AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hindu Rituals: ವಿವಾಹಿತ ಮಹಿಳೆಯರು ದಾರವನ್ನು ಯಾವ ಕೈಯಲ್ಲಿ ಕಟ್ಟಬೇಕು? ನಿಯಮಗಳೇನು?

 ಹಿಂದೂ ಧರ್ಮದಲ್ಲಿ ಕಲವಾ ಕಟ್ಟುವುದಕ್ಕೆ ವಿಶೇಷ ಮಹತ್ವವಿದೆ. ಯಾವುದೇ ಶುಭ ಕಾರ್ಯವನ್ನು ಮೌಲಿ ಅಥವಾ ಕಲವಾವನ್ನು ಕಟ್ಟುವ ಮೂಲಕ ಪ್ರಾರಂಭಿಸಲಾಗುತ್ತದೆ. ಈ ಮೌಲಿಯನ್ನು ರಕ್ಷಾ ಸೂತ್ರ ಎಂದೂ ಕೂಡ ಕರೆಯುತ್ತಾರೆ. ಆದರೆ ಇದನ್ನು ಕಟ್ಟಲು ಕೆಲವು ನಿಯಮಗಳಿವೆ. ಜೊತೆಗೆ ವಿವಾಹಿತ ಮಹಿಳೆಯರು ಕಲವಾವನ್ನು ಯಾವ ಕೈಯಲ್ಲಿ ಕಟ್ಟಬೇಕು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

Hindu Rituals: ವಿವಾಹಿತ ಮಹಿಳೆಯರು ದಾರವನ್ನು ಯಾವ ಕೈಯಲ್ಲಿ ಕಟ್ಟಬೇಕು? ನಿಯಮಗಳೇನು?
ಪ್ರೀತಿ ಭಟ್​, ಗುಣವಂತೆ
| Edited By: |

Updated on: Apr 15, 2024 | 10:30 AM

Share

ಮೌಲಿ, ಕಲವಾ, ರಕ್ಷಾಸೂತ್ರ ಅಥವಾ ಹಸಿ ದಾರ ಹೀಗೆ ನಾನಾ ಹೆಸರುಗಳಿಂದ ಕರೆಯುವ ದಾರವನ್ನು ಕೈಯ ಮಣಿಕಟ್ಟಿನ ಮೇಲೆ, ಸೊಂಟದ ಮೇಲೆ, ಕುತ್ತಿಗೆಯ ಮೇಲೆ, ಕಲಶದ ಮೇಲೆ, ಮರಕ್ಕೆ, ಹೊಸದಾದ ವಸ್ತುಗಳ ಮೇಲೆ ಮತ್ತು ದೇವರ ಸ್ಥಳದಲ್ಲಿ ಕಟ್ಟುವುದನ್ನು ನೀವು ಗಮನಿಸಿರಬಹುದು. ವ್ರತವನ್ನು ಆಚರಿಸುವ ಅಥವಾ ವ್ರತ ಮಾಡುವುದಾಗಿ ಪ್ರತಿಜ್ಞೆಯನ್ನು ತೆಗೆದುಕೊಂಡವರು ಈ ದಾರ ಕಟ್ಟುವುದನ್ನು ನೀವು ಗಮನಿಸಿರಬಹುದು. ಅದರಲ್ಲಿಯೂ ಈ ಮೌಲಿಯನ್ನು ಕಟ್ಟುವುದು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಯಾವುದೇ ಶುಭ ಕಾರ್ಯವನ್ನು ಮೌಲಿ ಅಥವಾ ಕಲವಾವನ್ನು ಕಟ್ಟುವ ಮೂಲಕ ಪ್ರಾರಂಭಿಸಲಾಗುತ್ತದೆ. ಈ ಮೌಲಿಯನ್ನು ರಕ್ಷಾ ಸೂತ್ರ ಎಂದೂ ಕೂಡ ಕರೆಯುತ್ತಾರೆ. ಆದರೆ ಇದನ್ನು ಕಟ್ಟಲು ಕೆಲವು ನಿಯಮಗಳಿವೆ. ಜೊತೆಗೆ ವಿವಾಹಿತ ಮಹಿಳೆಯರು ಕಲವಾವನ್ನು ಯಾವ ಕೈಯಲ್ಲಿ ಕಟ್ಟಬೇಕು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.

  • ಅವಿವಾಹಿತ ಹುಡುಗಿಯರು ಮತ್ತು ಹುಡುಗರು ಯಾವಾಗಲೂ ದಾರವನ್ನು ತಮ್ಮ ಬಲಗೈಗೆ ಕಟ್ಟಬೇಕು. ವಿವಾಹಿತ ಮಹಿಳೆಯರು ತಮ್ಮ ಎಡಗೈಗೆ ಕಲವಾ ಕಟ್ಟುವುದು ಶುಭಕರ.
  • ಯಾವಾಗಲೂ ದಾರ ಕಟ್ಟುವಾಗ ಸ್ವಲ್ಪ ದಕ್ಷಿಣೆಯನ್ನು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳಿ. ಜೊತೆಗೆ ಆ ಮುಷ್ಠಿಯನ್ನು ಮುಚ್ಚಿಡಿ. ಅಲ್ಲದೆ, ದಾರ ಕಟ್ಟುವಾಗ, ಒಂದು ಕೈ ತಲೆಯ ಮೇಲೆ ಇರಬೇಕು.
  • ಕೈಯಿಗೆ ದಾರವನ್ನು ಕಟ್ಟುವಾಗ, 3, 5 ಅಥವಾ 7 ಬಾರಿ ತಿರುಗಿಸುವ ಅಥವಾ ಸುತ್ತುವುದನ್ನು ಮರೆಯಬೇಡಿ.
  • ಯಾವಾಗಲಾದರೂ ಈ ದಾರವನ್ನು ತೆಗೆದುಹಾಕಬೇಕು ಎಂದು ಅನಿಸಿದಲ್ಲಿ ಮಂಗಳವಾರ ಅಥವಾ ಶನಿವಾರ ಅದನ್ನು ತೆಗೆದುಹಾಕಿ. ಈ ದಾರ ಅಥವಾ ಕಲವಾವನ್ನು ತೆಗೆದ ಬಳಿಕ ಅದನ್ನು ಎಸೆಯಬೇಡಿ, ಅದನ್ನು ಶುದ್ಧ ನೀರಿನಲ್ಲಿ ತೊಳೆದು ಅರಳಿ ಮರದ ಕೆಳಗೆ ಇರಿಸಿ, ಅಥವಾ ಹರಿಯುವ ನೀರಿನಲ್ಲಿ ಬಿಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ