AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಸಿನಲ್ಲಿ ಮುರಿದ ಗಾಜನ್ನು ನೋಡುವುದು ಶುಭವೋ ಅಶುಭವೋ? ಈ ಕನಸು ಭವಿಷ್ಯದ ಸೂಚನೆ

ಕೆಲವೊಂದು ಕನಸುಗಳು ಭವಿಷ್ಯದ ಘಟನೆಗಳ ಸೂಚನೆಗಳಾಗಿರುತ್ತವೆ. ಆದರೆ ಅದನ್ನು ನೋಡುವ ಮತ್ತು ಅರ್ಥ ಮಾಡಿಕೊಳ್ಳುವ ರೀತಿ ಸರಿಯಾಗಿ ಇರಬೇಕಷ್ಟೇ. ನಿಮ್ಮ ಕನಸಿನಲ್ಲಿ ಮುರಿದ ಗಾಜನ್ನು ನೀವು ನೋಡಿದರೆ, ಅದು ಅನೇಕ ವಿಭಿನ್ನ ಅರ್ಥಗಳನ್ನು ಹೊಂದಿರಬಹುದು. ಅಲ್ಲದೆ ಗಾಜು ಒಡೆಯುವುದು ಕುಟುಂಬಕ್ಕೆ ಪ್ರಮುಖ ಸಮಸ್ಯೆಯಾಗಿದೆ. ಕನಸಿನಲ್ಲಿ ಮುರಿದ ಕನ್ನಡಿಯನ್ನು ನೋಡುವುದು ಏನನ್ನು ತಿಳಿಸುತ್ತದೆ ಎಂಬುದನ್ನು ತಿಳಿಯಿರಿ.

ಕನಸಿನಲ್ಲಿ ಮುರಿದ ಗಾಜನ್ನು ನೋಡುವುದು ಶುಭವೋ ಅಶುಭವೋ? ಈ ಕನಸು ಭವಿಷ್ಯದ ಸೂಚನೆ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Feb 17, 2024 | 4:29 PM

Share

ಪ್ರತಿಯೊಂದು ಕನಸಿಗೂ ಕೆಲವು ಅರ್ಥವಿದೆ, ಆ ಕನಸು ನಿಮಗೆ ಶುಭ ಅಥವಾ ಅಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಕೆಲವು ಸೂಚನೆಗಳ ಪ್ರಕಾರ ನಿಮ್ಮ ಭವಿಷ್ಯದಲ್ಲಿ ನೀವು ಸಾಕಷ್ಟು ಸುಧಾರಣೆಗಳನ್ನು ಮಾಡಬಹುದು ಮತ್ತು ಸಮಯಕ್ಕೆ ಸರಿಯಾಗಿ ಕೆಟ್ಟ ಆಘಾತಗಳಿಂದಾಗುವ ನಷ್ಟವನ್ನು ತಿಳಿದುಕೊಳ್ಳಬಹುದು. ಕಾರಣವಿಲ್ಲದೆಯೇ ಬರುವ ಕನಸುಗಳು ಕೆಲವೊಮ್ಮೆ ನಿಮಗೆ ಅರಿವಿಲ್ಲದರ ಬಗ್ಗೆ ಸೂಚನೆಗಳನ್ನು ನೀಡಬಹುದು. ಹಾಗಾಗಿ ಕೆಲವು ವಸ್ತುಗಳು ನಿಮ್ಮ ಕನಸಲ್ಲಿ ಬಂದರೆ ಅವುಗಳಿಗೆ ಒಂದೊಂದು ಅರ್ಥವಿರುತ್ತದೆ. ಅದೇ ರೀತಿ ಮುರಿದ ಗಾಜಿನ ಕನಸು ನಿಮಗೆ ಅನೇಕ ರೀತಿಯ ಸಂಕೇತಗಳನ್ನು ನೀಡುತ್ತದೆ. ಹಾಗಾದರೆ ಇದು ಶುಭವೋ ಅಥವಾ ಅಶುಭವೋ? ಇದು ಯಾವುದರ ಸೂಚನೆಯಾಗಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕನಸಿನ ವಿಜ್ಞಾನದ ಪ್ರಕಾರ, ಪ್ರತಿಯೊಂದು ಕನಸು ವಿಭಿನ್ನ ಅರ್ಥಗಳನ್ನು ಹೊಂದಿದೆ. ಈ ಎಲ್ಲಾ ಕನಸುಗಳು ಭವಿಷ್ಯದ ಘಟನೆಗಳ ಸೂಚನೆಗಳಾಗಿರುತ್ತವೆ. ಆದರೆ ಅದನ್ನು ನೋಡುವ ಮತ್ತು ಅರ್ಥ ಮಾಡಿಕೊಳ್ಳುವ ರೀತಿ ಸರಿಯಾಗಿ ಇರಬೇಕಷ್ಟೇ. ನಿಮ್ಮ ಕನಸಿನಲ್ಲಿ ಮುರಿದ ಗಾಜನ್ನು ನೀವು ನೋಡಿದರೆ, ಅದು ಅನೇಕ ವಿಭಿನ್ನ ಅರ್ಥಗಳನ್ನು ಹೊಂದಿರಬಹುದು. ಅಲ್ಲದೆ ಗಾಜು ಒಡೆಯುವುದು ಕುಟುಂಬಕ್ಕೆ ಪ್ರಮುಖ ಸಮಸ್ಯೆಯಾಗಿದೆ. ಕನಸಿನಲ್ಲಿ ಮುರಿದ ಕನ್ನಡಿಯನ್ನು ನೋಡುವುದು ಏನನ್ನು ತಿಳಿಸುತ್ತದೆ ಎಂಬುದನ್ನು ತಿಳಿಯಿರಿ.

ಕನಸಿನಲ್ಲಿ ಮುರಿದ ಗಾಜು ಅಥವಾ ಕನ್ನಡಿಯನ್ನು ನೋಡುವುದು ಶುಭವೋ, ಅಶುಭವೋ?

ಕನಸಿನಲ್ಲಿ ಮುರಿದ ಗಾಜನ್ನು ನೋಡುವುದು ಅಶುಭ ಎಂದು ಕೆಲವರು ನಂಬುತ್ತಾರೆ. ಏಕೆಂದರೆ ನಿಜವಾಗಿ ಕನ್ನಡಿ ಒಡೆದರೆ ಅದು ಅಶುಭ ಹಾಗಾಗಿ ಕನಸಿನಲ್ಲಿಯೂ ಅದೇ ರೀತಿಯಾದರೆ ಅದು ಏನೋ ಆಘಾತದ ಸೂಚನೆ ಎಂದು ತಿಳಿಯುತ್ತೇವೆ, ಆದರೆ ಅದು ನಿಜವಲ್ಲ. ಕನಸಿನಲ್ಲಿ ಮುರಿದ ಗಾಜನ್ನು ನೋಡುವುದು ಅಶುಭವಲ್ಲ ಆದರೆ ಅದನ್ನು ನೋಡುವುದು ಶುಭವೆಂದು ಕೂಡ ಪರಿಗಣಿಸಲಾಗುವುದಿಲ್ಲ. ಬದಲಾಗಿ ಕೆಲವು ಅಶುಭ ಘಟನೆಗಳು ನಿಮ್ಮ ಮನೆಯಲ್ಲಿ ನಡೆದಿದ್ದರೆ ನಿಮಗೆ ಇಂತಹ ಕನಸು ಬೀಳುವ ಸಾಧ್ಯತೆಗಳಿರುತ್ತವೆ.

ಕನಸಿನಲ್ಲಿ ಮುರಿದ ಗಾಜಿನಲ್ಲಿ ನಿಮ್ಮನ್ನೇ ನೀವು ನೋಡಿಕೊಳ್ಳುವುದು!

ರಾತ್ರಿ ನಿಮ್ಮ ಕನಸಿನಲ್ಲಿ ಮುರಿದ ಗಾಜಿನಲ್ಲಿ ನಿಮ್ಮನ್ನೇ ನೀವು ನೋಡುತ್ತಿದ್ದರೆ, ನಿಮ್ಮ ಸುತ್ತಲಿನ ಜನರ ಬಗ್ಗೆ ನೀವು ಜಾಗರೂಕರಾಗಿರಬೇಕು ಎಂದರ್ಥ. ನಿಮ್ಮ ಹತ್ತಿರದ ಯಾರಾದರೂ ನಿಮಗೆ ಮಾನಸಿಕ ಒತ್ತಡವನ್ನು ಉಂಟು ಮಾಡಬಹುದು. ನೀವು ಅಂತಹ ಜನರಿಂದ ದೂರವಿರಬೇಕು ಅಲ್ಲದೆ ನಿಮ್ಮ ವೈಯಕ್ತಿಕ ವಿಷಯಗಳನ್ನಾಗಲಿ ಅಥವಾ ದೌರ್ಬಲ್ಯಗಳನ್ನಾಗಲಿ ಯಾರೊಂದಿಗೂ ಬಹಿರಂಗಪಡಿಸಬೇಡಿ ಇದು ನಿಮ್ಮ ಜೀವನಕ್ಕೆ ಉತ್ತಮ.

ಕನಸಿನಲ್ಲಿ ಗಾಜು ಒಡೆಯುವುದರ ಅರ್ಥವೇನು?

ನಿಮ್ಮ ಕನಸಿನಲ್ಲಿ ಗಾಜು ಒಡೆಯುವುದನ್ನು ಕಾಣುವುದು ಕೆಲವು ನಿರ್ಬಂಧಗಳಿಂದ ನಿಮ್ಮನ್ನು ಮುಕ್ತಗೊಳಿಸಬೇಕಾಗಿದೆ ಎಂಬುದನ್ನು ಸೂಚಿಸುತ್ತದೆ. ಕನಸಿನ ವಿಜ್ಞಾನದ ಪ್ರಕಾರ, ಈ ಕನಸು ನಿಮ್ಮ ಆಸೆಗಳು ಮತ್ತು ಭಾವನೆಗಳನ್ನು ಹೊರಹಾಕಬೇಕು ಎಂದು ಹೇಳುತ್ತದೆ. ಅಲ್ಲದೆ ನಿಮ್ಮ ಇಚ್ಛೆಗಳನ್ನು ಗೌರವಿಸುತ್ತಾ ನೀವು ಜೀವನದಲ್ಲಿ ಮುಂದೆ ಸಾಗಲು ಪ್ರಯತ್ನಿಸಬೇಕು ಎಂಬುದನ್ನು ತಿಳಿಸುತ್ತದೆ.

ಇದನ್ನೂ ಓದಿ: ಈ ವರ್ಷ ಹೋಳಿ ಹಬ್ಬ ಯಾವಾಗ? ಇಲ್ಲಿದೆ ಮಾಹಿತಿ

ಕನಸಿನಲ್ಲಿ ಕನ್ನಡಿ ಕೈಯಿಂದ ಬೀಳುವುದರ ಅರ್ಥವೇನು?

ನಿಮ್ಮ ಕೈಯಿಂದ ಯಾವುದಾದರೂ ವಸ್ತು ಬೀಳುವಂತೆ ಅಥವಾ ನಿಮ್ಮ ಕೈಯಿಂದ ಬಿದ್ದಂತೆ ಕನಸು ಕಂಡರೆ, ಅದು ನೀವು ಉತ್ತಮ ಅವಕಾಶವನ್ನು ಕಳೆದುಕೊಳ್ಳಬಹುದಾದ ಸೂಚನೆಯಾಗಿರಬಹುದು. ನಿಮ್ಮ ಜೀವನದ ಯಾವುದಾದರೂ ಪ್ರಮುಖ ಬದಲಾವಣೆ ಸ್ಥಗಿತಗೊಳ್ಳಬಹುದು ಅಥವಾ ಕೈ ತಪ್ಪಿ ಹೋಗಬಹುದು. ಹಾಗಾಗಿ ನೀವು ಜೀವನದಲ್ಲಿ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ಬಹಳ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?