AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paush Purnima 2022: ಪುಷ್ಯ ಪೂರ್ಣಿಮಾ ವ್ರತ ಮತ್ತು ಮಹತ್ವ, ಈ ದಿನ ಉಪವಾಸ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ

ಪುಷ್ಯ ಪೂರ್ಣಿಮಾ ದಿನದಂದು, ಚಂದ್ರನು ತನ್ನ ರಾಶಿಚಕ್ರ ಚಿಹ್ನೆಯಾದ ಕಟಕ ರಾಶಿಯಲ್ಲಿ ಸಂಚಾರವನ್ನು ಮಾಡುತ್ತಾನೆ. ಇದು ಮನಸ್ಸು, ಮೆದುಳು ಮತ್ತು ನೀರಿನ ಅಂಶದ ಮೇಲೆ ಪರಿಣಾಮ ಬೀರುತ್ತದೆ.

Paush Purnima 2022: ಪುಷ್ಯ ಪೂರ್ಣಿಮಾ ವ್ರತ ಮತ್ತು ಮಹತ್ವ, ಈ ದಿನ ಉಪವಾಸ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ
ಪುಷ್ಯ ಪೂರ್ಣಿಮಾ
Follow us
TV9 Web
| Updated By: ಆಯೇಷಾ ಬಾನು

Updated on: Jan 17, 2022 | 6:55 AM

ಪುಷ್ಯ ಪೂರ್ಣಿಮಾ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾಗಿದೆ. ಪುಷ್ಯ ಪೂರ್ಣಿಮಾದ ವಿಶೇಷ ಮಹತ್ವವನ್ನು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಪುಷ್ಯ ತಿಂಗಳ ಶುಕ್ಲ ಪಕ್ಷದ ಹುಣ್ಣಿಮೆಯ ದಿನವನ್ನು ಪುಷ್ಯ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಈ ಬಾರಿ ಈ ಶುಭ ದಿನ ಜನವರಿ 17 ರಂದು ಸೋಮವಾರ ಬಂದಿದೆ. ಈ ಪೂರ್ಣಿಮಾ ತಿಥಿಯಂದು ಜನರು ಗಂಗಾ, ಯಮುನಾ, ನರ್ಮದಾ, ಗೋದಾವರಿ ಮುಂತಾದ ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ ಮತ್ತು ದಿನವಿಡೀ ಉಪವಾಸ ಮಾಡುತ್ತಾರೆ. ಈ ದಿನದಂದು, ಜಪಕ್ಕೆ, ತಪಸ್ಸಿಗೆ ಮತ್ತು ದಾನಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಈ ಬಾರಿ, ಪುಷ್ಯ ಪೂರ್ಣಿಮಾದಂದು ಗುರುಪುಷ್ಯ ಎಂಬ ಯೋಗವು ರಚಿತವಾಗುತ್ತದೆ. ಇದು ಈ ದಿನದ ಮಹತ್ವವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಪುಷ್ಯ ಪೂರ್ಣಿಮಾ ವ್ರತ 2022 ದಿನಾಂಕ ಈ ವರ್ಷ ಪುಷ್ಯ ಪೂರ್ಣಿಮಾ ವ್ರತವನ್ನು ಜನವರಿ 17 ರಂದು ಆಚರಿಸಲಾಗುತ್ತದೆ.

ಪುಷ್ಯ ಪೂರ್ಣಿಮಾ 2022 ತಿಥಿ ಸಮಯ ಪೂರ್ಣಿಮಾ ತಿಥಿಯು ಜನವರಿ 17 ರಂದು ಬೆಳಿಗ್ಗೆ 3:18ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜನವರಿ 18 ರಂದು ಬೆಳಿಗ್ಗೆ 5:17 ಕ್ಕೆ ಕೊನೆಗೊಳ್ಳುತ್ತದೆ.

ಪುಷ್ಯ ಪೂರ್ಣಿಮಾ ದಿನದ ಮಹತ್ವ ಪುಷ್ಯ ಪೂರ್ಣಿಮಾ ದಿನದಂದು, ಚಂದ್ರನು ತನ್ನ ರಾಶಿಚಕ್ರ ಚಿಹ್ನೆಯಾದ ಕಟಕ ರಾಶಿಯಲ್ಲಿ ಸಂಚಾರವನ್ನು ಮಾಡುತ್ತಾನೆ. ಇದು ಮನಸ್ಸು, ಮೆದುಳು ಮತ್ತು ನೀರಿನ ಅಂಶದ ಮೇಲೆ ಪರಿಣಾಮ ಬೀರುತ್ತದೆ. ಈ ದಿನ, ಸೂರ್ಯ ಮತ್ತು ಚಂದ್ರರು ಮುಖಾಮುಖಿಯಾಗಿರುತ್ತಾರೆ, ಈ ಕಾರಣದಿಂದಾಗಿ ಸಮಪ್ತಕ ಯೋಗ ಸೃಷ್ಟಿಯಾಗುತ್ತದೆ. ಇದರೊಂದಿಗೆ ಈ ದಿನ ಗುರು ಪುಷ್ಯ ಯೋಗ ಮತ್ತು ಸರ್ವಾರ್ಥ ಸಿದ್ಧಿ ಎಂಬ ಎರಡು ಯೋಗವು ರೂಪುಗೊಳ್ಳುತ್ತದೆ. ಈ ದಿನ ಪ್ರೀತಿ ಯೋಗವೂ ಕೂಡ ಸೃಷ್ಟಿಯಾಗುತ್ತದೆ. ಪುಷ್ಯ ಪೂರ್ಣಿಮೆಯ ಬೆಳಿಗ್ಗೆ ರವಿ ಯೋಗವೂ ಕೂಡ ರೂಪುಗೊಳ್ಳುತ್ತದೆ. ಈ ಮಹಾಯೋಗಗಳೊಂದಿಗೆ ಈ ದಿನದ ಮಹತ್ವ ಮತ್ತಷ್ಟು ಹೆಚ್ಚಾಗುತ್ತದೆ. ಶುಭ ಯೋಗದಲ್ಲಿ ನಾವು ಜಪವನ್ನು, ತಪಸ್ಸನ್ನು, ಸ್ನಾನವನ್ನು ಮತ್ತು ದಾನವನ್ನು ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಮತ್ತು ನಮ್ಮೆಲ್ಲಾ ಆಸೆಯೂ ಬಹುಬೇಗ ಈಡೇರುತ್ತದೆ.

ಪವಿತ್ರ ನದಿ ಸ್ನಾನ ಭಕ್ತಾದಿಗಳು ಪುಷ್ಯ ಪೂರ್ಣಿಮಾ ವ್ರತವನ್ನು ಸೂರ್ಯೋದಯದಿಂದ ಚಂದ್ರೋದಯದವರೆಗೆ ಆಚರಿಸುತ್ತಾರೆ. ಪುಷ್ಯ ಪೂರ್ಣಿಮೆಯ ಸಂದರ್ಭದಲ್ಲಿ, ಗ್ರಹಗಳಲ್ಲಿ ಮತ್ತು ಕ್ಷತ್ರಪುಂಜಗಳಲ್ಲಿ ಶುಭ ಸಂಯೋಜನೆಯು ಸೃಷ್ಟಿಯಾಗುತ್ತದೆ. ಚಂದ್ರನು ಈ ದಿನ ಪ್ರಾಣದಾಯಿನಿ, ಅಮೃತಮಯಿ ಕಿರಣಗಳನ್ನು ಹರಡುತ್ತಾನೆ ಮತ್ತು ಈ ಕಿರಣವು ನೀರಿನಲ್ಲಿ ಶಕ್ತಿಯನ್ನು ಹರಡುತ್ತದೆ. ಆದ್ದರಿಂದ ಈ ದಿನ ಸ್ನಾನ ಮಾಡುವುದರಿಂದ ಆರೋಗ್ಯಕರ ದೇಹ ಸೇರಿದಂತೆ ಆರೋಗ್ಯವು ನಮ್ಮದಾಗುತ್ತದೆ. ಮೋಕ್ಷವನ್ನು ಪಡೆಯಲು ಈ ದಿನದಂದು ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಪುಷ್ಯ ತಿಂಗಳು ಭಗವಾನ್ ಸೂರ್ಯ ನಾರಾಯಣನಿಗೆ ಸಮರ್ಪಿತವಾದ ದಿನವಾಗಿದೆ ಮತ್ತು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಪದ್ಧತಿಯಿದೆ. ನಿಮಗೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಗಂಗಾ ನೀರನ್ನು ಮನೆಯ ನೀರಿನಲ್ಲಿ ಹಾಕಿ, ವಿಷ್ಣುವನ್ನು ಸ್ಮರಿಸಿ ಅದರಲ್ಲಿ ಸ್ನಾನ ಮಾಡಬಹುದು.

ಪುಷ್ಯ ಹುಣ್ಣಿಮೆಯನ್ನೂ ಶಾಕಾಂಬರಿ ಪೂರ್ಣಿಮಾ ಎಂದೂ ಸಹ ಕರೆಯುತ್ತಾರೆ ಪುಷ್ಯ ತಿಂಗಳ ಹುಣ್ಣಿಮೆಯ ದಿನದಂದು, ತಾಯಿ ಭಗವತಿ ತನ್ನ ಭಕ್ತರ ಕರೆಯ ಮೇರೆಗೆ ಶಾಕಾಂಭರಿ ದೇವಿಯಾಗಿ ಅವತಾರವನ್ನು ತಾಳಿದಳು. ಆದ್ದರಿಂದ ಈ ಹುಣ್ಣಿಮೆಯನ್ನು ಶಾಕಾಂಬರಿ ಪೂರ್ಣಿಮಾ ಎಂದೂ ಸಹ ಕರೆಯುತ್ತಾರೆ. ಮತ್ತು ಈ ದಿನವನ್ನು ತಾಯಿ ಶಾಕಾಂಬರಿ ಜಯಂತಿ ಎಂದೂ ಸಹ ಕೆಲ ಕಡೆ ಆಚರಿಸುತ್ತಾರೆ.

ಇದನ್ನೂ ಓದಿ: ಪರಿಷತ್ ಆಪರೇಷನ್ ಆಟ ಶುರು: ಬೆಳಗ್ಗೆ ಬಿಜೆಪಿ ಸೇರ್ಪಡೆ, ಸಂಜೆ ಮತ್ತೆ ಕಾಂಗ್ರೆಸ್ ಸೇರ್ಪಡೆಯಾದ ಪೂರ್ಣಿಮಾ

6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ