಾರದು, ಸಾಸಿವೆ ಕಾಳಿನಷ್ಟು ಪ್ರಮಾಣ ಸಾಕು.

ತಯಾರಿಸಿದ ಈ ಅನ್ನದ ಮುದ್ದೆಯನ್ನು ನಿಮ್ಮ ಅಂಗೈಯಲ್ಲಿ ಇಟ್ಟುಕೊಂಡು, ಪೂರ್ವ ದಿಕ್ಕಿಗೆ ಮುಖ ಮಾಡಿ ನಿಲ್ಲಬೇಕು. ನಂತರ, “ಓಂ ಧೂಂ ಧೂಂ ಧೂಮಾವತಿಯೇ ಸ್ವಾಹಾ” ಎಂಬ ಮಂತ್ರವನ್ನು 11 ಬಾರಿ ಭಕ್ತಿಪೂರ್ವಕವಾಗಿ ಜಪಿಸಬೇಕು. ಮಂತ್ರ ಜಪಿಸಿದ ನಂತರ, ಅಂಗೈಯಲ್ಲಿರುವ ಆ ಮುದ್ದೆಯನ್ನು ನಿಮ್ಮ ತಲೆಯ ಸುತ್ತ ಮೂರು ಬಾರಿ ನಿವಾಳಿಸಬೇಕು.

ಇದನ್ನೂ ಓದಿ: ಮಹಿಳೆಯರು ಶವ ಯಾತ್ರೆಯಲ್ಲಿ ಭಾಗವಹಿಸಬಹುದೇ? ವೈಜ್ಞಾನಿಕ ದೃಷ್ಟಿಕೋನ ಇಲ್ಲಿದೆ

ನಿವಾಳಿಸಿದ ನಂತರ, ಆ ಅನ್ನದ ಮುದ್ದೆಯನ್ನು ಹೊರಗಡೆ, ಕಾಗೆಗಳು ಬರುವ ಜಾಗದಲ್ಲಿ ಅಥವಾ ಮೂರು ದಾರಿ ಕೂಡುವ ಸ್ಥಳದಲ್ಲಿ ಇಟ್ಟು ಬರಬೇಕು. ಮುದ್ದೆಯನ್ನು ಇಟ್ಟು ಬಂದ ನಂತರ, ಮನೆಗೆ ಹಿಂದಿರುಗಿ ಕೈಕಾಲು ಮುಖ ತೊಳೆದು ಶುದ್ಧರಾಗಿ ದೀಪ ಹಚ್ಚಿ ಪ್ರಾರ್ಥಿಸಬೇಕು.

ಈ ಪರಿಹಾರವನ್ನು ಸೂರ್ಯೋದಯದ ಸಮಯದಲ್ಲಿ ವಾರದಲ್ಲಿ ಮೂರು ನಿರ್ದಿಷ್ಟ ದಿನಗಳಲ್ಲಿ ಅಂದರೆ ಸೋಮವಾರ, ಬುಧವಾರ ಮತ್ತು ಶನಿವಾರ ಮಾಡುವುದು ಶುಭ. ಈ ಮೂರು ದಿನಗಳಲ್ಲಿ ಒಮ್ಮೆ ನಿಯಮಿತವಾಗಿ ಆಚರಿಸುವುದರಿಂದ ತಕ್ಷಣವೇ ಶುಭ ಫಲಗಳನ್ನು ನೀವು ಪಡೆಯಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:33 am, Fri, 14 November 25

Follow Us
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ