AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೇ ನಿಜವಾದ ಉತ್ತರ: ಅಸಲಿ ಕರಿಮಣಿ ಮಾಲೀಕ ಯಾರು? ಈ ಬಗ್ಗೆ ಹಿಂದೂ ಶಾಸ್ತ್ರದಲ್ಲಿರುವ ಉಲ್ಲೇಖ ಏನು?

ಎಲ್ಲಾ ಗುಣಗಳು ಒಟ್ಟು ಗೂಡಿ ಒಬ್ಬ ಹುಡುಗನಾಗುವುದಾದರೆ ಅವನು ಹೀಗೆಯೇ ಇರಬೇಕು ಎಂದು ಹೇಳುವ ಶ್ಲೋಕವಿದೆ. ಇದು ಹಿಂದಿನ ಕಾಲದಲ್ಲಿ ಎಷ್ಟು ಪ್ರಚಲಿತವೋ ಅಷ್ಟೇ ಈಗಲೂ ಕೂಡ. ಅಂದರೆ ಬಯಸುವುದಾದರೆ ಇಂತಹ ಹುಡುಗನನ್ನೇ ಬಯಸಬೇಕು ಎಂಬ ಹಂಬಲ ವಿರುವವರಿಗೆ ಇದು ಹೆಚ್ಚು ಸೂಕ್ತ. ಹಾಗಾದರೆ ಈ ಶ್ಲೋಕ ಹೇಳುವುದೇನು? ಇಲ್ಲಿದೆ ಮಾಹಿತಿ.

ಇದೇ ನಿಜವಾದ ಉತ್ತರ: ಅಸಲಿ ಕರಿಮಣಿ ಮಾಲೀಕ ಯಾರು? ಈ ಬಗ್ಗೆ ಹಿಂದೂ ಶಾಸ್ತ್ರದಲ್ಲಿರುವ ಉಲ್ಲೇಖ ಏನು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Feb 16, 2024 | 12:33 PM

Share

ಇತ್ತೀಚಿಗೆ ಕರಿಮಣಿ ಮಾಲೀಕ ಯಾರು? ಎಂಬ ಪ್ರಶ್ನೆ ಹಲವರನ್ನು ಕಾಡಿದ್ದು ಸುಳ್ಳಲ್ಲ. ಹಳೆಯ ಹಾಡಾದರೂ ಕೂಡ ಅದಕ್ಕೆ ಹೊಸ ಮೆರುಗನ್ನು ಕೊಟ್ಟಿದ್ದ ನೆಟ್ಟಿಗರಿಗೆ ಸರಿಯಾದ ಉತ್ತರ ಬಹುಷಃ ಸಿಕ್ಕಿಲ್ಲ. ಇದಕ್ಕೆ ಪೂರಕವೆಂಬಂತೆ ಹಿಂದಿನ ಕಾಲದಲ್ಲಿ ಹೇಳುತ್ತಿದ್ದ ಶ್ಲೋಕ ಒಂದು ಈ ಪ್ರಶ್ನೆಗೆ ಉತ್ತರ ಹುಡುಕಿ ಕೊಟ್ಟಿದೆ. ಹಿಂದೆ ನಮ್ಮ ಪೂರ್ವಜರು ಒಂದು ಹೆಣ್ಣಿನ ಬಳಿ ನಿನಗೆ ಎಂತಹ ಹುಡುಗ ಬೇಕು? ನಿನ್ನ ಮನದ ಅರಸ ಹೇಗಿರಬೇಕು? ಎಂದು ಕೇಳಿದಾಗ ಈ ಚಿಕ್ಕ ಶ್ಲೋಕ ಅಥವಾ ನೀವು ಇದನ್ನು ಉಕ್ತಿ ಎನ್ನಬಹುದು. ಆ ಮೂಲಕ ತನ್ನ ಹುಡುಗ ಹೇಗಿರಬೇಕು ಎಂಬುದನ್ನು ವರ್ಣಿಸುತ್ತಿದ್ದರಂತೆ. ಹಾಗಾಗಿ ಕರಿಮಣಿ ಕಟ್ಟುವವನಿಗೆ ಅಷ್ಟು ಅರ್ಹತೆಗಳಿರಬೇಕು ಎಂಬುದು ಆಗಿನ ಚಿಂತೆನೆಯಾಗಿತ್ತು. ಇದು ಈ ಕಾಲಕ್ಕೂ ಪ್ರಸ್ತುತವಾಗಿದೆ. ಬಹುಷಃ ಮುಂದೆಯೂ ಇದು ಹಳೆಯದಾಗದು.

ನಾವು ಪುರಾಣ ಕಥೆಗಳಲ್ಲಿ ಓದಿದ, ಕೇಳಿ ತಿಳಿದುಕೊಂಡ ಪಾತ್ರಗಳು ನಮ್ಮ ಮೇಲೆ ಪ್ರಭಾವ ಬೀರಿರುತ್ತದೆ. ಸಾಮಾನ್ಯವಾಗಿ ಹುಡುಗ ಶ್ರೀರಾಮ ಚಂದ್ರನಂತಿರಬೇಕು. ಅವನಲ್ಲಿ ಕೃಷ್ಣನ ತುಂಟತನ ಇರಬೇಕು. ಶಿವನು ಪಾರ್ವತಿಗೆ ತೋರಿದ ನಿಷ್ಠೆಯೂ ಬೇಕು, ಹೀಗೆ ಹಲವು ಕಥೆಗಳು ನಮಗೆ ಒಂದು ಹುಡುಗನ ರೂಪವನ್ನು ಕಟ್ಟಿಕೊಟ್ಟಿರುತ್ತದೆ. ಆದರೆ ಎಲ್ಲಾ ಗುಣಗಳು ಒಟ್ಟು ಗೂಡಿ ಒಬ್ಬ ಹುಡುಗನಾಗುವುದಾದರೆ ಅವನು ಹೀಗೆಯೇ ಇರಬೇಕು ಎಂದು ಹೇಳುವ ಶ್ಲೋಕವಿದೆ. ಇದು ಹಿಂದಿನ ಕಾಲದಲ್ಲಿ ಎಷ್ಟು ಪ್ರಚಲಿತವೋ ಅಷ್ಟೇ ಈಗಲೂ ಕೂಡ. ಅಂದರೆ ಬಯಸುವುದಾದರೆ ಇಂತಹ ಹುಡುಗನನ್ನೇ ಬಯಸಬೇಕು ಎಂಬ ಹಂಬಲ ವಿರುವವರಿಗೆ ಇದು ಹೆಚ್ಚು ಸೂಕ್ತ. ಹಾಗಾದರೆ ಈ ಶ್ಲೋಕ ಹೇಳುವುದೇನು?

ಭೋಗೇಷು ರಾಜ, ವಚನೇಷು ರಾಮ,

ಚತುರಸ್ಯ ಕೃಷ್ಣ, ಧೈರ್ಯೇಷು ಕರ್ಣ,

ರೂಪೇಚ ಇಂದ್ರ, ಕಾಮೇಷು ಮದನ,

ಸುಖ ದುಃಖ ಮಿತ್ರಮ್ ಮಮ ಧರ್ಮ ರಮಣ।।

ಭೋಗೇಷು ರಾಜ -ಕೈ ಹಿಡಿದವಳನ್ನು ರಾಣಿಯಂತೆ ನೋಡಿಕೊಳ್ಳುವವನು.

ವಚನೇಷು ರಾಮ -ತನ್ನವಳಿಗೆ ಸುಳ್ಳು ಹೇಳದವನು, ಕೊಟ್ಟ ಮಾತನು ಎಂದಿಗೂ ತಪ್ಪದವನು.

ಚತುರಸ್ಯ ಕೃಷ್ಣ -ತನ್ನ ಮನದರಸಿಯನ್ನು ಮತ್ತು ಆಕೆಯ ಕುಟುಂಬವನ್ನು ಉಪಾಯದಿಂದ ಅಪಾಯ ಬರದಂತೆ ಕಾಪಾಡುವವನು.

ಧೈರ್ಯೇಷು ಕರ್ಣ -ತನ್ನವಳಿಗೆ ಏನೇ ಕಷ್ಟ ಬಂದರೂ ಅವಳ ಜೊತೆ ನಿಂತು ಎದುರಿಸುವುವನು.

ರೂಪೇಚ ಇಂದ್ರ -ರೂಪದಲ್ಲಿ ಇಂದ್ರನನ್ನು ಹೋಲುವವನು.

ಕಾಮೇಷು ಮದನ -ಮಾನಸಿಕ ದೈಹಿಕ ಸಂತೃಪ್ತಿಯನ್ನು ನೀಡುವವನು.

ಸುಖ ದುಃಖ ಮಿತ್ರಮ್ ಮಮ ಧರ್ಮ ರಮಣ -ಅಂದರೆ ಈ ಆರು ಗುಣಗಳನ್ನು ಹೊಂದಿದವನು ನಿಜವಾದ ಕರಿಮಣಿ ಮಾಲೀಕಕ ಅರ್ಥಾತ್ ತನ್ನ ಕೈ ಹಿಡಿಯುವವನು ಈ ಎಲ್ಲಾ ಗುಣಗಳನ್ನು ಹೊಂದಿರಬೇಕು. ತನ್ನ ಸುಖ ದುಃಖಗಳಲ್ಲಿ ಮಿತ್ರನಾಗಿ ಜೊತೆಯಾಗಿ ನಿಲ್ಲಬೇಕು ಎಂಬುದಾಗಿದೆ. ಅಂದರೆ ನನ್ನ ರಮಣ, ಮನದ ಒಡೆಯನಾಗಿ ಬರುವವನು ಹೇಗಿರಬೇಕು ಎಂಬುದನ್ನು ಈ ಸಾಲುಗಳು ವಿವರಿಸುತ್ತದೆ.

ಇದನ್ನೂ ಓದಿ: ರಥಸಪ್ತಮಿಯ ದಿನ ಉಪವಾಸ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ?

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಕರಿಮಣಿ ಮಾಲೀಕ ಯಾರು? ಎಂದು ಕೇಳುತ್ತಿದ್ದವರಿಗೆ ಈ ಉತ್ತರ ಸೂಕ್ತ. ಅದಲ್ಲದೆ ಈ ಉಕ್ತಿಯನ್ನು ಭಾವಸಾಗರದ ನಾವಿಕ bhavasagarada_naavika ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಭಾರಿ ವೈರಲ್ ಆಗಿದೆ. ಈ ಪೋಸ್ಟ್ ಗೆ ನೆಟ್ಟಿಗರು “ಇದೇ ನಿಜವಾದ ಉತ್ತರ” ಎಂದು ಬರೆದುಕೊಂಡಿದ್ದಾರೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:27 pm, Fri, 16 February 24

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ