AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesh Chaturthi 2025: ಗಣೇಶ ಪೂಜೆಯಲ್ಲಿ 21 ಎಲೆಗಳನ್ನು ಏಕೆ ಅರ್ಪಿಸಲಾಗುತ್ತದೆ? ಇದರ ವಿಶೇಷತೆ ಏನು?

ಗಣೇಶ ಚತುರ್ಥಿಯಲ್ಲಿ 21 ಬಗೆಯ ಎಲೆಗಳನ್ನು ಅರ್ಪಿಸುವುದು ಏಕವಿಂಶತಿ ಪತ್ರ ಪೂಜೆ ಎಂದು ಕರೆಯಲ್ಪಡುತ್ತದೆ. ಪ್ರತಿ ಎಲೆಯೂ ವಿಶೇಷ ಶಕ್ತಿ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಬನ್ನಿ ಎಲೆ ವಿಜಯಕ್ಕೆ, ಬಿಲ್ವಪತ್ರೆ ಶುದ್ಧತೆಗೆ, ತುಳಸಿ ಎಲೆ ವಿಶೇಷ ಶುಭಕ್ಕೆ ಸಂಕೇತ. ಈ ಪೂಜೆಯಿಂದ ಗಣಪತಿಯ ಪ್ರಸಾದ ಮತ್ತು ಜೀವನದಲ್ಲಿ ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

Ganesh Chaturthi 2025: ಗಣೇಶ ಪೂಜೆಯಲ್ಲಿ 21 ಎಲೆಗಳನ್ನು ಏಕೆ ಅರ್ಪಿಸಲಾಗುತ್ತದೆ? ಇದರ ವಿಶೇಷತೆ ಏನು?
ಗಣೇಶ ಪೂಜೆ
ಅಕ್ಷತಾ ವರ್ಕಾಡಿ
|

Updated on: Aug 24, 2025 | 7:02 AM

Share

ದೇಶಾದ್ಯಂತ ಗಣೇಶ ಚತುರ್ಥಿಯನ್ನು ಬಹಳ ವಿಜೃಂಭಣೆಯಿಂದ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಗಣೇಶನ ಮಣ್ಣಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ 10 ದಿನಗಳ ಕಾಲ ಪೂಜಿಸಿ ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ. ಇದರೊಂದಿಗೆ ಗಣೇಶನಿಗೆ 21 ಬಗೆಯ ಎಲೆಗಳು, 21 ಬಗೆಯ ಹೂವುಗಳು ಮತ್ತು 21 ಬಗೆಯ ಮೋದಕಗಳನ್ನು ಅರ್ಪಿಸಲಾಗುತ್ತದೆ. ಇದನ್ನು ಪತ್ರ ಪೂಜೆ, ಏಕವಿಂಶತಿ ಪತ್ರ ಪೂಜೆ ಎಂದೂ ಕರೆಯುತ್ತಾರೆ. ಆದರೆ ಇದು ಏಕೆ ವಿಶೇಷ ಎಂದು ತಿಳಿದಿದೆಯೇ? ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ.

ಶಾಸ್ತ್ರಗಳ ಪ್ರಕಾರ, ಈ ಎಲೆಗಳು ವಿಭಿನ್ನ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ. 21 ಎಲೆಗಳನ್ನು ಅರ್ಪಿಸುವುದರಿಂದ ವಿಘ್ನಹರ್ತ ಗಣಪತಿಯು ಬೇಗನೆ ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಜೀವನದಿಂದ ತೊಂದರೆಗಳನ್ನು ನಿವಾರಿಸುತ್ತಾನೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತಾನೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಸೆ. 07 ಎರಡನೇ ಚಂದ್ರಗ್ರಹಣ; ಈ ಎರಡು ರಾಶಿಯವರು ಅತ್ಯಂತ ಜಾಗರೂಕರಾಗಿರಿ

21 ಎಲೆಗಳನ್ನು ಅರ್ಪಿಸುವ ಸಂಪ್ರದಾಯವು ಕೇವಲ ಧಾರ್ಮಿಕವಲ್ಲ, ಅದರಲ್ಲಿ ಆಳವಾದ ಆಧ್ಯಾತ್ಮಿಕ ರಹಸ್ಯವೂ ಅಡಗಿದೆ. ಪ್ರತಿಯೊಂದು ಎಲೆಯೂ ವಿಶೇಷ ಶಕ್ತಿ, ಗುಣ ಮತ್ತು ಆಶೀರ್ವಾದದ ಸಂಕೇತವಾಗಿದೆ. ಅದರಂತೆ ಗರಿಕೆ ಸಮೃದ್ಧಿಯ ಸಂಕೇತದಂತೆ, ಬನ್ನಿ ಎಲೆ ವಿಜಯದ ಸಂಕೇತ, ಬಿಲ್ವಾಪತ್ರೆ ಶುದ್ಧತೆಯ ಸಂಕೇತ ಮತ್ತು ಧಾತುರಾ ಉಗ್ರ ಶಕ್ತಿಗಳನ್ನು ಶಾಂತಗೊಳಿಸುವ ಸಂಕೇತವಾಗಿದೆ. ವಿಶೇಷವೆಂದರೆ ತುಳಸಿ ಎಲೆಗಳನ್ನು ಸಾಮಾನ್ಯ ದಿನಗಳಲ್ಲಿ ಗಣಪತಿಗೆ ಅರ್ಪಿಸುವುದಿಲ್ಲ, ಆದರೆ ಗಣೇಶ ಚತುರ್ಥಿಯಂದು ಇದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಈ ಎಲೆಗಳಿಂದ ಪೂಜಿಸುವುದರಿಂದ ಜೀವನದಲ್ಲಿನ ಅಡೆತಡೆಗಳು ನಿವಾರಣೆಯಾಗಿ ಸಂತೋಷ ಮತ್ತು ಸಮೃದ್ಧಿ ದೊರೆಯುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ