AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಸಿನಲ್ಲಿ ಗಣಪತಿ ಬಂದರೆ ಏನು ಫಲ? ಇಲ್ಲಿದೆ ಆಸಕ್ತಿಕರವಾದ ಮಾಹಿತಿ

Lord Ganesha in dreams interpretation: ಕನಸಿನಲ್ಲಿ ಗಣಪತಿ ಬಂದರೆ ಯಾವುದರ ಮುನ್ಸೂಚನೆ? ಯಾವ ಕಾರಣಕ್ಕೆ ಆ ದೇವರು ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದಲ್ಲಿ ಅದಕ್ಕೆ ಉತ್ತರ ಈ ಲೇಖನದಲ್ಲಿ ಇದೆ.

ಕನಸಿನಲ್ಲಿ ಗಣಪತಿ ಬಂದರೆ ಏನು ಫಲ? ಇಲ್ಲಿದೆ ಆಸಕ್ತಿಕರವಾದ ಮಾಹಿತಿ
ಗಣೇಶ ವಿಗ್ರಹ (ಪ್ರಾತಿನಿಧಿಕ ಚಿತ್ರ)
Srinivas Mata
|

Updated on:Apr 13, 2021 | 3:26 PM

Share

ಕನಸುಗಳು ಭವಿಷ್ಯವನ್ನು ಸೂಚಿಸುತ್ತದೆಯೇ? ರಾತ್ರಿ ವೇಳೆ ಬಿದ್ದ ಕನಸಿಗೂ ಹಗಲು ಹೊತ್ತಿನದ್ದಕ್ಕೂ ಏನಾದರೂ ವ್ಯತ್ಯಾಸ ಇದೆಯಾ? ಹೀಗೆ ಒಂದಾದ ಮೇಲೆ ಒಂದು ಪ್ರಶ್ನೆ ಬರುತ್ತದೆ. ತಜ್ಞರು ಹೇಳುವ ಪ್ರಕಾರ, ನಮ್ಮ ಕನಸುಗಳು ಒಂದೋ ಹಿಂದಿನ ಘಟನೆಗಳಿಗೆ ಸಂಬಂಧಿಸಿದವರಾಗಿರುತ್ತವೆ ಅಥವಾ ಭವಿಷ್ಯಕ್ಕೆ ಸಂಬಂಧಿಸಿರುತ್ತದೆ. ಈ ದಿನ ಲೇಖನದಲ್ಲಿ ತಿಳಿಸುವ ವಿಚಾರ ಗಣಪತಿಗೆ ಸಂಬಂಧಿಸಿದ್ದಾಗಿದೆ. ಕನಸಿನಲ್ಲಿ ಗಣಪತಿ ಬಂದರೆ ಏನು ಫಲ ಎಂದು ಮಾಹಿತಿ ನೀಡಲಾಗುತ್ತಿದೆ. ಕನಸಿನಲ್ಲಿ ಗಣೇಶ ಬಂದರೆ ಬಹಳ ಶುಭ ಸೂಚನೆ. ವಿಘ್ನವಿನಾಶಕ ಎಂದು ಕರೆಸಿಕೊಳ್ಳುವ ಗಣಪತಿಯು ಅಡೆತಡೆಗಳನ್ನು ನಿವಾರಣೆ ಮಾಡುತ್ತಾನೆ. ಆತ ಆ ಮಹಾಶಿವ ಹಾಗೂ ತಾಯಿ ಪಾರ್ವತಿಯ ಮಗ. ಯಾವುದೇ ಶುಭ ಕಾರ್ಯದ ಆರಂಭದಲ್ಲಿ ಅಥವಾ ಯೋಜನೆಯ ಶುರುವಿನಲ್ಲಿ ಗಣಪತಿಯ ಆರಾಧನೆ ಮಾಡಲಾಗುತ್ತದೆ.

ಯಾವ ಅಡೆತಡೆಯೂ ಇಲ್ಲದೆ ಕೈಗೊಂಡ ಹೊಸ ಕಾರ್ಯ ಅಥವಾ ಯೋಜನೆ ಪೂರ್ಣಗೊಳ್ಳಲಿ ಎಂದು ಭಕ್ತರು ಆತನನ್ನು ಆರಾಧಿಸುತ್ತಾರೆ. ಆದ್ದರಿಂದ ವಿನಾಯಕನ ಪೂಜೆಗೆ ಮಹತ್ವವೂ ಇದೆ ಹಾಗೂ ಶುಭಸೂಚಕದ ಶ್ರೇಯವೂ ಇದೆ. ಯಾವುದಾದರೂ ವ್ಯಕ್ತಿಯ ಕನಸಿನಲ್ಲಿ ಗಣಪತಿ ಬಂದರೆ ಅದರರ್ಥ, ಆ ವ್ಯಕ್ತಿಗೆ ಯಶಸ್ಸು ದೊರೆಯುತ್ತದೆ. ಮೊದಲೇ ಹೇಳಿದಂತೆ ಶುಭದಾಯಕನಾದ ಗಣಪತಿ ಕನಸಿನಲ್ಲಿ ಬಂದನೆಂದರೆ, ನಿಮ್ಮ ಮೇಲೆ ಆ ದೇವರ ಆಶೀರ್ವಾದ ಎಂದರ್ಥ.

ಇದಕ್ಕಿಂತ ಹೆಚ್ಚಾಗಿ, ಗಣಪತಿ ಎಂದರೆ ಸುಖಕರ್ತ. ಇದರರ್ಥ ಏನೆಂದರೆ, ಶುಭಫಲಗಳನ್ನು ನೀಡುವವನು ಅಥವಾ ಸಂತೋಷವನ್ನು ದಯಪಾಲಿಸುವವನು. ಭವಿಷ್ಯದಲ್ಲಿ ಸಂತೋಷವನ್ನು ನೀಡುವುದರ ದ್ಯೋತಕ ಅದು. ಕನಸಿನಲ್ಲಿ ವಿನಾಯಕ ಬಂದಿದ್ದಾನೆ ಅಂದರೆ, ಹೊಸ ಪ್ರಾಜೆಕ್ಟ್​ವೊಂದನ್ನು ಆರಂಭಿಸುತ್ತೀರಿ ಅಥವಾ ವೈಯಕ್ತಿಕ ಜೀವನದಲ್ಲಿ ಹೊಸ ಆರಂಭ ಅಗಲಿದೆ ಎಂದರ್ಥ. ಇನ್ನೂ ಕೆಲವು ಸಲ ಹರಕೆ ಹೊತ್ತುಕೊಂಡು, ಅದನ್ನು ತೀರಿಸಿಲ್ಲ ಅಂದಾಗ ಕೂಡ ಕನಸಿನಲ್ಲಿ ಗಣಪ ಬರುತ್ತಾನೆ. ಆದ್ದರಿಂದ ಕನಸಿನಲ್ಲಿ ಬಂದ ಗಣಪ ನೀವು ಹೊತ್ತ ಹರಕೆಯನ್ನು ನೆನಪಿಸಲು ಬಂದಿದ್ದಾನೆ. ಆ ಕಾರಣಕ್ಕೇ ಹರಕೆಗಳನ್ನು ತಪ್ಪಿಸಕೂಡದು.

ಕನಸಲ್ಲಿ ಬಂದ ವಿಚಾರವು ಎಷ್ಟೋ ಬಾರಿ ಒಗಟಿನಂತೆ ಇರುತ್ತದೆ. ಅದನ್ನು ಬಿಡಿಸುವುದು ಸಹ ಜ್ಞಾನ. ಈ ಲೇಖನದಲ್ಲಿ ಕನಸಿನಲ್ಲಿ ಗಣಪತಿ ಬಂದರೆ ಏನು ಎಂಬುದರ ವಿವರಣೆ ಮಾತ್ರ ನೀಡಲಾಗಿದೆ. ಇನ್ನು ಮುಂದೆ ಇತರ ಕನಸುಗಳ ಬಗ್ಗೆಯೂ ತಿಳಿಸಿಕೊಡಲಾಗುವುದು.

ಇದನ್ನೂ ಓದಿ: ಮಾಂಗಲ್ಯದೊಂದಿಗೆ ಕರಿಮಣಿ ಧರಿಸುವುದರ ಮಹತ್ವ ಏನು ಗೊತ್ತಾ?

(Why lord Ganesh comes in to dreams. What is the significance of a dream.)

Published On - 3:14 pm, Tue, 13 April 21

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ