AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ನವಗ್ರಹ ದೋಷದಿಂದ ಉಂಟಾಗುವ ಖಾಯಿಲೆಗಳೇನು? ಜ್ಯೋತಿಷ್ಯ ಸಲಹೆ ಇಲ್ಲಿದೆ

ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನವಗ್ರಹಗಳು ಮತ್ತು ಅವುಗಳಿಂದ ಉಂಟಾಗುವ ಕಾಯಿಲೆಗಳ ಬಗ್ಗೆ ಚರ್ಚಿಸಿದ್ದಾರೆ. ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತುಗಳ ಪ್ರಭಾವದಿಂದ ಉಂಟಾಗುವ ವಿವಿಧ ಆರೋಗ್ಯ ಸಮಸ್ಯೆಗಳನ್ನು ವಿವರಿಸಲಾಗಿದೆ. ಪ್ರತಿಯೊಂದು ಗ್ರಹದ ಅನುಗ್ರಹವನ್ನು ಪಡೆಯಲು ಯಾವ ದೇವತಾರಾಧನೆ ಮಾಡಬೇಕೆಂಬುದರ ಬಗ್ಗೆ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ.

Daily Devotional: ನವಗ್ರಹ ದೋಷದಿಂದ ಉಂಟಾಗುವ ಖಾಯಿಲೆಗಳೇನು? ಜ್ಯೋತಿಷ್ಯ ಸಲಹೆ ಇಲ್ಲಿದೆ
ನವಗ್ರಹ
ಅಕ್ಷತಾ ವರ್ಕಾಡಿ
|

Updated on: Sep 20, 2025 | 7:23 AM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳು ಮನುಷ್ಯರ ಜೀವನದ ಮೇಲೆ ಗಣನೀಯ ಪ್ರಭಾವ ಬೀರುತ್ತವೆ. ಈ ನವಗ್ರಹಗಳು – ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು – ಒಂದೊಂದು ರೀತಿಯ ಶಕ್ತಿಯನ್ನು ಪ್ರತಿನಿಧಿಸುತ್ತವೆ ಮತ್ತು ಅವುಗಳ ಸ್ಥಾನ ಮತ್ತು ಸಂಬಂಧಗಳನ್ನು ಆಧರಿಸಿ, ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತವೆ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನವಗ್ರಹಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಮತ್ತು ಅವುಗಳಿಂದ ಪಾರಾಗಲು ಕೆಲ ಪರಿಹಾರಗಳನ್ನು ಸೂಚಿಸಿದ್ದಾರೆ.

ಗುರೂಜಿಯವರು ಹೇಳುವಂತೆ, ಸೂರ್ಯನ ದುಷ್ಪ್ರಭಾವದಿಂದ ಜ್ವರ, ವಾಂತಿ, ಹೃದಯ ಸಂಬಂಧಿ ಕಾಯಿಲೆಗಳು, ನೇತ್ರರೋಗಗಳು ಮತ್ತು ಚರ್ಮರೋಗಗಳು ಉಂಟಾಗಬಹುದು. ಸೂರ್ಯನ ಅನುಗ್ರಹಕ್ಕಾಗಿ ಸೂರ್ಯನಮಸ್ಕಾರ, ಆದಿತ್ಯ ಹವನ ಮುಂತಾದ ಪರಿಹಾರಗಳನ್ನು ಮಾಡಬಹುದು. ಚಂದ್ರನ ದುಷ್ಪ್ರಭಾವದಿಂದ ಮನಸ್ಸಿನ ಕಿರಿಕಿರಿ, ಕಾಮಾಲೆ, ಚರ್ಮರೋಗಗಳು, ಮಾನಸಿಕ ಯಾತನೆಗಳು ಮತ್ತು ವಿಷಬಾದೆ ಉಂಟಾಗಬಹುದು. ಚಂದ್ರನ ಅನುಗ್ರಹಕ್ಕಾಗಿ ಚಂದ್ರನ ಶ್ಲೋಕ ಪಠಣೆ, ಹಾಲಿನ ದಾನ ಮುಂತಾದ ಪರಿಹಾರಗಳನ್ನು ಮಾಡಬಹುದು.

ವಿಡಿಯೋ ಇಲ್ಲಿದೆ ನೋಡಿ:

ಮಂಗಳನ ದುಷ್ಪ್ರಭಾವದಿಂದ ರಕ್ತದೋಷಗಳು, ರಕ್ತದೊತ್ತಡ, ಕೋಪ, ಆತುರ ಮತ್ತು ಮೂಳೆನೋವುಗಳು ಉಂಟಾಗಬಹುದು. ಮಂಗಳನ ಅನುಗ್ರಹಕ್ಕಾಗಿ ಸುಬ್ರಹ್ಮಣ್ಯ, ನರಸಿಂಹ ಮತ್ತು ಆಂಜನೇಯರ ಪೂಜೆಯನ್ನು ಮಾಡಬಹುದು. ಬುಧನ ದುಷ್ಪ್ರಭಾವದಿಂದ ತಲೆನೋವು, ರಕ್ತಹೀನತೆ ಮತ್ತು ಬುದ್ಧಿಮಾಂದ್ಯತೆ ಉಂಟಾಗಬಹುದು. ಬುಧನ ಅನುಗ್ರಹಕ್ಕಾಗಿ ವಿಷ್ಣು ಸಹಸ್ರನಾಮ ಪಠಣೆ ಮತ್ತು ಮಹಾಗಣಪತಿ ಪೂಜೆಯನ್ನು ಮಾಡಬಹುದು. ಗುರುವಿನ ದುಷ್ಪ್ರಭಾವದಿಂದ ಮಕ್ಕಳ ಸಮಸ್ಯೆಗಳು, ಮೂರ್ಛೆ ಮತ್ತು ಹೊಟ್ಟೆನೋವುಗಳು ಉಂಟಾಗಬಹುದು. ಗುರುವಿನ ಅನುಗ್ರಹಕ್ಕಾಗಿ ದತ್ತಾತ್ರೇಯ, ಸಾಯಿಬಾಬಾ ಮತ್ತು ರಾಘವೇಂದ್ರ ಸ್ವಾಮಿಗಳ ಸ್ತೋತ್ರ ಪಠಣೆಯನ್ನು ಮಾಡಬಹುದು.

ಇದನ್ನೂ ಓದಿ: ಪಿತೃ ಪಕ್ಷದಲ್ಲಿ ಗಂಡ ಹೆಂಡತಿ ದೈಹಿಕ ಸಂಬಂಧ ಬೆಳೆಸಬಾರದು ಯಾಕೆ? ಶಾಸ್ತ್ರಗಳು ಹೇಳುವುದೇನು?

ಶುಕ್ರನ ದುಷ್ಪ್ರಭಾವದಿಂದ ಮೂತ್ರರೋಗ, ಸಕ್ಕರೆ ರೋಗ ಮತ್ತು ಜನನೇಂದ್ರಿಯ ಸಮಸ್ಯೆಗಳು ಉಂಟಾಗಬಹುದು. ಶುಕ್ರನ ಅನುಗ್ರಹಕ್ಕಾಗಿ ದೇವಿಯ ಸ್ತೋತ್ರ ಪಠಣೆ ಮತ್ತು ದುರ್ಗಾ ಪೂಜೆಯನ್ನು ಮಾಡಬಹುದು. ಶನಿಯ ದುಷ್ಪ್ರಭಾವದಿಂದ ಮಂದಬುದ್ಧಿ, ದೇಹದ ಊತ, ನರಗಳ ದೌರ್ಬಲ್ಯ ಮತ್ತು ಸುಸ್ತು ಉಂಟಾಗಬಹುದು. ಶನಿಯ ಅನುಗ್ರಹಕ್ಕಾಗಿ ಹನುಮ ಮತ್ತು ಕಾಲಭೈರವರ ಪೂಜೆಯನ್ನು ಮಾಡಬಹುದು. ರಾಹು ಮತ್ತು ಕೇತುಗಳ ದುಷ್ಪ್ರಭಾವದಿಂದ ಭಯ, ದುಸ್ಸಾಹಸ ಮತ್ತು ಮಾನಸಿಕ ಅಸ್ಥಿರತೆ ಉಂಟಾಗಬಹುದು. ರಾಹು ಮತ್ತು ಕೇತುಗಳ ಅನುಗ್ರಹಕ್ಕಾಗಿ ಕಾಲಭೈರವರ ಪೂಜೆಯನ್ನು ಮಾಡಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ