Daily Devotional: ಬೇರೆಯವರ ಮನೆಗೆ ಅತಿಥಿಯಾಗಿ ಹೋದಾಗ ನಮ್ಮ ನಡವಳಿಕೆ ಹೇಗಿರಬೇಕು?

ಡಾ. ಬಸವರಾಜ ಗುರೂಜಿಯವರು ಅತಿಥಿಯಾಗಿ ನಾವು ಬೇರೆಯವರ ಮನೆಗೆ ಭೇಟಿ ನೀಡಿದಾಗ ನಮ್ಮ ನಡವಳಿಕೆ ಹೇಗಿರಬೇಕು ಎಂಬುದನ್ನು ಇಲ್ಲಿ ವಿವರಿಸಿದ್ದಾರೆ. ಅತಿಥಿಗಳು ತಮ್ಮ ಅತಿಥೇಯರ ಮನೆ, ವಸ್ತುಗಳು ಮತ್ತು ಜೀವನಶೈಲಿಯ ಬಗ್ಗೆ ಗೌರವಯುತವಾಗಿ ವರ್ತಿಸುವುದು ಮತ್ತು ಅವಹೇಳನಕಾರಿಯಾಗಿ ಮಾತನಾಡದಿರುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

Daily Devotional: ಬೇರೆಯವರ ಮನೆಗೆ ಅತಿಥಿಯಾಗಿ ಹೋದಾಗ ನಮ್ಮ ನಡವಳಿಕೆ ಹೇಗಿರಬೇಕು?
Graceful Guest Conduc

Updated on: Jun 01, 2025 | 8:41 AM

ಮನೆಗೆ ಅತಿಥಿ ಬಂದಾಗ ಅವರೊಂದಿಗೆ ನಾವು ಹೇಗೆ ನಡೆದುಕೊಳ್ಳಬೇಕು ಮತ್ತು ನಾವು ಬೇರೆಯಾವರ ಮನೆಗೆ ಅತಿಥಿಯಾಗಿ ಹೋದಾಗ ನಮ್ಮ ನಡವಳಿಕೆ ಹೇಗಿರಬೇಕು ಎಂಬುದರ ಕುರಿತು ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿಗಳಾದ ಬಸವರಾಜ್​​ ಗುರೂಜಿಯವರು ವಿವರಿಸಿದ್ದಾರೆ. ನಾವು ಬೇರೆಯವರ ಮನೆ, ಅಲ್ಲಿನ ವಸ್ತುಗಳು, ಮತ್ತು ಅವರ ಜೀವನಶೈಲಿಯನ್ನು ಟೀಕಿಸುವುದು, ಅವಹೇಳನ ಮಾಡುವುದು ಪಾಪಕರ್ಮಗಳಿಗೆ ಕಾರಣವಾಗುತ್ತದೆ. ಇದು ನಮ್ಮ ಅದೃಷ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಗರೂಜಿ ಎಚ್ಚರಿಸಿದ್ದಾರೆ.

ಗುರೂಜಿ ಅವರು ಹೇಳುವಂತೆ, ನಾವು ಯಾರ ಮನೆಗೆ ಹೋದರೂ, ಆ ಮನೆಯ ವಾತಾವರಣಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕು. ಅವರ ಮನೆಯಲ್ಲಿರುವ ವಸ್ತುಗಳು ನಮ್ಮ ಮನೆಯಲ್ಲಿರುವ ವಸ್ತುಗಳಿಗಿಂತ ಚಿಕ್ಕದಾಗಿದ್ದರೂ ಅಥವಾ ಕಡಿಮೆ ಮೌಲ್ಯದ್ದಾಗಿದ್ದರೂ, ನಾವು ಅದನ್ನು ಅವಹೇಳನ ಮಾಡಬಾರದು. ಅವರ ಕುಟುಂಬದ ಸದಸ್ಯರು, ಅವರ ವೃತ್ತಿ, ಅವರ ಆದಾಯದ ಬಗ್ಗೆಯೂ ನಾವು ಟೀಕಿಸಬಾರದು. ಪ್ರತಿಯೊಬ್ಬರೂ ತಮ್ಮ ಜೀವನವನ್ನು ತಮ್ಮದೇ ಆದ ರೀತಿಯಲ್ಲಿ ನಿರ್ವಹಿಸುತ್ತಾರೆ. ನಮ್ಮ ಜೀವನಶೈಲಿಯನ್ನು ಅವರ ಜೀವನಶೈಲಿಯೊಂದಿಗೆ ಹೋಲಿಸಿ ಅವರನ್ನು ಟೀಕಿಸುವುದು ಸರಿಯಲ್ಲ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಆಹಾರದ ಬಗ್ಗೆಯೂ ಗುರೂಜಿ ವಿವರಿಸಿದ್ದಾರೆ. ಅವರು ನಮಗೆ ಕೊಡುವ ಆಹಾರವನ್ನು, ಅದು ನಮಗೆ ಇಷ್ಟವಾಗದಿದ್ದರೂ, ಕೃತಜ್ಞತೆಯಿಂದ ಸ್ವೀಕರಿಸಬೇಕು. ಕುಚೇಲನ ಕಥೆ ಇದಕ್ಕೆ ಉದಾಹರಣೆ. ಕುಚೇಲನು ಪರಮಾತ್ಮನಿಗೆ ಅವಲಕ್ಕಿ ನೈವೇದ್ಯ ಮಾಡಿದ್ದು, ಅವನಿಗೆ ಅಪಾರ ಐಶ್ವರ್ಯ ತಂದಿತು ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ. ಸಣ್ಣದಾದರೂ, ಪ್ರೀತಿಯಿಂದ ಸ್ವೀಕರಿಸಿದ ಆಹಾರವು ಭಗವಂತನ ಕೃಪೆಗೆ ಪಾತ್ರವಾಗುತ್ತದೆ.

ಇದನ್ನೂ ಓದಿ: ಸೂರ್ಯ ಮೃಗಶಿರ ನಕ್ಷತ್ರಕ್ಕೆ ಪ್ರವೇಶ; ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ

ಸಂಕ್ಷಿಪ್ತವಾಗಿ ಹೇಳುವುದಾದರೆ, ಅತಿಥಿಯಾಗಿರುವಾಗ ನಾವು ನಮ್ಮ ನಡವಳಿಕೆಯನ್ನು ಗಮನಿಸಬೇಕು. ಗೌರವ, ಧನಾತ್ಮಕ ಮನೋಭಾವ, ಮತ್ತು ಕೃತಜ್ಞತೆಯಿಂದ ವರ್ತಿಸುವುದು ನಮ್ಮ ಕರ್ಮಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದು ನಮ್ಮ ಜೀವನದಲ್ಲಿ ಒಳ್ಳೆಯದನ್ನು ತರುತ್ತದೆ ಎಂದು ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:41 am, Sun, 1 June 25